ನಿರ್ದೇಶನಕ್ಕೆ ಇಳಿದ ಸೃಜನ್ ಲೋಕೇಶ್; ಮೊದಲ ಚಿತ್ರದಲ್ಲೇ ಮಗನಿಗೆ ಚಾನ್ಸ್

|

Updated on: Aug 22, 2023 | 7:10 AM

‘ಜಿಎಸ್​ಟಿ’ ಚಿತ್ರವನ್ನು ಸೃಜನ್ ಲೋಕೇಶ್ ನಿರ್ದೇಶನ ಮಾಡುತ್ತಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಸಂದೇಶ್​ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿಬರಲಿದೆ.

ನಿರ್ದೇಶನಕ್ಕೆ ಇಳಿದ ಸೃಜನ್ ಲೋಕೇಶ್; ಮೊದಲ ಚಿತ್ರದಲ್ಲೇ ಮಗನಿಗೆ ಚಾನ್ಸ್
ಜಿಎಸ್​ಟಿ ತಂಡ
Follow us on

ನಟ ಸೃಜನ್ ಲೋಕೇಶ್ ಅವರ ಕುಟುಂಬ ಈ ಮೊದಲಿನಿಂದಲೂ ಕಲಾ ಸೇವೆ ಮಾಡುತ್ತಲೇ ಬರುತ್ತಿದೆ. ಸೃಜನ್ ಲೋಕೇಶ್ (Srujan Lokesh) ತಾತ ಸುಬ್ಬಯ್ಯ ನಾಯ್ಡು ರಂಗಭೂಮಿ ಕಲಾವಿದರಾಗಿದ್ದರು. ಅವರು ಸಿನಿಮಾಗಳಲ್ಲೂ ನಟಿಸಿದ್ದಾರೆ. ಸೃಜನ್ ತಂದೆ-ತಾಯಿ ಲೋಕೇಶ್ ಹಾಗೂ ಗಿರಿಜಾ ಲೋಕೇಶ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಲೋಕೇಶ್-ಗಿರಿಜಾ ಮಕ್ಕಳಾದ ಸೃಜನ್ ಹಾಗೂ ಪೂಜಾ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ನಿರೂಪಕನಾಗಿ, ನಟನಾಗಿ ಸೃಜನ್ ಗಮನ ಸೆಳೆದಿದ್ದಾರೆ. ಈಗ ಅವರು ನಿರ್ದೇಶನಕ್ಕೆ ಇಳಿದಿದ್ದಾರೆ. ಅವರ ನಿರ್ದೇಶನದ ಮೊದಲ ಚಿತ್ರದಲ್ಲಿ ಮಗ ಸುಕೃತ್ ಕೂಡ ನಟಿಸುತ್ತಿದ್ದಾನೆ ಅನ್ನೋದು ವಿಶೇಷ.

‘ಜಿಎಸ್​ಟಿ’ ಚಿತ್ರವನ್ನು ಸೃಜನ್ ಲೋಕೇಶ್ ನಿರ್ದೇಶನ ಮಾಡುತ್ತಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಸಂದೇಶ್​ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿಬರಲಿದೆ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ಮೊದಲ ದೃಶ್ಯಕ್ಕೆ ಸಂದೇಶ್ ನಾಗರಾಜ್ ಆರಂಭ ಫಲಕ ತೋರಿಸಿದರು. ಕ್ಯಾಮೆರಾಗೆ ಗಿರಿಜಾ ಲೋಕೇಶ್ ಚಾಲನೆ ಮಾಡಿದರು. ಇನ್ನು, ಪಿ.ಶೇಷಾದ್ರಿ, ಟಿ.ಎಸ್.ನಾಗಾಭರಣ, ತಾರಾ, ಶೃತಿ, ಸುಂದರರಾಜ್, ನಿರೂಪ್ ಭಂಡಾರಿ ಮೊದಲಾದವರು ಆಗಮಿಸಿ ತಂಡಕ್ಕೆ ಶುಭಕೋರಿದ್ದಾರೆ.

ಸೃಜನ್ ಅವರ ಲಕ್ಕಿ ಸಂಖ್ಯೆ 7. ಎಲ್ಲವೂ ಈ ಲಕ್ಕಿ ನಂಬರ್​ಗೆ ಕನೆಕ್ಟ್ ಆಗಿದೆ. ಇದಕ್ಕೆ ಕಾರಣ ವಿವರಿಸಿದ್ದಾರೆ. ಸದ್ಯ ನಾವು 2023ನೇ ಇಸವಿಯಲ್ಲಿದ್ದೇವೆ. 2+0+2+3 ಮಾಡಿದರೆ ಬರೋದು 7. ಸೃಜನ್ ಲೋಕೇಶ್ ನಟನೆಯ 25ನೇ ಸಿನಿಮಾ. 2+5 ಕೂಡಿದರೂ ಏಳೇ ಬರುತ್ತದೆ.  ಇನ್ನು ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದ 34ನೇ ಸಿನಿಮಾ ಇದು. 3+4 ಕೂಡಿದಾಗ ಬರೋದು ಏಳು. ಈ ವಿಚಾರವನ್ನು ಸೃಜನ್ ಲೋಕೇಶ್ ಹಂಚಿಕೊಂಡರು.

ಸುಬ್ಬಯ್ಯ ನಾಯ್ಡು ಸಿನಿಮಾದಲ್ಲಿ ಲೋಕೇಶ್ ಬಾಲ ಕಲಾವಿದನಾಗಿ ನಟಿಸಿದ್ದರು. ಲೋಕೇಶ್ ಸಿನಿಮಾದಲ್ಲಿ ಸೃಜನ್ ಬಾಲ ಕಲಾವಿದರಾಗಿದ್ದರು. ಈಗ ಸೃಜನ್ ಸಿನಿಮಾದಲ್ಲಿ ಸುಕೃತ್ ಬಾಲ ಕಲಾವಿದನಾಗಿ ನಟಿಸುತ್ತಿದ್ದಾನೆ. ಈ ಮೂಲಕ ಈ ಕುಟುಂಬದ ನಾಲ್ಕನೇ ಜನರೇಶನ್ ನಟನೆಗೆ ಕಾಲಿಟ್ಟಿದೆ. ಸೃಜನ್ ನಿರ್ದೇಶನದ ಮೊದಲ ಸಿನಿಮಾದಲ್ಲಿ ಗಿರಿಜಾ ಲೋಕೇಶ್ ಕೂಡ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಸೃಜನ್ ಲೋಕೇಶ್ ನಿರೂಪಣೆಯಲ್ಲಿ ಹೊಸ ರಿಯಾಲಿಟಿ ಶೋ ‘ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್’; ಕಿರುತೆರೆ ಕಲಾವಿದರ ದಂಡು

‘ಜಿಎಸ್​ಟಿ’ ಚಿತ್ರಕ್ಕೆ ‘ಘೋಸ್ಟ್ ಇನ್ ಟ್ರಬಲ್’ ಎಂಬ ಕ್ಯಾಪ್ಶನ್ ನೀಡಲಾಗಿದೆ. ದೆವ್ವಗಳೂ ಸಮಸ್ಯೆಯಲ್ಲಿವೆ ಅನ್ನೋದು ಇದರ ಅರ್ಥ. ಈಗಾಗಲೇ ಸಿನಿಮಾಗೆ ಶೂಟಿಂಗ್ ಕೂಡ ಆರಂಭ ಆಗಿದೆ. ಈ ಚಿತ್ರದಲ್ಲಿ ಗಿರಿಜಾ ಲೋಕೇಶ್, ಪ್ರಮೋದ್ ಶೆಟ್ಟಿ, ರಜನಿ ಭಾರದ್ವಾಜ್, ನಿವೇದಿತಾ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಸಿನಿಮಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ