AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಸ್ಪರ್ಧಿಗಳ ಊಟದಲ್ಲಿ ಹುಳ; ಕಂಗಾಲಾದ ರಜತ್, ಮೋಕ್ಷಿತಾ

ರಜತ್ ಅವರು ಊಟ ಕೇಳಿದರು. ಅಡುಗೆ ಮನೆಗೆ ಹೋಗಿ ಉಗ್ರಂ ಮಂಜು ಊಟ ತಂದುಕೊಟ್ಟರು. ಅದರಲ್ಲಿ ಹುಳ ಇದ್ದಿದ್ದು ನೋಡಿ ಎಲ್ಲರಿಗೂ ಶಾಕ್ ಆಯಿತು. ಅಂದಹಾಗೆ, ಈ ಘಟನೆ ನಡೆದಿದ್ದು ರೆಸಾರ್ಟ್​ ಟಾಸ್ಕ್​ ನಿಭಾಯಿಸುವಾಗ. ಊಟದಲ್ಲಿ ಹುಳವನ್ನು ನೋಡಿ ಮೋಕ್ಷಿತಾ ಪೈ, ರಜತ್, ಧನರಾಜ್, ತ್ರಿವಿಕ್ರಮ್​, ಭವ್ಯಾ ಗೌಡ ಅವರು ಕಂಗಾಲಾಗಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗಳ ಊಟದಲ್ಲಿ ಹುಳ; ಕಂಗಾಲಾದ ರಜತ್, ಮೋಕ್ಷಿತಾ
Bigg Boss Kannada 11
ಮದನ್​ ಕುಮಾರ್​
|

Updated on: Dec 26, 2024 | 10:09 PM

Share

‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಬೇರೆ ರೀತಿಯ ಟಾಸ್ಕ್​ ನೀಡಲಾಗಿದೆ. ಇಡೀ ಮನೆಯನ್ನು ರೆಸಾರ್ಟ್​ ರೀತಿ ಮಾಡಲಾಗಿದೆ. ಒಂದು ತಂಡದವರು ರೆಸಾರ್ಟ್​ ಸಿಬ್ಬಂದಿಗಳಾಗಿ, ಇನ್ನೊಂದು ತಂಡದವರು ರೆಸಾರ್ಟ್​ಗೆ ಬಂದ ಅತಿಥಿಗಳಾಗಿ ಟಾಸ್ಕ್​ ನಿಭಾಯಿಸಬೇಕು. ಅತಿಥಿಗಳು ಕೇಳಿದ್ದೆಲ್ಲವನ್ನೂ ಸಿಬ್ಬಂದಿ ನೀಡಬೇಕು. ಅತಿಥಿಗಳ ತಂಡದಲ್ಲಿ ರಜತ್, ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್ ಹಾಗೂ ಮೋಕ್ಷಿತಾ ಪೈ ಇದ್ದಾರೆ. ಇವರು ಕೇಳಿ ತರಿಸಿಕೊಂಡ ಊಟದಲ್ಲಿ ಹುಳ ಸಿಕ್ಕಿದೆ!

ಭವ್ಯಾ ಗೌಡ, ರಜತ್, ತ್ರಿವಿಕ್ರಮ್, ಮೋಕ್ಷಿತಾ ಹಾಗೂ ಧನರಾಜ್​ ಅವರು ಒಂದು ಟೇಬಲ್​ನಲ್ಲಿ ಕುಳಿತು ಊಟ ಆರ್ಡರ್​ ಮಾಡಿದರು. ಉಗ್ರಂ ಮಂಜು ಅದನ್ನು ತಂದುಕೊಟ್ಟರು. ಇನ್ನೇನು ಅದನ್ನು ತಿನ್ನಬೇಕು ಎನ್ನುವಾಗ ಹುಳ ಕಾಣಿಸಿತು. ಊಟದಲ್ಲಿ ಹುಳವಿದ್ದರೆ ಎಂಥವರಿಗೂ ಮೈ ಜುಂ ಎನ್ನುತ್ತದೆ. ಅತಿಥಿಗಳ ತಂಡಕ್ಕೆ ಕೂಡ ಹಾಗೆಯೇ ಆಯಿತು. ಎಲ್ಲರೂ ಬಾಯಿ ಬಡಿದುಕೊಂಡರು.

ಹುಳು ಇದೆ ಎಂದು ಹೇಳಿದರೂ ಕೂಡ ಸಿಬ್ಬಂದಿ ತಂಡದ ಉಗ್ರಂ ಮಂಜು ಅವರು ಅದನ್ನು ಕೊತ್ತಂಬರಿ ಸೊಪ್ಪು ಎಂದು ವಾಸಿಸಲು ಶುರು ಮಾಡಿದರು. ‘ಇಲ್ಲಿ ನೋಡು.. ಕೊತ್ತಂಬರಿ ಸೊಪ್ಪಿಗೆ ಕೈ ಕಾಲು ಇದೆ’ ಎಂದು ಹೇಳುವ ಮೂಲಕ ರಜತ್ ಅವರು ಹುಳ ಇರುವುದನ್ನು ಖಚಿತಪಡಿಸಿದರು. ಆ ಆಹಾರವನ್ನು ಉಗ್ರಂ ಮಂಜು ವಾಪಸ್​ ತೆಗೆದುಕೊಂಡು ಹೋದರು.

ಇದನ್ನೂ ಓದಿ: ಆತುರದಲ್ಲಿ ಚಿಕನ್ ತಿಂದ ಧನರಾಜ್ ಆಚಾರ್; ಹೇಗಿದೆ ನೋಡಿ ಒದ್ದಾಟ

ಸಿಬ್ಬಂದಿ ತಂಡದ ಮ್ಯಾನೇಜರ್​ ಆಗಿ ಗೌತಮಿ ಜಾದವ್ ಟಾಸ್ಕ್​ ನಿಭಾಯಿಸುತ್ತಿದ್ದಾರೆ. ಅತಿಥಿಗಳು ನೀಡುತ್ತಿರುವ ಟಾರ್ಚರ್​ಗೆ ಅವರು ಸುಸ್ತಾಗಿದ್ದಾರೆ. ಮಧ್ಯರಾತ್ರಿ ಬಾತ್​ ರೂಮ್​ಗೆ ತೆರಳಿ ಗೌತಮಿ ಅವರು ಅಳುತ್ತಾ ಕುಳಿತಿದ್ದಾರೆ. ಎಷ್ಟೇ ಆದರೂ ರಜತ್ ಅವರ ಕ್ವಾಟ್ಲೆ ಕಡಿಮೆ ಆಗುತ್ತಿಲ್ಲ. ಸಿಬ್ಬಂದಿಗಳಿಗೆ ಇನ್ನಷ್ಟು ಕಷ್ಟ ಕೊಡಲು ಅವರು ಹೊಸ ಹೊಸ ಪ್ಲ್ಯಾನ್ ಮಾಡುತ್ತಿದ್ದಾರೆ. ಈ ಮೊದಲು ಭವ್ಯಾ ಗೌಡ ಅವರು ಸಿಬ್ಬಂದಿಗಳ ತಂಡದಲ್ಲಿ ಇದ್ದರು. ಅವರು ಕೂಡ ಟಾಸ್ಕ್​ ನಿಭಾಯಿಸಲು ಕಷ್ಟವಾಗಿದ್ದಕ್ಕೆ ಕಣ್ಣೀರು ಹಾಕಿದ್ದರು.

ಇದನ್ನೂ ಓದಿ: ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್

ಸದ್ಯ ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಆಟದಲ್ಲಿ 88 ದಿನಗಳು ಕಳೆದಿವೆ. ಈಗ ಆಟದಲ್ಲಿ ಪೈಪೋಟಿ ಜೋರಾಗಿದೆ. ಇನ್ನು ಉಳಿದಿರುವುದು ಕೆಲವೇ ದಿನಗಳ ಮಾತ್ರ. ಫಿನಾಲೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಈ ವಾರ ಭವ್ಯಾ ಗೌಡ ಕ್ಯಾಪ್ಟನ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು