ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಡ್ರೋನ್ ಪ್ರತಾಪ್ ಬಳಿ ಕ್ಷಮೆ ಕೇಳಿದ ವಿನಯ್ ಗೌಡ

ವಿನಯ್ ಕ್ಷಮೆ ಕೇಳಿದ್ದು ಪ್ರತಾಪ್​ಗೆ ಖುಷಿ ನೀಡಿತು. ‘ತಪ್ಪಿನ ಅರಿವಾಯಿತಲ್ಲ. ಅದು ಖುಷಿಯ ವಿಚಾರ. ನೀವು ಗೆದ್ದರೆ ನನಗೂ ಸಂತೋಷವೇ’ ಎಂದರು ಪ್ರತಾಪ್.

ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಡ್ರೋನ್ ಪ್ರತಾಪ್ ಬಳಿ ಕ್ಷಮೆ ಕೇಳಿದ ವಿನಯ್ ಗೌಡ
ವಿನಯ್-ಪ್ರತಾಪ್
Follow us
| Updated By: ರಾಜೇಶ್ ದುಗ್ಗುಮನೆ

Updated on: Jan 10, 2024 | 10:04 AM

ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ (Vinay Gowda) ಅವರು ಆಗಾಗ ಸಿಟ್ಟಾಗುತ್ತಾರೆ. ಆ ಸಂದರ್ಭದಲ್ಲಿ ಅವರು ಸಾಕಷ್ಟು ಅವಾಚ್ಯ ಶಬ್ದ ಬಳಕೆ ಮಾಡುತ್ತಾರೆ. ಎದುರಿದ್ದವರ ವಿರುದ್ಧ ಕೂಗಾಡುತ್ತಾರೆ. ಸಿಟ್ಟಿನಿಂದ ಕಿರುಚಾಡುತ್ತಾರೆ. ಈ ರೀತಿ ಆದಗ ಎದುರಿದ್ದವರು ಸಹಜವಾಗಿಯೇ ರಿಯಾಕ್ಟ್ ಮಾಡುತ್ತಾರೆ. ಈ ರೀತಿ ಆಗಿ ಮನೆಯ ವಾತಾವರಣ ಸಾಕಷ್ಟು ಬಾರಿ ಹಾಳಾಗಿದ್ದಿದೆ. ಕೆಲವು ವಾರ ಸೈಲೆಂಟ್ ಆಗಿದ್ದ ವಿನಯ್ ಗೌಡ ಅವರು ಈ ವಾರ ಕಿರುಚಾಡಿದ್ದಾರೆ. ಪ್ರತಾಪ್ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಈಗ ವಿನಯ್ ಗೌಡ ಅವರು ಪ್ರತಾಪ್ ಬಳಿ ಕ್ಷಮೆ ಕೇಳಿದ್ದಾರೆ.

ಡ್ರೋನ್ ಪ್ರತಾಪ್ ಹಾಗೂ ವಿನಯ್ ಗೌಡ ಮಧ್ಯೆ ಈ ವಾರ ಕಿರಿಕ್ ಆಗಿದೆ. ವಿನಯ್ ಗೌಡ ಗುಂಪಿನಲ್ಲಿ ಇದ್ದವರೇ ಎಲ್ಲರೂ ಎಲಿಮಿನೇಟ್ ಆಗಿದ್ದಾರೆ. ‘ವಿನಯ್ ಗೌಡ ಅವರು ಗೆಳೆಯರ ತಪ್ಪನ್ನು ತಿದ್ದಲಿಲ್ಲ’ ಎನ್ನುವ ಅಭಿಪ್ರಾಯವನ್ನು ಪ್ರತಾಪ್ ವ್ಯಕ್ತಪಡಿಸಿದರು. ಇದರಿಂದ ಸಿಟ್ಟಾದ ವಿನಯ್ ಅವರು ಪ್ರತಾಪ್​ಗೆ ಬಾಯಿಗೆ ಬಂದಂತೆ ಬೈದಿದ್ದರು. ‘ತಿ* ಮುಚ್ಕೊಂಡು ಇರು. ನೀನು ಹೆದರಿಲ್ಲ ಅಂದ್ರೆ ** ಏನೂ ಹೋಗಲ್ಲ’ ಎಂಬಿತ್ಯಾದಿ ಶಬ್ದ ಬಳಕೆ ಮಾಡಿದ್ದರು. ಇದನ್ನು ಮನೆಯವರು ವಿರೋಧಿಸಿದ್ದರು. ಈಗ ವಿನಯ್​ಗೆ ತಪ್ಪಿನ ಅರಿವಾಗಿದೆ.

‘ಫಿನಾಲೆಗೆ ಹೋಗೋಕೆ ಯಾರು ಅರ್ಹರು’ ಎನ್ನುವ ಆಯ್ಕೆಯನ್ನು ಮಾಡಬೇಕಿತ್ತು. ವಿನಯ್ ಗೌಡ ಅವರು ಕಾರ್ತಿಕ್ ಹೆಸರನ್ನು ತೆಗೆದುಕೊಂಡರು. ಆ ಬಳಿಕ ಅವರು ಎಲ್ಲರ ಬಳಿ ಕ್ಷಮೆ ಕೇಳಿದರು. ‘ನನಗೆ ಕೋಪ ಬಂದಾಗ ಕೂಗಾಡುತ್ತೇನೆ. ಇದರಿಂದ ಯಾರಿಗಾದರೂ ಬೇಸರ ಆಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದರು ವಿನಯ್. ಆ ಬಳಿಕ ಪ್ರತಾಪ್ ಬಳಿ ತೆರಳಿ ಅವರಿಗೆ ಹಗ್ ಕೊಟ್ಟು, ‘ನನ್ನಿಂದ ಬೇಸರ ಆಗಿದ್ದರೆ ಕ್ಷಮೆ ಇರಲಿ. ನೀನು ಗೆದ್ದರೆ ನನಗೆ ಖುಷಿ ಆಗುತ್ತದೆ’ ಎಂದರು. ವಿನಯ್ ಕ್ಷಮೆ ಕೇಳಿದ್ದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿದರು.

ವಿನಯ್ ಕ್ಷಮೆ ಕೇಳಿದ್ದು ಪ್ರತಾಪ್​ಗೆ ಖುಷಿ ನೀಡಿತು. ‘ತಪ್ಪಿನ ಅರಿವಾಯಿತಲ್ಲ. ಅದು ಖುಷಿಯ ವಿಚಾರ. ನೀವು ಗೆದ್ದರೆ ನನಗೂ ಸಂತೋಷವೇ’ ಎಂದರು ಪ್ರತಾಪ್. ಜೊತೆಗೆ ನಾಲಿಗೆಗೆ ಲಗಾಮು ಹಾಕಿಕೊಳ್ಳಿ ಎಂದು ಪ್ರತಾಪ್ ಮನವಿ ಮಾಡಿಕೊಂಡರು. ಇದಕ್ಕೆ ವಿನಯ್ ಸಮ್ಮತಿ ಸೂಚಿಸಿದರು.

ಇದನ್ನೂ ಓದಿ: ‘ವಿನಯ್ ತುಂಬಾ ಕೆಳಗೆ ಹೋದ್ರು, ಪ್ರತಾಪ್ ಮೇಲೆ ಕಾಣಿಸಿದ್ರು’; ಅವಾಚ್ಯ ಶಬ್ದ ಬಳಕೆ ಬಗ್ಗೆ ಸಂತೋಷ್ ಮಾತು

ಫಿನಾಲೆ ಸಮೀಪಿಸಿದಾಗ ಎಡವದಂತೆ ಎಚ್ಚರಿಕೆ ವಹಿಸಬೇಕು. ಆದರೆ, ವಿನಯ್ ಗೌಡ ಅವರು ಅವಾಚ್ಯ ಶಬ್ದ ಬಳಕೆ ಮಾಡಿ ಮೈಲೇಜ್ ಕಳೆದುಕೊಂಡಿದ್ದಾರೆ. ಈ ವಾರ ಅವರು ನಾಮಿನೇಷನ್ ಲಿಸ್ಟ್​ನಲ್ಲಿ ಇದ್ದಾರೆ. ಅವರ ವೋಟ್ ಮೇಲೆ ಇದು ಪ್ರಭಾವ ಬೀರುವ ಸಾಧ್ಯತೆ ಇದೆ. ಈ ವಾರ ಕ್ಯಾಪ್ಟನ್ ಆಗಿರೋ ಸಂಗೀತಾ ಅವರು ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ. ಜೊತೆಗೆ ಅಧಿಕಾರ ಬಳಸಿಕೊಂಡು ಪ್ರತಾಪ್​ನ ಸೇವ್ ಮಾಡಿದ್ದಾರೆ. ಉಳಿದಂತೆ ವರ್ತೂರು ಸಂತೋಷ್, ತುಕಾಲಿ ಸಂತೋಷ್, ವಿನಯ್, ನಮ್ರತಾ, ತನಿಷಾ ಹಾಗೂ ಕಾರ್ತಿಕ್ ನಾಮಿನೇಟ್ ಆಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರ ಆಗುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್​ನ ಉಚಿತವಾಗಿ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ