AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದತ್ತಾತ್ರೇಯ, ದತ್ತ ಭಾಯ್‌ ಆಗಿದ್ದು ಹೇಗೆ? ಸೋಮವಾರದಿಂದ ಅನಾವರಣ ಆಗಲಿದೆ ಕತೆ

Drishti Bottu Kannada Serial: ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ಕಥಾನಾಯಕ ದತ್ತನ ಕುರಿತು ಹಲವು ಹಳೆಯ ವಿಷಯಗಳು ಬಹಿರಂಗ ಆಗಲಿದೆ. ದತ್ತಾತ್ರೇಯ ಪಾಟೀಲ್‌ ಎಂಬ ಶಾಂತ ಸ್ವಭಾವದ ವ್ಯಕ್ತಿ ದತ್ತ ಭಾಯ್ ಆಗಿದ್ದು ಹೇಗೆ?

ದತ್ತಾತ್ರೇಯ, ದತ್ತ ಭಾಯ್‌ ಆಗಿದ್ದು ಹೇಗೆ? ಸೋಮವಾರದಿಂದ ಅನಾವರಣ ಆಗಲಿದೆ ಕತೆ
ಮಂಜುನಾಥ ಸಿ.
|

Updated on: Nov 26, 2024 | 6:53 PM

Share

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಸಂಜೆ 06:30 ಕ್ಕೆ ಪ್ರಸಾರವಾಗುತ್ತಿರುವ ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ಕಥಾನಾಯಕ ದತ್ತನ ಕುರಿತು ಹಲವು ಹಳೆಯ ವಿಷಯಗಳು ಬಹಿರಂಗ ಆಗಲಿದೆ. ದತ್ತಾತ್ರೇಯ ಪಾಟೀಲ್‌ ಎಂಬ ಶಾಂತ ಸ್ವಭಾವದ ವ್ಯಕ್ತಿ ದತ್ತ ಭಾಯ್ ಆಗಿದ್ದು ಹೇಗೆ? ಆತನ ಹಳೆಯ ಪ್ರೇಮಕತೆ, ಆತನ ಪ್ರೇಮಕತೆಗೆ ಕೊಳ್ಳಿ ಇಟ್ಟಿದ್ದು ಯಾರು ಮತ್ತು ಏಕೆ? ಆತನ ವ್ಯಕ್ತಿತ್ವ ಏಕೆ ಹೀಗಾಯ್ತು? ಇನ್ನಿತರ ವಿಷಯಗಳು ಪ್ರೇಕ್ಷಕರಿಗೆ ತಿಳಿಯಲಿವೆ. ಸೋಮವಾರದಿಂದ ಪ್ರಸಾರ ಆಗಲಿರುವ ಎಪಿಸೋಡ್​ಗಳಲ್ಲಿ ಈ ಕತೆಗಳು ಅನಾವರಣ ಆಗಲಿವೆ.

ದತ್ತಾತ್ರೇಯ–ದತ್ತ ಭಾಯ್‌ ಆಗಿದ್ದು ಹೇಗೆ?

ದತ್ತನಿಗೆ ಅವನ ತಾಯಿ ಅಬ್ಬಕ್ಕ – ಇಂಪನಾ ಎಂಬ ಹುಡುಗಿಯೊಂದಿಗೆ ಮದುವೆ ಮಾಡಿಸುವ ಯೋಚನೆಯಲ್ಲಿದ್ದು, ಇದೇ ಸಮಯದಲ್ಲಿ ಮನೆ ಕೆಲಸದ ಹುಡುಗಿಯಾಗಿರುವ ಕಥಾನಾಯಕಿ ದೃಷ್ಟಿಯ ಬಳಿ ದತ್ತ – ತನ್ನ ಹಳೆಯ ಪ್ರೀತಿಯ ಬಗ್ಗೆ, ಅದರ ಸಂಕಟಗಳ ಬಗ್ಗೆ, ಪ್ರೇಮ ವೈಫಲ್ಯ ತನ್ನ ಬದುಕಿನ ದಿಕ್ಕು ಬದಲಾಯಿಸಿದ ಬಗ್ಗೆ, ತಾನು ಯಾಕೆ ಸುಂದರವಾಗಿರುವ ಹುಡುಗಿಯರ ಬಗ್ಗೆ ತಿರಸ್ಕಾರ ಬೆಳೆಸಿಕೊಂಡೆ ಎಂಬುದರ ಬಗ್ಗೆ, ಎಲ್ಲಕ್ಕಿಂತ ಹೆಚ್ಚಾಗಿ ದತ್ತಾತ್ರೇಯ ಪಾಟೀಲ್‌ ಎಂಬ ಶಾಂತ ಸ್ವಭಾವದ ತಾನು ದತ್ತ ಭಾಯ್‌ ಆಗಿ ಬದಲಾಗಿ – ರೌಡಿ ಬದುಕನ್ನು ತನ್ನದಾಗಿಸಿಕೊಂಡೆ ಎಂಬ ಕುರಿತು ಹೇಳಿಕೊಳ್ಳುತ್ತಾನೆ – ದತ್ತನ ಬದುಕಿನ ಹಳೆಯ ದಿನಗಳು ಇದೇ ಸೋಮವಾರದಿಂದ 25-11-2024 ರಿಂದ ಸಂಜೆ 06:30 ಕ್ಕೆ ವೀಕ್ಷಕರ ಮುಂದೆ ತೆರೆದುಕೊಳ್ಳಲಿದೆ. ಈ ಸಂಚಿಕೆಗಳಲ್ಲಿ ದತ್ತ ಹಾಗೂ ಆತನ ಕುಟುಂಬದವರು ಬಡತನದ ದಿನಗಳಲ್ಲಿ ಹೇಗಿದ್ದರು ಎಂಬುದನ್ನು ನೋಡುಗರು ತಿಳಿಯಬಹುದಾಗಿದೆ.

ದತ್ತ-ದೃಷ್ಟಿ ನಡುವೆ ಸ್ನೇಹ

ದತ್ತನ ತಾಯಿ ಅಬ್ಬಕ್ಕ, ಇಂಪನಾ ಎಂಬ ಹುಡುಗಿಯೊಂದಿಗೆ ದತ್ತನ ಮದುವೆ ಮಾಡಿಸುವ ನಿರ್ಧಾರ ಮಾಡಿರುತ್ತಾರೆ. ಆದರೆ ಇಂಪನಾ – ತಿಲಕ್‌ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದು ಆಕೆ ಅವನೊಂದಿಗೆ ಮದುವೆ ಆಗುವ ಯೋಜನೆ ಹಾಕಿರುತ್ತಾಳೆ. ಈ ನಡುವೆ ದತ್ತ ಮತ್ತು ದೃಷ್ಟಿ ನಡುವೆ ಯಜಮಾನ ಮತ್ತು ಮನೆ ಕೆಲಸದವಳು ಎಂಬ ರೇಖೆಯನ್ನು ಮೀರಿದ ಭಾಂದವ್ಯ ಮೂಡಿದ್ದು, ಅವರಿಬ್ಬರೂ ಹೆಚ್ಚು ಹತ್ತಿರವಾಗುತ್ತಿದ್ದಾರೆ. ದತ್ತ ತನ್ನ ಬದುಕಿನ ಸೂಕ್ಷ್ಮ ವಿಚಾರಗಳನ್ನು ದೃಷ್ಟಿಯ ಬಳಿ ಹೇಳಿಕೊಳ್ಳುತ್ತಿದ್ದಾನೆ.

ಕುತೂಹಲಕಾರಿ ತಿರುವು?

ಈ ಎಲ್ಲ ಗೊಂದಲಗಳ ನಡುವೆ ದತ್ತ ಯಾರನ್ನು ಮದುವೆಯಾಗುತ್ತಾನೆ? ಮನೆ ಕೆಲಸದ ಹುಡುಗಿ ದೃಷ್ಟಿಗೆ – ದತ್ತನ ಮೇಲೆ ಹುಟ್ಟಿರುವ ಪ್ರೀತಿ ಮದುವೆ ಮಂಟಪದವರೆಗೂ ಹೋಗುತ್ತಾ ? ದತ್ತನ ಬದುಕನ್ನು ನರಳಿಸಬೇಕು ಎಂದು ಹಠಕ್ಕೆ ಬಿದ್ದಿರುವ ದತ್ತನ ಅಕ್ಕ ಶರಾವಾತಿ ಈ ಪರಿಸ್ಥಿಗಳಲ್ಲಿ ಎಷ್ಟು ಅಪಾಯಕಾರಿಯಾಗುತ್ತಾಳೆ ? ದತ್ತ ಹಿಂದೆ ಪ್ರೀತಿಸಿದ್ದ ಹುಡುಗಿ ಯಾರು ? ಆಕೆ ಈಗ ಎಲ್ಲಿದ್ದಾಳೆ ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಇದೇ ಗುರುವಾರದ ನಂತರ ಪ್ರಸಾರವಾಗುವ ಸಂಚಿಕೆಗಳಲ್ಲಿಅನಾವರಣಗೊಳ್ಳಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್