‘ಒಂದು ಯಶಸ್ಸಿನ ಬಳಿಕ ಆ ಹೀರೋಗೆ ಧಿಮಾಕು ಬಂದಿದೆ’: ಕಟುವಾಗಿ ಹೇಳಿದ ‘ಬಾಹುಬಲಿ’ ನಿರ್ಮಾಪಕ

|

Updated on: Jul 31, 2023 | 8:54 PM

Shobu Yarlagadda: ವಿವಾದಕ್ಕೆ ನಾಂದಿ ಹಾಡುವ ರೀತಿಯಲ್ಲಿ ಶೋಭು ಯರ್ಲಗಡ್ಡ ಟ್ವೀಟ್​ ಮಾಡಿದರು. ಅನೇಕರು ತಮ್ಮ ಮನಸ್ಸಿಗೆ ಬಂದಂತೆ ಕಮೆಂಟ್​ ಮಾಡಿದರು. ನಂತರ ಏನಾಯ್ತು?

‘ಒಂದು ಯಶಸ್ಸಿನ ಬಳಿಕ ಆ ಹೀರೋಗೆ ಧಿಮಾಕು ಬಂದಿದೆ’: ಕಟುವಾಗಿ ಹೇಳಿದ ‘ಬಾಹುಬಲಿ’ ನಿರ್ಮಾಪಕ
ಶೋಭು ಯರ್ಲಗಡ್ಡ
Follow us on

ಚಿತ್ರರಂಗದಲ್ಲಿ ಸೋಲು-ಗೆಲುವು ಸಹಜ. ಸೋತಾಗ ಕೆಲವರು ಕುಗ್ಗುತ್ತಾರೆ. ಗೆದ್ದಾಗ ಬೀಗುತ್ತಾರೆ. ಅದು ಕೂಡ ಸಹಜ. ಆದರೆ ಒಂದು ಯಶಸ್ಸು ಸಿಕ್ಕ ಮಾತ್ರಕ್ಕೆ ಅಹಂಕಾರ ತಲೆಗೆ ಏರಿಸಿಕೊಳ್ಳಬಾರದು. ಆ ರೀತಿ ವರ್ತಿಸಿದ ಓರ್ವ ಹೀರೋ ಬಗ್ಗೆ ಈಗ ಟಾಲಿವುಡ್​ (Tollywood) ಅಂಗಳದಲ್ಲಿ ಚರ್ಚೆ ನಡೆಯುತ್ತಿದೆ. ದೊಡ್ಡ ಬಜೆಟ್​ನ ಸಿನಿಮಾಗಳು ನೆಲ ಕಚ್ಚುತ್ತಿರುವ ಈ ಕಾಲದಲ್ಲಿ ಸಣ್ಣ ಬಜೆಟ್​ನ ಕೆಲವು ಚಿತ್ರಗಳು ಗೆದ್ದಿವೆ. ಅಂಥ ಒಂದು ಸಿನಿಮಾದ ಹೀರೋಗೆ ಆ್ಯಟಿಟ್ಯೂಡ್​ ಬಂದಿದೆ ಎಂದು ‘ಬಾಹುಬಲಿ’ (Baahubali) ಸಿನಿಮಾದ ನಿರ್ಮಾಪಕ ಶೋಭು ಯರ್ಲಗಡ್ಡ (Shobu Yarlagadda) ಅವರು ಹೇಳಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಅವರು ತಮ್ಮ ಟ್ವೀಟ್​ ಡಿಲೀಟ್​ ಮಾಡಿದರು.

ಶೋಭು ಯರ್ಲಗಡ್ಡ ಕಾಂಟ್ರವರ್ಸಿ ಟ್ವೀಟ್​:

‘ಯಶಸ್ಸನ್ನು ತಲೆಗೆ ಏರಿಸಿಕೊಳ್ಳಬಹುದು ಅಥವಾ ಸರಿಯಾಗಿ ನಿಭಾಯಿಸಲೂಬಹುದು. ಇತ್ತೀಚೆಗೆ ಯಶಸ್ಸು ಪಡೆದ ಓರ್ವ ಉದಯೋನ್ಮುಖ ನಟ ಆ್ಯಟಿಟ್ಯೂಡ್​ ತೋರಿಸುತ್ತಿದ್ದೇನೆ. ಕಥೆ ಹೇಳಲು ಬಂದ ಹೊಸ ನಿರ್ದೇಶಕರಿಗೆ ಆತ ಕನಿಷ್ಠ ಗೌರವವನ್ನೂ ನೀಡಿಲ್ಲ. ಈ ವರ್ತನೆಯಿಂದ ತನ್ನ ವೃತ್ತಿಜೀವನಕ್ಕೆ ಒಳ್ಳೆಯದಾಗಲ್ಲ ಎಂಬುದು ಇಂದಲ್ಲ ನಾಳೆ ಅವನಿಗೆ ಅರ್ಥ ಆಗುತ್ತದೆ’ ಎಂದು ಶೋಭು ಯರ್ಲಗಡ್ಡ ಟ್ವೀಟ್​ ಮಾಡಿದ್ದರು.

ಇದನ್ನೂ ಓದಿ: ‘ಎಲ್ಲರನ್ನೂ ಖುಷಿಪಡಿಸಲು ನಾನು ಬಿರಿಯಾನಿ ಅಲ್ಲ’; ‘ಬೇಬಿ’ ವಿವಾದಕ್ಕೆ ವಿಶ್ವಕ್ ​ಸೇನ್ ಪ್ರತಿಕ್ರಿಯೆ

ಈ ಟ್ವೀಟ್​ನಲ್ಲಿ ಶೋಭು ಯರ್ಲಗಡ್ಡ ಅವರು ಯಾವುದೇ ನಟನ ಹೆಸರು ಪ್ರಸ್ತಾಪ ಮಾಡಿಲ್ಲ. ನಟ ವಿಶ್ವಕ್​ ಸೇನ್​ ಬಗ್ಗೆ ಅವರು ಹೇಳಿರಬಹುದು ಎಂದು ಕೆಲವರು ಊಹಿಸಿದರು. ಆದರೆ ಅವರು ತೀರಾ ಹೊಸ ನಟ ಅಲ್ಲ ಎಂಬ ಕಾರಣಕ್ಕೆ ಅವರ ಬಗ್ಗೆ ಹೇಳಿದ್ದಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಇನ್ನು, ಕೆಲವೇ ದಿನಗಳ ಹಿಂದೆ ‘ಬೇಬಿ’ ಸಿನಿಮಾದ ಮೂಲಕ ಆನಂದ್​ ದೇವರಕೊಂಡ ಸಕ್ಸಸ್​ ಕಂಡಿದ್ದಾರೆ. ಅವರ ಬಗ್ಗೆ ಶೋಭು ಯರ್ಲಗಡ್ಡ ಅವರು ಟ್ವೀಟ್​ ಮಾಡಿರಬಹುದೇ ಎಂಬ ಅನುಮಾನ ಕೂಡ ಮೂಡಿದೆ.

ಇದನ್ನೂ ಓದಿ: Baby Movie Collection: ‘ಅರ್ಜುನ್​ ರೆಡ್ಡಿ’ ಚಿತ್ರದ ಲೈಫ್​ಟೈಮ್​ ಗಳಿಕೆ ಮೀರಿಸಿದ ‘ಬೇಬಿ’; ಅಣ್ಣನ ರೀತಿಯೇ ಮಿಂಚಿದ ಆನಂದ್​ ದೇವರಕೊಂಡ

ಆ ನಟ ಯಾರು ಎಂಬುದನ್ನು ಬಹಿರಂಗಪಡಿಸಿ ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಅನೇಕರು ತಮ್ಮ ಮನಸ್ಸಿಗೆ ಬಂದಂತೆ ಕಮೆಂಟ್​ ಮಾಡಿದರು. ಇದು ದೊಡ್ಡ ವಿವಾದ ಆಗುವ ಸಾಧ್ಯತೆ ಇರುವ ಕಾರಣಕ್ಕೋ ಏನೋ ಶೋಭು ಯರ್ಲಗಡ್ಡ ಅವರು ತಮ್ಮ ಟ್ವೀಟ್​ ಡಿಲೀಟ್​ ಮಾಡಿದರು. ಅಷ್ಟುಹೊತ್ತಿಗಾಗಲೇ ಅದರ ಸ್ಕ್ರೀನ್​ ಶಾಟ್​ಗಳು ವೈರಲ್​ ಆದವು. ಅಂಥ ಆ್ಯಟಿಟ್ಯೂಡ್​ ತೋರಿಸಿದ ಉದಯೋನ್ಮುಖ ನಟ ಯಾರು ಎಂಬ ಪ್ರಶ್ನೆಯು ಸಿನಿಪ್ರಿಯರ ತಲೆಯಲ್ಲಿ ಈಗ ಕೊರೆಯುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.