ಬಿಗ್​ಬಾಸ್ ಮುಂದೆ ಕಣ್ಣೀರು ಹಾಕಿದ ವಿನಯ್

|

Updated on: Nov 28, 2023 | 11:32 PM

Vinay Gowda: ಬಿಗ್​ಬಾಸ್ ಮನೆಯ ಅತ್ಯಂತ ಗಟ್ಟಿ ಸ್ಪರ್ಧಿ, ಆನೆ ಎಂದೆಲ್ಲ ಕರೆಸಿಕೊಂಡಿರುವ ವಿನಯ್ ಗೌಡ, ಬಿಗ್​ಬಾಸ್ ಮುಂದೆ ಕಣ್ಣೀರು ಹಾಕಿದ್ದಾರೆ.

ಬಿಗ್​ಬಾಸ್ ಮುಂದೆ ಕಣ್ಣೀರು ಹಾಕಿದ ವಿನಯ್
ವಿನಯ್ ಗೌಡ
Follow us on

ಬಿಗ್​ಬಾಸ್ (Bigg Boss) ಮನೆಯಲ್ಲಿ ವಿನಯ್ ಅತ್ಯಂತ ಗಟ್ಟಿ ಸ್ಪರ್ಧಿ ಎಂದು ಆರಂಭದಿಂದಲೂ ನಿರೂಪಿಸಿಕೊಳ್ಳುತ್ತಲೇ ಬಂದಿದ್ದಾರೆ. ಬಹಳ ಅಗ್ರೆಸ್ಸಿವ್ ಆಗಿ ಆಟವಾಡುವುದಾಗಲಿ, ತಮ್ಮ ಅಭಿಪ್ರಾಯಗಳನ್ನು ಗಟ್ಟಿಯಾಗಿ ಹೇಳುವುದು, ಮನೆಯ ಇತರೆ ಸದಸ್ಯರ ಮೇಲೆ ಪ್ರಭಾವ ಬೀರುವುದಾಗಲಿ ಮಾಡುತ್ತಲೇ ಬಂದಿದ್ದಾರೆ. ಟಾಸ್ಕ್​ಗಳಲ್ಲಿ ಸಹ ಹಲವು ಬಾರಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಗಟ್ಟಿ ಮನೋಬಲವನ್ನು ಸಹ ಹೊಂದಿದ್ದಾರೆ. ಆದರೆ ಮಂಗಳವಾರ ಪ್ರಸಾರವಾದ ಎಪಿಸೋಡ್​ನಲ್ಲಿ ಮಾತ್ರ ವಿನಯ್ ಕಣ್ಣೀರು ಹಾಕಿದ್ದಾರೆ.

ಮನೆಗೆ ಇಬ್ಬರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದಿದ್ದಾರೆ. ಅವರಲ್ಲಿ ಒಬ್ಬರಾದ ಪವಿ ಪೂವಪ್ಪ ಅವರು ಸ್ನೇಹಿತ್, ವಿನಯ್ ಹಾಗೂ ಇತತರೊಟ್ಟಿಗೆ ಮಾತನಾಡುತ್ತಿದ್ದರು. ಈ ವೇಳೆ ಸ್ನೇಹಿತ್, ಬಿಗ್​ಬಾಸ್ ಮನೆಯ ಸ್ಪರ್ಧಿಗಳ ಬಗ್ಗೆ ಹೊರಗೆ ಯಾವ ರೀತಿಯ ಅಭಿಪ್ರಾಯವಿದೆ ಎಂದು ಪವಿ ಅವರನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ಭಾರಿ ಸದ್ದು ಮನೆಯ ಘಟನೆ ಯಾವುದು ಎಂದು ಸ್ನೇಹಿತ್ ಕೇಳಿದಾಗ, ಪವಿ, ಬಳೆಯ ಎಪಿಸೋಡ್ ಭಾರಿ ಸದ್ದು ಮಾಡಿತು ಎಂದರು. ಆ ವಿಷಯ ಸೋಷಿಯಲ್ ಮೀಡಿಯಾಗಳಲ್ಲಿ ಬಹಳ ಚರ್ಚೆಯಾಯಿತು ಎಂದು ಸಹ ಹೇಳಿದರು.

ಪವಿ ಅದನ್ನು ವಿವರವಾಗಿ, ವಿನಯ್​ರ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ ವಿಷಯವನ್ನು ಸಹ ವಿನಯ್ ಬಳಿ ಹೇಳಿದರು ಆದರೆ ಅದನ್ನು ಇಂದಿನ ಎಪಿಸೋಡ್​ನಲ್ಲಿ ತೋರಿಸಲಿಲ್ಲ. ಆದರೆ ಈ ವಿಷಯ ಕೇಳಿ ವಿನಯ್ ಬಹಳ ಬೇಸರಗೊಂಡರು. ಚೇಂಜಿಂಗ್​ ರೂಂಗೆ ಹೋಗಿ ಕಣ್ಣೀರು ಹಾಕಿದರು. ಅದಾದ ಬಳಿಕ ಸೀಕ್ರೆಟ್ ರೂಂಗೆ ಬಂದು ಬಿಗ್​ಬಾಸ್ ಬಳಿ ತಮ್ಮ ಕುಟುಂಬದ ಯೋಗಕ್ಷೇಮ ವಿಚಾರಿಸಿ ಕಣ್ಣೀರು ಹಾಕಿದರು. ನನ್ನನ್ನು ಕೆಟ್ಟವನು ಅಂದುಕೊಳ್ಳಲಿ ಪರವಾಗಿಲ್ಲ ಆದರೆ ನನ್ನಿಂದ ನನ್ನ ಕುಟುಂಬಕ್ಕೆ ಏನೂ ಆಗಬಾರದು, ನಾನು ಬಾಯಿತಪ್ಪಿ ಆಡಿದ ಮಾತು ಅದಾಗಿತ್ತು ಎಂದು ಕೇಳಿಕೊಂಡರು.

ಇದನ್ನೂ ಓದಿ:ಬಿಗ್​ಬಾಸ್ ಏಳನೇ ವಾರದಲ್ಲಿ ಯಾರಿಗೆ ಹೆಚ್ಚು ಮತ? ಸಂಗೀತಾಗೆ ಎಷ್ಟನೇ ಸ್ಥಾನ?

ವಿನಯ್ ಅವರನ್ನು ಸಮಾಧಾನದಿಂದ ಇರುವಂತೆ ಹೇಳಿದ ಬಿಗ್​ಬಾಸ್, ನೀವು ನಿಮ್ಮ ಕುಟುಂಬವನ್ನು ಎಷ್ಟು ಪ್ರೀತಿಸುತ್ತೀರಿ ಎಂಬುದು ನಮಗೆ ಅರಿವಿದೆ. ಅವರು ಕ್ಷೇಮದಿಂದಲೇ ಇದ್ದಾರೆ. ಅರ್ಥವಿಲ್ಲದ ಮಾತುಗಳಿಗೆ ನೀವು ಕಿವಿಗೊಡಬೇಡಿ, ಅದನ್ನು ನಿಜವೆಂದು ಸಹ ನಂಬಬೇಡಿ ಎಂದು ಬಿಗ್​ಬಾಸ್ ಬುದ್ಧಿ ಹೇಳಿದರು. ಬಿಗ್​ಬಾಸ್ ಮಾತಿನಿಂದ ಧೈರ್ಯ ತಂದುಕೊಂಡ ವಿನಯ್, ನಾನು 100% ಪರಿಶ್ರಮ ಹಾಕಿ ಆಟ ಆಡುತ್ತೀನಿ ಬಿಗ್​ಬಾಸ್ ಎಂದು ಹೇಳಿ ಸೀಕ್ರೆಟ್ ರೂಂನಿಂದ ಹೊರಗೆ ಹೋದರು.

ಸಂಗೀತಾ-ಕಾರ್ತಿಕ್ ಹಾಗೂ ವಿನಯ್ ನಡುವೆ ಟಾಸ್ಕ್ ವಿಷಯಕ್ಕೆ ಜಗಳ ಬಂದಾಗ ವಿನಯ್ ಅತಿರೇಕದ ವರ್ತನೆ ತೋರಿದ್ದರು. ಬಳೆಗಳ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದ್ದರು. ವಿನಯ್​ರ ಅತಿರೇಕದ ವರ್ತನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಜನ ಹೀಗಳೆದಿದ್ದರು. ಆ ವೇಳೆ ವಿನಯ್​ರ ಪತ್ನಿಗೂ ಸಾಮಾಜಿಕ ಜಾಲತಾಣದಲ್ಲಿ ಎಂಥಹಾ ಕೆಟ್ಟ ಪತಿಯೊಟ್ಟಿಗೆ ಇದ್ದೀರ ಇತ್ಯಾದಿ ನಿಂದನೆಗಳನ್ನು, ಬೆದರಿಕೆಗಳನ್ನು ಹಾಕಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ