AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ಷಿತಾ ಶೆಟ್ಟಿಗೆ ವಿಶೇಷ ಅಧಿಕಾರ ಕೊಟ್ಟ ಸುದೀಪ್

ಕಿಚ್ಚ ಸುದೀಪ್ ಅವರು ಈ ವಾರ ಬರುತ್ತಿದ್ದಂತೆ ಸುಧಿ ಬಳಿ ಮಾತನಾಡಿದರು. ‘ಇಡೀ ಮನೆಯ ಶಾಂತಿಯನ್ನು ಯಾರು ಹಾಳು ಮಾಡುತ್ತಿದ್ದಾರೆ’ ಎಂದು ಸುದೀಪ್ ಕೇಳಿದರು. ಇದಕ್ಕೆ ಉತ್ತರಿಸಿದ ಸುಧಿ ಅವರು, ‘ಅಶ್ವಿನಿ, ರಿಷಾ’ ಹೆಸರು ತೆಗೆದುಕೊಂಡರು. ವಾರವಿಡೀ ರಕ್ಷಿತಾ ಹೆಸರು ತೆಗೆದುಕೊಳ್ಳುತ್ತಿದ್ದ ಸುಧಿ ಅವರು ಸುದೀಪ್ ಎದುರು ಸೈಲೆಂಟ್ ಆದರು.

ರಕ್ಷಿತಾ ಶೆಟ್ಟಿಗೆ ವಿಶೇಷ ಅಧಿಕಾರ ಕೊಟ್ಟ ಸುದೀಪ್
ರಕ್ಷಿತಾ-ಸುದೀಪ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 08, 2025 | 10:57 PM

Share

ಬಿಗ್ ಬಾಸ್ ಮನೆಯಲ್ಲಿ ಮಂಗಳೂರಿನ ರಕ್ಷಿತಾ ಶೆಟ್ಟಿ (Rakshitha Shetty) ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಅವರ ಆಟ ಗಮನ ಸೆಳೆಯುವ ರೀತಿಯಲ್ಲಿ ಇದೆ. ಅವರನ್ನು ಮನೆಯಲ್ಲಿ ಪದೇ ಪದೇ ಟಾರ್ಗೆಟ್ ಮಾಡಲಾಗುತ್ತಾ ಇದೆ. ರಕ್ಷಿತಾನ ವಿರುದ್ಧ ಸುಳ್ಳು ಆರೋಪಗಳು ಕೇಳಿ ಬಂದಾಗ ಪ್ರತಿ ವಾರ ಸುದೀಪ್ ಅವರು ಬೆಂಬಲಿಸುತ್ತಾ ಬಂದಿದ್ದಾರೆ. ಈ ವಾರವೂ ಅದನ್ನು ಮುಂದುವರಿಸಿದ್ದಾರೆ ಸುದೀಪ್. ಪದೇ ಪದೇ ರಕ್ಷಿತಾನ ಟಾರ್ಗೆಟ್ ಮಾಡುತ್ತಿದ್ದ ಸುಧಿಗೆ ಪಾಠ ಕಲಿಸಿದ್ದಾರೆ ಕಿಚ್ಚ.

ಕಿಚ್ಚ ಸುದೀಪ್ ಅವರು ಈ ವಾರ ಬರುತ್ತಿದ್ದಂತೆ ಸುಧಿ ಬಳಿ ಮಾತನಾಡಿದರು. ‘ಇಡೀ ಮನೆಯ ಶಾಂತಿಯನ್ನು ಯಾರು ಹಾಳು ಮಾಡುತ್ತಿದ್ದಾರೆ’ ಎಂದು ಸುದೀಪ್ ಕೇಳಿದರು. ಇದಕ್ಕೆ ಉತ್ತರಿಸಿದ ಸುಧಿ ಅವರು, ‘ಅಶ್ವಿನಿ, ರಿಷಾ’ ಹೆಸರು ತೆಗೆದುಕೊಂಡರು. ವಾರವಿಡೀ ರಕ್ಷಿತಾ ಹೆಸರು ತೆಗೆದುಕೊಳ್ಳುತ್ತಿದ್ದ ಸುಧಿ ಅವರು ಸುದೀಪ್ ಎದುರು ಸೈಲೆಂಟ್ ಆದರು. ಆ ಬಳಿಕ ರಕ್ಷಿತಾ, ಹೆಸರು ಬಿಟ್ರಲ್ಲ ಎಂದು ಸುದೀಪ್ ಅವರು ಪರೋಕ್ಷವಾಗಿ ಕೇಳಿದರು.

ಆ ಬಳಿಕ ಸುಧಿ ಮಾಡಿದ ತಪ್ಪನ್ನು ಎತ್ತಿ ತೋರಿಸಿದರು ಸುದೀಪ್. ಸುಧಿ ಅವರು ಹಸಿದಾಗ, ರಕ್ಷಿತಾ ಶೆಟ್ಟಿ ಅವರ ಪೇರಲೆ ಹಣ್ಣನ್ನು ಕದ್ದು ತಿಂದಿದ್ದರು. ಈ ವಿಡಿಯೋನ ಸುದೀಪ್ ತೋರಿಸಿದರು. ಆ ಬಳಿಕ ರಕ್ಷಿತಾಗೆ ಶಾಕ್ ಆಯಿತು. ಈ ವಿಡಿಯೋ ತೋರಿಸದ ಬಳಿಕ ಸುದೀಪ್ ಅವರು ರಕ್ಷಿತಾ ಅವರಿಗೆ ವಿಶೇಷ ಅಧಿಕಾರ ನೀಡಿದರು.

ಇದನ್ನೂ ಓದಿ: ‘ನನ್ನ ಮತ್ತು ಅವರ ಮಧ್ಯೆ ಯಾರೂ ಬರಬೇಡಿ’; ಅಶ್ವಿನಿಗೆ ಎಚ್ಚರಿಸಿದ ರಕ್ಷಿತಾ ಶೆಟ್ಟಿ

ಮೂರನೇ ವಾರದಲ್ಲಿ ನಡೆದ ಮೊದಲ ಫಿನಾಲೆಯಲ್ಲಿ ಸುಧಿ ಗೆದ್ದಿದ್ದಾರೆ. ಈ ಕಾರಣಕ್ಕೆ ಅವರಿಗೆ ವಿಶೇಷ ಅಧಿಕಾರ ನೀಡಲಾಗಿದೆ. ಇದರ ಪ್ರಕಾರ ಅವರಿಗೆ ಒಂದು ಚೈನ್ ಕೊಡಲಾಗಿದೆ. ಇದನ್ನು ಬಳಸಿಕೊಂಡು ಅವರು ಯಾವಾಗ ಬೇಕಿದ್ದರೂ ನಾಮಿನೇಷನ್​ನಿಂದ ಬಚಾವ್ ಆಗಬಹುದಾಗಿದೆ. ಈ ಚೈನ್​ನ ಕದ್ದುಕೊಂಡರೆ ಆ ವಿಶೇಷ ಪವರ್ ರಕ್ಷಿತಾ ಪಾಲಾಗುತ್ತದೆ ಎಂದರು ಸುದೀಪ್. ಈ ವಿಶೇಷ ಅಧಿಕಾರ ರಕ್ಷಿತಾಗೆ ಮಾತ್ರ ಇರೋದಾಗಿ ಸುದೀಪ್ ಅವರು ಹೇಳಿದರು. ಇದನ್ನು ಕೇಳಿ ಸುಧಿ ಅವರು ಬೇಡ ಅಣ್ಣ, ಬೇಡ ಅಣ್ಣ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ