AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ರೊಮ್ಯಾನ್ಸ್ ಜಾಸ್ತಿ ಆಯ್ತು: ನೇರವಾಗಿ ಹೇಳಿದ ಸುದೀಪ್

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11ರಲ್ಲಿ ವೀಕೆಂಡ್ ಪಂಚಾಯ್ತಿ ನಡೆಸಿಕೊಟ್ಟ ಕಿಚ್ಚ ಸುದೀಪ್ ಶಿಶಿರ್ ಮತ್ತು ಐಶ್ವರ್ಯಾ ಕುರಿತು ಮಾತನಾಡುತ್ತಾ, ನಿಮ್ಮ ರೊಮ್ಯಾನ್ಸ್ ಜಾಸ್ತಿಯಾಯ್ತು ಎಂದರು. ಇದು ಹೀಗೆ ಮುಂದುವರೆದರೆ ಇಬ್ಬರಲ್ಲಿ ಒಬ್ಬರು ಹೊರಗೆ ಬರುತ್ತೀರ ಎಂದು ಎಚ್ಚರಿಕೆ ಕೊಟ್ಟರು.

ನಿಮ್ಮ ರೊಮ್ಯಾನ್ಸ್ ಜಾಸ್ತಿ ಆಯ್ತು: ನೇರವಾಗಿ ಹೇಳಿದ ಸುದೀಪ್
ಮಂಜುನಾಥ ಸಿ.
|

Updated on: Nov 23, 2024 | 11:16 PM

Share

ಬಿಗ್​ಬಾಸ್​ ಕನ್ನಡ ಸೀಸನ್ 11ರ ವಾರಾಂತ್ಯದ ಎಪಿಸೋಡ್​ ಇಂದು ತುಸು ಲಘುವಾಗಿತ್ತು. ಕಳೆದ ಕೆಲ ವಾರಗಳಲ್ಲಿ ಸುದೀಪ್ ತುಸು ಹೆಚ್ಚೇ ಸಿಟ್ಟಿನಿಂದ ಸ್ಪರ್ಧಿಗಳೊಟ್ಟಿಗೆ ಮಾತನಾಡಿದ್ದರು, ಅದಕ್ಕೆ ಕಾರಣವೂ ಇತ್ತು. ಕಳೆದ ವಾರ ಚೈತ್ರಾ ಕುಂದಾಪುರ ಅವರು ಮಾಡಿದ ಕೆಲಸಕ್ಕೆ ಸುದೀಪ್ ಬಹಳ ಬೇಸರಗೊಂಡಿದ್ದರು. ಈ ವಾರವೂ ಸಹ ಮನೆಯಲ್ಲಿ ಕೆಲವು ಘಟನೆಗಳು ನಡೆದಿದ್ದವು, ಕೆಲವರು ಅತಿಯಾದ ಉತ್ಸಾಹದಿಂದ ಆಡಿದ್ದರು, ಕೆಲವರು ಮಂಕಾಗಿದ್ದರು. ಎಲ್ಲರ ಆಟವನ್ನೂ ಪರಿಶೀಲನೆ ನಡೆಸಿ ಕೆಲವು ಸಲಹೆಗಳನ್ನು ಸುದೀಪ್ ನೀಡಿದರು.

ಮನೆಯ ಆಟಗಾರರ ಪೈಕಿ ಶಿಶಿರ್ ಒಬ್ಬ ಸಮರ್ಥ ಆಟಗಾರ ಎಂದು ಆರಂಭದ ಕೆಲ ವಾರಗಳಲ್ಲಿ ಹೆಸರು ಮಾಡಿದ್ದರು. ಆದರೆ ಇತ್ತೀಚೆಗೆ ಅವರ ಆಟದ ವೈಖರಿ ಬದಲಾಗಿದೆ. ಇದನ್ನು ಗಮನಿಸಿದ ಸುದೀಪ್ ತುಸು ಖಾರವಾಗಿಯೇ ಶಿಶಿರ್​ಗೆ ಎಚ್ಚರಿಕೆ ನೀಡಿದರು.

ಶಿಶಿರ್ ಕಳೆದ ವಾರ ಸುದೀಪ್​ರ ‘ಕೆಂಪೇಗೌಡ’ ಸಿನಿಮಾ ಮಾದರಿಯಂತೆ ಮೀಸೆ ಬಿಟ್ಟಿದ್ದಾರೆ. ಇದನ್ನು ನೋಡಿದ ಸುದೀಪ್, ‘ಕೆಂಪೇಗೌಡ’ ಸಿನಿಮಾದಲ್ಲಿ ನಿಮಗೆ ಇಷ್ಟವಾಗಿದ್ದು ಏನು? ಎಂದು ಪ್ರಶ್ನಿಸಿದರು. ಅದಕ್ಕೆ ಶಿಶಿರ್, ಕೆಂಪೇಗೌಡನ ಗತ್ತು ಇಷ್ಟವಾಯ್ತು ಎಂದರು. ಆ ಸಿನಿಮಾದಲ್ಲಿ ಆಕ್ಷನ್ ಎಷ್ಟಿತ್ತು, ರೊಮ್ಯಾನ್ಸ್ ಎಷ್ಟಿತ್ತು ರೊಮ್ಯಾನ್ಸ್ ಎಷ್ಟಿತ್ತು? ಎಂದರು. 80% ಆಕ್ಷನ್ ಇತ್ತು, 20% ರೊಮ್ಯಾನ್ಸ್ ಇತ್ತು ಎಂದರು. ಒಂದು ವೇಳೆ ‘ಕೆಂಪೇಗೌಡ’ ಸಿನಿಮಾದಲ್ಲಿ 80% ರೊಮ್ಯಾನ್ಸ್, 20% ಆಕ್ಷನ್ ಇದ್ದರೆ ನಿಮಗೆ ಇಷ್ಟವಾಗುತ್ತಾ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಇಲ್ಲ ಎಂದರು ಶಿಶಿರ್. ನಿಮ್ಮ ಕತೆಯೂ ಈಗ ಅದೇ ರೀತಿ ಆಗಿದೆ. ನಿಮ್ಮ ರೊಮ್ಯಾನ್ಸ್ ಹೆಚ್ಚಾಗಿದೆ ಆಕ್ಷನ್ ಕಡಿಮೆ ಆಗಿದೆ’ ಎಂದರು ಸುದೀಪ್.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ

ನೀವು, ಐಶ್ವರ್ಯಾ ಗೇಮ್ ಅನ್ನು ಮರೆತೇ ಬಿಟ್ಟಿದ್ದೀರಿ. ನೀವು ಅದೆಷ್ಟು ನಿಮ್ಮಲ್ಲೆ ಕಳೆದುಹೋಗಿದ್ದೀರಿ ಎಂದರೆ ಚೈತ್ರಾ ಅವರು ನಿಮ್ಮ ಕಣ್ಣೆದುರೇ ನಿಮ್ಮ ಹಣ ತೆಗೆದುಕೊಂಡು ಹೋದರು ಆದರೆ ನಿಮಗೆ ಅದು ಗೊತ್ತಾಗಿಲ್ಲ. ಎಲ್ಲರಿಗೂ ಒಂದು ಕಂಫರ್ಟ್ ಜೋನ್ ಬೇಕು, ಒಬ್ಬೊಬ್ಬರು ಒಬ್ಬರೊಟ್ಟಿಗೆ ಆತ್ಮೀಯತೆ ಬೆಳೆಸಿಕೊಳ್ಳುತ್ತಾರೆ ಆದರೆ ಅದು ಅತಿಯಾಗಬಾರದು. ನಿಮ್ಮ ಬಂಧ, ಆತ್ಮೀಯತೆ ಎಲ್ಲ ಹೊರಗೆ ಇರಲಿ, ಇದು ಹೀಗೇ ಮುಂದುವರೆದರೆ ನಿಮ್ಮಿಬ್ಬರಲ್ಲಿ ಒಬ್ಬರು ಆದಷ್ಟು ಬೇಗ ಹೊರಗೆ ಹೋಗುತ್ತೀರಿ ಎಂದು ಖಾರವಾಗಿ ಹೇಳಿದರು ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ