Bigg Boss Kannada: ರಜತ್ ಮಾತಿಗೆ ನಾಚಿ ನೀರಾದ ಚೈತ್ರಾ ಕುಂದಾಪುರ

Bigg Boss Kannada: ಬಿಗ್​ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿರುವ ರಜತ್ ತಮ್ಮ ಅಗ್ರೆಸ್ಸಿವ್ ಆಟದ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಶನಿವಾರದ ಎಪಿಸೋಡ್​ನಲ್ಲಿ ರಜತ್, ಚೈತ್ರಾ ಕುಂದಾಪುರ ಬಗ್ಗೆ ಸಿಹಿಯಾದ ಮಾತುಗಳನ್ನಾಡಿದ್ದಾರೆ. ರಜತ್ ಮಾತು ಕೇಳಿ ನಾಚಿ ನೀರಾಗಿದ್ದಾರೆ ಚೈತ್ರಾ.

Bigg Boss Kannada: ರಜತ್ ಮಾತಿಗೆ ನಾಚಿ ನೀರಾದ ಚೈತ್ರಾ ಕುಂದಾಪುರ
Follow us
ಮಂಜುನಾಥ ಸಿ.
|

Updated on: Nov 24, 2024 | 9:41 AM

ಬಿಗ್​ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಆಟಗಾರ ರಜತ್ ಮನೆಯ ಗಟ್ಟಿ ಸದಸ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಟಾಸ್ಕ್​ನಲ್ಲಾಗಲಿ, ಮಾತುಗಳಲ್ಲಾಗಲಿ ರಜತ್ ಬಹಳ ಮುಂದಿದ್ದಾರೆ. ಅಗ್ರೆಸ್ಸಿವ್ ಆಗಿ ಆಟ ಆಡುತ್ತಾರೆ. ಬಾಯಿ ತೆಗೆದರೆ ಅಹಂ ಭರಿತ ಮಾತುಗಳನ್ನೇ ಹೊರಹಾಕುತ್ತಾರೆ. ಅಥವಾ ಅವಾಚ್ಯ ಶಬ್ದಗಳನ್ನು ಬಳಸುತ್ತಾರೆ. ಇದೇ ಕಾರಣಕ್ಕೆ ಈಗಾಗಲೇ ಕಳಪೆ ಪಟ್ಟ ಪಡೆದು ಜೈಲು ಶಿಕ್ಷೆ ಅನುಭವಿಸಿದ್ದಾರೆ. ಆದರೆ ಶನಿವಾರದ ಎಪಿಸೋಡ್​ನಲ್ಲಿ ಮನೆಯ ಸದಸ್ಯೆ ಚೈತ್ರಾ ಕುಂದಾಪುರ ಅವರನ್ನು ಹೊಗಳಿ ಅಟ್ಟಕ್ಕೆ ಏರಿಸಿದ್ದಾರೆ, ರಜತ್ ಮಾತು ಕೇಳಿ ನಾಚಿ ನೀರಾಗಿದ್ದಾರೆ ಚೈತ್ರಾ.

ಶನಿವಾರದ ಎಪಿಸೋಡ್​ನಲ್ಲಿ ಮನೆಯ ಸದಸ್ಯರ ಬಗ್ಗೆ ಮಾತನಾಡುತ್ತಿದ್ದ ರಜತ್, ಚೈತ್ರಾ ಅವರನ್ನು ಬಾಸ್ ಎಂದು ಸಂಭೋಧಿಸುತ್ತಿದ್ದರು. ಅದಕ್ಕೆ ಮುಂಚೆ ಅವರು ಜೈಲಿಗೆ ಹೋದಾಗಲೂ ಚೈತ್ರಾ ಅವರನ್ನು ಬಾಸ್ ಎಂದೇ ಸಂಬೋಧಿಸುತ್ತಿದ್ದರು. ಆಗಂತೂ ಮನೆಯ ಕೆಲ ಸ್ಪರ್ಧಿಗಳಿಗೆ ರಜತ್ ಯಾವ ಬಾಸ್​ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಅನುಮಾನವೂ ಮೂಡಿತ್ತು.

ಶನಿವಾರದ ಎಪಿಸೋಡ್​ನಲ್ಲಿ ಸುದೀಪ್ ಅವರ ಎದುರು ಚೈತ್ರಾ ಅವರನ್ನು ರಜತ್ ಕೊಂಡಾಡಿದರು. ಚೈತ್ರಾ ಅವರಿಗೆ ಚೆನ್ನಾಗಿ ಮಾತನಾಡಲು ಬರುತ್ತದೆ. ಅವರಿಗೆ ಯಾವಾಗ, ಯಾರ ಬಳಿ ಹೇಗೆ ಮಾತನಾಡಬೇಕು ಎಂಬುದು ಬಹಳ ಚೆನ್ನಾಗಿ ಗೊತ್ತು. ಅವರ ಮಾತು ಸಹ ಬಹಳ ಕ್ಯೂಟ್, ಅವರೂ ಸಹ ಬಹಳ ಕ್ಯೂಟ್, ಬಹಳ ಮುದ್ದಾಗಿದ್ದಾರೆ ಅವರ ಮುಗ್ಧತೆ ನನಗೆ ಇಷ್ಟ. ಅವರಲ್ಲಿ ಯಾರಿಗೂ ತಿಳಿಯದ ಮುಗ್ಧತೆ ಇದೆ’ ಎಂದೆಲ್ಲ ಅವರ ಸೌಂದರ್ಯವನ್ನು ವರ್ಣಿಸಿದರು. ರಜತ್ ಮಾತು ಕೇಳಿ ಚೈತ್ರಾ ನಾಚಿಕೊಂಡುಬಿಟ್ಟರು. ಸುದೀಪ್ ಸಹ ಈ ಸಮಯದಲ್ಲಿ ಚೈತ್ರಾ ಕಾಲೆಳೆದರು.

ಇದನ್ನೂ ಓದಿ:Bigg Boss: ಅವಾಚ್ಯ ಶಬ್ದ ಬಳಸಿದ ರಜತ್​ಗೆ ಸುದೀಪ್ ಕ್ಲಾಸ್

ಚೈತ್ರಾ ಕುಂದಾಪುರ, ಈ ವಾರ ಸುದೀಪ್ ಅವರಿಂದಲೂ ಪ್ರಶಂಸೆ ಪಡೆದುಕೊಂಡರು. ಕಳೆದ ವಾರ ಸುದೀಪ್ ಅವರಿಂದ ಬಹಳ ಬೈಸಿಕೊಂಡಿದ್ದರು ಚೈತ್ರಾ, ಆಸ್ಪತ್ರೆಗೆಂದು ಹೊರಗೆ ಹೋಗಿ ಬಂದು ಹೊರಗೆ ತಮಗೆ ತಿಳಿದು ಬಂದು ವಿಚಾರವನ್ನೆಲ್ಲ ಮನೆಯ ಸದಸ್ಯರ ಬಳಿ ಹೇಳಿ ಎಲ್ಲರ ತಲೆ ಕೆಡಿಸಿದ್ದರು. ಇದರಿಂದಾಗಿ ಸುದೀಪ್ ಚೈತ್ರಾಗೆ ಕ್ಲಾಸ್ ತೆಗೆದುಕೊಂಡಿದ್ದರು. ಚೈತ್ರಾ ಅಂತೂ ನಾನು ಮನೆ ಬಿಟ್ಟು ಹೋಗುತ್ತೇನೆ ಎಂದು ಕೂತಿದ್ದರು. ಆದರೆ ಶನಿವಾರ, ಮಾತನಾಡಿದ ಸುದೀಪ್, ಈ ವಾರ ಚೈತ್ರಾ ಬಹಳ ಚೆನ್ನಾಗಿ ಆಟ ಆಡಿದರು. ಎಲ್ಲಿ ಹೇಗೆ ಆಡಬೇಕೋ ಹಾಗೆಯೇ ಆಟ ಆಡಿದರು’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್