AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅರ್ಜುನ್ ಜನ್ಯ ಗತಿ ಏನು’; ಅಭಿಮಾನಿಯ ನೇರ ಪ್ರಶ್ನೆಗೆ ಉತ್ತರಿಸಿದ ಅನುಶ್ರೀ

ಆ್ಯಂಕರ್ ಅನುಶ್ರೀ ಅವರು ರೋಷನ್ ಅವರನ್ನು ಮದುವೆಯಾಗಿದ್ದು, ಹೊಸ ಜೀವನ ನಡೆಸುತ್ತಿದ್ದಾರೆ. 'ಹಳ್ಳಿ ಪವರ್' ಶೋನಲ್ಲಿ ಅರ್ಜುನ್ ಜನ್ಯ ಬಗ್ಗೆ ಕೇಳಿದ ಪ್ರಶ್ನೆಗೆ ಅನುಶ್ರೀ ನೇರವಾಗಿ ಉತ್ತರಿಸಿದ್ದಾರೆ. 'ಎರಡು ವಾರದಲ್ಲಿ ಎಲ್ಲವೂ ಗೊತ್ತಾಗುತ್ತದೆ' ಎಂದು ಹೇಳುವ ಮೂಲಕ `ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 5` ಕುರಿತು ಸುಳಿವು ನೀಡಿದ್ದಾರೆ.

‘ಅರ್ಜುನ್ ಜನ್ಯ ಗತಿ ಏನು’; ಅಭಿಮಾನಿಯ ನೇರ ಪ್ರಶ್ನೆಗೆ ಉತ್ತರಿಸಿದ ಅನುಶ್ರೀ
ಅನುಶ್ರೀ
ರಾಜೇಶ್ ದುಗ್ಗುಮನೆ
|

Updated on: Nov 08, 2025 | 11:58 AM

Share

ಆ್ಯಂಕರ್ ಅನುಶ್ರೀ (Anchor Anushree) ಅವರು ಕೆಲ ತಿಂಗಳ ಹಿಂದೆ ರೋಷನ್ ಅವರನ್ನು ವಿವಾಹ ಆಗಿದ್ದಾರೆ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಅನುಶ್ರೀ ಅವರು ವಿವಾಹದ ಬಳಿಕ ಅನೇಕ ಕಡೆಗಳಲ್ಲಿ ಕಾಣಿಸಿಕೊಂಡ ಉದಾಹರಣೆ ಇದೆ. ಈ ವೇಳೆ ವಿವಾಹದ ಬಗ್ಗೆ, ಅವರ ಹೊಸ ಜೀವನದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತಾ ಇದೆ. ಆದರೆ, ಯಾರೊಬ್ಬರೂ ಅರ್ಜುನ್ ಜನ್ಯ ಬಗ್ಗೆ ಪ್ರಶ್ನೆ ಮಾಡಿರಲಿಲ್ಲ. ಈಗ ಅವರಿಗೆ ಆ ರೀತಿಯ ಪ್ರಶ್ನೆಯೊಂದು ಎದುರಾಗಿದೆ. ಇದಕ್ಕೆ ಅವರು ನೇರವಾಗಿ ಉತ್ತರ ನೀಡಿದ್ದಾರೆ.

‘ಹಳ್ಳಿ ಪವರ್’ ಹೆಸರಿನ ಶೋ ಜೀ ಪವರ್​ನಲ್ಲಿ ಪ್ರಸಾರ ಕಾಣುತ್ತಾ ಇದೆ. ಈ ಶೋಗೆ ಅಕುಲ್ ಬಾಲಾಜಿ ಅವರು ಆ್ಯಂಕರ್. ಇತ್ತೀಚೆಗೆ ವಿಶೇಷ ಸಂಚಿಕೆ ಪ್ರಸಾರ ಕಂಡಿದ್ದು ‘ಮಹಾನಟಿ’ ಶೋ ಸ್ಪರ್ಧಿಗಳು ‘ಹಳ್ಳಿ ಪವರ್​’ಗೆ ಅತಿಥಿಗಳಾಗಿ ಬಂದಿದ್ದರು. ಅದೇ ರೀತಿ ಅನುಶ್ರೀ ಕೂಡ ಬಂದಿದ್ದರು. ಅವರಿಗೆ ಭವ್ಯ ಸ್ವಾಗತ ಸಿಕ್ಕಿತು. ವಿವಿಧ ಟಾಸ್ಕ್​​ಗೆ ಅಕುಲ್ ಹಾಗೂ ಅನುಶ್ರೀ ನೇತೃತ್ವ ವಹಿಸಿದ್ದರು. ನಂತರ ಹಳ್ಳಿ ಜೀವನವನ್ನು ಅನುಶ್ರೀ ಎಂಜಾಯ್ ಮಾಡಿದ್ದರು.

ಅನುಶ್ರೀ ಬಂದಿದ್ದಾರೆ ಎಂಬ ಕಾರಣಕ್ಕೆ ಹಳ್ಳಿ ಮಂದಿಯ ಜೊತೆ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಆಗ, ಹಳ್ಳಿಯವರು ಅನುಶ್ರೀಗೆ ವಿವಿಧ ಪ್ರಶ್ನೆಗಳನ್ನು ಕೇಳಿದರು. ‘ನೀವು ಮದುವೆ ಆಗಿದ್ದೀರಿ. ಅರ್ಜುನ್ ಜನ್ಯ ಅವರ ಕಥೆ ಏನು’ ಎಂದು ಕೇಳಿದರು. ಆಗ ಅಕುಲ್ ಅವರು, ‘ನೀವು ರೋಷನ್​ನ ಮದುವೆ ಆಗಿದ್ದೀರಾ, ಅರ್ಜುನ್ ಜನ್ಯ ಕಥೆ ಏನು? ಇದನ್ನು ನೀವು ಹೇಳಲೇಬೇಕು. ದೇಶ ಇದನ್ನು ತಿಳಿಯಬೇಕಿದೆ’ ಎಂದರು.

‘ಆ ಪ್ರಶ್ನೆಗೆ ಉತ್ತರ ಎರಡು ವಾರದಲ್ಲಿ ಗೊತ್ತಾಗುತ್ತದೆ. ಈಗ ಹೇಳಿದರೆ ಮಜಾ ಹೋಗಿ ಬಿಡುತ್ತದೆ. ಅದು 10 ವರ್ಷಗಳ ಪ್ರೀತಿ’ ಎಂದರು ಅನುಶ್ರೀ. ಅರ್ಜುನ್ ಜನ್ಯ ಅವರು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋಗೆ ಜಡ್ಜ್ ಆಗಿದ್ದಾರೆ. ಇದರ ಐದನೇ ಸೀಸನ್ ಶೀಘ್ರವೇ ಪ್ರಸಾರ ಕಾಣಲಿದೆ. ಈ ಶೋಗೆ ಅನುಶ್ರೀ ಆ್ಯಂಕರ್ ಆಗಿರಲಿದ್ದಾರೆ. ಈ ಕಾರಣದಿಂದ ಅನುಶ್ರೀ ‘ಎರಡು ವಾರದಲ್ಲಿ ಉತ್ತರ ಸಿಗಲಿದೆ’ ಎಂದರು.

ಇದನ್ನೂ ಓದಿ: ‘ನಿನ್ನ ಜೊತೆ ನಾ ಮಾತ್ರ ಇರಬೇಕು’; ಪತಿಗೆ ಬರ್ತ್​ಡೇ ವಿಶ್ ಮಾಡಿ ಕಾಲೆಳೆದ ಅನುಶ್ರೀ

ಅನುಶ್ರೀ ಹಾಗೂ ಅರ್ಜುನ್ ಜನ್ಯ ಹಲವು ಶೋಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ವೇಳೆ ಫನ್​​ಗಾಗಿ ಇಬ್ಬರೂ ಜೋಡಿಗಳು ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿತ್ತು. ಈ ಕಾರಣದಿಂದ ಈ ರೀತಿಯ ಫನ್ ಪ್ರಶ್ನೆಗಳು ಎದುರಾಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ