
ಅಶ್ವಿನಿ ಗೌಡ ಹಾಗೂ ಕಾವ್ಯಾ ಶೈವ ಮಧ್ಯೆ ಬಿಗ್ ಬಾಸ್ ಅಲ್ಲಿ ಮಾತಿನ ಚಕಮಕಿ ನಡೆದಿದೆ. ಡ್ರಮ್ ಟಾಸ್ಕ್ನಲ್ಲಿ ಅಶ್ವಿನಿ ಹಾಗೂ ಕಾವ್ಯಾ ಪರಸ್ಪರ ವಿರುದ್ಧ ಟೀಂನಲ್ಲಿ ಇದ್ದರು. ತಮ್ಮ ಎದುರಾಳಿ ತಂಡದ ಡ್ರಮ್ನಿಂದ ನೀರು ಹೊರ ಬರುವಂತೆ ಮಾಡೋದು ಅಶ್ವಿನಿ ಹಾಗೂ ಕಾವ್ಯಾಗೆ ನೀಡಲಾದ ಟಾಸ್ಕ್ ಆಗಿತ್ತು. ಆದರೆ, ಕಾವ್ಯಾ ಅವರನ್ನು ಅಶ್ವಿನಿ ಸಂಪೂರ್ಣವಾಗಿ ತಡೆ ಹಿಡಿದಿದ್ದರು. ಇದರಿಂದ ಕಾವ್ಯಾಗೆ ಆಟ ಆಡಲು ಸಾಧ್ಯವಾಗಲೇ ಇಲ್ಲ. ಆ ಬಳಿಕ ಅವರು ಅಶ್ವಿನಿ ವಿರುದ್ಧ ಮಾತಿನ ಸಮರ ನಡೆಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.
ಸೈರನ್ ಆದ ತಕ್ಷಣ ಅಟ್ಯಾಕ್ಗೆ ಇಳಿಯಬೇಕು. ಮತ್ತೊಂದು ಸೈರನ್ ಆದ ತಕ್ಷಣ ಆಟವನ್ನು ನಿಲ್ಲಿಸಬೇಕು. ‘ಸೈರನ್ ಆದ ಬಳಿಕವೂ ಅಶ್ವಿನಿ ಅವರು ಮೈ ಮೇಲೆ ಭಾರ ಹಾಕಿ ಕುಳಿತೇ ಇದ್ದರು’ ಎಂಬುದು ಕಾವ್ಯಾ ಆರೋಪ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ಸೈರನ್ ಆದ ತಕ್ಷಣ ಅಶ್ವಿನಿ ಅವರು ಎದ್ದಿರೋದು ಕಾಣಿಸುತ್ತದೆ. ಹೀಗಾಗಿ, ಕಾವ್ಯಾ ಹೇಳಿದ ಮಾತಿನಲ್ಲಿ ಸತ್ಯ ಇಲ್ಲ ಎಂದು ಅನೇಕರಿಗೆ ಅನಿಸಿದೆ.
ಅಶ್ವಿನಿ ಹಾಗೂ ಕಾವ್ಯಾ ಮಧ್ಯೆ ಫೈಟ್ ಏರ್ಪಡಲು ಈ ಮಾತೇ ಅಡಿಪಾಯ ಆಗಿತ್ತು. ಆ ಬಳಿಕ ಇಬ್ಬರ ಮಾತು ಎಲ್ಲೆಲ್ಲಿಗೋ ಹೋಯಿತು. ಅಮ್ಮನ ವಿಷಯವೆಲ್ಲ ಚರ್ಚೆಗೆ ಬಂದವು. ‘ನಿಮ್ಮ ಅಮ್ಮನಿಗೆ ಹೋಗಿ ಹೇಳ್ಕೋ’ ಎಂದು ಅಶ್ವಿನಿ ಅವರು ಕಾವ್ಯಾಗೆ ಹೇಳಿದರು. ‘ನನ್ನ ಅಮ್ಮನ 10ರಷ್ಟು ನೀವಿಲ್ಲ’ ಎಂದು ಕೌಂಟರ್ ಕೊಟ್ಟರು ಕಾವ್ಯಾ.
Video proof, AG gets up within sec after buzzer (considering her age and weight it’s faster)
Kaavu says Naayi Bala Donku – this shuld be picked in weekend.
AG didn’t react – Note!
Those who are blaming AG either are judgmental or Kaavu fans or AG haters.#BBK12 pic.twitter.com/aFOf7iCDRP
— VIKAS N (@Vichhu85) December 17, 2025
ಕೈಲಾಗದ ಶತ್ರುವಿನ ಕೊನೆಯ ಆಯುಧವೇ ಅಪಪ್ರಚಾರ 👎🏻👎🏻👎🏻
Clown Kavya Proved it 😭😭 🤡
AshwiniGowda ಸಿಂಹಿಣಿ 🔥🔥🔥#BBK12 pic.twitter.com/pOJH5FUzKW
— ವಾಮನ (@ABDevil7999) December 17, 2025
A 26 year old Kavya lost against a 40 year old physically fit, strong and dominating personality called Ashwini.
That’s the only reason behind that verbal spat.
Kavya acted like a sore loser here during the drum 🛢️ task. #BBK12 || #BBK12live || #BBK12live pic.twitter.com/67z5mHpJII
— Vishu (@bengaluruboy8) December 17, 2025
ಈ ಜಗಳದ ಬಗ್ಗೆ ಚರ್ಚೆ ನಡೆಯುತ್ತಿದೆ. ಯಾರು ಮುಂದಕ್ಕೆ ಹೋಗದಂತೆ ತಡೆಯೋದು ಅಶ್ವಿನಿಗೆ ನೀಡಿದ ಟಾಸ್ಕ್ ಆಗಿತ್ತು. ಅದನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹೀಗಿರುವಾಗ ಕಾವ್ಯಾ ಆ ಬಗ್ಗೆ ಆರೋಪ ಮಾಡೋದು ಏನಿದೆ ಎಂಬುದು ಅನೇಕರ ಪ್ರಶ್ನೆ. ‘ಕೈಲಾಗದ ಶತ್ರುವಿನ ಕೊನೆಯ ಆಯುಧವೇ ಅಪಪ್ರಚಾರ’ ಎಂಬ ಮಾತುಗಳು ಕೇಳಿ ಬಂದಿವೆ.
ಇದನ್ನೂ ಓದಿ: ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಈ ವಿಷಯ ವೀಕೆಂಡ್ನಲ್ಲಿ ಚರ್ಚೆಗೆ ಬರಬಹುದು. ಸುದೀಪ್ ಅವರು ಯಾವುದು ಸರಿ, ಯಾವುದು ತಪ್ಪು ಎಂದು ಚರ್ಚಿಸಿ ಒಂದು ತೀರ್ಮಾನ ನೀಡುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.