‘ಅವನು ಜೋಕರ್’; ಫ್ಲರ್ಟ್ ಮಾಡಿ ವರ್ಚಸ್ಸು ಕಳೆದುಕೊಂಡ್ರಾ ಕಾರ್ತಿಕ್?

ಕಾರ್ತಿಕ್ ಅವರು ಆರಂಭದಲ್ಲಿ ಸಂಗೀತಾ ಜೊತೆ ಕ್ಲೋಸ್ ಆಗಿದ್ದರು. ಆದರೆ ಇಬ್ಬರ ಮಧ್ಯೆ ಹೊಂದಾಣಿಕೆ ಬರಲಿಲ್ಲ. ಆ ಬಳಿಕ ಅವರಿಗೆ ಸಿಕ್ಕಿದ್ದು ನಮ್ರತಾ ಗೌಡ. ನಮ್ರತಾ ಜೊತೆ ಕ್ಲೋಸ್ ಆಗೋಕೆ ಅವರು ಪ್ರಯತ್ನಿಸಿದ್ದಾರೆ.

‘ಅವನು ಜೋಕರ್’; ಫ್ಲರ್ಟ್ ಮಾಡಿ ವರ್ಚಸ್ಸು ಕಳೆದುಕೊಂಡ್ರಾ ಕಾರ್ತಿಕ್?
ನಮ್ರತಾ-ಕಾರ್ತಿಕ್
Follow us
|

Updated on:Jan 11, 2024 | 8:48 AM

ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಗೌಡ (Namratha Gowda) ಅವರು ಬಿಗ್ ಬಾಸ್ ಮನೆಯಲ್ಲಿ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ. ಇಬ್ಬರ ಮಧ್ಯೆ ಆಪ್ತತೆ ಹೆಚ್ಚಿದೆ. ನನಗೆ ಕಾರ್ತಿಕ್ ಅವರು ಕಂಫರ್ಟ್ ಜೋನ್ ನೀಡಿದ್ದಾರೆ ಎಂದು ನಮ್ರತಾ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಕಾರ್ತಿಕ್ ಅವರನ್ನು ಜೋಕರ್ ಎಂದು ನಮ್ರತಾ ಕರೆದಿದ್ದಾರೆ. ಇತ್ತೀಚೆಗೆ ನಡೆದ ಬೆಳವಣಿಗೆ ಇದಕ್ಕೆ ಕಾರಣ. ಕಾರ್ತಿಕ್ ಅವರ ವರ್ಚಸ್ಸು ಮೊದಲಿದ್ದ ರೀತಿ ಇಲ್ಲ. ಅಲ್ಲಿ, ಇಲ್ಲಿ ಫ್ಲರ್ಟ್ ಮಾಡಿಕೊಂಡು ತಮ್ಮ ನಿಜವಾದ ಆಟವನ್ನು ಅವರು ತೋರಿಸುತ್ತಿಲ್ಲ. ಈಗ ಅವರಿಗೆ ಜೋಕರ್ ಪಟ್ಟವೂ ಸಿಕ್ಕಿದೆ.

ಕಾರ್ತಿಕ್ ಅವರು ಆರಂಭದಲ್ಲಿ ಸಂಗೀತಾ ಜೊತೆ ಕ್ಲೋಸ್ ಆಗಿದ್ದರು. ಆದರೆ ಇಬ್ಬರ ಮಧ್ಯೆ ಹೊಂದಾಣಿಕೆ ಬರಲಿಲ್ಲ. ಆ ಬಳಿಕ ಅವರಿಗೆ ಸಿಕ್ಕಿದ್ದು ನಮ್ರತಾ ಗೌಡ. ನಮ್ರತಾ ಜೊತೆ ಕ್ಲೋಸ್ ಆಗೋಕೆ ಅವರು ಪ್ರಯತ್ನಿಸಿದ್ದಾರೆ. ಕಾರ್ತಿಕ್ ಅವರು ನಡೆದುಕೊಳ್ಳುತ್ತಿರುವ ಬಗ್ಗೆ ವಿನಯ್ ಬಳಿ ನಮ್ರತಾ ಮಾತನಾಡಿದ್ದಾರೆ.

‘ಕಳೆದ ಒಂದು ವಾರದಿಂದ ಅಷ್ಟು ಸ್ವೀಟ್ ಆಗಿ ಏಕೆ ಮಾತನಾಡುತ್ತಿದ್ದೀರಿ ಎಂದು ಕಾರ್ತಿಕ್ ಬಳಿ ಕೇಳಿದೆ. ಅವರು ನಿನ್ನ ಜೊತೆ ಸಮಯ ಕಳೆಯೋಕೆ ನನಗೆ ಖುಷಿ ಇದೆ ಎಂದು ಹೇಳಿದರು’ ಎಂದು ವಿವರಿಸಿದ್ದಾರೆ ನಮ್ರತಾ. ನಂತರ ಕಾರ್ತಿಕ್ ನಡೆಯನ್ನು ನೋಡಿ ಜೋಕರ್ ಎಂದು ಕರೆದಿದ್ದಾರೆ. ಕಾರ್ತಿಕ್ ಮೊದಲು ಸಂಗೀತಾ ಜೊತೆ ಇದ್ದರು. ನಂತರ ತನಿಷಾ ಜೊತೆ ಒಳ್ಳೆಯ ಗೆಳೆತನ ಬೆಳೆಸಿಕೊಂಡರು. ಈ ವಾರ ಆ ಗೆಳೆತನ ಹಾಳಾಗುತ್ತಿದೆ. ಆ ಬಳಿಕ ನಮ್ರತಾ ಜೊತೆ ಅವರು ಆಪ್ತತೆ ಬೆಳೆಸಿಕೊಂಡಿದ್ದಾರೆ.

ಇದನ್ನೂ ಓದಿ: ತನಿಷಾ ಹಾರ್ಟ್​ಗೆ ಗಟ್ಟಿಯಾಗಿ ಚುಚ್ಚಿದ ಕಾರ್ತಿಕ್; ಈ ತಪ್ಪನ್ನು ಅವರು ಎಂದಿಗೂ ಕ್ಷಮಿಸಲ್ಲ..

‘ಅವನು ಬರೀ ದೇಹ ಬೆಳೆಸಿಕೊಂಡು, ಹೂಸು ಬಿಟ್ಕೊಂಡು ಓಡಾಡ್ತಾ ಇರ್ತಾನೆ’ ಎಂದರು ವಿನಯ್. ಆಗ ನಮ್ರತಾ ಅವರು ‘ಜೋಕರ್ ಅವನು’ ಎಂದಿದ್ದಾರೆ. ಈ ಮೊದಲು ಕಾರ್ತಿಕ್​ನ ಪ್ಲೇಯರ್ ಎಂದು ಕರೆದಿದ್ದರು. ಅವರ ಮೇಲಿದ್ದ ಅಭಿಪ್ರಾಯ ಈಗ ಬದಲಾಗಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಬಿಗ್ ಬಾಸ್ ವೀಕ್ಷಣೆಗೆ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:42 am, Thu, 11 January 24

ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ
ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ