AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾಗೆ ಮತ್ತೊಂದು ಆಘಾತ; ಅಂದುಕೊಂಡಂತೆ ನಡೆಯುತ್ತಿಲ್ಲ

ಶೋಭಾ ಶೆಟ್ಟಿ ಅವರು ರಿಯಾಲಿಟಿ ಶೋಗಳಲ್ಲಿ ಅನುಭವಿ. ಈಗಾಗಲೇ ಅವರು ತೆಲುಗು ಬಿಗ್ ಬಾಸ್​ನಲ್ಲಿ ಸ್ಪರ್ಧಿಸಿ ಬಂದಿದ್ದಾರೆ. ಈಗ ಕನ್ನಡ ಬಿಗ್ ಬಾಸ್​ನಲ್ಲಿ ಆಟ ಆಡುತ್ತಿದ್ದಾರೆ. ಆದರೆ ಅಂದುಕೊಂಡ ರೀತಿಯಲ್ಲಿ ಆಟವಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಪದೇ ಪದೇ ಅವರಿಗೆ ಆಘಾತ ಆಗುತ್ತಿದೆ. ಇದರಿಂದ ಅವರ ಪ್ಲ್ಯಾನ್ ಸರಿಯಾಗಿ ನಡೆಯುತ್ತಿಲ್ಲ.

ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾಗೆ ಮತ್ತೊಂದು ಆಘಾತ; ಅಂದುಕೊಂಡಂತೆ ನಡೆಯುತ್ತಿಲ್ಲ
ಶೋಭಾ ಶೆಟ್ಟಿ
ಮದನ್​ ಕುಮಾರ್​
|

Updated on: Nov 21, 2024 | 11:05 PM

Share

ತುಂಬಾ ಸೌಂಡು ಮಾಡುತ್ತಾ ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋಗೆ ಕಾಲಿಟ್ಟವರು ಶೋಭಾ ಶೆಟ್ಟಿ. ಅವರು ಬರುವಾಗ ಆರ್ಭಟ ಜೋರಾಗಿತ್ತು. ಸಿಕ್ಕಾಪಟ್ಟೆ ಕಾನ್ಫಿಡೆನ್ಸ್​ನಲ್ಲಿ ಅವರು ದೊಡ್ಮನೆಗೆ ಬಂದರು. ಬಿಗ್ ಬಾಸ್ ಮನೆಯಲ್ಲಿ ಅವರು ಆಟವನ್ನೇ ಬದಲಾಯಿಸುತ್ತಾರೆ ಎಂಬ ರೀತಿ ಇತ್ತು ಅವರ ಜೋಶ್​. ಆದರೆ ಆ ಜೋಶ್​ಗೆ ತಕ್ಕಂತೆ ದೊಡ್ಮನೆಯಲ್ಲಿ ಅವರ ಆಟ ನಡೆಯುತ್ತಿಲ್ಲ. ಯಾಕೆಂದರೆ, ಮೇಲಿಂದ ಮೇಲೆ ಶೋಭಾ ಶೆಟ್ಟಿ ಅವರಿಗೆ ಆಘಾತ ಆಗುತ್ತಿದೆ. ಇತ್ತೀಚಿನ ಸಂಚಿಕೆಗಳಲ್ಲಿ ಟಾಸ್ಕ್​ ಮಾಡುವಾಗ ಅವರಿಗೆ ಎರಡು ಸಲ ಪೆಟ್ಟಾಗಿದೆ.

ಮೊದಲ ಟಾಸ್ಕ್​ನಲ್ಲಿ ಅವರು ಎತ್ತರದಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ಪೆಟ್ಟಾದರೂ ಆಟ ಮುಂದುವರಿಸಿದ್ದರು. ಆದರೆ ಗೆಲ್ಲಲು ಸಾಧ್ಯವಾಗಲಿಲ್ಲ. ಎರಡನೇ ಟಾಸ್ಕ್​ನಲ್ಲಿ ಅವರ ಕುತ್ತಿಗೆಗೆ ನೋವಾಯಿತು. ವೈದ್ಯರು ತಪಾಸಣೆ ಮಾಡಿದ ಬಳಿಕ ಈ ಟಾಸ್ಕ್​ನಲ್ಲಿ ಶೋಭಾ ಶೆಟ್ಟಿ ಆಟ ಆಡಬಾರದು ಎಂಬ ಸಲಹೆ ಬಂತು. ಆದ್ದರಿಂದ ಅವರು ಆಟವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು.

ತಮ್ಮ ಆಟ ಅರ್ಧಕ್ಕೆ ನಿಂತಿದ್ದರಿಂದ ಶೋಭಾ ಶೆಟ್ಟಿ ಅವರು ಕಣ್ಣೀರು ಹಾಕಿದ್ದಾರೆ. ಅವರನ್ನು ಸಮಾಧಾನ ಮಾಡಲು ಇನ್ನುಳಿದವರು ಪ್ರಯತ್ನಿಸಿದ್ದಾರೆ. ಶೋಭಾ ಶೆಟ್ಟಿ ಅವರು ಸ್ಟ್ರಾಂಗ್ ಸ್ಪರ್ಧಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಟಾಸ್ಕ್​ ವೇಳೆ ಪೆಟ್ಟು ಮಾಡಿಕೊಳ್ಳುತ್ತಿರುವುದರಿಂದ ಅವರಿಗೆ ಹಿನ್ನಡೆ ಆಗುತ್ತಿದೆ. ಅವರು ಬಿಗ್ ಬಾಸ್ ಮನೆಗೆ ಬಂದು ನಾಲ್ಕು ದಿನ ಕಳೆದಿದೆ ಅಷ್ಟೇ. ಮುಂದಿನ ದಿನಗಳಲ್ಲಿ ಹೇಗೆ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ

ಮೊದಲ ದಿನದಿಂದ ಬಿಗ್​ ಬಾಸ್ ಮನೆಯಲ್ಲಿ ಕಷ್ಟಪಡುತ್ತಿರುವವರು ಒಂದು ಕಡೆ. ವೈಲ್ಡ್ ಕಾರ್ಡ್ ಮೂಲಕ ಬಂದು ಸದ್ದು ಮಾಡುತ್ತಿರುವವರು ಇನ್ನೊಂದು ಕಡೆ. ಈ ಪೈಕಿ ಯಾರು ಫಿನಾಲೆಯತ್ತ ಹೆಜ್ಜೆ ಹಾಕಲಿದ್ದಾರೆ ಎಂಬ ಕೌತುಕ ಮೂಡಿದೆ. ಇನ್ನೋರ್ವ ವೈಲ್ಡ್​ ಕಾರ್ಡ್​ ಸ್ಪರ್ಧಿ ರಜತ್ ಅವರು ಅತಿಯಾದ ಅಗ್ರೆಷನ್​ನಿಂದ ಮನೆಯ ವಾತಾವರಣ ಕೆಡಿಸುತ್ತಿದ್ದಾರೆ. ಅವಾಚ್ಯ ಪದಗಳನ್ನು ಬಳಸುತ್ತಿದ್ದಾರೆ. ಅವರಿಗೆ ವೀಕೆಂಡ್​ನಲ್ಲಿ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಲೂ ಅಚ್ಚರಿ ಏನಿಲ್ಲ. ರಜತ್ ಆಡಿದ ಮಾತುಗಳಿಂದ ಗೋಲ್ಡ್ ಸುರೇಶ್ ಅವರ ಮನಸ್ಸಿಗೆ ತೀವ್ರ ನೋವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.