AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಮೌಳಿ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ; ಹೊಸ ಪೋಸ್ಟರ್ ಮೂಲಕ ಹಿಗ್ಗಾಮುಗ್ಗಾ ಟ್ರೋಲ್

Kumbha Poster Troll: ಎಸ್​ಎಸ್ ರಾಜಮೌಳಿ ನಿರ್ದೇಶನದ SSMB 29 ಚಿತ್ರದ ವಿಲನ್ ಪೃಥ್ವಿರಾಜ್ ಸುಕುಮಾರನ್ 'ಕುಂಭ' ಪಾತ್ರದ ಪೋಸ್ಟರ್ ಬಿಡುಗಡೆಯಾಗಿದೆ. ನಿರೀಕ್ಷೆಗೂ ಮೀರಿ ಈ ಪೋಸ್ಟರ್ ಟ್ರೋಲ್ ಹಾಗೂ ಹಾಲಿವುಡ್ ಕಾಪಿ ಆರೋಪಗಳಿಗೆ ಗುರಿಯಾಗಿದೆ. ವಿಚಿತ್ರವಾದ ಚೇರ್​ನಲ್ಲಿ ಪೃಥ್ವಿರಾಜ್ ಕಾಣಿಸಿಕೊಂಡಿದೆ.

ರಾಜಮೌಳಿ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ; ಹೊಸ ಪೋಸ್ಟರ್ ಮೂಲಕ ಹಿಗ್ಗಾಮುಗ್ಗಾ ಟ್ರೋಲ್
ರಾಜಮೌಳಿ
ರಾಜೇಶ್ ದುಗ್ಗುಮನೆ
|

Updated on: Nov 08, 2025 | 3:08 PM

Share

ಎಸ್​ಎಸ್​ ರಾಜಮೌಳಿ ಸಿನಿಮಾ ಅನೌನ್ಸ್ ಮಾಡಿದರು ಎಂದರೆ ಅದರ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗುತ್ತವೆ. ಪಾತ್ರಧಾರಿಗಳ ಪರಿಚಯಿಸಿದಾಗ ಎಲ್ಲರಿಗೂ ಖುಷಿ ಆಗುತ್ತದೆ. ಆದರೆ, ಈ ಬಾರಿ ಯಾಕೋ ರಾಜಮೌಳಿ (Rajamouli) ಅದೃಷ್ಟ ಕೈ ಕೊಟ್ಟಂತೆ ಕಾಣುತ್ತಿದೆ. ಅವರು ತಮ್ಮ ಹೊಸ ಸಿನಿಮಾದ ವಿಲನ್ ಪಾತ್ರವನ್ನು ಪರಿಚಯಿಸಿದ್ದಾರೆ. ಈ ಪಾತ್ರದ ಪೋಸ್ಟರ್ ಸಿನಿಮಾಗೆ ಹೈಪ್ ನೀಡುವ ಬದಲು ಟ್ರೋಲಿಗರಿಗೆ ಆಹಾರ ಆಗಿದ್ದಾರೆ.

‘ಎಸ್​ಎಸ್​ಎಂಬಿ 29’ ಹೆಸರಿನ ಸಿನಿಮಾನ ರಾಜಮೌಳಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಮಹೇಶ್ ಬಾಬು ಹೀರೋ ಆದರೆ, ಪ್ರಿಯಾಂಕಾ ಚೋಪ್ರಾ ನಾಯಕಿ. ಈ ಸಿನಿಮಾದ ಟೈಟಲ್ ಇನ್ನು ಕೆಲವೇ ದಿನಗಳಲ್ಲಿ ರಿವೀಲ್ ಆಗಲಿದೆ. ಅದಕ್ಕೂ ಮೊದಲು ಚಿತ್ರದ ವಿಲನ್ ಪೃಥ್ವಿರಾಜ್ ಸುಕುಮಾರನ್​ ಪಾತ್ರವನ್ನು ರಾಜಮೌಳಿ ಅವರು ಪರಿಚಯಿಸಿದರು.

‘ಕುಂಭ’ ಹೆಸರಿನ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್​ ಕಾಣಿಸಿಕೊಂಡಿದ್ದಾರೆ. ಅವರು ಚೇರ್ ಮೇಲೆ ಕುಳಿತಿದ್ದಾರೆ. ಆ ಚೇರ್​​ ವಿಚಿತ್ರವಾಗಿದೆ. ಅದಕ್ಕೆ ಎರಡು ಚಕ್ರ ಇದೆ. ಪೃಥ್ವಿರಾಜ್ ಕಾಲು ಸರಿ ಇಲ್ಲ ಎಂಬುದು ಪೋಸ್ಟರ್​​ನಲ್ಲಿ ಕಾಣಿಸುತ್ತದೆ. ಈ ಚೇರ್​ಗೆ ಚಿತ್ರ ವಿಚಿತ್ರವಾದ ಕೈಗಳಿವೆ. ಇದು ಯಾವುದೋ ಹಾಲಿವುಡ್ ಸಿನಿಮಾದಿಂದ ಕದಿಯಲ್ಪಟ್ಟ ಪೋಸ್ಟರ್ ಎಂಬ ಆರೋಪ ಒಂದು ಕಡೆಯಾದರೆ, ಟ್ರೋಲ್​ಗಳ ಕಾಟ ಮತ್ತೊಂದು ಕಡೆ.

ಇದನ್ನೂ ಓದಿ: ಪವರ್​ಫುಲ್ ‘ವಿಲನ್’ ಪರಿಚಯಿಸಿದ ರಾಜಮೌಳಿ, ಹಾಲಿವುಡ್ ಸ್ಪೂರ್ತಿ?

ಸದ್ಯ ಈ ಪೋಸ್ಟರ್ ಸಾಕಷ್ಟು ಟ್ರೋಲ್​ಗಳನ್ನು ಎದುರಿಸುತ್ತಿದೆ. ಈ ಪೋಸ್ಟರ್​ಗೆ ವಿವಿಧ ರೀತಿಯ ಟ್ರೋಲ್​ಗಳು ಎದುರಾಗುತ್ತಿವೆ. ಹಳೆಯ ಸಿನಿಮಾಗಳ ದೃಶ್ಯಗಳನ್ನು ಬಳಕೆ ಮಾಡಿಕೊಂಡು ಈ ಪೋಸ್ಟರ್ ಅನ್ನು ಟೀಕಿಸುವ ಕೆಲಸ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​