AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಮಿಕಾ ನೋಡೋಕೆ ಹೇಗಿದ್ದಾಳೆ? ವಿರಾಟ್​ ಕೊಹ್ಲಿ ಸಹೋದರಿ ವಿವರಿಸಿದ್ದಿಷ್ಟು

ದಂಪತಿ ಫೋಟೋ ಅಪ್​ಲೋಡ್​ ಮಾಡಬಹುದು ಎಂದು ಕಾದು ಕೂತಿದ್ದ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು. ಸದ್ಯಕ್ಕಂತೂ ಮಗುವಿನ ಮುಖವನ್ನು ತೋರಿಸುವ ಆಲೋಚನೆ ನಮಗಿಲ್ಲ ಎಂದು ದಂಪತಿ ವಿವರಿಸಿದ್ದರು.

ವಮಿಕಾ ನೋಡೋಕೆ ಹೇಗಿದ್ದಾಳೆ? ವಿರಾಟ್​ ಕೊಹ್ಲಿ ಸಹೋದರಿ ವಿವರಿಸಿದ್ದಿಷ್ಟು
ಪತ್ನಿ ಅನುಷ್ಕಾ ಮತ್ತು ಮಗಳೊಂದಿಗೆ ವಿರಾಟ್​ ಕೊಹ್ಲಿ
ರಾಜೇಶ್ ದುಗ್ಗುಮನೆ
| Edited By: |

Updated on: Jun 21, 2021 | 7:20 AM

Share

ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಜನವರಿ 11ರಂದು ಹೆಣ್ಣು ಮಗುವನ್ನು ಬರಮಾಡಿಕೊಂಡರು. ಮಗುವಿನ ಮುಖವನ್ನು ಯಾರಿಗೂ ತೋರಿಸಬಾರದು ಎನ್ನುವ ನಿರ್ಧಾರಕ್ಕೆ ದಂಪತಿ ಬಂದಿದ್ದಾರೆ. ಹೀಗಾಗಿ, ಮಗುವಿನ ಮುಖವನ್ನು ಯಾರಿಗೂ ತೋರಿಸಿಲ್ಲ. ಹೀಗಿರುವಾಗಲೇ ವಮಿಕಾ ಹೇಗಿದ್ದಾಳೆ ಎನ್ನುವುದನ್ನು ವಿರಾಟ್​ ಸಹೋದರಿ ಭಾವನಾ ವಿವರಿಸಿದ್ದಾರೆ.

ವಮಿಕಾನ್ನು ಕಣ್ತುಂಬಿಕೊಳ್ಳಬೇಕು ಎಂಬುದು ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಯ್ಲಿ ಅಭಿಮಾನಿಗಳ ಆಸೆ ಆಗಿತ್ತು. ಈ ದಂಪತಿ ಫೋಟೋ ಅಪ್​ಲೋಡ್​ ಮಾಡಬಹುದು ಎಂದು ಕಾದು ಕೂತಿದ್ದ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು. ಸದ್ಯಕ್ಕಂತೂ ಮಗುವಿನ ಮುಖವನ್ನು ತೋರಿಸುವ ಆಲೋಚನೆ ನಮಗಿಲ್ಲ ಎಂದು ದಂಪತಿ ವಿವರಿಸಿದ್ದರು. ಹಾಗಂತ ಅಭಿಮಾನಿಗಳು ಸುಮ್ಮನೆ ಕೂತಿಲ್ಲ. ವಿರಾಟ್​ ಕುಟುಂಬದವರಲ್ಲಿ ವಮಿಕಾ ಬಗ್ಗೆ ಪ್ರಶ್ನಿಸುತ್ತಿದ್ದಾರೆ.

ಇತ್ತೀಚೆಗೆ ಆಸ್ಕ್​ ಮಿ ಎನಿಥಿಂಗ್​ ಸೆಷನ್​ ಆರಂಭಿಸಿದ್ದರು ಭಾವನಾ. ಆಗ ಅಭಿಮಾನಿಯೋರ್ವ, ‘ನೀವು ವಮಿಕಾನಾ ಭೇಟಿ ಮಾಡಿದ್ದೀರಾ? ಅವಳು ಕೊಹ್ಲಿ ಹಾಗಿದ್ದಾಳೋ ಅಥವಾ ಅನುಷ್ಕಾ ತರಹ ಕಾಣುತ್ತಾಳೋ’ ಎಂದು ಪ್ರಶ್ನೆ ಮಾಡಿದ್ದ. ಈ ಪ್ರಶ್ನೆ ಓದಿರುವ ಭಾವನಾ ಜಾಣತನದ ಉತ್ತರ ನೀಡಿದ್ದಾರೆ.  ‘ನಾನು ವಮಿಕಾಳನ್ನು ಭೇಟಿ ಮಾಡಿದ್ದೇನೆ. ಆಕೆ ಏಂಜಲ್​ ತರಹ ಇದ್ದಾಳೆ’ ಎಂದಿದ್ದಾರೆ. ಈ ಉತ್ತರ ನೋಡಿದ ಅಭಿಮಾನಿಗಳಿಗೆ ಮತ್ತೆ ನಿರಾಸೆ ಆಗಿದೆ.

ಈ ಬಗ್ಗೆ ಪ್ರಶ್ನೆ ಹೆಚ್ಚಿದ ಬೆನ್ನಲ್ಲೇ ಭಾವನಾ ವಿಶೇಷ ಮನವಿಯನ್ನು ಮಾಡಿಕೊಂಡಿದ್ದಾರೆ. ವಿರಾಟ್​-ಅನುಷ್ಕಾ ಮಗಳ ಮುಖವನ್ನು ತೋರಿಸುವುದಿಲ್ಲ ಎಂದು ಹೇಳಿದ್ದಾರೆ. ಯಾವುದಾದರೂ ಮಾಧ್ಯಮಗಳು ವಮಿಕಾ ಫೋಟೋ ಇದು ಎಂದು ವರದಿ ಬಿತ್ತರಿಸಿದರೆ ಅದನ್ನು ನಂಬಬೇಡಿ. ನಾವು ಅನುಷ್ಕಾ-ವಿರಾಟ್​ ನಿರ್ಧಾರವನ್ನು ಗೌರವಿಸೋಣ ಎಂದಿದ್ದಾರೆ.

ವರ್ಲ್ಡ್​​ ಟೆಸ್ಟ್​ ಚಾಂಪಿಯನ್​ಶಿಪ್​ಗಾಗಿ ಅನುಷ್ಕಾ-ವಿರಾಟ್​ ಇಂಗ್ಲೆಂಡ್​ಗೆ ಹೊರಟಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳು ಮಗುವಿನ ಫೋಟೋ ಕ್ಲಿಕ್​ ಮಾಡಲು ಪ್ರಯತ್ನಿಸಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ: ‘ಆ ಮಗುವಿಗೆ ಉಸಿರು ಕಟ್ಟುತ್ತಿದೆ’; ಅನುಷ್ಕಾ-ವಿರಾಟ್​ ಪುತ್ರಿ ವಮಿಕಾ ವಿಚಾರದಲ್ಲಿ ನೆಟ್ಟಿಗರ ಆಕ್ರೋಶ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?