‘ಪ್ರಭಾಸ್​ ಜತೆ ಇದ್ದರೆ ಫಿಟ್​ನೆಸ್​ ಕಳೆದುಕೊಳ್ತೀರಿ’; ಟಾಲಿವುಡ್​ ನಟನ ವಿಚಿತ್ರ ಆರೋಪ

| Updated By: ರಾಜೇಶ್ ದುಗ್ಗುಮನೆ

Updated on: Aug 23, 2021 | 9:31 AM

ಸುಧೀರ್ ಬಾಬು ಸದ್ಯ ‘ಶ್ರೀದೇವಿ ಸೋಡಾ ಸೆಂಟರ್’​ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಪ್ರಮೋಷನ್​ಗೆ ಬೇಕಾದ ಎಲ್ಲಾ ಕೆಲಸಗಳನ್ನು ಚಿತ್ರತಂಡ ಮಾಡುತ್ತಿದೆ. ಮಾಧ್ಯಮಗಳನ್ನು ಕೂಡ ಚಿತ್ರತಂಡ ಎದುರುಗೊಳ್ಳುತ್ತಿದೆ.

‘ಪ್ರಭಾಸ್​ ಜತೆ ಇದ್ದರೆ ಫಿಟ್​ನೆಸ್​ ಕಳೆದುಕೊಳ್ತೀರಿ’; ಟಾಲಿವುಡ್​ ನಟನ ವಿಚಿತ್ರ ಆರೋಪ
ಪ್ರಭಾಸ್​ ಜತೆ ಇದ್ದರೆ ಫಿಟ್​ನೆಸ್​ ಕಳೆದುಕೊಳ್ತೀರಿ; ಟಾಲಿವುಡ್​ ನಟನ ವಿಚಿತ್ರ ಆರೋಪ
Follow us on

ಸೆಲೆಬ್ರಿಟಿಗಳು ಫಿಟ್​ನೆಸ್​ಗೆ ಮೊದಲ ಆದ್ಯತೆ ನೀಡುತ್ತಾರೆ. ಏನೇ ಆದರೂ ಅವರು ಫಿಟ್​ನೆಸ್​ ಕಳೆದುಕೊಳ್ಳೋಕೆ ಇಷ್ಟಪಡುವುದಿಲ್ಲ. ಈ ಕಾರಣಕ್ಕೆ ಶೂಟಿಂಗ್​ ಮಧ್ಯೆಯೂ ಜಿಮ್​ನಲ್ಲಿ ಬೆವರು ಹರಿಸುವ ಕೆಲಸವನ್ನು ಅವರು ನಿಲ್ಲಿಸುವುದಿಲ್ಲ. ಅದರಲ್ಲೂ ಎರಡು ಸ್ಟಾರ್​​ಗಳು ಜಿಮ್​ನಲ್ಲಿ ಒಟ್ಟಿಗೆ ಸೇರಿದರೆ ಇಬ್ಬರ ನಡುವೆ ಸ್ಪರ್ಧೆ ಏರ್ಪಟ್ಟು ಕೊಂಚ ಹೆಚ್ಚೇ ವರ್ಕೌಟ್​ ನಡೆಯುತ್ತದೆ. ಆದರೆ, ಪ್ರಭಾಸ್​ ಜತೆ ಸೇರಿದರೆ ಫಿಟ್​ನೆಸ್​ ಹಾಳಾಗುತ್ತದೆ ಎನ್ನುವ ಆರೋಪವನ್ನು ಟಾಲಿವುಡ್ ನಟ ಸುಧೀರ್​ ಬಾಬು ಮಾಡಿದ್ದಾರೆ.

ಸುಧೀರ್ ಬಾಬು ಸದ್ಯ ‘ಶ್ರೀದೇವಿ ಸೋಡಾ ಸೆಂಟರ್’​ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಪ್ರಮೋಷನ್​ಗೆ ಬೇಕಾದ ಎಲ್ಲಾ ಕೆಲಸಗಳನ್ನು ಚಿತ್ರತಂಡ ಮಾಡುತ್ತಿದೆ. ಮಾಧ್ಯಮಗಳನ್ನು ಕೂಡ ಚಿತ್ರತಂಡ ಎದುರುಗೊಳ್ಳುತ್ತಿದೆ. ಈ ವೇಳೆ ಪ್ರಭಾಸ್​ ಜತೆಗೆ ಕಳೆದ ಸಮಯದ ಬಗ್ಗೆ ಹೇಳಿಕೊಂಡಿದ್ದಾರೆ ಸುಧೀರ್​.

‘ಅನೇಕರು ನನ್ನ ಫಿಸಿಕಲ್​ ಫಿಟ್​ನೆಸ್​ ಬಗ್ಗೆ ಮಾತನಾಡುತ್ತಾರೆ. ಫಿಟ್​ ಆಗಿರೋಕೆ ನನಗೂ ಕೂಡ ಇಷ್ಟ. ಆದರೆ, ಇತ್ತೀಚೆಗೆ ನಾನು ಪ್ರಭಾಸ್​ ಮನೆಗೆ ಭೇಟಿ ನೀಡಿದ್ದೆ. ಅವರು ತುಂಬಾನೇ ರುಚಿಕರ ಆಹಾರವನ್ನು ನೀಡಿದರು. ಪ್ರಭಾಸ್​ ಜತೆ ಒಂದು ವಾರ ಕಳೆದರೆ ನಾವು ನಮ್ಮ ಡಯಟ್​ ತೊರೆಯೋದು ಪಕ್ಕಾ. ಇದರಿಂದ ಫಿಟ್​ನೆಸ್​ ಹಾಳಾಗೋದು ಗ್ಯಾರಂಟಿ’ ಎಂದು ನಕ್ಕಿದ್ದಾರೆ ಸುಧೀರ್​ ಬಾಬು.

‘ಮನೆಗೆ ಬಂದ ಅತಿಥಿಗಳಿಗೆ ಸತ್ಕಾರ ಮಾಡೋದು ಪ್ರಭಾಸ್​ ಗುಣ. ಅವರ ಸಿಂಪ್ಲಿಸಿಟಿಯಿಂದ ಎಲ್ಲರ ಗಮನ ಸೆಳೆಯುತ್ತಾರೆ’ ಎಂದಿದ್ದಾರೆ ಸುಧೀರ್​. ಈ ಮೂಲಕ ಪ್ರಭಾಸ್​ ಸ್ಟಾರ್​ ನಟನಾದರೂ ಎಲ್ಲರ ಜತೆ ಸಾಮಾನ್ಯರಂತೆ ಇರುತ್ತಾರೆ ಎಂಬುದನ್ನು ಸುಧೀರ್​ ಬಾಯ್ತುಂಬ ಹೊಗಳಿದ್ದಾರೆ.

‘ಶ್ರೀದೇವಿ ಸೋಡಾ ಸೆಂಟರ್’​ ಸಿನಿಮಾ ಆಗಸ್ಟ್ 27ರಂದು ರಿಲೀಸ್​ ಆಗುತ್ತಿದೆ. ಕೊವಿಡ್​ ಕಾರಣದಿಂದ ಕೆಲ ರಾಜ್ಯಗಳ ಚಿತ್ರಮಂದಿರದಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದೆ. ಇದರ ಮಧ್ಯೆಯೂ ಸಿನಿಮಾ ರಿಲೀಸ್​ ಮಾಡುವ ಸಾಹಸಕ್ಕೆ ನಿರ್ಮಾಪಕರು ಮುಂದಾಗುತ್ತಿದ್ದಾರೆ. ಅಕ್ಷಯ್​ ಕುಮಾರ್​ ನಟನೆಯ ಬೆಲ್​ ಬಾಟಮ್​ ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿತ್ತು. ಕೊವಿಡ್​ ಕಾರಣದಿಂದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ಹೊಡೆತ ಬಿದ್ದಿತ್ತು.

ಇದನ್ನೂ ಓದಿ: ಸಮಸ್ಯೆಯನ್ನು ಮೆಟ್ಟಿ ನಿಂತ ಪ್ರತಿಭೆ; ‘ಎದೆ ತುಂಬಿ ಹಾಡುವೆನು’ ವೇದಿಕೆ ಮೇಲೆ ಎಲ್ಲರ ಮನಗೆದ್ದ ಸೂರ್ಯಕಾಂತ್

​ಯಶ್​ ಎಂಟ್ರಿಗೆ ಜಾಗ ಬಿಟ್ಟುಕೊಟ್ಟ ಪ್ರಭಾಸ್​; ‘ಕೆಜಿಎಫ್​ 2’ ಚಿತ್ರಕ್ಕಾಗಿ ‘ಸಲಾರ್​’ ರಿಲೀಸ್​ ದಿನಾಂಕ ಬದಲು?

Published On - 8:31 am, Mon, 23 August 21