AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಗೆ ಹಬ್ಬ ತಂದ ತಾರಾ, ಅಂತರಂಗ ತೆರೆದಿಟ್ಟ ಡ್ರೋನ್ ಪ್ರತಾಪ್

Bigg Boss: ತರಕಾರಿ, ಮಸಾಲೆ ಪದಾರ್ಥ ಕನಿಷ್ಟ ಉಪ್ಪು ಸಹ ಇಲ್ಲದೆ ಹಬ್ಬವನ್ನು ಸಪ್ಪೆಯಾಗಿ ಆಚರಿಸಲು ಸಿದ್ಧವಾಗಿದ್ದ ಬಿಗ್​ಬಾಸ್ ಮನೆಯ ಸದಸ್ಯರ ಪಾಲಿಗೆ ಹಬ್ಬ ತಂದರು ನಟಿ ತಾರಾ.

ಬಿಗ್​ಬಾಸ್ ಮನೆಗೆ ಹಬ್ಬ ತಂದ ತಾರಾ, ಅಂತರಂಗ ತೆರೆದಿಟ್ಟ ಡ್ರೋನ್ ಪ್ರತಾಪ್
ತಾರಾ
ಮಂಜುನಾಥ ಸಿ.
|

Updated on: Oct 24, 2023 | 11:54 PM

Share

ನಾಡೆಲ್ಲ ದಸರಾ (Dasara) ಹಬ್ಬವನ್ನು ಸಂಭ್ರಮ ಹಾಗೂ ವೈಭವದಿಂದ ಆಚರಣೆ ಮಾಡಿದೆ. ಆದರೆ ಕೆಲ ದಿನಗಳ ಹಿಂದೆ ಲಕ್ಶುರಿ ಬಜೆಟ್ ಸೋತ ಬಿಗ್​ಬಾಸ್ ಮಂದಿ ಅಡುಗೆಗೆ ಸೂಕ್ತ ತರಕಾರಿ ಇಲ್ಲದೆ, ಕನಿಷ್ಟ ಉಪ್ಪು ಸಹ ಇಲ್ಲದೆ ಸರಿಯಾಗಿ ಹಬ್ಬ ಆಚರಿಸಲಾಗಿರಲಿಲ್ಲ. ಆದರೆ ವಿಜಯದಶಮಿಯಂದು ಬಿಗ್​ಬಾಸ್ ಮನೆಗೆ ಬಂದ ನಟಿ ತಾರಾ (Tara) ಮನೆಯ ಸದಸ್ಯರಿಗೆ ಹಲವು ಸಂತೋಷಗಳನ್ನು ತಂದರು.

ಬಿಗ್​ಬಾಸ್ ಮನೆ ಪ್ರವೇಶಿಸುತ್ತಿದ್ದಂತೆ ಅಡುಗೆ ಮನೆಗೆ ಹೋದ ತಾರಾ ಅಲ್ಲಿ ಈರುಳ್ಳಿ ಬಿಟ್ಟು ಏನೂ ಇಲ್ಲದ್ದು ನೋಡಿ, ಬಿಗ್​ಬಾಸ್​ಗೆ ಮನವಿ ಮಾಡಿ ತರಕಾರಿ ಕಳಿಸುವಂತೆ ಮನವಿ ಮಾಡಿದರು. ಅಂತೆಯೇ ತಾರಾ ಮನವಿಗೆ ಸ್ಪಂದಿಸಿದ ಬಿಗ್​ಬಾಸ್ ತಾರಾ ಕೇಳಿದಂತೆ ಎಲ್ಲ ತರಕಾರಿ, ಮಸಾಲೆ ಪದಾರ್ಥ, ಉಪ್ಪು ಇತರೆಗಳನ್ನು ಕಳಿಸಿದರು. ಆದರೆ ಕಾಫಿಯನ್ನು ಕಳಿಸಲಿಲ್ಲ. ಅದಾದ ಬಳಿಕ ಹೋಳಿಗೆ ಮಾಡಲು ಪದಾರ್ಥಗಳನ್ನು ಕಳಿಸಿ, ಹೋಳಿಗೆ ಮಾಡಿಕೊಳ್ಳುವಂತೆ ಹೇಳಿದರು ಬಿಗ್​ಬಾಸ್. ಅಂತೆಯೇ ಮನೆಯ ಗಂಡು ಮಕ್ಕಳೆಲ್ಲ ಸೇರಿ ಹೋಳಿಗೆ ಮಾಡಿಕೊಂಡರು.

ತಾರಾ ಅವರು ಮನೆಯ ಸದಸ್ಯರೊಡನೆ ಪ್ರತ್ಯೇಕವಾಗಿ ಕೆಲ ಹೊತ್ತು ಮಾತನಾಡಿದರು. ಈ ಸಂದರ್ಭದಲ್ಲಿ ಡ್ರೋನ್ ಪ್ರತಾಪ್ ಜೊತೆ ಮಾತನಾಡುವಾಗ ಪ್ರತಾಪ್ ಭಾವುಕರಾಗಿ ಕಣ್ಣೀರು ಹಾಕಿದರು. ತಾವು ಕುಟುಂಬದವರಿಂದ ದೂರ ಇರುವುದಾಗಿ, ಸಂಬಂಧಿಕರಿಂದ ಸಾಕಷ್ಟು ಅವಮಾನ ಎದುರಿಸಿರುವುದಾಗಿ ಹೇಳಿದರು. ಕುಟುಂಬದವರನ್ನು ನೋಡುವ ಆಸೆಯಾಗಿದೆ ಎಂದು ಸಹ ಪ್ರತಾಪ್ ಹೇಳಿದರು. ಅದಕ್ಕೆ ವ್ಯವಸ್ಥೆ ಮಾಡುವಂತೆ ಬಿಗ್​ಬಾಸ್ ಬಳಿ ತಾರಾ ಮನವಿ ಮಾಡಿದರು.

ಇದನ್ನೂ ಓದಿ:ಬಿಗ್​ಬಾಸ್ ಮನೆ ಮಂದಿಗೆ ತರಾಟೆ: ಹಿಂದೆಂದೂ ಬಳಸದ ಅಧಿಕಾರ ಬಳಸಿದ ಸುದೀಪ್

ಅದಕ್ಕೂ ಮುನ್ನ ನಟಿ ಸಿರಿ ಅವರ ಬಳಿ ಮಾತನಾಡುತ್ತಾ, ಸಿರಿ ಅವರನ್ನು ಬೇಗನೆ ಮದುವೆ ಆಗುವಂತೆ ಹೇಳಿದರು. ಮದುವೆಯಾಗಿ ‘ರಾಜಾ ರಾಣಿ’ ಶೋಗೆ ಬನ್ನಿ ಅಲ್ಲಿಂದ ಒಂದು ವರ್ಷದಲ್ಲಿ ‘ನಮ್ಮಮ್ಮ ಸೂಪರ್ ಸ್ಟಾರ್​’ಗೆ ಬನ್ನಿ ಎಂದು ಹೇಳಿ ತಮಾಷೆ ಮಾಡಿದರು. ಆ ಬಳಿಕ ವಿನಯ್ ಬಳಿ ಮಾತನಾಡುತ್ತಾ, ಭಾಷೆಯನ್ನು ಸುಧಾರಿಸಿಕೊಳ್ಳುವಂತೆ ಸಲಹೆ ನೀಡಿದರು.

ಆ ಬಳಿಕ ಹಬ್ಬದ ವಿಶೇಷವಾಗಿ ಮನೆಯ ಎಲ್ಲ ಸದಸ್ಯರಿಗೆ ಹಲ್​ದಿರಾಮ್ಸ್​ ಕಡೆಯಿಂದ ಹಬ್ಬದ ಅಡುಗೆಯನ್ನು ಕಳಿಸಲಾಯ್ತು. ಚೋಲೆ ಬಟೂರೆ ಸೇರಿದಂತೆ ಹಲವು ತಿಂಡಿ ತಿನಿಸುಗಳನ್ನು ಮನೆಯ ಎಲ್ಲ ಸದಸ್ಯರಿಗಾಗಿ ಬಿಗ್​ಬಾಸ್ ಕಳಿಸಿದರು. ತಾರಾ ಅವರೊಟ್ಟಿಗೆ ಸೇರಿ ಎಲ್ಲರೂ ರುಚಿಯಾದ ಊಟ ಸವಿದರು.

ಬಳಿಕ ಬಿಗ್​ಬಾಸ್ ಅಣತಿಯಂತೆ ಪ್ರತಿಯೊಬ್ಬರೂ ಒಂದೊಂದು ಹಾಡಿಗೆ ನರ್ತಿಸಿ ಆ ಹಾಡನ್ನು ಯಾರಿಗೆ ಡೆಡಿಕೇಟ್ ಮಾಡುವುದಾಗಿ ಹೇಳಬೇಕಿತ್ತು. ಅಂತೆಯೇ ನಮ್ರತಾ-ಸ್ನೇಹಿತ್​ಗೆ, ಸ್ನೇಹಿತ್-ನಮ್ರತಾಗೆ ಹಾಡು ಡೆಡಿಕೇಟ್ ಮಾಡಿದರು. ಸಂಗೀತಾ ಹಾಗೂ ಕಾರ್ತಿಕ್ ಒಟ್ಟಿಗೆ ಡ್ಯಾನ್ಸ್ ಸಹ ಮಾಡಿದರು. ಡ್ರೋನ್ ಪ್ರತಾಪ್ ಸರದಿ ಬಂದಾಗ ಬಂಡಲ್ ಬಡಾಯಿ ಮಾದೇವ ಹಾಡು ಹಾಕಲಾಯ್ತು. ಅದನ್ನು ಅವರು ಸಂತುಗೆ ಡೆಡಿಕೇಟ್ ಮಾಡಿದರು.

ಎಲ್ಲರೊಟ್ಟಿಗೆ ಬೆರೆತು ಬಿಗ್​ಬಾಸ್ ಮನೆಯ ಸದಸ್ಯರಿಗೆ ಹಬ್ಬವನ್ನು ತಂದ ತಾರಾ ಅವರು ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿ, ಎಲ್ಲರೊಟ್ಟಿಗೆ ಡ್ಯಾನ್ಸ್ ಮಾಡಿ ಬಿಗ್​ಬಾಸ್ ಮನೆಗೆ ಹಬ್ಬದ ಕಳೆ ತಂದರು. ಕೊನೆಗೆ ಬಿಗ್​ಬಾಸ್ ಅಣತಿಯಂತೆ ಎಲ್ಲರಿಗೂ ಧನ್ಯವಾದ ಹೇಳಿ ನಿರ್ಗಮಿಸಿದರು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಗೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ