
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಕಾಮನ್ ಮ್ಯಾನ್ಗಳ ಮೇಲೆ ಬಹುತೇಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಬಾಯಿ ಎತ್ತಿದರೆ ಇರಿಟೇಷನ್ ಮಾಡೋದು, ಜಗಳ ಆಡೋದನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಬಿಗ್ ಬಾಸ್ ಮನೆಯ ಒಳಗಿರುವ ಸ್ಪರ್ಧಿಗಳು ಕೂಡ ಅಸಮಧಾನ ಹೊರಹಾಕುತ್ತಿದ್ದಾರೆ. ಈ ನಡುವೆ ಕಾಮನ್ ಮ್ಯಾನ್ಗಳು ಬಿಗ್ ಬಾಸ್ಗೂ ಗೌರವ ನೀಡುತ್ತಿಲ್ಲ. ಈ ಬಗ್ಗೆ ಚರ್ಚೆ ಶುರುವಾಗಿದೆ.
ಬಿಗ್ ಬಾಸ್ ಅಲ್ಲಿ ಕಾಮನ್ ಮ್ಯಾನ್ಗಳಾದ ಮಂಜು, ಧನುಷ್, ಲಿಖಿತ್ ಹಾಗೂ ಕಿರಣ್ ಶಾಸ್ತ್ರಿ ಕಾಮನ್ ಮ್ಯಾನ್ಗಳ ಸಾಲಿನಲ್ಲಿ ಬಿಗ್ ಬಾಸ್ಗೆ ಬಂದಿದ್ದಾರೆ. ಇವರೆಲ್ಲರೂ ಅಗ್ನಿಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಕಾಮನ್ ಮ್ಯಾನ್ಗಳನ್ನು ಕರೆದುಕೊಂಡು ಬಂದ ಕಾರಣಕ್ಕೆ ಬಹುತೇಕರು ಬೇಸರಗೊಂಡಿದ್ದಾರೆ. ಈಗ ಅವರು ನಡೆದುಕೊಳ್ಳುತ್ತಿರುವ ರೀತಿ ಕೂಡ ಚರ್ಚೆ ಆಗುತ್ತಿದೆ.
ಇಲ್ಲಿ ಮುಖ್ಯವಾಗಿ ಆಗಿರೋ ಸಮಸ್ಯೆ ಎಂದರೆ ಅವರಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದೇ ಗೊತ್ತಿಲ್ಲದಿರುವುದು. ಹೌದು, ಕಾಮನ್ ಮ್ಯಾನ್ಗಳಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದೇ ತಿಳಿದಿಲ್ಲ. ಬಿಗ್ ಬಾಸ್ ಆದೇಶಕ್ಕೂ ಯಾರೂ ಗೌರವ ನೀಡುತ್ತಿಲ್ಲ. ಲೈಟ್ ಆಫ್ ಆಗೋ ಮೊದಲು ನಿದ್ದೆ ಮಾಡಬಾರದು ಎಂಬುದು ಬಿಗ್ ಬಾಸ್ ನಿಯಮ. ಆದರೆ, ಕಿರಣ್ ಶಾಸ್ತ್ರಿ ಹಾಗೂ ಲಿಖಿತ್ ನಿಯಮ ಬ್ರೇಕ್ ಮಾಡಿದ್ದಾರೆ. ಇದಕ್ಕೆ ಬಿಗ್ ಬಾಸ್ ಕಠಿಣ ಶಿಕ್ಷೆ ನೀಡಿದ್ದಾರೆ. ಇವರಿಬ್ಬರಿಗೆ ರಾತ್ರಿ ಮಲಗಲು ಬೆಡ್ ಇಲ್ಲ, ಬೆಡ್ಶೀಟ್ ಇಲ್ಲ, ತಲೆದಿಂಬೂ ಇಲ್ಲ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಇನ್ನೂ ಶುರುವಾಗಿಲ್ಲ ಈ ಸ್ಪರ್ಧಿಗಳ ಆಟ; ಹೀಗೆ ಆದ್ರೆ ಕಷ್ಟ ಇದೆ
ಇದನ್ನು ಕಿರಣ್ ಹಾಗೂ ಲಿಖಿತ್ ಮೊದಲ ದಿನ ಮಾತ್ರ ಪಾಲಿಸಿದರು. ಆ ಬಳಿಕ ಬಿಗ್ ಬಾಸ್ ಆದೇಶಕ್ಕೂ ಬೆಲೆ ಕೊಡದೆ ಧನುಷ್ ಅವರ ಬೆಡ್ಮೇಲೆ ಬೆಡ್ಶೀಟ್ ಹೊದ್ದು ಮಲಗಿದ್ದಾರೆ. ಇದಕ್ಕೆ ಕಠಿಣ ಶಿಕ್ಷೆ ಆಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ವೀಕೆಂಡ್ನಲ್ಲಿ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.