AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇ ಪ್ರಭು, ಹರಿರಾಮ ಕೃಷ್ಣ ಜಗನ್ನಾಥ ಪ್ರೇಮಾನಂದ್ ಏ ಕ್ಯಾ ಹುವಾ?

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10 ಆರಂಭದಿಂದ ನೋಡುತ್ತಿದ್ದ ಪ್ರೇಕ್ಷಕರು ‘ಹೇ ಪ್ರಭು, ಹರಿರಾಮ ಕೃಷ್ಣ ಜಗನ್ನಾಥ ಪ್ರೇಮಾನಂದ್ ಏ ಕ್ಯಾ ಹುವಾ?’ ಎನ್ನುವಂಥಹಾ ಸ್ಥಿತಿ ಬುಧವಾರ ಎಪಿಸೋಡ್ ನೋಡುವಾಗ ನಿರ್ಮಾಣವಾಗಿತ್ತು. ಅಂಥಹದ್ದೇನಾಯ್ತು?

ಹೇ ಪ್ರಭು, ಹರಿರಾಮ ಕೃಷ್ಣ ಜಗನ್ನಾಥ ಪ್ರೇಮಾನಂದ್ ಏ ಕ್ಯಾ ಹುವಾ?
ಮಂಜುನಾಥ ಸಿ.
|

Updated on: Jan 10, 2024 | 11:34 PM

Share

ಬಿಗ್​ಬಾಸ್ (BiggBoss) ಮನೆಯಲ್ಲಿ ಸ್ಪರ್ಧಿಗಳ ನಡುವೆ ಸಂಬಂಧಗಳಿಗೆ ಪರಸ್ಪರರ ಬಗೆಗಿನ ಅಭಿಪ್ರಾಯಗಳಿಗೆ ಆಯಸ್ಸು ಬಹಳ ಕಡಿಮೆ. ಒಬ್ಬರನ್ನೊಬ್ಬರು ಗುದ್ದಿ ಕೆಡವುಷ್ಟು ಕೋಪ, ಸಿಟ್ಟು ಹೊಂದಿರುವವರು ಸಹ ಇನ್ನೊಂದು ಟಾಸ್ಕ್​ನಲ್ಲಿ ಒಬ್ಬರ ಕೈ ಇನ್ನೊಬ್ಬರು ಹಿಡಿದು ಒಟ್ಟಿಗೆ ಆಡಬೇಕಾಗುತ್ತದೆ. ಆದರೆ ಈ ಬಿಗ್​ಬಾಸ್​ ಸೀಸನ್​ನಲ್ಲಿ ಈ ದ್ವೇಷ-ಪ್ರೀತಿಯ ಆಟ ತುಸು ಗಾಢವಾಗಿಯೇ ಇತ್ತು. ಆರಂಭದಿಂದಲೂ ವಿನಯ್ ಹಾಗೂ ಸಂಗೀತಾ, ವಿನಯ್ ಹಾಗೂ ಡ್ರೋನ್ ನಡುವೆ ಜಗಳ, ವೈಷಮ್ಯ ನಡೆಯುತ್ತಲೇ ಇತ್ತು. ಆದರೆ ಫಿನಾಲೆ ಹಂತಕ್ಕೆ ಬಂದಾಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ.

ಯಾವುದು ಏನೇ ಆದರೂ ವಿನಯ್ ಹಾಗೂ ಸಂಗೀತಾ ಪರಸ್ಪರ ಗೆಳೆಯರಾಗುವುದಿಲ್ಲ, ವಿನಯ್ ಹಾಗೂ ಡ್ರೋನ್ ಪ್ರತಾಪ್ ಸಹ ಗೆಳೆಯರಾಗುವುದಿಲ್ಲ. ಒಬ್ಬರನ್ನು ನೋಡಿ ಒಬ್ಬರು ನಗುವುದಿಲ್ಲ ಎಂದೇ ಪ್ರೇಕ್ಷಕರು ಊಹಿಸಿದ್ದರು. ಹಾಗೆ ಊಹಿಸಲು ಪ್ರೇರೇಪಿಸುವ ಹಲವು ಇಂಟೆನ್ಸ್ ಆದ ಘಟನೆಗಳು, ಜಗಳಗಳು ಇವರ ನಡುವೆ ನಡೆದಿದ್ದವು. ಆದರೆ ಈಗ ಎಲ್ಲ ಬದಲಾಗಿದೆ.

ಈ ವಾರದ ಟಾಸ್ಕ್ ಆರಂಭವಾದಾಗಲೂ ಸಹ ವಿನಯ್ ಹಾಗೂ ಡ್ರೋನ್ ಪ್ರತಾಪ್ ನಡುವೆ ಜೋರಾದ ಜಗಳವಾಗಿತ್ತು. ಕಳೆದ ಕೆಲ ವಾರದಿಂದ ನಿಯಂತ್ರಣದಲ್ಲಿಟ್ಟುಕೊಂಡಿದ್ದ ಕೋಪವನ್ನು ಈ ವಾರದ ಮೊದಲಲ್ಲೇ ಡ್ರೋನ್ ಪ್ರತಾಪ್ ಮೇಲೆ ಹರಿಬಿಟ್ಟಿದ್ದರು ವಿನಯ್. ಡ್ರೋನ್ ಪ್ರತಾಪ್​ಗೆ ಅವಾಚ್ಯ ಶಬ್ದಗಳನ್ನು ಬಳಸಿ ಬೈದಿದ್ದರು. ಪ್ರತಾಪ್ ಸಹ ವಿನಯ್ ವಿರುದ್ಧ ಸತತ ಆರೋಪಗಳನ್ನು ಮಾಡಿದ್ದರು. ಇಬ್ಬರಿಗೂ ಸಹ ಇದು ಹೊಸತಲ್ಲ. ಆದರೆ ತಮ್ಮ ಅಗ್ರೆಶನ್​ನಿಂದ ತಮಗೆ ಹಿನ್ನೆಡೆ ಆಗುತ್ತಿದೆ ಎಂಬುದನ್ನು ಅರಿತಿರುವ ವಿನಯ್, ಪ್ರತಾಪ್​ಗೆ ಕ್ಷಮೆ ಕೇಳಿದರು. ಮಾತ್ರವಲ್ಲ, ಪ್ರತಾಪ್ ಜೊತೆ ಗೆಳೆತನ ಬೆಳೆಸಿ, ಇಷ್ಟು ದಿನಗಳಲ್ಲಿ ಎಂದಿಗೂ ಇಲ್ಲದ ಆತ್ಮೀಯತೆಯನ್ನು ತೋರುತ್ತಿದ್ದಾರೆ. ಪ್ರತಾಪ್ ಸಹ ಇದಕ್ಕೆ ಸ್ಪಂದಿಸುತ್ತಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್​ನಿಂದ ಹೊರಬಂದ ಮೈಖಲ್​ ಹಾಕಿಕೊಂಡಿದ್ದಾರೆ ಹೊಸ ಯೋಜನೆಗಳು

ಬುಧವಾರದ ಎಪಿಸೋಡ್​ನಲ್ಲಿ ವಿನಯ್ ಹಾಗೂ ಪ್ರತಾಪ್ ಪರಸ್ಪರ ಅಕ್ಕ-ಪಕ್ಕ ಮಲಗಿಕೊಂಡು ಜೋರಾಗಿ ನಗುತ್ತಾ ಮಾತನಾಡುತ್ತಿದ್ದರು. ಮನೆಯ ಸದಸ್ಯರ ಬಗ್ಗೆ ವಿನಯ್ ಏನೇನೋ ಜೋಕ್​ಗಳನ್ನು ಹೇಳಿ ಪ್ರತಾಪ್ ಅನ್ನು ಬಹುವಾಗಿ ನಗಿಸಿದರು. ಡ್ರೋನ್ ಪ್ರತಾಪ್ ನಾಯಕತ್ವದ ಟಾಸ್ಕ್ ಬಂದಾಗಲೂ ಸಹ, ವಿನಯ್, ಪ್ರತಾಪ್ ಅನ್ನು ಆತ್ಮೀಯ ಗೆಳೆಯನಂತೆ ತಬ್ಬಿಕೊಂಡು ತಮಗೆ ಅವಕಾಶ ಕೊಡುವಂತೆ ಕೇಳಿಕೊಂಡರು. ಆ ಬಳಿಕ ಟಾಸ್ಕ್​ ಅನ್ನು ಯಾರು ಗೆಲ್ಲುತ್ತಾರೆ ಎಂದು ಊಹಿಸುವಂತೆ ಬಿಗ್​ಬಾಸ್ ಕೇಳಿದಾಗಲೂ ಸಹ ಪ್ರತಾಪ್ ಹೆಸರನ್ನೇ ಅವರು ತೆಗೆದುಕೊಂಡರು.

ಇನ್ನು ವಿನಯ್ ಹಾಗೂ ಸಂಗೀತಾ ಪರಸ್ಪರ ಗೆಳೆಯರಾಗಿ ಕೆಲ ವಾರಗಳೇ ಆಗಿವೆ. ಕಾರ್ತಿಕ್ ಜೊತೆ ಸ್ನೇಹ ಮುರಿದುಕೊಂಡಿರುವ ಸಂಗೀತಾ, ವಿನಯ್ ಜೊತೆ ತುಸು ಆತ್ಮೀಯರಾಗಿದ್ದಾರೆ. ಕಳೆದ ವೀಕೆಂಡ್​ನಲ್ಲಿ ಮತ್ತೆ ಇಬ್ಬರೂ ತಮ್ಮ ಹಳೆಯ ವರಸೆ ತೋರಿಸಿದ್ದರಾದರೂ. ಈ ವಾರ ಇಬ್ಬರೂ ಮತ್ತೆ ಗೆಳೆಯರಾದಂತಿದ್ದಾರೆ. ಇಬ್ಬರೂ ಸಹ ನಗುತ್ತಾ, ಪರಸ್ಪರ ಆತ್ಮೀಯ ಗೆಳೆಯರಂತೆ ಮಾತನಾಡುತ್ತಾ ಇದ್ದಿದ್ದು ಕಂಡು ಬಂತು. ಇದನ್ನೆಲ್ಲ ನೋಡಿದ ಪ್ರೇಕ್ಷಕರು ‘ಹೇ ಪ್ರಭು, ಹರಿರಾಮ ಕೃಷ್ಣ ಜಗನ್ನಾಥ ಪ್ರೇಮಾನಂದ್ ಏ ಕ್ಯಾ ಹುವಾ?’ ಎನ್ನುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?