AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಸಿಯುನಲ್ಲಿ ಭುವಿ: ಸಾನಿಯಾಗೆ ತಿರುಮಂತ್ರ ಆಯ್ತು ಪ್ಲ್ಯಾನ್​; ಮುಂದಿದೆ ಮಾರಿ ಹಬ್ಬ

ಸಾನಿಯಾಗೆ ವುರಧಿನಿ ಮೇಲೆ ಎಲ್ಲಿಲ್ಲದ ನಂಬಿಕೆ. ಹರ್ಷನಿಗೋಸ್ಕರ ಆಕೆ ಏನೂ ಮಾಡೋಕೂ ರೆಡಿ ಎಂದುಕೊಂಡಿದ್ದಾಳೆ. ವರುಧಿನಿಗೆ ಹರ್ಷನ ಮೇಲಿರುವಷ್ಟೇ ಪ್ರೀತಿ ಭುವಿ ಮೇಲೂ ಇದೆ.

ಐಸಿಯುನಲ್ಲಿ ಭುವಿ: ಸಾನಿಯಾಗೆ ತಿರುಮಂತ್ರ ಆಯ್ತು ಪ್ಲ್ಯಾನ್​; ಮುಂದಿದೆ ಮಾರಿ ಹಬ್ಬ
ಕನ್ನಡತಿ ಧಾರಾವಾಹಿ ಪಾತ್ರಗಳು
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Apr 22, 2022 | 1:18 PM

Share

‘ಕನ್ನಡತಿ’ ಧಾರಾವಾಹಿ (Kannadathi Serial) ಪ್ರಮುಖ ಘಟ್ಟ ತಲುಪಿದೆ. ಸಾನಿಯಾ ಮಾಡಿದ ಪ್ಲ್ಯಾನ್ ಆಕೆಗೆ ತಿರುಮಂತ್ರವಾಗುವ ಸೂಚನೆ ಸಿಕ್ಕಿದೆ. ಭುವಿಯನ್ನು ಹತ್ಯೆ ಮಾಡಲು ಸಾನಿಯಾ ಪ್ಲ್ಯಾನ್ ಒಂದನ್ನು ರೂಪಿಸಿದ್ದಳು. ಆದರೆ, ಅವಳ ದುರಾದೃಷ್ಟವೋ ಏನೋ ಭುವಿ ಬದುಕಿದ್ದಾಳೆ. ಸದ್ಯ ಐಸಿಯುನಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಭುವಿಯನ್ನು ಹತ್ಯೆ ಮಾಡಿದ್ರೆ ವರುಗೆ ಹರ್ಷ ಹತ್ತಿರ ಆಗುತ್ತಾನೆ ಅನ್ನೋದು ಸಾನಿಯಾ ಪ್ಲ್ಯಾನ್ ಆಗಿತ್ತು. ಆದರೆ, ಇಲ್ಲಿ ಎಲ್ಲವೂ ಉಲ್ಟಾ ಆಗಿದೆ. ಭುವಿ ಈ ಸ್ಥಿತಿಗೆ ಬರಲು ವರುಧಿನಿ ಕಾರಣ ಅನ್ನೋದು ಹರ್ಷನ ನಂಬಿಕೆ. ಈ ಕಾರಣಕ್ಕೆ ಆತ ವರುಧಿನಿ ಜತೆಗೆ ಸರಿಯಾಗಿ ಮಾತನಾಡುತ್ತಿಲ್ಲ. ಇದರಿಂದ ವರುಗೆ ಸಿಟ್ಟು ನೆತ್ತಿಗೇರಿದೆ. ಸಾನಿಯಾ ವಿರುದ್ಧ ತಿರುಗಿ ಬೀಳುವ ಸೂಚನೆ ನೀಡಿದ್ದಾಳೆ.

ಹರ್ಷ ಹಾಗೂ ಭುವಿಯ ನಿಶ್ಚಿತಾರ್ಥ ನೆರವೇರಿದೆ. ಈ ವಿಚಾರದಲ್ಲಿ ಅತಿ ಹೆಚ್ಚು ಉರಿದುಕೊಂಡಿದ್ದು ಸಾನಿಯಾ ಹಾಗೂ ವರುಧಿನಿ. ಈಗ ಇಬ್ಬರೂ ಒಂದಾಗಿದ್ದಾರೆ. ಭುವಿಯನ್ನು ಹತ್ಯೆ ಮಾಡಲು ಸಾನಿಯಾ ಪ್ಲ್ಯಾನ್​ ರೂಪಿಸಿದ್ದಳು. ಅಂತೆಯೇ ಬೆಟ್ಟದ ಮೇಲಿರುವಾಗ ಭುವಿಯನ್ನು ಸುಪಾರಿ ಕಿಲ್ಲರ್ ತಳ್ಳಿದ್ದಾನೆ. ಭುವಿಯ ಪ್ರಾಣಕ್ಕೆ ಸಂಚಕಾರ ಎದುರಾಗಿದೆ. ಆಕೆಯನ್ನು ಐಸಿಯುನಲ್ಲಿ ಅಡ್ಮಿಟ್ ಮಾಡಲಾಗಿದೆ. ಭುವಿ ಬೀಳುವ ಸಂದರ್ಭದಲ್ಲಿ ಆಕೆಯ ಜತೆ ಇದ್ದಿದ್ದು ವರುಧಿನಿ. ಈ ಕಾರಣಕ್ಕೆ ವರುಧಿನಿ ವಿರುದ್ಧ ಹರ್ಷ ಸಿಟ್ಟಾಗಿದ್ದಾನೆ.

‘ಭುವಿ ಬೆಟ್ಟದಿಂದ ಬೀಳುವಾಗ ನಾನು ಅಲ್ಲಿರಲಿಲ್ಲ. ಯಾರೋ ಬಂದು ತಳ್ಳಿದ್ದಾರೆ’ ಎಂದು ಹರ್ಷನಿಗೆ ವಿವರಿಸಲು ಹೋದಳು ವರು. ಆದರೆ, ಇದನ್ನು ಆತ ಕೇಳುವ ಸ್ಥಿತಿಯಲ್ಲಿರಲಿಲ್ಲ. ‘ಭುವಿಯ ಪ್ರಾಣಕ್ಕೆ ಏನಾದರೂ ತೊಂದರೆ ಆದರೆ ಅದಕ್ಕೆ ನೇರ ಹೊಣೆ ನಿಮ್ಮದೆ’ ಎಂದು ವರುಧಿನಿಗೆ ಹರ್ಷ ಹೇಳಿದ್ದಾನೆ.

ಹರ್ಷನಿಗೆ ಹತ್ತಿರ ಆಗಬೇಕು ಎಂಬುದು ವರುಧಿನಿಯ ಆಲೋಚನೆ ಆಗಿತ್ತು. ಆದರೆ, ಈ ಘಟನೆಯಿಂದ ವರುನಿಂದ ದೂರ ಆಗುತ್ತಿದ್ದಾನೆ ಹರ್ಷ. ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಿಲ್ಲ. ಇದು ವರುವಿನ ಅಸಮಾಧಾನಕ್ಕೆ ಕಾರಣ ಆಗಿದೆ. ಇದಕ್ಕೆ ಕಾರಣ ಸಾನಿಯಾ ಅನ್ನೋದು ಆಕೆಗೆ ಸ್ಪಷ್ಟವಾಗಿದೆ. ಹೀಗಾಗಿ, ಆಕೆಯ ವಿರುದ್ಧ ಸಿಡಿದೆದ್ದಿದ್ದಾಳೆ ವರು. ಮುಂದಿನ ದಿನಗಳಲ್ಲಿ ಸಾನಿಯಾ ವಿರುದ್ಧ ಸಮರ ಸಾರಿದರೂ ಅಚ್ಚರಿ ಏನಿಲ್ಲ.

ಸಾನಿಯಾಗೆ ವುರಧಿನಿ ಮೇಲೆ ಎಲ್ಲಿಲ್ಲದ ನಂಬಿಕೆ. ಹರ್ಷನಿಗೋಸ್ಕರ ಆಕೆ ಏನೂ ಮಾಡೋಕೂ ರೆಡಿ ಎಂದುಕೊಂಡಿದ್ದಾಳೆ. ವರುಧಿನಿಗೆ ಹರ್ಷನ ಮೇಲಿರುವಷ್ಟೇ ಪ್ರೀತಿ ಭುವಿ ಮೇಲೂ ಇದೆ. ‘ವರುಧಿನಿಯನ್ನು ನಂಬಬೇಡ’ ಎನ್ನುವ ಎಚ್ಚರಿಕೆಯನ್ನು ಸಾನಿಯಾಗೆ ಆಕೆಯ ತಾಯಿ ಮೊದಲೇ ನೀಡಿದ್ದಳು. ಆದರೆ, ಅದನ್ನು ಆಕೆ ಕೇಳಿರಲಿಲ್ಲ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:  ಬೆಟ್ಟದಿಂದ ಭುವಿಯನ್ನು ತಳ್ಳೇ ಬಿಟ್ಟ ಕಿಲ್ಲರ್; ವರುಧಿನಿಯಿಂದ ಮತ್ತಷ್ಟು ದೂರವಾದ ಹರ್ಷ

ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ