AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊರಗೆ ಹಾಕ್ರಿ ಇವನ್ನ: ರಜತ್ ವಿರುದ್ಧ ಕೂಗಾಡಿದ ಮೋಕ್ಷಿತಾ

Bigg Boss Kannada: ಬಿಗ್​ಬಾಸ್ ಮನೆ ಕೆಲ ದಿನದಿಂದ ಬಿಬಿ ರೆಸಾರ್ಟ್ ಆಗಿದೆ. ಬಿಗ್​ಬಾಸ್ ಮನೆಯಲ್ಲಿ ಆಸಕ್ತಿಕರ ಟಾಸ್ಕ್​ ನಡೆಯುತ್ತಿದೆ. ಇಷ್ಟು ದಿನ ಸಿಬ್ಬಂದಿ ಆಗಿದ್ದವರು ಈಗ ಅತಿಥಿಗಳಾಗಿದ್ದಾರೆ. ಅತಿಥಿಗಳಾಗಿದ್ದವರು ಸಿಬ್ಬಂದಿಗಳಾಗಿದ್ದಾರೆ. ಆದರೆ ಒಂದೇ ತಂಡದಲ್ಲಿದ್ದರೂ ರಜತ್ ಮೇಲೆ ಮೋಕ್ಷಿತಾ ಕೂಗಾಡಿದ್ದಾರೆ. ಕಾರಣ ಏನು?

ಹೊರಗೆ ಹಾಕ್ರಿ ಇವನ್ನ: ರಜತ್ ವಿರುದ್ಧ ಕೂಗಾಡಿದ ಮೋಕ್ಷಿತಾ
Rajath Mokshitha
ಮಂಜುನಾಥ ಸಿ.
|

Updated on: Dec 25, 2024 | 11:18 PM

Share

ಬಿಗ್​ಬಾಸ್ ಮನೆ ಈಗ ಬಿಬಿ ರೆಸಾರ್ಟ್ ಆಗಿದೆ. ಕಳೆದ ಕೆಲ ದಿನ ಚೈತ್ರಾ, ಮಂಜು, ಹನುಮಂತು, ಐಶ್ವರ್ಯಾ, ಗೌತಮಿ ಅವರುಗಳು ಅತಿಥಿಗಳಾಗಿ ಇದ್ದರು. ಸಿಬ್ಬಂದಿಗಳಾಗಿದ್ದ ಭವ್ಯಾ, ರಜತ್, ತ್ರಿವಿಕ್ರಮ್, ಮೋಕ್ಷಿತಾ ಅವರುಗಳಿಗೆ ಸಖತ್ ಟಾರ್ಚರ್ ಕೊಟ್ಟಿದ್ದರು. ಇಂದು (ಡಿಸೆಂಬರ್ 25)ರ ಎಪಿಸೋಡ್​ನಲ್ಲಿ ಬಿಗ್​ಬಾಸ್ ಆದೇಶದಂತೆ ಸಿಬ್ಬಂದಿಗಳು ಅತಿಥಿಗಳಾದರು. ಅತಿಥಿಗಳಾಗಿದ್ದವರು ಸಿಬ್ಬಂದಿಗಳಾದರು. ಆಗ ರಜತ್, ತ್ರಿವಿಕ್ರಮ್, ಮೋಕ್ಷಿತಾ ಇನ್ನಿತರರು ಮೊದಲೇ ಯೋಜನೆ ಹಾಕಿಕೊಂಡು ಚೈತ್ರಾ ಮತ್ತು ಗ್ಯಾಂಗ್ ಅನ್ನು ಗೋಳು ಹೊಯ್ದುಕೊಂಡರು.

ರಜತ್, ಪೈಲ್ವಾನನ ರೀತಿ ರೆಸಾರ್ಟ್​ಗೆ ಎಂಟ್ರಿ ಕೊಟ್ಟಿದ್ದಲ್ಲದೆ ತನ್ನದೇ ತಂಡದ ಸದಸ್ಯರ ಮೇಲೆ ಸುಳ್ಳು ಜಗಳಗಳನ್ನು ಮಾಡಿಕೊಂಡರು. ರೆಸಾರ್ಟ್​ಗೆ ಬಂದ ಮೋಕ್ಷಿತಾ ಮೈ ಮುಟ್ಟುವುದು, ಭವ್ಯಾ ಹೋಗುತ್ತಿದ್ದಾಗ ಹಿಂದಿನಿಂದ ಕಾಲು ಮುಟ್ಟುವುದು ಇಂಥಹಾ ಚೇಷ್ಟೆಗಳನ್ನು ಮಾಡಿದರು. ಕೆಲ ಸಮಯದಲ್ಲಿ ಮೋಕ್ಷಿತಾ ಮತ್ತು ಭವ್ಯಾ ನಿಜವಾಗಿಯೂ ರಜತ್​ ಮೇಲೆ ಸಿಟ್ಟು ಮಾಡಿಕೊಂಡಂತೆ ಕಂಡು ಬಂತು.

ಇದನ್ನೂ ಓದಿ:ರಿವರ್ಸ್ ಆಯ್ತು ರೋಲ್, ಹೇಳಿದಂತೆ ಹಣ್ಣುಗಾಯಿ ಮಾಡಿದ ರಜತ್

ರಜತ್ ಅನ್ನು ರೆಸಾರ್ಟ್​ಗೆ ಯಾಕೆ ಸೇರಿಸಿದಿರಿ ಎಂದು ಹಲವು ಬಾರಿ ಅತಿಥಿಗಳಾದ ಮೋಕ್ಷಿತಾ, ಭವ್ಯಾ ಅವರುಗಳು ಮ್ಯಾನೇಜರ್ ಗೌತಮಿ ಬಳಿ ಹೇಳಿದರು. ಗೌತಮಿ, ಚೈತ್ರಾ ಅವರುಗಳು ರಜತ್ ಬಳಿ ಸರ್, ಪ್ಲೀಸ್ ಸರ್ ಎನ್ನುತ್ತಾ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರು, ಆದರೆ ರಜತ್ ಸುಮ್ಮನಾಗಲಿಲ್ಲ. ತಮ್ಮದೇ ತಂಡದ ಸ್ಪರ್ಧಿಗಳನ್ನು ರೇಗಿಸುತ್ತಾ ಇದ್ದರು. ಒಂದು ಹಂತದಲ್ಲಿ ಮೋಕ್ಷಿತಾ, ಅವನನ್ನು ಮೊದಲು ಎತ್ತಿ ರೆಸಾರ್ಟ್​ನಿಂದ ಹೊರಗೆ ಹಾಕಿ ಎಂದು ಕೂಗಾಡಿದರು.

ರಜತ್, ಸಿಬ್ಬಂದಿ ಆಗಿದ್ದಾಗ ಮೊದಲಿಗೆ ಚೆನ್ನಾಗಿ ಟಾಸ್ಕ್ ಮಾಡಿದರು. ಆದರೆ ಬರ ಬರುತ್ತಾ ಅವರ ತಾಳ್ಮೆ ಕಟ್ಟೆ ಒಡೆಯಿತು. ಎರಡನೇ ದಿನಕ್ಕೆ ಅವರು ನಿಯಮಗಳನ್ನು ಮುರಿಯಲು ಆರಂಭಿಸಿದ್ದರು. ಚೈತ್ರಾ ಇನ್ನಿತರೆಯವರಿಗೆ ಟಾಂಗ್ ಕೊಡುವುದಕ್ಕೆ ಆರಂಭ ಮಾಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ