
ಬಿಗ್ ಬಾಸ್ ಮನೆಯಲ್ಲಿ ಮಾಡರ್ನ್ ಮಹಾಕವಿ ಮಂಜು ಅವರು ಹೆಚ್ಚು ಹೈಲೈಟ್ ಆಗುತ್ತಿದ್ದಾರೆ. ತಮ್ಮ ಉದ್ದುದ್ದದ ಭಾಷಣ, ಮಾತು ಹಾಗೂ ಅರಚಾಟಗಳ ಮೂಲಕ ಅವರು ಎಲ್ಲರಿಗೂ ಪರಿಚಯ ಆಗಿದ್ದಾರೆ. ಅವರು ಈ ಬಾರಿ ಒಂದು ತಪ್ಪು ಮಾಡಿದ್ದಾರೆ. ಸೌಂದರ್ಯಾ ಅವರ ಕ್ಯಾರೆಕ್ಟರ್ ಬಗ್ಗೆ ಮಾತನಾಡುವ ಮೂಲಕ ತಪ್ಪು ಎಸಗಿದ್ದಾರೆ. ಆ ಬಳಿಕ ಸೌಂದರ್ಯಾ ಅವರು ಕಣ್ಣೀರು ಹಾಕಿದ್ದಾರೆ.
ನಾಮಿನೇಷನ್ ಪ್ರಕ್ರಿಯೆ ವೇಳೆ ಮಂಜು ಅವರು ಸೌಂದರ್ಯಾ ಹೆಸರನ್ನು ಮೊದಲು ತೆಗೆದುಕೊಂಡರು. ಸೌಂದರ್ಯಾ ಹೊಡೆದ ವಿಷಯ ಇಟ್ಟುಕೊಂಡು ಅವರನ್ನು ಮಂಜು ನಾಮಿನೇಟ್ ಮಾಡಿದರು. ಈ ವಿಷಯ ಸೌಂದರ್ಯಾಗೆ ಬೇಸರ ತರಿಸಿತು. ‘ಹೊಡೆದಿದ್ದು ಉದ್ದೇಶ ಪೂರ್ವಕವಲ್ಲ, ಆಟದ ಭರದಲ್ಲಿ ಆಗಿದ್ದು. ಕ್ಷಮೆ ಇರಲಿ’ ಎಂದು ಸೌಂದರ್ಯಾ ಕೇಳಿ ಕೊಂಡಾಗ ಮಂಜು ಓಕೆ ಎಂದಿದ್ದರು. ಈಗ ಮತ್ತೆ ಅದೇ ವಿಷಯ ಎತ್ತಿ ನಾಮಿನೇಟ್ ಮಾಡಿದ್ದು ಅವರಿಗೆ ಸರಿ ಎನಿಸಲಿಲ್ಲ.
ಈ ಬಗ್ಗೆ ಮಂಜುಗೆ ಸೌಂದರ್ಯಾ ಪ್ರಶ್ನೆ ಮಾಡಿದರು. ಆ ಬಳಿಕ ಮಂಜು ಅವರು ಸೌಂದರ್ಯಾ ಅವರ ಕ್ಯಾರೆಕ್ಟರ್ ಬಗ್ಗೆ ಮಾತನಾಡಿದರು. ‘ಸೌಂದರ್ಯಾ ಅವರ ರೀತಿ 18+ ಮಾತನಾಡೋಕೆ ಇಲ್ಲಿಗೆ ಬಂದಿಲ್ಲ.ನಿಮ್ಮಂತಹ ಕೀಳು ಮನಸ್ಥಿತಿ ಅವರನ್ನು ನನಗೆ ನೋಡೋಕೆ ಇಷ್ಟ ಇಲ್ಲ’ ಎಂಬಿತ್ಯಾದಿ ವಿಷಯ ಮಾತನಾಡಿ ಸೌಂದರ್ಯಾ ಕ್ಯಾರೆಕ್ಟರ್ ಸರಿ ಇಲ್ಲ ಎಂದು ಹೇಳಿದರು.
ಆ ಸಮಯದಲ್ಲಿ ಸೌಂದರ್ಯಾ ಏನೂ ಹೇಳಿಲ್ಲ. ಆ ಬಳಿಕ ಅವರಿಗೆ ಈ ವಿಷಯ ಅರ್ಥವಾಗಿದೆ. ಅವರು ಈ ಮಾತನ್ನು ನೆನೆದು ಪದೇ ಪದೇ ಕಣ್ಣೀರು ಹಾಕಿದ್ದಾರೆ. ಇನ್ನು, ಈ ವಿಷಯವಾಗಿ ಎಲ್ಲರೂ ಮಾತನಾಡಲು ಬಂದರೂ ಮಂಜು ಅವರು ಮಾತ್ರ ದೂರವೇ ಓಡಿದ್ದಾರೆ. ‘ನನಗೆ ಈ ವಿಷಯದ ಬಗ್ಗೆ ಚರ್ಚೆ ಮಾಡೋಕೆ ಇಷ್ಟ ಇಲ್ಲ’ ಎಂದು ನೇರವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಸಹಸ್ಪರ್ಧಿಗೆ ಹೊಡೆದ ಪ್ರಕರಣ; ಬಿಗ್ ಬಾಸ್ ಬಿಟ್ಟರೂ ಸೌಂದರ್ಯಾಗೆ ತಪ್ಪಿಲ್ಲ ಸಂಕಷ್ಟ
ಯಾವುದಾದರೂ ಮಹಿಳಾ ಸ್ಪರ್ಧಿ ಬಗ್ಗೆ ಯಾರಾದರೂ ಕೆಟ್ಟದಾಗಿ ಮಾತನಾಡಿದರು ಎಂದರೆ ಸುದೀಪ್ ಅದನ್ನು ಸಹಿಸೋದಿಲ್ಲ. ಹೀಗಾಗಿ, ವೀಕೆಂಡ್ ಎಪಿಸೋಡ್ನಲ್ಲಿ ಈ ವಿಷಯ ಚರ್ಚೆ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.