AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ’; ಪುತ್ರಿ ಸುಹಾನಾ ಬಾಯ್​ಫ್ರೆಂಡ್​ ಬಗ್ಗೆ ಶಾರುಖ್​ ಖಡಕ್​ ವಾರ್ನಿಂಗ್​

Shah Rukh Khan: ಶಾರುಖ್​ ಖಾನ್ ಪುತ್ರಿಯನ್ನು ಮದುವೆ ಆಗಬೇಕು ಎಂದು ಪಡ್ಡೆಗಳು ಕನಸು ಕಂಡಿರಬಹುದು. ಅಂಥವರಿಗೆಲ್ಲ ಕಿಂಗ್​ ಖಾನ್​ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.

‘ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ’; ಪುತ್ರಿ ಸುಹಾನಾ ಬಾಯ್​ಫ್ರೆಂಡ್​ ಬಗ್ಗೆ ಶಾರುಖ್​ ಖಡಕ್​ ವಾರ್ನಿಂಗ್​
ಸುಹಾನಾ ಖಾನ್​ -ಶಾರುಖ್​ ಖಾನ್​
ಮದನ್​ ಕುಮಾರ್​
|

Updated on: May 23, 2021 | 6:47 PM

Share

ಬಾಲಿವುಡ್​ ನಟ ಶಾರುಖ್​ ಖಾನ್​ ಪಕ್ಕಾ ಫ್ಯಾಮಿಲಿ ಮ್ಯಾನ್​ ಕೂಡ ಹೌದು. ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಅವರು ಮಕ್ಕಳಿಗಾಗಿ ಸಮಯ ಮೀಸಲಿಡುತ್ತಾರೆ. ಅವರ ಪುತ್ರಿ ಸುಹಾನಾ ಖಾನ್​ ಮೇ 22ರಂದು ಬರ್ತ್​ಡೇ ಆಚರಿಸಿಕೊಂಡರು. 21ನೇ ವಯಸ್ಸಿಗೆ ಅವರು ಕಾಲಿಟ್ಟಿದ್ದಾರೆ. ಮಗಳನ್ನು ಕಂಡರೆ ಶಾರುಖ್​ಗೆ ಎಲ್ಲಿಲ್ಲದ ಪ್ರೀತಿ. ಅನೇಕ ಸಂದರ್ಶನಗಳಲ್ಲಿ ಆ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಸುಹಾನಾ ಇನ್ನೂ ಚಿತ್ರರಂಗಕ್ಕೆ ಕಾಲಿಟ್ಟಿಲ್ಲ. ಕೆಲವು ಮ್ಯಾಗಜಿನ್​ ಮುಖಪುಟಗಳಲ್ಲಿ ಅವರ ಫೋಟೋ ಮಿಂಚಿದೆ. ಆ ಮೂಲಕ ಇಂದಲ್ಲ ನಾಳೆ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗುತ್ತಾರೆ ಎಂಬ ಸೂಚನೆಯಂತೂ ಸಿಕ್ಕಿದೆ.

ಶಾರುಖ್​ ಖಾನ್ ಪುತ್ರಿಯನ್ನು ಮದುವೆ ಆಗಬೇಕು ಎಂದು ಪಡ್ಡೆಗಳು ಕನಸು ಕಂಡಿರಬಹುದು. ಶ್ರೀಮಂತ ಮನೆತನದ ಹುಡುಗರು ಕೂಡ ಶಾರುಖ್​ಗೆ ಅಳಿಯನಾಗುವ ಆಸೆ ಇಟ್ಟುಕೊಂಡಿರಬಹುದು. ಅಂಥವರಿಗೆಲ್ಲ ಕಿಂಗ್​ ಖಾನ್​ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಈ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ 7 ಷರತ್ತುಗಳ ಬಗ್ಗೆ ಶಾರುಖ್​ ಹೇಳಿದ್ದರು.

ಷರತ್ತು 1: ಉದ್ಯೋಗ ಹೊಂದಿರಬೇಕು

ಶಾರುಖ್​ ಪುತ್ರಿಯನ್ನು ಡೇಟಿಂಗ್​ ಮಾಡಬೇಕು ಎಂದುಕೊಳ್ಳುವ ಹುಡುಗ ಮೊದಲು ಒಂದು ಉದ್ಯೋಗ ಹೊಂದಿರಬೇಕು. ಜೀವನದಲ್ಲಿ ಸೆಟ್ಲ್​ ಆದ ನಂತರವೇ ಸುಹಾನಾಳನ್ನು ಪ್ರೀತಿಸುವ ಕನಸು ಕಾಣಬೇಕು.

ಷರತ್ತು 2: ನಾನು ನಿನ್ನನ್ನು ಇಷ್ಟಪಡುವುದಿಲ್ಲ ಎಂಬುದನ್ನು ಅರ್ಥ ಮಾಡಿಕೋ

ತಮ್ಮ ಮಗಳನ್ನು ಪ್ರೀತಿಸುವ ಹುಡುಗನನ್ನು ಶಾರುಖ್​ ಇಷ್ಟಪಡುವುದಿಲ್ಲವಂತೆ. ಈ ವಿಚಾರವನ್ನು ಆ ಹುಡುಗ ಮೊದಲೇ ಮನಗಂಡಿರಬೇಕು.

ಷರತ್ತು 3: ನಾನು ಎಲ್ಲಾ ಕಡೆ ಇರುತ್ತೇನೆ

ಪುತ್ರಿ ಏನು ಮಾಡುತ್ತಿರುತ್ತಾಳೆ ಎಂಬುದನ್ನು ತಿಳಿದುಕೊಳ್ಳಲು ಶಾರುಖ್​ ಸದಾ ಒಂದು ಕಣ್ಣು ಇಟ್ಟಿರುತ್ತಾರೆ. ಅದೇ ರೀತಿ ಬಾಯ್​ ಫ್ರೆಂಡ್​ ಮೇಲೂ ಅವರು ನಿಗಾ ಇಡುತ್ತಾರೆ. ಅದಕ್ಕೆ ಆತ ಸಿದ್ಧನಿರಬೇಕು.

ಷರತ್ತು 4: ಲಾಯರ್​ ಹೊಂದಿರಬೇಕು

ಶಾರುಖ್​ ಪುತ್ರಿಯ ತಂಟೆಗೆ ಯಾರೇ ಬಂದರೂ ಕಿರಿಕ್​ಗಳಾಗುವುದು ಗ್ಯಾರಂಟಿ. ಹಾಗಾಗಿ ಬಾಯ್​ಫ್ರೆಂಡ್​ ಆಗುವವನು ಲಾಯರ್​ ಇಟ್ಟುಕೊಳ್ಳಬೇಕಿರುವುದು ಕಡ್ಡಾಯ.

ಷರತ್ತು 5: ಆಕೆ ನನ್ನ ರಾಜಕುಮಾರಿ; ನಿನ್ನ ವಶವಾಗುವುದಿಲ್ಲ

ಶಾರುಖ್​ ತಮ್ಮ ಮಗಳನ್ನು ರಾಜಕುಮಾರಿಯ ರೀತಿ ಬೆಳೆಸಿದ್ದಾರೆ. ಬೇರೆ ಯಾವುದೋ ಹುಡುಗ ಆಕೆಯನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಶಾರುಖ್​ ಖಡಕ್​ ಮಾತು.

ಷರತ್ತು 6: ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ

ಮಗಳ ಬಗ್ಗೆ ಶಾರುಖ್​ ಖಾನ್​ ಅಪಾರ ಕಾಳಜಿ ಹೊಂದಿದ್ದಾರೆ. ಆಕೆಯನ್ನು ರಕ್ಷಿಸಲು ತಾವು ಯಾವ ಮಟ್ಟಕ್ಕೆ ಬೇಕಾದರು ಇಳಿಯುತ್ತಾರಂತೆ. ಹಾಗಾಗಿ, ‘ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ’ ಎಂದು ಅವರು ಹೇಳಿದ್ದರು.

ಷರತ್ತು 7: ಆಕೆಗೆ ನೀನು ಹರ್ಟ್​ ಮಾಡಿದರೆ ನಾನು ನಿನಗೆ ಅದನ್ನೇ ಮಾಡುತ್ತೇನೆ

ಕೊನೆಯ ಷರತ್ತಿನ ಬಗ್ಗೆ ಶಾರುಖ್​ ಖಡಕ್​ ಆಗಿ ಹೇಳಿದ್ದರು. ಒಂದು ವೇಳೆ ತಮ್ಮ ಪುತ್ರಿಗೆ ಬಾಯ್​ಫ್ರೆಂಡ್​ ಆದವನು ನೋವು ನೀಡಿದರೆ ಖಂಡಿತವಾಗಿಯೂ ಆತನಿಗೆ ಶಾರುಖ್​ ನೋವು ನೀಡುತ್ತಾರಂತೆ. ಇಷ್ಟೆಲ್ಲ ಷರತ್ತುಗಳಿಗೆ ಒಪ್ಪಿದವರು ಸುಹಾನಾಗೆ ಬಾಯ್​ ಫ್ರೆಂಡ್​ ಆಗುವ ಧೈರ್ಯ ತೋರಿಸಬಹುದು!

ಇದನ್ನೂ ಓದಿ:

ಶಾರುಖ್​ ಖಾನ್​ ಜತೆ ಬೀಡಿ ಸೇದಿದ ದಿನಗಳನ್ನು ನೆನಪಿಸಿಕೊಂಡ ಮನೋಜ್​ ಬಾಜಪೇಯಿ

ಶಾರುಖ್​ ಖಾನ್​ ಮಗ ಆರ್ಯನ್​ಗೆ ಅಮೆರಿಕ ವಿವಿಯಲ್ಲಿ ಪದವಿ ಪ್ರದಾನ; ಫೋಟೋ ವೈರಲ್​

ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ
ಸಚಿವ ಮಲ್ಲಿಕಾರ್ಜುನ್ ರಾಜೀನಾಮೆ ಪ್ರಸ್ತಾಪದ ಹಿಂದಿನ ಅಸಲಿ ಕಾರಣ ಇಲ್ಲಿದೆ
ಸಚಿವ ಮಲ್ಲಿಕಾರ್ಜುನ್ ರಾಜೀನಾಮೆ ಪ್ರಸ್ತಾಪದ ಹಿಂದಿನ ಅಸಲಿ ಕಾರಣ ಇಲ್ಲಿದೆ
ದಲಿತರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ನೀಡಬಾರದು: ಕೆ.ಎನ್. ರಾಜಣ್ಣ
ದಲಿತರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ನೀಡಬಾರದು: ಕೆ.ಎನ್. ರಾಜಣ್ಣ
ಭೂಸ್ವಾಧೀನ ಮಾಡಿ ವರ್ಷ ಕಳೆದರೂ ಪರಿಹಾರ ನೀಡದ KBJNL ಕಚೇರಿ ಜಪ್ತಿ
ಭೂಸ್ವಾಧೀನ ಮಾಡಿ ವರ್ಷ ಕಳೆದರೂ ಪರಿಹಾರ ನೀಡದ KBJNL ಕಚೇರಿ ಜಪ್ತಿ