ಬಿಗ್​ಬಾಸ್ ಮನೆಯಲ್ಲಿ ಬಳೆ ಚರ್ಚೆ: ಬಳೆಗೆ ವಿಶೇಷ ಗೌರವ ನೀಡಿದ ಕಿಚ್ಚ ಸುದೀಪ್

Bigg Boss: ಬಿಗ್​ಬಾಸ್ ಮನೆಯಲ್ಲಿ ತಾನು ಆನೆ ಅಂದುಕೊಂಡು ಮೆರೆಯುತ್ತಿದ್ದ ವಿನಯ್​, ಅಹಂಕಾರದಲ್ಲಿ ಬಳೆಗಳ ಬಗ್ಗೆ ಅದನ್ನು ತೊಟ್ಟುಕೊಳ್ಳುವ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಆದರೆ ಸುದೀಪ್ ಅದೇ ಬಳೆಗಳಿಗೆ ವಿಶೇಷ ಗೌರವ ನೀಡಿ, ಬಳೆಗಳ ಮಹತ್ವ ಸಾರಿದರು.

ಬಿಗ್​ಬಾಸ್ ಮನೆಯಲ್ಲಿ ಬಳೆ ಚರ್ಚೆ: ಬಳೆಗೆ ವಿಶೇಷ ಗೌರವ ನೀಡಿದ ಕಿಚ್ಚ ಸುದೀಪ್
ಬಳೆ
Follow us
|

Updated on:Nov 04, 2023 | 11:51 PM

ಬಿಗ್​ಬಾಸ್ (Bigg Boss) ಮನೆಯಲ್ಲಿ ವಿನಯ್ ಆಡಿದ ಮಾತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಟಾಸ್ಕ್ ಒಂದನ್ನು ಆಡುವಾಗ ಎದುರಾಳಿ ತಂಡದ ಕಾರ್ತಿಕ್ ಅನ್ನು ಅವಮಾನಗೊಳಿಸುವ ಉದ್ದೇಶದಿಂದ ಬಳೆ ಹಾಕ್ಕೊಂಡು ಆಡು, ಬಳೆಗಳ ರಾಜ ಎಂದೆಲ್ಲ ವಿನಯ್ (Vinay) ಕರೆದಿದ್ದರು. ಆ ಮೂಲಕ ಬಳೆ ತೊಡುವವರೆಂದರೆ ಅಸಮರ್ಥರು, ಬಲಹೀನರು ಎಂಬರ್ಥದ ಮಾತುಗಳನ್ನು ಆಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ವಿನಯ್​ ಆಡಿದ ಮಾತನ್ನು ಸಂಗೀತಾ ಹೊರತಾಗಿ ಇನ್ಯಾರು ವಿರೋಧಿಸಿರಲಿಲ್ಲ. ಹಾಗಾಗಿ ಈ ವಿಷಯದ ಬಗ್ಗೆ ಸುದೀಪ್ ನಿಲುವೇನು ಎಂಬುದು ಜನರ ನಿರೀಕ್ಷೆಯಾಗಿತ್ತು. ನಿರೀಕ್ಷೆಗೆ ತಕ್ಕಂತೆ ಸುದೀಪ್ ಘನತೆಯಿಂದ ವಿಷಯವನ್ನು ಸಂಭಾಳಿಸಿರುವ ಜೊತೆಗೆ ಬಳೆಗೆ ಒಂದು ವಿಶೇಷ ಗೌರವವನ್ನು ಸಹ ಕೊಟ್ಟಿದ್ದಾರೆ.

ಬಳೆಯ ವಿಷಯ ತೆಗೆದಿದ್ದ ವಿನಯ್​ಗೆ ಮಾತಿನ ಚಾಟಿ ಬೀಸಿದ ಸುದೀಪ್, ವಿನಯ್​ ಸ್ವತಃ ತಾವಾಗಿಯೇ ಕ್ಷಮೆ ಕೇಳುವಂತೆ ಮಾಡಿದರು. ಬಳಿಕ ಬಳೆಯ ಮಹತ್ವದ ಜೊತೆಗೆ ಮಹಿಳೆಯ ಮಹತ್ವದ ಬಗ್ಗೆಯೂ ಬಿಗ್​ಬಾಸ್ ಮನೆಯ ಕೆಲವರಿಗೆ ಮನದಟ್ಟು ಮಾಡಿದ ಸುದೀಪ್, ಪ್ರತಿ ವಾರ ನೀಡುವಂತೆ ಈ ವಾರವೂ ಕಿಚ್ಚನ ಚಪ್ಪಾಳೆ ನೀಡಿದರು. ಆದರೆ ಈ ಬಾರಿ ತುಸು ವಿಶೇಷವಾಗಿತ್ತು.

ವಿನಯ್​ಗೆ ಸ್ಟೋರ್​ ರೂಂನಲ್ಲಿದ್ದ ಫೋಟೊ ಒಂದನ್ನು ತೆಗೆದುಕೊಂಡು ಬರುವಂತೆ ಹೇಳಿದರು ಸುದೀಪ್, ಅದನ್ನು ವಿನಯ್​ರಿಂದಲೇ ಓಪನ್ ಮಾಡಿಸಿದರು. ಅದರಲ್ಲಿ ವಿನಯ್, ಬಳೆಯ ಬಗ್ಗೆ ವಿನಯ್ ಮಾತನಾಡಿದಾಗ ಅದನ್ನು ವಿರೋಧ ಮಾಡಿದ ಸಂಗೀತಾ ತಾವು ತೊಟ್ಟುಕೊಂಡಿದ್ದ ಹಸಿರು ಬಳೆಗಳನ್ನು ಕೈಎತ್ತಿ ತೋರಿಸಿದ ಚಿತ್ರವಿತ್ತು. ಈ ವಾರದ ಕಿಚ್ಚ ಸುದೀಪ್​ರ ಕಿಚ್ಚನ ಚಪ್ಪಾಳೆ ಬಳೆಗಳಿಗಾಗಿತ್ತು. ಆ ಬಳೆಗಳ ಚಿತ್ರವನ್ನು ವಾಲ್ ಆಫ್​ ಫೇಮ್​ಗೆ ಸಹ ತೂಗು ಹಾಕಲಾಯಿತು. ಯಾರೂ ನಿರೀಕ್ಷಿಸದ ರೀತಿಯಲ್ಲಿ ಸುದೀಪ್​ ಬಳೆಗಳಿಗೆ ಆ ಮೂಲಕ ಮಹಿಳೆಯರಿಗೆ, ಮಹಿಳಾ ಶಕ್ತಿಗೆ ಗೌರವ ನೀಡಿದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯ ಡವ್ ರಾಣಿ ನಮ್ರತಾ ಏಟಿಗೆ ಮನೆಯವರೆಲ್ಲ ಸುಸ್ತೋ-ಸುಸ್ತು

ಮಾತ್ರವೇ ಅಲ್ಲದೆ, ಬಳೆಗಳ ಬಗ್ಗೆ ಆ ಮೂಲಕ ಮಹಿಳೆಯರ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ ವಿನಯ್​ಗೆ ಸರಿಯಾಗಿ ಬುದ್ಧಿ ಹೇಳಿದ ಜೊತೆಗೆ, ವಿನಯ್ ಹಾಗೆ ಮಾತನಾಡಿದಾಗ ವಿರೋಧ ವ್ಯಕ್ತಪಡಿಸದೆ ಅವರೊಂದಿಗೆ ಸೇರಿ ನಗುತ್ತಿದ್ದ ನಮ್ರತಾ, ತುಕಾಲಿ ಸಂತುಗೂ ಸಹ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಇದರ ಜೊತೆಗೆ ವಿನಯ್​ರ ಆ ಮಾತನ್ನು ವಿರೋಧಿಸಿದ ಬಿಗ್​ಬಾಸ್ ಮನೆಯ ಏಕೈಕ ವ್ಯಕ್ತಿ ಸಂಗೀತಾ ಶೃಂಗೇರಿಯ ಬಗ್ಗೆ ಮೆಚ್ಚುಗೆಯನ್ನು ಸಹ ಕಿಚ್ಚ ಸುದೀಪ್ ವ್ಯಕ್ತಪಡಿಸಿದರು.

ಇನ್ನು ವಿನಯ್​, ಮಹಿಳೆಯರಿಗೆ ಅಪಮಾನ ಮಾಡಿದರೆ, ಇದೇ ವಾರ ತಮಗೆ ಸಿಕ್ಕ ನಾಮಿನೇಷನ್ ಪಾಸ್​ಗಳನ್ನು ಮಹಿಳೆಯರಿಗೆ ನೀಡಿ ಅವರಿಗೆ ಗೌರವ ನೀಡಿದ ಡ್ರೋನ್ ಪ್ರತಾಪ್​ಗೆ ಸಹ ಮೆಚ್ಚುಗೆ ವ್ಯಕ್ತಪಡಿಸಿದರು ಸುದೀಪ್. ಒಟ್ಟಾರೆ ಶನಿವಾರದ ಎಪಿಸೋಡ್​ನಲ್ಲಿ ಸುದೀಪ್ ಆಡಿದ ಮಾತುಗಳು, ನಡೆದುಕೊಂಡ ರೀತಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್​ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:50 pm, Sat, 4 November 23

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್