AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾರ್ಥಿಗಳ ವಿರುದ್ಧ ತಿರುಗಿ ಬಿದ್ದ ಮನೆ ಮಂದಿ, ಹೀರೋ ಆದ ಸೂರಜ್

Bigg Boss Kannada season 12: ಬಿಗ್​​ಬಾಸ್ ಮನೆಯಲ್ಲಿ ಕ್ಯಾಪ್ಟೆನ್ಸಿ ಟಾಸ್ಕ್ ನಡೆಯುತ್ತಿದ್ದು, ಟಾಸ್ಕ್​​ಗೆ ಬಿಗ್​​ಬಾಸ್ ಸಖತ್ ಟ್ವಿಸ್ಟ್ ಕೊಟ್ಟರು. ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ವಿಶೇಷ ಆಫರ್ ನೀಡಿದರು. ಆದರೆ ಆಫರ್ ಸ್ವೀಕರಿಸಿದ ಇಬ್ಬರು ಸ್ಪರ್ಧಿಗಳು ವಿಲನ್ ಆದರೆ, ಆಫರ್ ನಿರಾಕರಿಸಿದ ಸೂರಜ್ ಹೀರೋ ಎನಿಸಿಕೊಂಡರು.

ಸ್ವಾರ್ಥಿಗಳ ವಿರುದ್ಧ ತಿರುಗಿ ಬಿದ್ದ ಮನೆ ಮಂದಿ, ಹೀರೋ ಆದ ಸೂರಜ್
Bigg Boss Kannada
ಮಂಜುನಾಥ ಸಿ.
|

Updated on: Oct 23, 2025 | 11:01 PM

Share

ಬಿಗ್​​ಬಾಸ್ (Bigg Boss) ಮನೆಯಲ್ಲಿ ಕ್ಯಾಪ್ಟೆನ್ಸಿ ಟಾಸ್ಕ್ ನಡೆಯುತ್ತಿದೆ. ಬಿಗ್​​ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಯ್ಕೆ ಮಾಡಲು ಬಿಗ್​​ಬಾಸ್ ನಿನ್ನೆಯೇ ಒಂದು ಟಾಸ್ಕ್ ಆರಂಭಿಸಿದ್ದರು, ಅದುವೇ ನಾಣ್ಯಗಳ ಸುರಿಮಳೆ. ಮನೆಯ ಸದಸ್ಯರನ್ನು ಮೂರು ತಂಡಗಳನ್ನಾಗಿ ಮಾಡಿ, ವಿವಿಧ ಮುಖಬೆಲೆಯ ನಕಲಿ ನಾಣ್ಯಗಳನ್ನು ಬಿಗ್​​ಬಾಸ್ ಸುರಿಸಿದ್ದರು. ಯಾರು ಹೆಚ್ಚು ನಾಣ್ಯಗಳನ್ನು ಟಾಸ್ಕ್​​ನ ಅಂತ್ಯಕ್ಕೆ ಹೊಂದಿರುತ್ತಾರೆಯೋ ಆ ತಂಡ ಕ್ಯಾಪ್ಟೆನ್ಸಿ ಓಟದ ಫೈನಲ್ ಟಾಸ್ಕ್​​ಗೆ ಆಯ್ಕೆ ಆಗುತ್ತಾರೆ ಎಂಬುದು ನಿಯಮ.

ಆದರೆ ಗುರುವಾರದ ಎಪಿಸೋಡ್​​ನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಸೂರಜ್, ರಿಶಾ ಮತ್ತು ರಘು ಅವರನ್ನು ಕನ್ಫೆಷನ್ ರೂಂಗೆ ಕರೆಸಿ ಮೂವರಿಗೂ ಸಹ ವಿಶೇಷ ಆಫರ್ ಅನ್ನು ನೀಡಿದರು. ಮೂವರಿಗೂ ವಿಶೇಷ ನಾಣ್ಯ ನೀಡಿ, ಆ ನಾಣ್ಯವನ್ನು ತೆಗೆದುಕೊಂಡವರು ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್​​ಗೆ ಆಯ್ಕೆ ಆಗುತ್ತಾರೆ. ಆದರೆ ಅವರ ತಂಡ ಕ್ಯಾಪ್ಟೆನ್ಸಿ ಟಾಸ್ಕ್​​ನಿಂದ ಹೊರಗೆ ಉಳಿಯುತ್ತದೆ ಎಂಬ ನಿಯಮ ಹಾಕಿದರು. ಆ ಆಫರ್ ಅನ್ನು ರಘು ಮತ್ತು ರಿಶಾ ಪಡೆದುಕೊಂಡರು. ಆದರೆ ಸೂರಜ್ ತೆಗೆದುಕೊಳ್ಳಲಿಲ್ಲ. ಬದಲಿಗೆ ನನ್ನ ತಂಡದ ಜೊತೆಗೆ ಆಡುತ್ತೇನೆ, ಗೆದ್ದು ಎಲ್ಲರೂ ಟಾಸ್ಕ್​ಗೆ ಆಯ್ಕೆ ಆಗುತ್ತೇವೆ ಎಂದರು.

ಆದರೆ ಸೀಕ್ರೆಟ್​​ ರೂಂನಲ್ಲಿ ನಡೆದಿದ್ದೆಲ್ಲವನ್ನೂ ಹೊರಗೆ ಸ್ಪರ್ಧಿಗಳು ನೋಡಿಬಿಟ್ಟರು. ತಮ್ಮ ತಂಡವನ್ನು ಕ್ಯಾಪ್ಟನ್ಸಿ ಟಾಸ್ಕ್​​ನಿಂದ ಹೊರಗೆ ಹಾಕಿದ ರಘು ಮತ್ತು ರಿಶಾ ಅವರಿಗೆ ಎಲ್ಲರೂ ಸೇರಿ ಕ್ಲಾಸ್ ತೆಗೆದುಕೊಂಡರು. ರಿಶಾ ಹಾಗೂ ರಘು ಮೇಲೆ ಇಡೀ ಮನೆಯೇ ಮುಗಿಬಿತ್ತು. ಧನುಶ್ ಅವರು ರಘು ಅವರನ್ನು ಸ್ವಾರ್ಥಿ ಎಂದು ಬೈದರೆ, ಜಾನ್ವಿ, ರಿಶಾ ಅನ್ನು ಛತ್ರಿ ಎಂದು ಕರೆದರು. ಮನೆ ಮಂದಿ ಎಲ್ಲ ಸೇರಿ ಇಬ್ಬರನ್ನೂ ಸ್ವಾರ್ಥಿಗಳೆಂದು ಕರೆದು ಛೀಮಾರಿ ಹಾಕಿದರು.

ಇದನ್ನೂ ಓದಿ:ಎಲ್ಲಾ ಸ್ಪರ್ಧಿಗಳು ಹೊರಕ್ಕೆ: ಖಾಲಿ ಖಾಲಿಯಾಗಿರುವ ಬಿಗ್‌ಬಾಸ್‌ ಮನೆ ಹೇಗಿದೆ ನೋಡಿ

ಆದರೆ ತಮ್ಮ ತಂಡವನ್ನು ಬಿಟ್ಟುಕೊಡದ ಸೂರಜ್ ಹೀರೋ ಆದರು. ಎಲ್ಲರೂ ಸಹ ಸೂರಜ್ ಅವರನ್ನು ಅಭಿನಂದಿಸಿದರು. ಅಂತಿಮವಾಗಿ ನಾಣ್ಯಗಳ ಟಾಸ್ಕ್ ಮುಗಿದಾಗ ಸೂರಜ್ ತಂಡ ಸೋತು, ಸೂರಜ್ ಅವರು ಕ್ಯಾಪ್ಟೆನ್ಸಿ ಟಾಸ್ಕ್​​ಗೆ ಆಯ್ಕೆ ಆಗಲಿಲ್ಲ. ರಘು ಅವರ ತಂಡ ಗೆದ್ದಿತಾದರೂ ರಘು, ಆಫರ್ ಸ್ವೀಕಾರ ಮಾಡಿದ್ದರಿಂದ ಅವರ ತಂಡ, ಕ್ಯಾಪ್ಟೆನ್ಸಿ ಟಾಸ್ಕ್​​ಗೆ ಹೋಗಲಿಲ್ಲ. ಅತ್ಯಂತ ಕಡಿಮೆ ನಾಣ್ಯಗಳನ್ನು ಸಂಗ್ರಹಿಸಿದ್ದ ರಿಶಾ ಸಹ ಕ್ಯಾಪ್ಟೆನ್ಸಿ ಟಾಸ್ಕ್​​ಗೆ ಆಯ್ಕೆ ಆದರು. ಈಗ ರಘು ಮತ್ತು ರಿಶಾ ಮಾತ್ರವೇ ಕ್ಯಾಪ್ಟೆನ್ಸಿ ಫೈನಲ್ ಟಾಸ್ಕ್​​​ನಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ