AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಮಿಕಾ ನೋಡೋಕೆ ಹೇಗಿದ್ದಾಳೆ? ವಿರಾಟ್​ ಕೊಹ್ಲಿ ಸಹೋದರಿ ವಿವರಿಸಿದ್ದಿಷ್ಟು

ದಂಪತಿ ಫೋಟೋ ಅಪ್​ಲೋಡ್​ ಮಾಡಬಹುದು ಎಂದು ಕಾದು ಕೂತಿದ್ದ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು. ಸದ್ಯಕ್ಕಂತೂ ಮಗುವಿನ ಮುಖವನ್ನು ತೋರಿಸುವ ಆಲೋಚನೆ ನಮಗಿಲ್ಲ ಎಂದು ದಂಪತಿ ವಿವರಿಸಿದ್ದರು.

ವಮಿಕಾ ನೋಡೋಕೆ ಹೇಗಿದ್ದಾಳೆ? ವಿರಾಟ್​ ಕೊಹ್ಲಿ ಸಹೋದರಿ ವಿವರಿಸಿದ್ದಿಷ್ಟು
ಪತ್ನಿ ಅನುಷ್ಕಾ ಮತ್ತು ಮಗಳೊಂದಿಗೆ ವಿರಾಟ್​ ಕೊಹ್ಲಿ
ರಾಜೇಶ್ ದುಗ್ಗುಮನೆ
| Edited By: |

Updated on: Jun 21, 2021 | 7:20 AM

Share

ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಜನವರಿ 11ರಂದು ಹೆಣ್ಣು ಮಗುವನ್ನು ಬರಮಾಡಿಕೊಂಡರು. ಮಗುವಿನ ಮುಖವನ್ನು ಯಾರಿಗೂ ತೋರಿಸಬಾರದು ಎನ್ನುವ ನಿರ್ಧಾರಕ್ಕೆ ದಂಪತಿ ಬಂದಿದ್ದಾರೆ. ಹೀಗಾಗಿ, ಮಗುವಿನ ಮುಖವನ್ನು ಯಾರಿಗೂ ತೋರಿಸಿಲ್ಲ. ಹೀಗಿರುವಾಗಲೇ ವಮಿಕಾ ಹೇಗಿದ್ದಾಳೆ ಎನ್ನುವುದನ್ನು ವಿರಾಟ್​ ಸಹೋದರಿ ಭಾವನಾ ವಿವರಿಸಿದ್ದಾರೆ.

ವಮಿಕಾನ್ನು ಕಣ್ತುಂಬಿಕೊಳ್ಳಬೇಕು ಎಂಬುದು ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಯ್ಲಿ ಅಭಿಮಾನಿಗಳ ಆಸೆ ಆಗಿತ್ತು. ಈ ದಂಪತಿ ಫೋಟೋ ಅಪ್​ಲೋಡ್​ ಮಾಡಬಹುದು ಎಂದು ಕಾದು ಕೂತಿದ್ದ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು. ಸದ್ಯಕ್ಕಂತೂ ಮಗುವಿನ ಮುಖವನ್ನು ತೋರಿಸುವ ಆಲೋಚನೆ ನಮಗಿಲ್ಲ ಎಂದು ದಂಪತಿ ವಿವರಿಸಿದ್ದರು. ಹಾಗಂತ ಅಭಿಮಾನಿಗಳು ಸುಮ್ಮನೆ ಕೂತಿಲ್ಲ. ವಿರಾಟ್​ ಕುಟುಂಬದವರಲ್ಲಿ ವಮಿಕಾ ಬಗ್ಗೆ ಪ್ರಶ್ನಿಸುತ್ತಿದ್ದಾರೆ.

ಇತ್ತೀಚೆಗೆ ಆಸ್ಕ್​ ಮಿ ಎನಿಥಿಂಗ್​ ಸೆಷನ್​ ಆರಂಭಿಸಿದ್ದರು ಭಾವನಾ. ಆಗ ಅಭಿಮಾನಿಯೋರ್ವ, ‘ನೀವು ವಮಿಕಾನಾ ಭೇಟಿ ಮಾಡಿದ್ದೀರಾ? ಅವಳು ಕೊಹ್ಲಿ ಹಾಗಿದ್ದಾಳೋ ಅಥವಾ ಅನುಷ್ಕಾ ತರಹ ಕಾಣುತ್ತಾಳೋ’ ಎಂದು ಪ್ರಶ್ನೆ ಮಾಡಿದ್ದ. ಈ ಪ್ರಶ್ನೆ ಓದಿರುವ ಭಾವನಾ ಜಾಣತನದ ಉತ್ತರ ನೀಡಿದ್ದಾರೆ.  ‘ನಾನು ವಮಿಕಾಳನ್ನು ಭೇಟಿ ಮಾಡಿದ್ದೇನೆ. ಆಕೆ ಏಂಜಲ್​ ತರಹ ಇದ್ದಾಳೆ’ ಎಂದಿದ್ದಾರೆ. ಈ ಉತ್ತರ ನೋಡಿದ ಅಭಿಮಾನಿಗಳಿಗೆ ಮತ್ತೆ ನಿರಾಸೆ ಆಗಿದೆ.

ಈ ಬಗ್ಗೆ ಪ್ರಶ್ನೆ ಹೆಚ್ಚಿದ ಬೆನ್ನಲ್ಲೇ ಭಾವನಾ ವಿಶೇಷ ಮನವಿಯನ್ನು ಮಾಡಿಕೊಂಡಿದ್ದಾರೆ. ವಿರಾಟ್​-ಅನುಷ್ಕಾ ಮಗಳ ಮುಖವನ್ನು ತೋರಿಸುವುದಿಲ್ಲ ಎಂದು ಹೇಳಿದ್ದಾರೆ. ಯಾವುದಾದರೂ ಮಾಧ್ಯಮಗಳು ವಮಿಕಾ ಫೋಟೋ ಇದು ಎಂದು ವರದಿ ಬಿತ್ತರಿಸಿದರೆ ಅದನ್ನು ನಂಬಬೇಡಿ. ನಾವು ಅನುಷ್ಕಾ-ವಿರಾಟ್​ ನಿರ್ಧಾರವನ್ನು ಗೌರವಿಸೋಣ ಎಂದಿದ್ದಾರೆ.

ವರ್ಲ್ಡ್​​ ಟೆಸ್ಟ್​ ಚಾಂಪಿಯನ್​ಶಿಪ್​ಗಾಗಿ ಅನುಷ್ಕಾ-ವಿರಾಟ್​ ಇಂಗ್ಲೆಂಡ್​ಗೆ ಹೊರಟಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳು ಮಗುವಿನ ಫೋಟೋ ಕ್ಲಿಕ್​ ಮಾಡಲು ಪ್ರಯತ್ನಿಸಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ: ‘ಆ ಮಗುವಿಗೆ ಉಸಿರು ಕಟ್ಟುತ್ತಿದೆ’; ಅನುಷ್ಕಾ-ವಿರಾಟ್​ ಪುತ್ರಿ ವಮಿಕಾ ವಿಚಾರದಲ್ಲಿ ನೆಟ್ಟಿಗರ ಆಕ್ರೋಶ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ