AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಿಲ್ಲಿ ಬಳಿ ಇದೆ ದುಬಾರಿ ಕಾರು; ಧ್ರುವಂತ್ ಆರೋಪ ಒಪ್ಪಿಕೊಂಡ ನಟ

ಬಿಗ್ ಬಾಸ್ ಕನ್ನಡ 12ರಲ್ಲಿ ಗಿಲ್ಲಿ ನಟ ಬನಿಯನ್ ಧರಿಸಿ ಓಡಾಡುತ್ತಿರುವ ಬಗ್ಗೆ ವಿವಾದ ಎದ್ದಿದೆ. ಧ್ರುವಂತ್ ಇವರನ್ನು ಬಡವನೆಂದು ನಟಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗಿಲ್ಲಿ, ತಮ್ಮ ಬಳಿ ಎಂಜಿ ಹೆಕ್ಟರ್ ಕಾರು ಇರುವುದನ್ನು ಒಪ್ಪಿಕೊಂಡರು, ಆದರೆ ಅದು ಸೆಕೆಂಡ್ ಹ್ಯಾಂಡ್ ಎಂದರು. ಕುರಿ ಫಾರ್ಮ್ ಮಾಡುವ ಯೋಜನೆ ಬಗ್ಗೆಯೂ ವಿವರಿಸಿದರು.

ಗಿಲ್ಲಿ ಬಳಿ ಇದೆ ದುಬಾರಿ ಕಾರು; ಧ್ರುವಂತ್ ಆರೋಪ ಒಪ್ಪಿಕೊಂಡ ನಟ
ಗಿಲ್ಲಿ-ಧ್ರುವಂತ್
ರಾಜೇಶ್ ದುಗ್ಗುಮನೆ
|

Updated on: Nov 11, 2025 | 7:25 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಗಿಲ್ಲಿ ನಟ ಅವರು ಸದಾ ಬನಿಯನ್ ಹಾಕಿಕೊಂಡು ಸುತ್ತಾಡುತ್ತಿದ್ದಾರೆ. ಈ ಕಾರಣಕ್ಕೆ ಇವರನ್ನು ಮನೆಯ ಕೆಲವರು ಸಾಕಷ್ಟು ಟೀಕೆ ಮಾಡಿದ್ದಾರೆ. ಈ ವಿಚಾರವಾಗಿ ಗಿಲ್ಲಿ ನಟ ಅವರು ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ತಮ್ಮ ಬಳಿ ಇರುವ ಕಾರಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಗಿಲ್ಲಿ ನಟ ಅವರು ಧ್ರುವಂತ್​ನ ಕಾಲೆಳೆದಿದ್ದಾರೆ.

ಬಿಗ್ ಬಾಸ್​ನಲ್ಲಿ ಗಿಲ್ಲಿ ಬಡವ ಎಂದು ತೋರಿಸಿಕೊಳ್ಳುತ್ತಿದ್ದಾರೆ ಎಂಬುದು ಧ್ರುವಂತ್ ಆರೋಪ. ‘ನಾನು ಬೇರೆಯವರನ್ನು ಟೀಕೆ ಮಾಡಿ ಫೂಟೆಜ್ ತೆಗೆದುಕೊಳ್ಳುತ್ತಿಲ್ಲ. ಗಿಲ್ಲಿ ಬಡವನಂತೆ ತೋರಿಸಿಕೊಳ್ಳುತ್ತಿದ್ದಾನೆ. ಬನಿಯನ್ ಹಾಕಿ ಓಡಾಡುತ್ತಿದ್ದಾನೆ. ಚಂದ್ರಣ್ಣನಿಂದ ನನಗೆ ಒಂದು ವಿಚಾರ ಗೊತ್ತಾಗಿದೆ. ಗಿಲ್ಲಿ ನಟನ ಬಳಿ ಇರೋದು ಎಂಜಿ ಹೆಕ್ಟರ್ ಕಾರು. 100 ಕುರಿ ಕೂಡ ಇದೆ. ಆಗ ಗಿಲ್ಲಿ ನಟನ ರಿಯಲ್ ಫೇಸ್ ಗೊತ್ತಾಯ್ತು’ ಎಂದರು ಧ್ರುವಂತ್.

ಇದಕ್ಕೆ ಉತ್ತರಿಸಿದ ಗಿಲ್ಲಿ ನಟ, ‘ನಾನು ಬಡವ ಎಂದು ನಿನಗೆ ಯಾವಾಗದರೂ ಹೇಳಿದ್ದೀನಾ? ಬಡವ ಮಾತ್ರ ಬನಿಯನ್ ಹಾಕಿಕೊಳ್ತಾನಾ? ಎಂಜಿ ಹೆಕ್ಟರ್​ ಇರೋದು ಹೌದು. ಅದು ಸೆಕೆಂಡ್ ಹ್ಯಾಂಡ್ ತೆಗೆದುಕೊಂಡಿದ್ದು. 100 ಕುರಿ ತಂದು ಫಾರ್ಮ್ ಮಾಡಬೇಕು ಎಂದುಕೊಂಡಿದ್ದು ಹೌದು. ಆದರೆ, ಇನ್ನೂ ಕುರಿ ತಂದಿಲ್ಲ’ ಎಂದಿದ್ದಾರೆ ಗಿಲ್ಲಿ ನಟ.

View this post on Instagram

A post shared by gilli (@official_gilli143)

ಇನ್ನು, ಧ್ರುವಂತ್ ಜೊತೆ ಯಾರೆಲ್ಲಾ ಸೇರ್ತಾರೋ ಅವರು ದೊಡ್ಮನೆಯಿಂದ ಹೋಗ್ತಾರೆ ಎಂದು ಗಿಲ್ಲಿ ಆರೋಪಿಸಿದ್ದಾರೆ. ‘ಮಲ್ಲಮ್ಮ ಜೊತೆ ಸೇರಿ ಅವರು ಹೋಗಬೇಕು ಎಂದು ಇಷ್ಟಪಟ್ಟಿರಿ ಹೋದರು. ಆ ಬಳಿಕ ಚಂದ್ರಪ್ರಭನ ಇಷ್ಟಪಟ್ಟಿರಿ ಅವರೂ ಹೋದರು. ಮುಂದಿನ ವಾರ ಯಾರು ಹೋಗ್ತಾರೆ ನೋಡಬೇಕಿದೆ’ ಎಂದು ಗಿಲ್ಲಿ ಹೇಳಿದರು.

ಇದನ್ನೂ ಓದಿ: ಈ ವಾರವೂ ಅಶ್ವಿನಿಗೆ ಕಿಚ್ಚನ ಕ್ಲಾಸ್? ಜಾನ್ವಿ ಜೊತೆ ಸೇರಿ ಮಾಡಿದ್ದ ಸಂಚು ಬಯಲು

ಗಿಲ್ಲಿ ಅವರು ಹೇಳಿದಂತೆ ನಡೆದಿರೋದು ಹೌದು. ಧ್ರುವಂತ್ ಅವರು ಮಲ್ಲಮ್ಮ, ಮಲ್ಲಮ್ಮ ಎಂದು ಸಾಕಷ್ಟು ಸುತ್ತಾಡುತ್ತಿದ್ದರು. ಅವರು ಎಲಿಮಿನೇಟ್ ಆದ ಬಳಿಕ ಚಂದ್ರಪ್ರಭ ಜೊತೆ ಅವರಿಗೆ ಗೆಳೆತನ ಬೆಳೆದಿತ್ತು. ಅವರು ಕಳೆದ ವಾರ ಹೋದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್