AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಗೆ ಹಬ್ಬ ತಂದ ತಾರಾ, ಅಂತರಂಗ ತೆರೆದಿಟ್ಟ ಡ್ರೋನ್ ಪ್ರತಾಪ್

Bigg Boss: ತರಕಾರಿ, ಮಸಾಲೆ ಪದಾರ್ಥ ಕನಿಷ್ಟ ಉಪ್ಪು ಸಹ ಇಲ್ಲದೆ ಹಬ್ಬವನ್ನು ಸಪ್ಪೆಯಾಗಿ ಆಚರಿಸಲು ಸಿದ್ಧವಾಗಿದ್ದ ಬಿಗ್​ಬಾಸ್ ಮನೆಯ ಸದಸ್ಯರ ಪಾಲಿಗೆ ಹಬ್ಬ ತಂದರು ನಟಿ ತಾರಾ.

ಬಿಗ್​ಬಾಸ್ ಮನೆಗೆ ಹಬ್ಬ ತಂದ ತಾರಾ, ಅಂತರಂಗ ತೆರೆದಿಟ್ಟ ಡ್ರೋನ್ ಪ್ರತಾಪ್
ತಾರಾ
ಮಂಜುನಾಥ ಸಿ.
|

Updated on: Oct 24, 2023 | 11:54 PM

Share

ನಾಡೆಲ್ಲ ದಸರಾ (Dasara) ಹಬ್ಬವನ್ನು ಸಂಭ್ರಮ ಹಾಗೂ ವೈಭವದಿಂದ ಆಚರಣೆ ಮಾಡಿದೆ. ಆದರೆ ಕೆಲ ದಿನಗಳ ಹಿಂದೆ ಲಕ್ಶುರಿ ಬಜೆಟ್ ಸೋತ ಬಿಗ್​ಬಾಸ್ ಮಂದಿ ಅಡುಗೆಗೆ ಸೂಕ್ತ ತರಕಾರಿ ಇಲ್ಲದೆ, ಕನಿಷ್ಟ ಉಪ್ಪು ಸಹ ಇಲ್ಲದೆ ಸರಿಯಾಗಿ ಹಬ್ಬ ಆಚರಿಸಲಾಗಿರಲಿಲ್ಲ. ಆದರೆ ವಿಜಯದಶಮಿಯಂದು ಬಿಗ್​ಬಾಸ್ ಮನೆಗೆ ಬಂದ ನಟಿ ತಾರಾ (Tara) ಮನೆಯ ಸದಸ್ಯರಿಗೆ ಹಲವು ಸಂತೋಷಗಳನ್ನು ತಂದರು.

ಬಿಗ್​ಬಾಸ್ ಮನೆ ಪ್ರವೇಶಿಸುತ್ತಿದ್ದಂತೆ ಅಡುಗೆ ಮನೆಗೆ ಹೋದ ತಾರಾ ಅಲ್ಲಿ ಈರುಳ್ಳಿ ಬಿಟ್ಟು ಏನೂ ಇಲ್ಲದ್ದು ನೋಡಿ, ಬಿಗ್​ಬಾಸ್​ಗೆ ಮನವಿ ಮಾಡಿ ತರಕಾರಿ ಕಳಿಸುವಂತೆ ಮನವಿ ಮಾಡಿದರು. ಅಂತೆಯೇ ತಾರಾ ಮನವಿಗೆ ಸ್ಪಂದಿಸಿದ ಬಿಗ್​ಬಾಸ್ ತಾರಾ ಕೇಳಿದಂತೆ ಎಲ್ಲ ತರಕಾರಿ, ಮಸಾಲೆ ಪದಾರ್ಥ, ಉಪ್ಪು ಇತರೆಗಳನ್ನು ಕಳಿಸಿದರು. ಆದರೆ ಕಾಫಿಯನ್ನು ಕಳಿಸಲಿಲ್ಲ. ಅದಾದ ಬಳಿಕ ಹೋಳಿಗೆ ಮಾಡಲು ಪದಾರ್ಥಗಳನ್ನು ಕಳಿಸಿ, ಹೋಳಿಗೆ ಮಾಡಿಕೊಳ್ಳುವಂತೆ ಹೇಳಿದರು ಬಿಗ್​ಬಾಸ್. ಅಂತೆಯೇ ಮನೆಯ ಗಂಡು ಮಕ್ಕಳೆಲ್ಲ ಸೇರಿ ಹೋಳಿಗೆ ಮಾಡಿಕೊಂಡರು.

ತಾರಾ ಅವರು ಮನೆಯ ಸದಸ್ಯರೊಡನೆ ಪ್ರತ್ಯೇಕವಾಗಿ ಕೆಲ ಹೊತ್ತು ಮಾತನಾಡಿದರು. ಈ ಸಂದರ್ಭದಲ್ಲಿ ಡ್ರೋನ್ ಪ್ರತಾಪ್ ಜೊತೆ ಮಾತನಾಡುವಾಗ ಪ್ರತಾಪ್ ಭಾವುಕರಾಗಿ ಕಣ್ಣೀರು ಹಾಕಿದರು. ತಾವು ಕುಟುಂಬದವರಿಂದ ದೂರ ಇರುವುದಾಗಿ, ಸಂಬಂಧಿಕರಿಂದ ಸಾಕಷ್ಟು ಅವಮಾನ ಎದುರಿಸಿರುವುದಾಗಿ ಹೇಳಿದರು. ಕುಟುಂಬದವರನ್ನು ನೋಡುವ ಆಸೆಯಾಗಿದೆ ಎಂದು ಸಹ ಪ್ರತಾಪ್ ಹೇಳಿದರು. ಅದಕ್ಕೆ ವ್ಯವಸ್ಥೆ ಮಾಡುವಂತೆ ಬಿಗ್​ಬಾಸ್ ಬಳಿ ತಾರಾ ಮನವಿ ಮಾಡಿದರು.

ಇದನ್ನೂ ಓದಿ:ಬಿಗ್​ಬಾಸ್ ಮನೆ ಮಂದಿಗೆ ತರಾಟೆ: ಹಿಂದೆಂದೂ ಬಳಸದ ಅಧಿಕಾರ ಬಳಸಿದ ಸುದೀಪ್

ಅದಕ್ಕೂ ಮುನ್ನ ನಟಿ ಸಿರಿ ಅವರ ಬಳಿ ಮಾತನಾಡುತ್ತಾ, ಸಿರಿ ಅವರನ್ನು ಬೇಗನೆ ಮದುವೆ ಆಗುವಂತೆ ಹೇಳಿದರು. ಮದುವೆಯಾಗಿ ‘ರಾಜಾ ರಾಣಿ’ ಶೋಗೆ ಬನ್ನಿ ಅಲ್ಲಿಂದ ಒಂದು ವರ್ಷದಲ್ಲಿ ‘ನಮ್ಮಮ್ಮ ಸೂಪರ್ ಸ್ಟಾರ್​’ಗೆ ಬನ್ನಿ ಎಂದು ಹೇಳಿ ತಮಾಷೆ ಮಾಡಿದರು. ಆ ಬಳಿಕ ವಿನಯ್ ಬಳಿ ಮಾತನಾಡುತ್ತಾ, ಭಾಷೆಯನ್ನು ಸುಧಾರಿಸಿಕೊಳ್ಳುವಂತೆ ಸಲಹೆ ನೀಡಿದರು.

ಆ ಬಳಿಕ ಹಬ್ಬದ ವಿಶೇಷವಾಗಿ ಮನೆಯ ಎಲ್ಲ ಸದಸ್ಯರಿಗೆ ಹಲ್​ದಿರಾಮ್ಸ್​ ಕಡೆಯಿಂದ ಹಬ್ಬದ ಅಡುಗೆಯನ್ನು ಕಳಿಸಲಾಯ್ತು. ಚೋಲೆ ಬಟೂರೆ ಸೇರಿದಂತೆ ಹಲವು ತಿಂಡಿ ತಿನಿಸುಗಳನ್ನು ಮನೆಯ ಎಲ್ಲ ಸದಸ್ಯರಿಗಾಗಿ ಬಿಗ್​ಬಾಸ್ ಕಳಿಸಿದರು. ತಾರಾ ಅವರೊಟ್ಟಿಗೆ ಸೇರಿ ಎಲ್ಲರೂ ರುಚಿಯಾದ ಊಟ ಸವಿದರು.

ಬಳಿಕ ಬಿಗ್​ಬಾಸ್ ಅಣತಿಯಂತೆ ಪ್ರತಿಯೊಬ್ಬರೂ ಒಂದೊಂದು ಹಾಡಿಗೆ ನರ್ತಿಸಿ ಆ ಹಾಡನ್ನು ಯಾರಿಗೆ ಡೆಡಿಕೇಟ್ ಮಾಡುವುದಾಗಿ ಹೇಳಬೇಕಿತ್ತು. ಅಂತೆಯೇ ನಮ್ರತಾ-ಸ್ನೇಹಿತ್​ಗೆ, ಸ್ನೇಹಿತ್-ನಮ್ರತಾಗೆ ಹಾಡು ಡೆಡಿಕೇಟ್ ಮಾಡಿದರು. ಸಂಗೀತಾ ಹಾಗೂ ಕಾರ್ತಿಕ್ ಒಟ್ಟಿಗೆ ಡ್ಯಾನ್ಸ್ ಸಹ ಮಾಡಿದರು. ಡ್ರೋನ್ ಪ್ರತಾಪ್ ಸರದಿ ಬಂದಾಗ ಬಂಡಲ್ ಬಡಾಯಿ ಮಾದೇವ ಹಾಡು ಹಾಕಲಾಯ್ತು. ಅದನ್ನು ಅವರು ಸಂತುಗೆ ಡೆಡಿಕೇಟ್ ಮಾಡಿದರು.

ಎಲ್ಲರೊಟ್ಟಿಗೆ ಬೆರೆತು ಬಿಗ್​ಬಾಸ್ ಮನೆಯ ಸದಸ್ಯರಿಗೆ ಹಬ್ಬವನ್ನು ತಂದ ತಾರಾ ಅವರು ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿ, ಎಲ್ಲರೊಟ್ಟಿಗೆ ಡ್ಯಾನ್ಸ್ ಮಾಡಿ ಬಿಗ್​ಬಾಸ್ ಮನೆಗೆ ಹಬ್ಬದ ಕಳೆ ತಂದರು. ಕೊನೆಗೆ ಬಿಗ್​ಬಾಸ್ ಅಣತಿಯಂತೆ ಎಲ್ಲರಿಗೂ ಧನ್ಯವಾದ ಹೇಳಿ ನಿರ್ಗಮಿಸಿದರು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಗೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?