AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮುಖಕ್ಕೆ ಎಸೆದು ಹೋಗಿರುತ್ತಿದ್ದೆ‘: ಕಿಚ್ಚನ ಮಾತಿಗೆ ಭವ್ಯಾ ಗೌಡ ಕಣ್ಣೀರು

Bigg Boss Kannada 11: ಬಿಗ್​ಬಾಸ್ ಕನ್ನಡ ಸ್ಪರ್ಧಿ ಭವ್ಯಾ ಗೌಡ ವೀಕೆಂಡ್ ಎಪಿಸೋಡ್​ನಲ್ಲಿ ಕಣ್ಣೀರು ಹಾಕಿದ್ದಾರೆ. ಸುದೀಪ್ ಆಡಿದ ಮಾತುಗಳು ಅವರ ಮನಸ್ಸಿಗೆ ನಾಟಿವೆ. ಭವ್ಯಾ ಗೌಡಗೆ ಈ ವಾರ ಉತ್ತಮ ದೊರೆತಿದೆ ಹಾಗಿದ್ದರೂ ಸಹ ಅವರು ಕಣ್ಣೀರು ಹಾಕುವಂತಾಗಿದೆ.

‘ಮುಖಕ್ಕೆ ಎಸೆದು ಹೋಗಿರುತ್ತಿದ್ದೆ‘: ಕಿಚ್ಚನ ಮಾತಿಗೆ ಭವ್ಯಾ ಗೌಡ ಕಣ್ಣೀರು
ಮಂಜುನಾಥ ಸಿ.
|

Updated on:Nov 10, 2024 | 8:43 AM

Share

ವಾರಗಳು ಕಳೆದಂತೆ ಬಿಗ್​ಬಾಸ್​ ಕನ್ನಡ ಸೀಸನ್ 11 ರಲ್ಲಿ ಆಟಕ್ಕೆ ರಂಗು ಏರುತ್ತಿದೆ. ಮೊದಲ ಕೆಲ ವಾರಗಳು ಬರೀ ಜಗಳ, ಬೈದಾಟ ಮಾಡಿಕೊಂಡೇ ಕಾಲ ಕಳೆದ ಆಟಗಾರರು ಈಗ ಟಾಸ್ಕ್​ಗಳತ್ತ ಗಮನ ಹರಿಸಿದ್ದಾರೆ. ಸ್ಪರ್ಧಿಗಳು ಹೆಚ್ಚು ಗುರಿಯತ್ತ ಫೋಕಸ್ ಮಾಡಿ ಆಟ ಆಡುವಂತಾಗುವಲ್ಲಿ ಸುದೀಪ್ ಪ್ರಯತ್ನವೂ ಸಾಕಷ್ಟಿದೆ. ಪ್ರತಿಬಾರಿ ವೀಕೆಂಡ್ ಬಂದಾಗಲು ಬರುವ ಸುದೀಪ್, ಆಟಗಾರರ ಆಟವನ್ನು ವಿಶ್ಲೇಷಿಸಿ, ಅವರಲ್ಲಿ ಧೈರ್ಯ ತುಂಬುವ ಪ್ರಯತ್ನ ಮಾಡುತ್ತಾರೆ. ಈ ವಾರದ ಆಟವನ್ನು ವಿಶ್ಲೇಷಣೆ ಮಾಡಿ ಮುಂದಿನ ವಾರ ಹೇಗೆ ಆಡಬೇಕು ಎಂದು ದಾರಿ ತೋರಿಸುತ್ತಾರೆ. ನಿನ್ನೆ ವೀಕೆಂಡ್ ಪಂಚಾಯಿತಿ ನಡೆಸಿದ ಕಿಚ್ಚ ಸುದೀಪ್ ಆಡಿದ ಮಾತಿಗೆ ಸ್ಪರ್ಧಿ ಭವ್ಯಾ ಗೌಡ ಕಣ್ಣೀರು ಹಾಕಿದರು.

ಭವ್ಯಾ ಗೌಡಗೆ ಈ ಬಾರಿ ಉತ್ತಮ ದೊರಕಿತು. ಆದರೆ ಅವರನ್ನು ಕ್ಯಾಪ್ಟೆನ್ಸಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಸಿಕೊಂಡು ಸೋಲಿಸಲಾಯ್ತು. ಉಗ್ರಂ ಮಂಜು, ಗೌತಮಿ, ಮೋಕ್ಷಿತಾ ಅವರುಗಳು ತ್ರಿವಿಕ್ರಮ್ ಜೊತೆಗೆ ಮ್ಯಾಚ್ ಪಿಕ್ಸಿಂಗ್ ಮಾಡಿಕೊಂಡು ಭವ್ಯಾ ಅವರನ್ನು ಕ್ಯಾಪ್ಟನ್ಸಿ ರೇಸಿನಿಂದ ಹೊರಗೆ ಹಾಕಿದರು. ಇದರ ಬಗ್ಗೆ ಭವ್ಯಾ ಗೌಡ ಬಳಿ ಮಾತನಾಡಿದ ಕಿಚ್ಚ ಸುದೀಪ್, ಇದು ಹೇಗಾಯ್ತು ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಭವ್ಯಾ, ತಾವು ಮುಗ್ಧತೆಯಿಂದ ಆಡಿದ್ದಾಗಿ ಹೇಳಿದರು. ಆದರೆ ಇದನ್ನು ಒಪ್ಪದ ಸುದೀಪ್ ಕೆಲ ಬುದ್ಧಿವಾದ ಹೇಳಿದರು.

ಇದನ್ನೂ ಓದಿ:ಚಿನ್ನದ ಸರ ಬಿಚ್ಚಿಕೊಟ್ಟ ಸುರೇಶ್, ಬುದ್ಧಿವಾದ ಹೇಳಿದ ಸುದೀಪ್

ನಿಮ್ಮನ್ನು ಕ್ಯಾಪ್ಟೆನ್ಸಿ ರೇಸಿನಿಂದ ಹೊರಗೆ ಹಾಕಿದ ಜನರೇ ಆ ನಂತರ ಬಂದು ಕಣ್ಣೀರು ಒರೆಸಲೆಂದು ಎಂಬಂತೆ ಉತ್ತಮ ಪಟ್ಟ ಕೊಡುತ್ತಾರೆ. ಮಸಿ ಬಳಿದವರೇ ನಿಮಗೆ ಉತ್ತಮ ಪಟ್ಟ ಕೊಡುತ್ತಾರೆ. ಅದನ್ನು ನೀವು ಖುಷಿಯಿಂದ ಒಪ್ಪುತ್ತೀರ ನಿಮ್ಮ ಜಾಗದಲ್ಲಿ ನಾನು ಇದ್ದಿದ್ದರೆ, ಉತ್ತಮ ಕೊಟ್ಟು ಕೊರಳಿಗೆ ಹಾಕಿದ ಚಿನ್ನದ ಪದಕವನ್ನು ಅವರ ಮುಖದ ಮೇಲೆ ಎಸೆದು ಬರುತ್ತಿದ್ದೆ’ ಎಂದರು. ಇದನ್ನು ಕೇಳಿದ ಭವ್ಯಾ ಗೌಡ ಅಳಲು ಪ್ರಾರಂಭ ಮಾಡಿದರು.

ಈ ವಾರ ಅಸಲಿಗೆ ಭವ್ಯಾಗೆ ಅನ್ಯಾಯ ಆಗಿದೆ. ಅವರನ್ನು ಕ್ಯಾಪ್ಟೆನ್ಸಿ ರೇಸಿನಿಂದ ಉದ್ದೇಶಪೂರ್ವಕವಾಗಿ ಹೊರಗಿಡಲಾಯ್ತು. ಅವರು ಈ ವಾರವೆಲ್ಲ ಒಳ್ಳೆಯ ಪ್ರದರ್ಶನ ನೀಡಿದ್ದರು. ಹಾಗಿದ್ದರೂ ಸಹ ಮನೆಯ ಕೆಲ ಸದಸ್ಯರು ಗುಂಪುಗಾರಿಕೆ ಮಾಡಿಕೊಂಡು ಭವ್ಯಾಗೆ ಅವಕಾಶ ಸಿಗದಂತೆ ಮಾಡಿದರು. ಉತ್ತಮ ಕೊಡುವುದರಲ್ಲಿಯೂ ಸಹ ಗುಂಪುಗಾರಿಕೆ ನಡೆಯಿತು. ಉಗ್ರಂ ಮಂಜು, ಗೌತಮಿಗೆ ಕೊಟ್ಟರೆ, ಗೌತಮಿ ಹಾಗೂ ಮೋಕ್ಷಿತಾ ಮಂಜುಗೆ ಉತ್ತಮ ಕೊಟ್ಟರು. ಆದರೆ ಮನೆಯ ಬೇರೆ ಸದಸ್ಯರು ಭವ್ಯಾಗೆ ಉತ್ತಮ ನೀಡಿದ್ದರಿಂದ ಆರು ಮತಗಳನ್ನು ನಡೆದು ಮನೆಯ ಮೊದಲ ಉತ್ತಮ ಎನಿಸಿಕೊಂಡರು ಭವ್ಯಾ ಗೌಡ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:42 am, Sun, 10 November 24

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು