
‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಆರಂಭಕ್ಕ ಮೊದಲು ಅಗ್ನಿಪರೀಕ್ಷೆ ಹೆಸರಲ್ಲಿ ಶೋ ನಡೆಯಿತು. 60 ಜನ ಸಾಮಾನ್ಯ ಸ್ಪರ್ಧಿಗಳ ಪೈಕಿ ನಾಲ್ವರನ್ನು ಆಯ್ಕೆ ಮಾಡಿ ಬಿಗ್ ಬಾಸ್ ಮನೆಗೆ ಕಳುಹಿಸಲಾಯಿತು. ಈಗ ಜನ ಸಾಮಾನ್ಯರು ನಡೆದುಕೊಳ್ಳುತ್ತಿರುವ ರೀತಿ ಇಡೀ ಮನೆಯನ್ನು ಅಶಾಂತಿಗೆ ತಳ್ಳಿದೆ. ಅಷ್ಟೇ ಅಲ್ಲ ವೀಕ್ಷಕರು ಕೂಡ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಬಗ್ಗೆ ವೀಕೆಂಡ್ನಲ್ಲಿ ಕ್ಲಾಸ್ ಫಿಕ್ಸ್ ಅನ್ನೋದು ಮಾಡರ್ನ್ ಮಹಾಕವಿ ಮಂಜುಗೆ ಮನದಟ್ಟಾಗಿದೆ.
ಮಂಜು ಅವರು ಬಿಗ್ ಬಾಸ್ ಮನೆಯಲ್ಲಿ ಅತಿ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ. ನಾಲಿಗೆಯ ಮೇಲೆ ಅವರಿಗೆ ಲಿಮಿಟ್ ಇಲ್ಲ. ಎಲ್ಲರನ್ನೂ ಟ್ರಿಗರ್ ಮಾಡೋದೆ ಅವರ ಉದ್ದೇಶ. ಯಾರಾದರೂ ಸ್ವಲ್ಪವೇ ಕೆರಳಿದರೂ ಅವರನ್ನು ಟಾರ್ಗೆಟ್ ಮಾಡಿ ಮತ್ತಷ್ಟು ಕೆರಳಿಸುತ್ತಾರೆ. ಈ ವಾರವಿಡೀ ಅವರು ಸಾಕಷ್ಟು ತಪ್ಪುಗಳನ್ನು ಮಾಡಿದ್ದಾರೆ.
ಸೌಂದರ್ಯಾ ಅವರ ಕ್ಯಾರೆಕ್ಟರ್ ಬಗ್ಗೆ ಮಂಜು ಕೆಟ್ಟದಾಗಿ ಮಾತನಾಡಿದ್ದರು. ಇದಕ್ಕೆ ಕ್ಷಮೆ ಕೇಳಲು ಅವರು ರೆಡಿ ಇಲ್ಲ. ‘ನಾನು ನೋಡಿದ್ದನ್ನು ಹೇಳುತ್ತಿದ್ದೇನೆ ಅಷ್ಟೇ’ ಎಂದು ಸಾಧಿಸಿದರೇ ಹೊರತು ಸೌಂದರ್ಯಾ ಬಳಿ ಕ್ಷಮೆ ಕೇಳಿಲ್ಲ. ಇದರಿಂದ ಸೌಂದರ್ಯಾ ಅವರು ಸಾಕಷ್ಟು ಕಣ್ಣೀರು ಹಾಕಿದರು.
ಇದನ್ನೂ ಓದಿ: ಕಾಮನ್ ಮ್ಯಾನ್ ಆಟಕ್ಕೆ ಬೇಸತ್ತ ಜನಸಾಮಾನ್ಯರು; ಕಿಚ್ಚನ ಎಂಟ್ರಿಗೆ ಕಾದ ವೀಕ್ಷಕರು
ಇನ್ನು, ಬಿಗ್ ಬಾಸ್ ಮನೆಯಲ್ಲಿ ನಡೆದ ಹಾಲು ಹಾಗೂ ಮೊಟ್ಟೆ ಕಳ್ಳತನದ ವಿಷಯದಲ್ಲಿ ಮಂಜು ಅವರದ್ದು ಸಿಂಹಪಾಲು. ಈ ರೀತಿ ಕದ್ದಿದ್ದೂ ಅಲ್ಲದೆ, ತಮ್ಮನ್ನು ತಾವು ಸಮರ್ಥನೆ ಮಾಡಿಕೊಂಡಿದ್ದಾರೆ. ಅವಿನಾಶ್ ಅವರನ್ನು ಕೆರಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಅವರಿಗೆ ವೀಕೆಂಡ್ನಲ್ಲಿ ಕ್ಲಾಸ್ ಫಿಕ್ಸ್ ಅನ್ನೋದು ಸ್ಪಷ್ಟವಾಗಿದೆ. ಈ ಬಗ್ಗೆ ಸ್ವತಃ ಮಂಜು ಅವರಿಗೂ ಅನಿಸಿದೆ. ‘ವೀಕೆಂಡ್ನಲ್ಲಿ ನಾನು ಧ್ವಂಸ ಆಗೋದು ಫಿಕ್ಸ್’ ಎಂದು ಅವರು ಹೇಳಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.