AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾಜ್​ಕುಮಾರ್ ಪ್ರಚಾರ ಮಾಡಿದವರ ಪೈಕಿ ಗೆದ್ದವರು ಯಾರು? ಸೋತವರು ಯಾರು? ಇಲ್ಲಿದೆ ವಿವರ

ಕಿಚ್ಚ ಸುದೀಪ್, ಶಿವರಾಜ್​ಕುಮಾರ್ ಮೊದಲಾದ ಸ್ಟಾರ್​ ಕಲಾವಿದರು ಪ್ರಚಾರದಲ್ಲಿ ಭಾಗಿ ಆಗಿದ್ದರು. ಆ ಪೈಕಿ ಶಿವರಾಜ್​ಕುಮಾರ್ ಮತಬೇಟೆ ಮಾಡಿದವರಲ್ಲಿ ಗೆದ್ದವರೆಷ್ಟು ಸೋತವರೆಷ್ಟು? ಇಲ್ಲಿದೆ ವಿವರ.

ಶಿವರಾಜ್​ಕುಮಾರ್ ಪ್ರಚಾರ ಮಾಡಿದವರ ಪೈಕಿ ಗೆದ್ದವರು ಯಾರು? ಸೋತವರು ಯಾರು? ಇಲ್ಲಿದೆ ವಿವರ
ಶಿವರಾಜ್​ಕುಮಾರ್
ರಾಜೇಶ್ ದುಗ್ಗುಮನೆ
|

Updated on:May 13, 2023 | 4:38 PM

Share

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ರಚಿಸುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಅನೇಕ ಸೆಲೆಬ್ರಿಟಿಗಳು ಪ್ರಚಾರಕ್ಕೆ ಧುಮುಕಿದ್ದರು. ಕಿಚ್ಚ ಸುದೀಪ್(Kichcha Sudeep), ಶಿವರಾಜ್​ಕುಮಾರ್ ಮೊದಲಾದ ಸ್ಟಾರ್​ ಕಲಾವಿದರು ಪ್ರಚಾರದಲ್ಲಿ ಭಾಗಿ ಆಗಿದ್ದರು. ಆ ಪೈಕಿ ಅನೇಕ ನಾಯಕರು ಗೆದ್ದಿದ್ದಾರೆ, ಕೆಲವರು ಸೋತಿದ್ದಾರೆ. ಶಿವರಾಜ್​ಕುಮಾರ್ ಮತಬೇಟೆ ಮಾಡಿದವರಲ್ಲಿ ಗೆದ್ದವರೆಷ್ಟು ಸೋತವರೆಷ್ಟು? ಇಲ್ಲಿದೆ ವಿವರ.

ಗೆದ್ದವರು..

ಮಧು ಬಂಗಾರಪ್ಪ: ಸೊರಬ ಕ್ಷೇತ್ರದಿಂದ ಮಧು ಬಂಗಾರಪ್ಪ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ್ದರು. ಅವರ ಪರವಾಗಿ ಶಿವರಾಜ್​ಕುಮಾರ್ ಪ್ರಚಾರ ಮಾಡಿದರು. ಅವರು ಗೆದ್ದು ಬೀಗಿದ್ದಾರೆ. 94 ಸಾವಿರ ಮತ ಪಡೆದು ಪ್ರಭಲ ಸ್ಪರ್ಧಿ ಎಸ್​. ಕುಮಾರ್ ಬಂಗಾರಪ್ಪ ಅವರನ್ನು ಸೋಲಿಸಿದ್ದಾರೆ.

ಭೀಮಣ್ಣ ನಾಯ್ಕ್: ಶಿರಸಿ ಕ್ಷೇತ್ರದಿಂದ ಭೀಮಣ್ಣ ನಾಯ್ಕ್ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ್ದರು. ಅವರ ಎದುರು ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪರ್ಧಿಸಿದ್ದರು. ಭೀಮಣ್ಣ ಪರ ಶಿವಣ್ಣ ಪ್ರಚಾರ ಮಾಡಿದ್ದರು.

ಸಿದ್ದರಾಮಯ್ಯ: ಕಾಂಗ್ರೆಸ್ ಪ್ರಮುಖ ನಾಯಕ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರ ಪರವಾಗಿ ಶಿವಣ್ಣ ಕ್ಯಾಂಪೇನ್ ಮಾಡಿದ್ದರು. ಅವರು ಗೆದ್ದಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್: ಬೆಳಗಾವಿ ಗ್ರಾಮಾಂತರದಿಂದ ಸ್ಪರ್ಧಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಗೆದ್ದಿದ್ದಾರೆ. ಅವರ ಪರ ಶಿವಣ್ಣ ಮತಯಾಚನೆ ಮಾಡಿದ್ದರು.

ಬೇಲೂರು ಗೋಪಾಲಕೃಷ್ಣ: ಸಾಗರ ಅಭ್ಯರ್ಥಿ ಬೇಲೂರು ಗೋಪಾಲ ಕೃಷ್ಣ ಗೆದ್ದಿದ್ದಾರೆ. ಅವರ ಪರವಾಗಿ ಶಿವಣ್ಣ ಮತ ಕೇಳಿದ್ದರು.

ಸೋಲು..

ಸತೀಶ್ ಕೃಷ್ಣ ಸೈಲ್: ​ಕಾಂಗ್ರೆಸ್​ನಿಂದ ಸತೀಷ್​ ಕೃಷ್ಣ ಸೈಲ್ ಕಾರವಾರದಲ್ಲಿ ಪ್ರಚಾರ ನಡೆಸಿದ್ದರು. ಅವರು ಸೋಲು ಕಂಡಿದ್ದಾರೆ. ಶಿವಣ್ಣ ಇವರ ಪರವಾಗಿ ಪ್ರಚಾರ ಮಾಡಿದ್ದರು.

ಜಗದೀಶ್ ಶೆಟ್ಟರ್: ಬಿಜೆಪಿಯಲ್ಲಿ ಇದ್ದ ಜಗದೀಶ್ ಶೆಟ್ಟರ್ ಅವರು ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಸೇರಿದ್ದರು. ಹುಬ್ಬಳ್ಳಿಯಲ್ಲಿ ಅವರು ಸ್ಪರ್ಧೆ ಮಾಡಿದ್ದರು. ಆದರೆ, ಅವರು ಸೋತಿದ್ದಾರೆ.

ಅಶೋಕ್ ಖೇಣಿ: ಬೀದರ್ ದಕ್ಷಿಣದಿಂದ ಸ್ಪರ್ಧೆ ಮಾಡಿದ್ದ ಅಶೋಕ್ ಖೇಣಿ ಅವರು ಸೋತಿದ್ದಾರೆ. ಇವರ ಪರವಾಗಿ ಶಿವಣ್ಣ ಮತಬೇಟೆ ಮಾಡಿದ್ದರು.

ಕಿಮ್ಮಾನೇ ರತ್ನಾಕರ್: ತೀರ್ಥಹಳ್ಳಿಯಿಂದ ಕಿಮ್ಮಾನೇ ರತ್ನಾಕರ್ ಸ್ಪರ್ಧಿಸಿ ಸೋತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 4:37 pm, Sat, 13 May 23

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More