AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್ ಹೇಳಿದರೂ ಬದಲಾಗದ ಮನೆ ಮಂದಿ; ಮತ್ತದೇ ಹಾಡು

ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿಗಳು ಹಿಂದಿನ ತಪ್ಪುಗಳ ಆಧಾರದ ಮೇಲೆ ನಾಮಿನೇಷನ್ ಮಾಡುತ್ತಿದ್ದರು. ಇದನ್ನು ಕಿಚ್ಚ ಸುದೀಪ್ ತೀವ್ರವಾಗಿ ಖಂಡಿಸಿದ್ದರು. ಆದರೆ, ಸ್ಪರ್ಧಿಗಳು ಮತ್ತದೇ ತಪ್ಪನ್ನು ಮಾಡಿದ್ದಾರೆ.

ಸುದೀಪ್ ಹೇಳಿದರೂ ಬದಲಾಗದ ಮನೆ ಮಂದಿ; ಮತ್ತದೇ ಹಾಡು
ಕಿಚ್ಚ ಸುದೀಪ್
ರಾಜೇಶ್ ದುಗ್ಗುಮನೆ
|

Updated on: Nov 27, 2024 | 7:27 AM

Share

ಕಿಚ್ಚ ಸುದೀಪ್ ಅವರು ವೀಕೆಂಡ್​ನಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಸ್ಪರ್ಧಿಗಳು ಎಡವಿದಾಗ, ತಪ್ಪು ಮಾಡಿದಾಗ ಅದನ್ನು ತಿದ್ದುವ ಪ್ರಯತ್ನ ಮಾಡುತ್ತಾರೆ. ಕಳೆದ ವಾರ ಸುದೀಪ್ ಅವರು ಬಿಗ್ ಬಾಸ್ ಮನೆ ಮಂದಿಗೆ ಒಂದು ವಿಚಾರವನ್ನು ಖಡಕ್ ಆಗಿ ಹೇಳಿದ್ದರು. ಬೇರೆಯವರ ಮಧ್ಯೆ ಏನೋ ಆಗಿದೆ ಎಂದಾಗ ಆ ವಿಚಾರ ಇಟ್ಟುಕೊಂಡು ನಾಮಿನೇಟ್ ಮಾಡಬೇಡಿ ಎಂದು ಸುದೀಪ್ ಹೇಳಿದ್ದರು. ಈ ವಾರ ಮತ್ತದೇ ಕಾರಣ ನೀಡಿ ಎಲ್ಲರೂ ನಾಮಿನೇಷನ್ ಪ್ರಕ್ರಿಯೆ ನಡೆಸಿದ್ದಾರೆ.

ಕಳೆದ ವಾರ ರಜತ್ ಅವರು ಸುರೇಶ್​ಗೆ ಕೆಟ್ಟ ಪದ ಬಳಕೆ ಮಾಡಿದರು. ಈ ವಿಚಾರವನ್ನೇ ಇಟ್ಟುಕೊಂಡು ಎಲ್ಲರೂ ಕಳಪೆ ನೀಡುವ ಕೆಲಸ ಮಾಡಿದ್ದಾರೆ. ‘ಸುರೇಶ್​ಗೆ ರಜತ್ ಆ ರೀತಿ ಹೇಳಿದ್ದು ಬೇಸರ ಮೂಡಿಸಿದೆ’ ಎಂದು ಹೇಳುವ ಮೂಲಕ ಕಳಪೆ ನೀಡಿದ್ದರು. ಈ ವಿಚಾರವನ್ನು ಸುದೀಪ್ ಅವರು ವೀಕೆಂಡ್​ನಲ್ಲಿ ಪ್ರಸ್ತಾಪ ಮಾಡಿದ್ದರು.

ಇದನ್ನೂ ಓದಿ: ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್

‘ನಿಮಗೆ ಏನಾದರೂ ತೊಂದರೆ ಆಗಿದ್ದರೆ ಹೇಳಿ. ಆ ವ್ಯಕ್ತಿಯಿಂದ ನಿಮಗೆ ಬೇಸರ ಆಗಿದ್ದರೆ ಹೇಳಿ. ಇಬ್ಬರ ಮಧ್ಯೆ ಜಗಳ ನಡೆದು, ಅದು ಗಾರ್ಡನ್ ಏರಿಯಾದಲ್ಲಿ ಪರಸ್ಪರ ಮಾತನಾಡಿಕೊಂಡು ಬಗೆಹರಿದಿರಬಹುದು. ಅದು ನಿಮಗೆ ಗೊತ್ತಿಲ್ಲದೆ ಇರಬಹುದು. ಹೀಗಿರುವಾಗ ಅದನ್ನೇ ಕಾರಣ ನೀಡೋದು ಸರಿ ಅಲ್ಲ. ಹೀಗಾಗಿ, ಈ ರೀತಿಯ ಕಾರಣ ನೀಡಿ ನಾಮಿನೇಟ್ ಮಾಡೋದು ತಪ್ಪು. ನೀವು ಜೋಕರ್​ಗಳ ರೀತಿ ಕಾಣುತ್ತೀರಿ’ ಎಂದು ಸುದೀಪ್ ಹೇಳಿದ್ದರು. ಈ ವಾರ ಮತ್ತದೇ ರಿಪೀಟ್ ಆಗಿದೆ.

ಹನುಮಂತ ಅವರು ಸುರೇಶ್ ಅವರನ್ನು ನಾಮಿನೇಟ್ ಮಾಡಿದರು. ‘ಕಳೆದ ವಾರ ಸುರೇಶ್ ಅವರು ಆಟದಿಂದ ಅರ್ಧಕ್ಕೆ ನಡೆದಿದ್ದು ನನಗೆ ಇಷ್ಟ ಆಗಿಲ್ಲ’ ಎಂದಿದ್ದಾರೆ. ಸುರೇಶ್ ಅವರು ಹನುಮಂತ ಟೀಂನಲ್ಲೇ ಇರಲಿಲ್ಲ ಅನ್ನೋದು ಮೊದಲ ವಿಚಾರ ಆದರೆ, ಆ ಬಳಿಕ ಸುರೇಶ್ ತಪ್ಪನ್ನು ತಿದ್ದುಕೊಂಡು ಕ್ಷಮೆ ಕೇಳಿದ್ದರು ಎಂಬುದು ಎರಡನೇ ವಿಚಾರ. ಆದಾಗ್ಯೂ ಹನುಮಂತ ಅವರು ಸುರೇಶ್ ಹೆಸರನ್ನು ತೆಗೆದುಕೊಂಡರು. ಮೋಕ್ಷಿತಾ, ಚೈತ್ರಾ ಕುಂದಾಪುರ ಕೂಡ ತ್ರಿವಿಕ್ರಂ ಅವರನ್ನು ನಾಮಿನೇಟ್ ಮಾಡುವಾಗ ಇದೇ ರೀತಿಯ ಕಾರಣ ತೆಗೆದುಕೊಂಡರು. ಒಟ್ಟಾರೆ, ಬಹುತೇಕರು ಇದೇ ರೀತಿಯ ಕಾರಣ ನೀಡಿ ನಾಮಿನೇಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ