‘ಎಲ್ಲರನ್ನೂ ಖುಷಿಪಡಿಸಲು ನಾನು ಬಿರಿಯಾನಿ ಅಲ್ಲ’; ‘ಬೇಬಿ’ ವಿವಾದಕ್ಕೆ ವಿಶ್ವಕ್ ​ಸೇನ್ ಪ್ರತಿಕ್ರಿಯೆ

 ಸಾಯಿ ರಾಜೇಶ್​ಗೂ ನಟ ವಿಶ್ವಕ್ ಸೇನ್ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ. ಇಬ್ಬರೂ ಪರೋಕ್ಷವಾಗಿ ತಿರುಗೇಟು ಕೊಟ್ಟುಕೊಳ್ಳುತ್ತಿದ್ದಾರೆ.

‘ಎಲ್ಲರನ್ನೂ ಖುಷಿಪಡಿಸಲು ನಾನು ಬಿರಿಯಾನಿ ಅಲ್ಲ’; ‘ಬೇಬಿ’ ವಿವಾದಕ್ಕೆ ವಿಶ್ವಕ್ ​ಸೇನ್ ಪ್ರತಿಕ್ರಿಯೆ
ಬೇಬಿ ಸಿನಿಮಾ
Follow us
|

Updated on: Jul 27, 2023 | 7:12 AM

ಆನಂದ್ ದೇವರಕೊಂಡ ನಟನೆಯ ‘ಬೇಬಿ’ ಸಿನಿಮಾ (Baby Movie) ಸೂಪರ್ ಹಿಟ್ ಆಗಿದೆ. ಈ ಚಿತ್ರ ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ಚಿತ್ರದ ಮೂಲಕ ಸಾಯಿ ರಾಜೇಶ್ ಅವರು ಗೆದ್ದು ಬೀಗಿದ್ದಾರೆ. ಈಗ  ಸಾಯಿ ರಾಜೇಶ್​ಗೂ ನಟ ವಿಶ್ವಕ್ ಸೇನ್ (Vishwak Sen) ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ. ಇಬ್ಬರೂ ಪರೋಕ್ಷವಾಗಿ ತಿರುಗೇಟು ಕೊಟ್ಟುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಏನಿದು ವಿವಾದ? ಯಾರಿಂದ ಈ ವಿವಾದ ಶುರುವಾಯಿತು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

‘ಬೇಬಿ’ ಸಿನಿಮಾ ಸಕ್ಸಸ್ ಬಳಿಕ ಮಾತನಾಡಿದ್ದ ರಾಜೇಶ್, ‘ನಾನು ಕಥೆ ಹೇಳುತ್ತೇನೆ ಎಂದಾಗ ಯುವ ಹೀರೋ ನಿರಾಕರಿಸಿದ್ದರು’ ಎಂದು ಹೇಳಿಕೊಂಡಿದ್ದರು. ಇದು ವಿಶ್ವಕ್ ಸೇನ್ ಬಗ್ಗೆ ಆಡಿದ ಮಾತು ಎಂಬುದು ಅನೇಕರಿಗೆ ಗೊತ್ತಾಗಿತ್ತು. ಈ ವೇಳೆ ಟ್ವೀಟ್ ಮಾಡಿದ್ದ ವಿಶ್ವಕ್​, ‘ನೋ ಎಂದರೆ ನೋ. ಇದು ಪುರುಷರಿಗೂ ಅನ್ವಯ ಆಗುತ್ತದೆ. ಶಾಂತವಾಗಿರೋಣ ಮತ್ತು ಕೂಗುವುದನ್ನು ತಡೆಯೋಣ. ರಿಲ್ಯಾಕ್ಸ್ ಆಗೋಣ’ ಎಂದು ಬರೆದುಕೊಂಡಿದ್ದರು.

ಸಾಯಿ ರಾಜೇಶ್ ಕೂಡ ಟ್ವೀಟ್ ಮಾಡಿ, ‘ನಾನು ನಿಮ್ಮ ಟ್ವೀಟ್​ಗಳನ್ನು ಓದುತ್ತಿದ್ದೇನೆ’ ಎಂದು ಬರೆದುಕೊಂಡಿದ್ದರು.  ಇತ್ತೀಚೆಗೆ ನಡೆದ ಕಾರ್ಯಕ್ರಮ ಒಂದರಲ್ಲಿ ವಿಶ್ವಕ್ ಸೇನ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ನಾವು ಏನು ಮಾಡುತ್ತಿದ್ದೇವೆ ಎಂಬ ಸ್ಪಷ್ಟತೆ ಇದ್ದಾಗ ನಾವು ಇತರರ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಒಂದು ಗಂಟೆ ಕಥೆ ಕೇಳಿ ಆ ಬಳಿಕ ಇಲ್ಲ ಎಂದು ಹೇಳಲು ನನಗೆ ಇಷ್ಟವಿರಲಿಲ್ಲ. ಅದು ನನ್ನ ವೈಯಕ್ತಿಕ ಆಯ್ಕೆ. ಕೆಲವರು ಇದರ ಬಗ್ಗೆ ಕೆಟ್ಟ ಭಾವನೆ ಹೊಂದಿದ್ದಾರೆ.  ನಿರೂಪಣೆಯನ್ನು ಕೇಳಲಿಲ್ಲ ಎಂದು ಟೀಕಿಸಲು ಪ್ರಾರಂಭಿಸಿದ್ದಾರೆ’ ಎಂದು ಪರೋಕ್ಷವಾಗಿ ಸಾಯಿ ರಾಜೇಶ್​ಗೆ ತಿರುಗೇಟು ನೀಡಿದ್ದಾರೆ ವಿಶ್ವಕ್​.

ಇದನ್ನೂ ಓದಿ: ವಿವಾದದಲ್ಲಿ ಅರ್ಜುನ್ ಸರ್ಜಾ ಸಿನಿಮಾ; ತಿರುಗೇಟು ಕೊಟ್ಟ ವಿಶ್ವಕ್ ಸೇನ್; ಹೊಸ ಹೀರೋಗೆ ಮಣೆ?

‘ಎಲ್ಲರನ್ನು ಸಂತೋಷಪಡಿಸಲು ನಾನು ಬಿರಿಯಾನಿ ಅಲ್ಲ. ಸಿನಿಮಾ ಹಿಟ್​ ಆದರೆ ಬೇರೆಯವರನ್ನು ಟೀಕಿಸುವ ಬದಲು ಸಕ್ಸಸ್​​ನ ಸಂಭ್ರಮಿಸಬೇಕು. ಒಂದು ಸಿನಿಮಾ ಯಶಸ್ವಿಯಾದರೆ ಇಂಡಸ್ಟ್ರಿಯಲ್ಲಿ ಎಲ್ಲರೂ ಖುಷಿ ಪಡುತ್ತಾರೆ. ಚಿತ್ರದ ಟ್ರೇಲರ್ ನೋಡಿದ ನಂತರ ಖುಷಿಪಟ್ಟವರಲ್ಲಿ ನಾನೂ ಒಬ್ಬ’ ಎಂದು ಹೇಳುವ ಮೂಲಕ ಅವರು ಯಾವುದೇ ಬೇಸರ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಸಾಯಿ ರಾಜೇಶ್ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ