AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮುಖಕ್ಕೆ ಎಸೆದು ಹೋಗಿರುತ್ತಿದ್ದೆ‘: ಕಿಚ್ಚನ ಮಾತಿಗೆ ಭವ್ಯಾ ಗೌಡ ಕಣ್ಣೀರು

Bigg Boss Kannada 11: ಬಿಗ್​ಬಾಸ್ ಕನ್ನಡ ಸ್ಪರ್ಧಿ ಭವ್ಯಾ ಗೌಡ ವೀಕೆಂಡ್ ಎಪಿಸೋಡ್​ನಲ್ಲಿ ಕಣ್ಣೀರು ಹಾಕಿದ್ದಾರೆ. ಸುದೀಪ್ ಆಡಿದ ಮಾತುಗಳು ಅವರ ಮನಸ್ಸಿಗೆ ನಾಟಿವೆ. ಭವ್ಯಾ ಗೌಡಗೆ ಈ ವಾರ ಉತ್ತಮ ದೊರೆತಿದೆ ಹಾಗಿದ್ದರೂ ಸಹ ಅವರು ಕಣ್ಣೀರು ಹಾಕುವಂತಾಗಿದೆ.

‘ಮುಖಕ್ಕೆ ಎಸೆದು ಹೋಗಿರುತ್ತಿದ್ದೆ‘: ಕಿಚ್ಚನ ಮಾತಿಗೆ ಭವ್ಯಾ ಗೌಡ ಕಣ್ಣೀರು
ಮಂಜುನಾಥ ಸಿ.
|

Updated on:Nov 10, 2024 | 8:43 AM

Share

ವಾರಗಳು ಕಳೆದಂತೆ ಬಿಗ್​ಬಾಸ್​ ಕನ್ನಡ ಸೀಸನ್ 11 ರಲ್ಲಿ ಆಟಕ್ಕೆ ರಂಗು ಏರುತ್ತಿದೆ. ಮೊದಲ ಕೆಲ ವಾರಗಳು ಬರೀ ಜಗಳ, ಬೈದಾಟ ಮಾಡಿಕೊಂಡೇ ಕಾಲ ಕಳೆದ ಆಟಗಾರರು ಈಗ ಟಾಸ್ಕ್​ಗಳತ್ತ ಗಮನ ಹರಿಸಿದ್ದಾರೆ. ಸ್ಪರ್ಧಿಗಳು ಹೆಚ್ಚು ಗುರಿಯತ್ತ ಫೋಕಸ್ ಮಾಡಿ ಆಟ ಆಡುವಂತಾಗುವಲ್ಲಿ ಸುದೀಪ್ ಪ್ರಯತ್ನವೂ ಸಾಕಷ್ಟಿದೆ. ಪ್ರತಿಬಾರಿ ವೀಕೆಂಡ್ ಬಂದಾಗಲು ಬರುವ ಸುದೀಪ್, ಆಟಗಾರರ ಆಟವನ್ನು ವಿಶ್ಲೇಷಿಸಿ, ಅವರಲ್ಲಿ ಧೈರ್ಯ ತುಂಬುವ ಪ್ರಯತ್ನ ಮಾಡುತ್ತಾರೆ. ಈ ವಾರದ ಆಟವನ್ನು ವಿಶ್ಲೇಷಣೆ ಮಾಡಿ ಮುಂದಿನ ವಾರ ಹೇಗೆ ಆಡಬೇಕು ಎಂದು ದಾರಿ ತೋರಿಸುತ್ತಾರೆ. ನಿನ್ನೆ ವೀಕೆಂಡ್ ಪಂಚಾಯಿತಿ ನಡೆಸಿದ ಕಿಚ್ಚ ಸುದೀಪ್ ಆಡಿದ ಮಾತಿಗೆ ಸ್ಪರ್ಧಿ ಭವ್ಯಾ ಗೌಡ ಕಣ್ಣೀರು ಹಾಕಿದರು.

ಭವ್ಯಾ ಗೌಡಗೆ ಈ ಬಾರಿ ಉತ್ತಮ ದೊರಕಿತು. ಆದರೆ ಅವರನ್ನು ಕ್ಯಾಪ್ಟೆನ್ಸಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಸಿಕೊಂಡು ಸೋಲಿಸಲಾಯ್ತು. ಉಗ್ರಂ ಮಂಜು, ಗೌತಮಿ, ಮೋಕ್ಷಿತಾ ಅವರುಗಳು ತ್ರಿವಿಕ್ರಮ್ ಜೊತೆಗೆ ಮ್ಯಾಚ್ ಪಿಕ್ಸಿಂಗ್ ಮಾಡಿಕೊಂಡು ಭವ್ಯಾ ಅವರನ್ನು ಕ್ಯಾಪ್ಟನ್ಸಿ ರೇಸಿನಿಂದ ಹೊರಗೆ ಹಾಕಿದರು. ಇದರ ಬಗ್ಗೆ ಭವ್ಯಾ ಗೌಡ ಬಳಿ ಮಾತನಾಡಿದ ಕಿಚ್ಚ ಸುದೀಪ್, ಇದು ಹೇಗಾಯ್ತು ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಭವ್ಯಾ, ತಾವು ಮುಗ್ಧತೆಯಿಂದ ಆಡಿದ್ದಾಗಿ ಹೇಳಿದರು. ಆದರೆ ಇದನ್ನು ಒಪ್ಪದ ಸುದೀಪ್ ಕೆಲ ಬುದ್ಧಿವಾದ ಹೇಳಿದರು.

ಇದನ್ನೂ ಓದಿ:ಚಿನ್ನದ ಸರ ಬಿಚ್ಚಿಕೊಟ್ಟ ಸುರೇಶ್, ಬುದ್ಧಿವಾದ ಹೇಳಿದ ಸುದೀಪ್

ನಿಮ್ಮನ್ನು ಕ್ಯಾಪ್ಟೆನ್ಸಿ ರೇಸಿನಿಂದ ಹೊರಗೆ ಹಾಕಿದ ಜನರೇ ಆ ನಂತರ ಬಂದು ಕಣ್ಣೀರು ಒರೆಸಲೆಂದು ಎಂಬಂತೆ ಉತ್ತಮ ಪಟ್ಟ ಕೊಡುತ್ತಾರೆ. ಮಸಿ ಬಳಿದವರೇ ನಿಮಗೆ ಉತ್ತಮ ಪಟ್ಟ ಕೊಡುತ್ತಾರೆ. ಅದನ್ನು ನೀವು ಖುಷಿಯಿಂದ ಒಪ್ಪುತ್ತೀರ ನಿಮ್ಮ ಜಾಗದಲ್ಲಿ ನಾನು ಇದ್ದಿದ್ದರೆ, ಉತ್ತಮ ಕೊಟ್ಟು ಕೊರಳಿಗೆ ಹಾಕಿದ ಚಿನ್ನದ ಪದಕವನ್ನು ಅವರ ಮುಖದ ಮೇಲೆ ಎಸೆದು ಬರುತ್ತಿದ್ದೆ’ ಎಂದರು. ಇದನ್ನು ಕೇಳಿದ ಭವ್ಯಾ ಗೌಡ ಅಳಲು ಪ್ರಾರಂಭ ಮಾಡಿದರು.

ಈ ವಾರ ಅಸಲಿಗೆ ಭವ್ಯಾಗೆ ಅನ್ಯಾಯ ಆಗಿದೆ. ಅವರನ್ನು ಕ್ಯಾಪ್ಟೆನ್ಸಿ ರೇಸಿನಿಂದ ಉದ್ದೇಶಪೂರ್ವಕವಾಗಿ ಹೊರಗಿಡಲಾಯ್ತು. ಅವರು ಈ ವಾರವೆಲ್ಲ ಒಳ್ಳೆಯ ಪ್ರದರ್ಶನ ನೀಡಿದ್ದರು. ಹಾಗಿದ್ದರೂ ಸಹ ಮನೆಯ ಕೆಲ ಸದಸ್ಯರು ಗುಂಪುಗಾರಿಕೆ ಮಾಡಿಕೊಂಡು ಭವ್ಯಾಗೆ ಅವಕಾಶ ಸಿಗದಂತೆ ಮಾಡಿದರು. ಉತ್ತಮ ಕೊಡುವುದರಲ್ಲಿಯೂ ಸಹ ಗುಂಪುಗಾರಿಕೆ ನಡೆಯಿತು. ಉಗ್ರಂ ಮಂಜು, ಗೌತಮಿಗೆ ಕೊಟ್ಟರೆ, ಗೌತಮಿ ಹಾಗೂ ಮೋಕ್ಷಿತಾ ಮಂಜುಗೆ ಉತ್ತಮ ಕೊಟ್ಟರು. ಆದರೆ ಮನೆಯ ಬೇರೆ ಸದಸ್ಯರು ಭವ್ಯಾಗೆ ಉತ್ತಮ ನೀಡಿದ್ದರಿಂದ ಆರು ಮತಗಳನ್ನು ನಡೆದು ಮನೆಯ ಮೊದಲ ಉತ್ತಮ ಎನಿಸಿಕೊಂಡರು ಭವ್ಯಾ ಗೌಡ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:42 am, Sun, 10 November 24

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?