AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾದರ್ಸ್​ ಡೇ ದಿನವೇ ಮಗನಿಗೆ 3 ಕೋಟಿ ರೂಪಾಯಿ ಕಾರು ಉಡುಗೊರೆ ನೀಡಿದ ಸೋನು ಸೂದ್​?

ಸೋನು ಸೂದ್​ ಹಿರಿಯ ಮಗ ಇಶಾನ್​ಗೆ 3 ಕೋಟಿ ರೂಪಾಯಿ ಕಾರ್​ ಗಿಫ್ಟ್​ ನೀಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈ ವಿಚಾರದ ಬಗ್ಗೆ ಸೋನು ಸೂದ್​ ಪ್ರತಿಕ್ರಿಯಿಸಿದ್ದಾರೆ.

ಫಾದರ್ಸ್​ ಡೇ ದಿನವೇ ಮಗನಿಗೆ 3 ಕೋಟಿ ರೂಪಾಯಿ ಕಾರು ಉಡುಗೊರೆ ನೀಡಿದ ಸೋನು ಸೂದ್​?
ಸೋನು ಸೂದ್​
ರಾಜೇಶ್ ದುಗ್ಗುಮನೆ
|

Updated on: Jun 20, 2021 | 8:18 PM

Share

ನಟ ಸೋನು ಸೂದ್​ ತಾವು ದುಡಿದ ಹಣವನ್ನು ಒಳ್ಳೆಯ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೊವಿಡ್​ ಸಂಕಷ್ಟದ ಸಂದರ್ಭದಲ್ಲಿ ಅವರು ಎಲ್ಲರ ಸಹಾಯಕ್ಕೆ ನಿಂತಿದ್ದಾರೆ. ಟ್ವೀಟ್​ ಮಾಡಿದ ಕೆಲವೇ ಹೊತ್ತಿನಲ್ಲಿ ಜನಸಾಮಾನ್ಯರಿಗೆ ಸಹಾಯ ಸಿಗುತ್ತಿದೆ. ಈಗ ಸೋನು ಸೂದ್​ ಹಿರಿಯ ಮಗ ಇಶಾನ್​ಗೆ 3 ಕೋಟಿ ರೂಪಾಯಿ ಕಾರ್​ ಗಿಫ್ಟ್​ ನೀಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈ ವಿಚಾರದ ಬಗ್ಗೆ ಸೋನು ಸೂದ್​ ಪ್ರತಿಕ್ರಿಯಿಸಿದ್ದಾರೆ.

ಇಂದು ವಿಶ್ವ ತಂದೆಯರ ದಿನ. ಈ ದಿನದಂದೇ ಸೋನು ಲಕ್ಸುರಿ ಕಾರನ್ನು ಮಗನಿಗೆ ನೀಡಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಸಾಕ್ಷ್ಯ ಎಂಬಂತೆ, ಶನಿವಾರ ಐಷಾರಾಮಿ ಕಾರು ಸೋನು ಸೂದ್​ ಮನೆ ಎದುರು ನಿಂತಿತ್ತು. ಇದನ್ನು ನೋಡಿದ ಸಾಕಷ್ಟು ಜನರು ‘ಸೋನು ಮಗನಿಗೆ ಕಾರ್​ ಉಡುಗೊರೆ ನೀಡಿದ್ದಾರೆ’ ಎಂದು ಹೇಳಿಕೊಂಡಿದ್ದರು. ಆದರೆ, ಇದರ ಅಸಲಿಯತ್ತನ್ನು ಸೋನು ತೆರೆದಿಟ್ಟಿದ್ದಾರೆ.

‘ಮಗನಿಗೆ ಕಾರು ನೀಡಿದ ವಿಚಾರದಲ್ಲಿ ಯಾವುದೇ ಸತ್ಯವಿಲ್ಲ. ನಾನು ನನ್ನ ಮಗನಿಗಾಗಿ ಕಾರು ಖರೀದಿ ಮಾಡಿಲ್ಲ. ಟ್ರಯಲ್​ಗೋಸ್ಕರ ಆ ಕಾರನ್ನು ನಮ್ಮ ಮನೆಗೆ ತರಲಾಗಿತ್ತು. ನಾವು ಟೆಸ್ಟ್​ ರೈಡ್​ ಮಾಡಿದ್ದೇವೆ ಅಷ್ಟೆ. ನಾವು ಆ ಕಾರನ್ನು ಖರೀದಿ ಮಾಡಿಲ್ಲ’ ಎಂದು ಸೋನು ಸ್ಪಷ್ಟನೆ ನೀಡಿದ್ದಾರೆ.

‘ಫಾದರ್ಸ್​ ಡೇ ದಿನ ನನ್ನ ಮಕ್ಕಳಿಗೆ ನಾನೇಕೆ ಉಡುಗೊರೆ ನೀಡಲಿ? ನನ್ನ ಮಕ್ಕಳೇ ನನಗೆ ಗಿಫ್ಟ್ ನೀಡಬೇಕು ಅಲ್ಲವೇ? ನಾನು ನನ್ನ ಮಕ್ಕಳ ಜತೆ ಸಮಯ ಕಳೆಯುತ್ತಿದ್ದೇನೆ. ಅದುವೇ ಖುಷಿಯ ವಿಚಾರ’ ಎಂದು ಸೋನು ಸೂದ್​ ಬರೆದುಕೊಂಡಿದ್ದಾರೆ. ಈ ಮೂಲಕ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಬ್ರೇಕ್​ ಹಾಕಿದ್ದಾರೆ.

ಇನ್ನು, ವಿಶ್ವ ಅಪ್ಪಂದಿರ ದಿನದ ಅಂಗವಾಗಿ ಸೋನು ತಂದೆಯನ್ನು ನೆನಪು ಮಾಡಿಕೊಂಡಿದ್ದಾರೆ. ‘ಅಪ್ಪ ನೀವು ನಮ್ಮೊಂದಿಗಿಲ್ಲ. ಆದರೆ, ನಿಮ್ಮ ಫೇವರಿಟ್​ ಸ್ಕೂಟರ್ ನನಗೆ ಅತಿ ಹೆಚ್ಚು ಬೆಲೆಬಾಳುವ ವಸ್ತು’ ಎಂದಿದ್ದಾರೆ.

ಇದನ್ನೂ ಓದಿ: ರಾಜಕೀಯಕ್ಕೆ ಬರಲ್ಲ ಎನ್ನುವ ಸೋನು ಸೂದ್​ಗೆ ಈ ರಾಜಕಾರಣಿ ಕಂಡರೆ ಹೆಚ್ಚು ಅಭಿಮಾನ; ಯಾರದು?

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್