AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಗೆದ್ದ ಟಿವಿ ನಟಿ ಅನುಮೋಲ್, ಸಿಕ್ಕ ಬಹುಮಾನವೆಷ್ಟು?

Bigg Boss Malayalam: ಬಿಗ್​​ಬಾಸ್ ಶೋನಲ್ಲಿ ಮಲಯಾಳಂ ಟಿವಿ ನಟಿ ಅನುಮೋಲ್ ಅವರು ವಿಜೇತರಾಗಿದ್ದಾರೆ. ಸಾಮಾನ್ಯರಾಗಿ ಬಿಗ್​​ಬಾಸ್ ಮನೆಗೆ ಎಂಟ್ರಿ ನೀಡಿದ್ದ ಅನೀಶ್ ತಾರಾಯಿಲ್ ಅವರು ರನ್ನರ್ ಅಪ್ ಎನಿಸಿಕೊಂಡಿದ್ದಾರೆ. ಬಿಗ್​​ಬಾಸ್ ಶೋ ಗೆದ್ದ ಅನುಮೋಲ್​​ಗೆ ಭರ್ಜರಿ ನಗದು ಬಹುಮಾನ ಹಾಗೂ ದುಬಾರಿ ಉಡುಗೊರೆಗಳು ದೊರೆತಿವೆ. ವಿಜೇತರಿಗೆ ಸಿಕ್ಕ ನಗದು ಬಹುಮಾನ ಎಷ್ಟು?

ಬಿಗ್​​ಬಾಸ್ ಗೆದ್ದ ಟಿವಿ ನಟಿ ಅನುಮೋಲ್, ಸಿಕ್ಕ ಬಹುಮಾನವೆಷ್ಟು?
Anumol
ಮಂಜುನಾಥ ಸಿ.
|

Updated on: Nov 11, 2025 | 5:20 PM

Share

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಇನ್ನೂ ಚಾಲ್ತಿಯಲ್ಲಿದೆ. ಶೋ ಶುರುವಾಗಿ ಕೆಲವೇ ವಾರಗಳಷ್ಟೆ ಆಗಿದೆ. ಆದರೆ ನೆರೆಯ ಮಲಯಾಳಂನಲ್ಲಿ ಬಿಗ್​​ಬಾಸ್ ಶೋ ನಿನ್ನೆಯಷ್ಟೆ ಮುಕ್ತಾಯವಾಗಿದೆ. ಬಿಗ್​​ಬಾಸ್ ಶೋನಲ್ಲಿ ಮಲಯಾಳಂ ಟಿವಿ ನಟಿ ಅನುಮೋಲ್ ಅವರು ವಿಜೇತರಾಗಿದ್ದಾರೆ. ಸಾಮಾನ್ಯರಾಗಿ ಬಿಗ್​​ಬಾಸ್ ಮನೆಗೆ ಎಂಟ್ರಿ ನೀಡಿದ್ದ ಅನೀಶ್ ತಾರಾಯಿಲ್ ಅವರು ರನ್ನರ್ ಅಪ್ ಎನಿಸಿಕೊಂಡಿದ್ದಾರೆ. ಬಿಗ್​​ಬಾಸ್ ಶೋ ಗೆದ್ದ ಅನುಮೋಲ್​​ಗೆ ಭರ್ಜರಿ ನಗದು ಬಹುಮಾನ ಹಾಗೂ ದುಬಾರಿ ಉಡುಗೊರೆಗಳು ದೊರೆತಿವೆ.

ಬಿಗ್​​ಬಾಸ್ ಮಲಯಾಳಂ ವಿಜೇತರಾದ ಅನುಮೋಲ್ ಅವರಿಗೆ 42.55 ಲಕ್ಷ ರೂಪಾಯಿ ನಗದನ್ನು ಬಹುಮಾನವಾಗಿ ನೀಡಲಾಯ್ತು. ಅಸಲಿಗೆ ಶೋನ ಒಟ್ಟು ಬಹುಮಾನದ ಮೊತ್ತ 50 ಲಕ್ಷ ರೂಪಾಯಿಗಳಾಗಿತ್ತು, ಆದರೆ ಬಿಗ್ ಬ್ಯಾಂಕ್ ಟಾಸ್ಕ್​​ನ ವೇಳೆ 7.50 ಲಕ್ಷ ಮೊತ್ತವನ್ನು ಇತರೆ ಸ್ಪರ್ಧಿಗಳಿಗೆ ಹಂಚಲಾಯ್ತು. ಹಾಗಾಗಿ ವಿಜೇತರಿಗೆ 42.55 ಲಕ್ಷ ರೂಪಾಯಿಗಳು ಮಾತ್ರವೇ ದೊರಕಿದವು. ನಗದು ಬಹುಮಾನ ಮಾತ್ರವೇ ಅಲ್ಲದೆ ಹೊಚ್ಚ ಹೊಸ ಎಸ್​​ಯುವಿ ಕಾರೊಂದನ್ನು ಸಹ ಬಹುಮಾನವಾಗಿ ನಟಿ ಅನುಮೋಲ್ ಅವರಿಗೆ ನೀಡಲಾಯ್ತು.

ಇಡೀ ಸೀಸನ್​​ನಲ್ಲಿ ಅದ್ಭುತವಾಗಿ ಆಡಿದ್ದ, ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಸ್ಪರ್ಧಿ ಅನೀಶ್ ರನ್ನರ್ ಅಪ್ ಆದರು. ಅನೀಶ್, ಸಾಮಾನ್ಯರಾಗಿ ಬಿಗ್​​ಬಾಸ್ ಮನೆ ಪ್ರವೇಶಿಸಿದ್ದರು. ಆದರೆ ಬಿಗ್​ಬಾಸ್ ಮನೆಯಲ್ಲಿ ಅದ್ಭುತವಾಗಿ ಅವರು ಆಟವಾಡಿದರು. ಅವರ ಹಾಗೂ ಅನುಮೋಲ್ ನಡುವೆ ಮೊದಲ ಸ್ಥಾನಕ್ಕೆ ಪೈಪೋಟಿ ಶುರುವಾಗಿತ್ತು. ಅಂತಿಮವಾಗಿ ನಟಿ ಅನುಮೋಲ್ ವಿಜೇತರಾದರು.

ಇದನ್ನೂ ಓದಿ:ಎಲ್ಲಾ ಸ್ಪರ್ಧಿಗಳು ಹೊರಕ್ಕೆ: ಖಾಲಿ ಖಾಲಿಯಾಗಿರುವ ಬಿಗ್‌ಬಾಸ್‌ ಮನೆ ಹೇಗಿದೆ ನೋಡಿ

ಅನುಮೋಲ್, ಮಲಯಾಳಂ ಜನಪ್ರಿಯ ಟಿವಿ ತಾರೆಯರಲ್ಲಿ ಒಬ್ಬರಾಗಿದ್ದಾರೆ. ಕೆಲವಾರು ಸಿನಿಮಾಗಳಲ್ಲಿಯೂ ಅನುಮೋಲ್ ನಟಿಸಿದ್ದಾರೆ. 29 ವರ್ಷ ವಯಸ್ಸಿನ ಅನುಮೋಲ್ ಅವರು ಸೋಷಿಯಲ್ ಮೀಡಿಯಾ ಇನ್​​ಫ್ಲಯೆನ್ಸರ್ ಸಹ ಆಗಿದ್ದು, ಅಲ್ಲಿಯೂ ಸಹ ಅವರಿಗೆ ದೊಡ್ಡ ಸಂಖ್ಯೆಯ ಫಾಲೋವರ್​​ಗಳು ಇದ್ದಾರೆ.

ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ಅನುಮೋಲ್, ‘ನನಗೆ ಆ ಕ್ಷಣದಲ್ಲಿ ಬ್ಲಾಂಕ್ ಆದಂತೆ ಅನ್ನಿಸಿತು. ನನಗೆ ಇದು ನಿಜವೇನಾ ಅನ್ನಿಸಿತು. ಈ ಗೆಲುವಿಗೆ ನಾನು ದೇವರಿಗೆ, ಅಭಿಮಾನಿಗಳಿಗೆ ಮತ್ತು ನನ್ನ ಕುಟುಂಬದವರಿಗೆ ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್