AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊರಗೆ ಹಾಕ್ರಿ ಇವನ್ನ: ರಜತ್ ವಿರುದ್ಧ ಕೂಗಾಡಿದ ಮೋಕ್ಷಿತಾ

Bigg Boss Kannada: ಬಿಗ್​ಬಾಸ್ ಮನೆ ಕೆಲ ದಿನದಿಂದ ಬಿಬಿ ರೆಸಾರ್ಟ್ ಆಗಿದೆ. ಬಿಗ್​ಬಾಸ್ ಮನೆಯಲ್ಲಿ ಆಸಕ್ತಿಕರ ಟಾಸ್ಕ್​ ನಡೆಯುತ್ತಿದೆ. ಇಷ್ಟು ದಿನ ಸಿಬ್ಬಂದಿ ಆಗಿದ್ದವರು ಈಗ ಅತಿಥಿಗಳಾಗಿದ್ದಾರೆ. ಅತಿಥಿಗಳಾಗಿದ್ದವರು ಸಿಬ್ಬಂದಿಗಳಾಗಿದ್ದಾರೆ. ಆದರೆ ಒಂದೇ ತಂಡದಲ್ಲಿದ್ದರೂ ರಜತ್ ಮೇಲೆ ಮೋಕ್ಷಿತಾ ಕೂಗಾಡಿದ್ದಾರೆ. ಕಾರಣ ಏನು?

ಹೊರಗೆ ಹಾಕ್ರಿ ಇವನ್ನ: ರಜತ್ ವಿರುದ್ಧ ಕೂಗಾಡಿದ ಮೋಕ್ಷಿತಾ
Rajath Mokshitha
ಮಂಜುನಾಥ ಸಿ.
|

Updated on: Dec 25, 2024 | 11:18 PM

Share

ಬಿಗ್​ಬಾಸ್ ಮನೆ ಈಗ ಬಿಬಿ ರೆಸಾರ್ಟ್ ಆಗಿದೆ. ಕಳೆದ ಕೆಲ ದಿನ ಚೈತ್ರಾ, ಮಂಜು, ಹನುಮಂತು, ಐಶ್ವರ್ಯಾ, ಗೌತಮಿ ಅವರುಗಳು ಅತಿಥಿಗಳಾಗಿ ಇದ್ದರು. ಸಿಬ್ಬಂದಿಗಳಾಗಿದ್ದ ಭವ್ಯಾ, ರಜತ್, ತ್ರಿವಿಕ್ರಮ್, ಮೋಕ್ಷಿತಾ ಅವರುಗಳಿಗೆ ಸಖತ್ ಟಾರ್ಚರ್ ಕೊಟ್ಟಿದ್ದರು. ಇಂದು (ಡಿಸೆಂಬರ್ 25)ರ ಎಪಿಸೋಡ್​ನಲ್ಲಿ ಬಿಗ್​ಬಾಸ್ ಆದೇಶದಂತೆ ಸಿಬ್ಬಂದಿಗಳು ಅತಿಥಿಗಳಾದರು. ಅತಿಥಿಗಳಾಗಿದ್ದವರು ಸಿಬ್ಬಂದಿಗಳಾದರು. ಆಗ ರಜತ್, ತ್ರಿವಿಕ್ರಮ್, ಮೋಕ್ಷಿತಾ ಇನ್ನಿತರರು ಮೊದಲೇ ಯೋಜನೆ ಹಾಕಿಕೊಂಡು ಚೈತ್ರಾ ಮತ್ತು ಗ್ಯಾಂಗ್ ಅನ್ನು ಗೋಳು ಹೊಯ್ದುಕೊಂಡರು.

ರಜತ್, ಪೈಲ್ವಾನನ ರೀತಿ ರೆಸಾರ್ಟ್​ಗೆ ಎಂಟ್ರಿ ಕೊಟ್ಟಿದ್ದಲ್ಲದೆ ತನ್ನದೇ ತಂಡದ ಸದಸ್ಯರ ಮೇಲೆ ಸುಳ್ಳು ಜಗಳಗಳನ್ನು ಮಾಡಿಕೊಂಡರು. ರೆಸಾರ್ಟ್​ಗೆ ಬಂದ ಮೋಕ್ಷಿತಾ ಮೈ ಮುಟ್ಟುವುದು, ಭವ್ಯಾ ಹೋಗುತ್ತಿದ್ದಾಗ ಹಿಂದಿನಿಂದ ಕಾಲು ಮುಟ್ಟುವುದು ಇಂಥಹಾ ಚೇಷ್ಟೆಗಳನ್ನು ಮಾಡಿದರು. ಕೆಲ ಸಮಯದಲ್ಲಿ ಮೋಕ್ಷಿತಾ ಮತ್ತು ಭವ್ಯಾ ನಿಜವಾಗಿಯೂ ರಜತ್​ ಮೇಲೆ ಸಿಟ್ಟು ಮಾಡಿಕೊಂಡಂತೆ ಕಂಡು ಬಂತು.

ಇದನ್ನೂ ಓದಿ:ರಿವರ್ಸ್ ಆಯ್ತು ರೋಲ್, ಹೇಳಿದಂತೆ ಹಣ್ಣುಗಾಯಿ ಮಾಡಿದ ರಜತ್

ರಜತ್ ಅನ್ನು ರೆಸಾರ್ಟ್​ಗೆ ಯಾಕೆ ಸೇರಿಸಿದಿರಿ ಎಂದು ಹಲವು ಬಾರಿ ಅತಿಥಿಗಳಾದ ಮೋಕ್ಷಿತಾ, ಭವ್ಯಾ ಅವರುಗಳು ಮ್ಯಾನೇಜರ್ ಗೌತಮಿ ಬಳಿ ಹೇಳಿದರು. ಗೌತಮಿ, ಚೈತ್ರಾ ಅವರುಗಳು ರಜತ್ ಬಳಿ ಸರ್, ಪ್ಲೀಸ್ ಸರ್ ಎನ್ನುತ್ತಾ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರು, ಆದರೆ ರಜತ್ ಸುಮ್ಮನಾಗಲಿಲ್ಲ. ತಮ್ಮದೇ ತಂಡದ ಸ್ಪರ್ಧಿಗಳನ್ನು ರೇಗಿಸುತ್ತಾ ಇದ್ದರು. ಒಂದು ಹಂತದಲ್ಲಿ ಮೋಕ್ಷಿತಾ, ಅವನನ್ನು ಮೊದಲು ಎತ್ತಿ ರೆಸಾರ್ಟ್​ನಿಂದ ಹೊರಗೆ ಹಾಕಿ ಎಂದು ಕೂಗಾಡಿದರು.

ರಜತ್, ಸಿಬ್ಬಂದಿ ಆಗಿದ್ದಾಗ ಮೊದಲಿಗೆ ಚೆನ್ನಾಗಿ ಟಾಸ್ಕ್ ಮಾಡಿದರು. ಆದರೆ ಬರ ಬರುತ್ತಾ ಅವರ ತಾಳ್ಮೆ ಕಟ್ಟೆ ಒಡೆಯಿತು. ಎರಡನೇ ದಿನಕ್ಕೆ ಅವರು ನಿಯಮಗಳನ್ನು ಮುರಿಯಲು ಆರಂಭಿಸಿದ್ದರು. ಚೈತ್ರಾ ಇನ್ನಿತರೆಯವರಿಗೆ ಟಾಂಗ್ ಕೊಡುವುದಕ್ಕೆ ಆರಂಭ ಮಾಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್