ಬಿಗ್​ ಬಾಸ್​ ವಿನ್ನರ್​ ಪಲ್ಲವಿ ಪ್ರಶಾಂತ್​ ತಲೆ ಮರೆಸಿಕೊಂಡ್ರಾ? ಕೇಸ್​ ಹಾಕಿದ ಬಳಿಕ ಸಿಕ್ತು ಸ್ಪಷ್ಟನೆ

|

Updated on: Dec 20, 2023 | 6:22 PM

ಪಲ್ಲವಿ ಪ್ರಶಾಂತ್​ ಅವರ ಬೆಂಬಲಿಗರು ಬಿಗ್​ ಬಾಸ್​ ನಡೆಯುತ್ತಿದ್ದ ಸ್ಟುಡಿಯೋ ಎದುರು ಜಮಾಯಿಸಿದ್ದರು. ಕೆಲವು ಕಾರುಗಳಿಗೆ ಹಾನಿ ಮಾಡಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ ಕಿಡಿಗೇಡಿಗಳನ್ನು ಗುರುತಿಸಲಾಗಿದೆ. ಪೊಲೀಸರು ವಿಚಾರಣೆಗಾಗಿ ಪಲ್ಲವಿ ಪ್ರಶಾಂತ್​ ಅವರ ಮನೆಗೆ ಭೇಟಿ ನೀಡಿದಾಗ ಅಲ್ಲಿ ಅವರು ಇರಲಿಲ್ಲ.

ಬಿಗ್​ ಬಾಸ್​ ವಿನ್ನರ್​ ಪಲ್ಲವಿ ಪ್ರಶಾಂತ್​ ತಲೆ ಮರೆಸಿಕೊಂಡ್ರಾ? ಕೇಸ್​ ಹಾಕಿದ ಬಳಿಕ ಸಿಕ್ತು ಸ್ಪಷ್ಟನೆ
ಪಲ್ಲವಿ ಪ್ರಶಾಂತ್​
Follow us on

ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ವಿವಾದಗಳು ಸಹಜ. ಆದರೆ ಈ ಶೋ ಮುಗಿದ ನಂತರವೂ ವಿವಾದ ಮುಂದುವರಿಯುವುದು ವಿಪರ್ಯಾಸ. ‘ಬಿಗ್​ ಬಾಸ್​ ತೆಲುಗು ಸೀಸನ್​ 7’ (Bigg Boss Telugu 7) ರಿಯಾಲಿಟಿ ಶೋ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ಈ ಕಾರ್ಯಕ್ರಮದ ಫಿನಾಲೆಯಲ್ಲಿ ಪಲ್ಲವಿ ಪ್ರಶಾಂತ್​ (Pallavi Prashanth) ಅವರು ಟ್ರೋಫಿ ಎತ್ತಿದ್ದಾರೆ. ವಿನ್​ ಆದ ಬಳಿಕ ಅವರ ಮೇಲೆ ಒಂದಷ್ಟು ಆರೋಪಗಳು ಎದುರಾಗಿವೆ. ಆ ನಂತರ ಅವರು ತಲೆ ಮರೆಸಿಕೊಂಡಿದ್ದಾರೆ ಎಂಬ ಸುದ್ದಿ ಹರಡಿತ್ತು. ಅದಕ್ಕೆ ಈಗ ಅವರೇ ಒಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಪ್ರತಿ ಬಾರಿಯೂ ಬಿಗ್​ ಬಾಸ್​ ಶೋನಲ್ಲಿ ವಿನ್ನರ್​ ಹೆಸರು ಅನೌನ್ಸ್​ ಆದ ಬಳಿಕ ಕೆಲವರು ಅಸಮಾಧಾನ ಹೊರಹಾಕುತ್ತಾರೆ. ತಮಗೆ ಬೇಕಾದ ಸ್ಪರ್ಧಿ ಗೆಲ್ಲಲಿಲ್ಲ ಎಂದು ಒಂದಷ್ಟು ಮಂದಿ ಕೂಗಾಡುತ್ತಾರೆ. ಹೀಗೆ ಪರ-ವಿರೋಧದ ಚರ್ಚೆ ನಡೆಯುತ್ತದೆ. ಈ ಬಾರಿಯ ತೆಲುಗು ಬಿಗ್​ ಬಾಸ್​ ಮುಗಿದ ಬಳಿಕ ಕೆಲವು ಕಿಡಿಗೇಡಿಗಳು ದಾಂಧಲೆ ನಡೆಸಿದ್ದಾರೆ. ಆ ಬಳಿಕ ಬಿಗ್​ ಬಾಸ್​ ವಿನ್ನರ್​ ಪಲ್ಲವಿ ಪ್ರಶಾಂತ್​ ಮತ್ತು ಅವರ ಬೆಂಬಲಿಗರ ವಿರುದ್ಧ ಕೇಸ್​ ದಾಖಲಾಗಿದೆ.

ಪಲ್ಲವಿ ಪ್ರಶಾಂತ್​ ಅವರ ಬೆಂಬಲಿಗರು ಬಿಗ್​ ಬಾಸ್​ ನಡೆಯುತ್ತಿದ್ದ ಸ್ಟುಡಿಯೋ ಎದುರು ಜಮಾಯಿಸಿದ್ದರು. ಕೆಲವು ಕಾರುಗಳಿಗೆ ಹಾನಿ ಮಾಡಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ ಕಿಡಿಗೇಡಿಗಳನ್ನು ಗುರುತಿಸಲಾಗಿದೆ. ಪೊಲೀಸರು ವಿಚಾರಣೆಗಾಗಿ ಪಲ್ಲವಿ ಪ್ರಶಾಂತ್​ ಅವರ ಮನೆಗೆ ಭೇಟಿ ನೀಡಿದಾಗ ಅಲ್ಲಿ ಅವರು ಇರಲಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ತಲೆ ಮರೆಸಿಕೊಂಡಿದ್ದಾರೆ ಎಂಬ ಸುದ್ದಿ ಹರಡಿದೆ.

ಇದನ್ನೂ ಓದಿ: ತೆಲುಗು ಬಿಗ್​ಬಾಸ್ ಗೆದ್ದ ಪಲ್ಲವಿ ಪ್ರಶಾಂತ್ ಯಾರು?

ಕೇಸ್​ ಬಿದ್ದ ಬಳಿಕ ಪಲ್ಲವಿ ಪ್ರಶಾಂತ್​ ಅವರ ಫೋನ್​ ಆಫ್​ ಆಗಿದೆ. ಇದಕ್ಕೆ ಕಾರಣ ಏನು ಎಂದು ಅವರು ತಿಳಿಸಿದ್ದಾರೆ. ‘ನಿನ್ನೆಯಿಂದ ನಾನು ಮನೆಯಲ್ಲೇ ಇದ್ದೆ. ಎಲ್ಲಿಯೂ ತಲೆ ಮರೆಸಿಕೊಂಡಿಲ್ಲ. ಫೋನ್​ ಹಾಳಾಗಿದ್ದರಿಂದ ಸ್ವಿಚ್​ ಆಫ್​ ಆಗಿತ್ತು’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಅನೇಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪಲ್ಲವಿ ಪ್ರಶಾಂತ್​ ಅವರನ್ನು ಎ1 ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದ್ದರಿಂದ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.