AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತ್ರಿವಿಕ್ರಂ ಗೋಮುಖ ವ್ಯಾಘ್ರ ಎಂದು ಅಂದು ಹೇಳಿದ್ದೆ, ಈಗಲೂ ಹೇಳ್ತೀನಿ’; ಮೋಕ್ಷಿತಾ

ಬಿಗ್ ಬಾಸ್ ಕನ್ನಡದಲ್ಲಿ ಮೋಕ್ಷಿತಾ ಪೈ ಮತ್ತು ತ್ರಿವಿಕ್ರಂ ನಡುವಿನ ಸಂಬಂಧ ಹಾಳಾಗುತ್ತಿದೆ. ತ್ರಿವಿಕ್ರಂ ಅವರನ್ನು ಮೋಕ್ಷಿತಾ ‘ಗೋಮುಖ ವ್ಯಾಘ್ರ’ ಎಂದು ಕರೆದಿದ್ದಾರೆ ಮತ್ತು ಅವರ ಮೇಲೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ತ್ರಿವಿಕ್ರಂ ಅವರು ಮೋಕ್ಷಿತಾ ಅವರನ್ನು ಸಮೀಪಿಸಲು ಪ್ರಯತ್ನಿಸಿದ್ದಾರೆ ಆದರೆ ಅದು ವಿಫಲವಾಗಿದೆ. ಅವರ ನಡುವಿನ ಈ ವೈಮನಸ್ಸು ಬಿಗ್ ಬಾಸ್ ಮನೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

‘ತ್ರಿವಿಕ್ರಂ ಗೋಮುಖ ವ್ಯಾಘ್ರ ಎಂದು ಅಂದು ಹೇಳಿದ್ದೆ, ಈಗಲೂ ಹೇಳ್ತೀನಿ’; ಮೋಕ್ಷಿತಾ
ತ್ರಿವಿಕ್ರಂ-ಮೋಕ್ಷಿತಾ
ರಾಜೇಶ್ ದುಗ್ಗುಮನೆ
|

Updated on: Nov 27, 2024 | 7:02 AM

Share

ಮೋಕ್ಷಿತಾ ಪೈಗೆ ತ್ರಿವಿಕ್ರಂ ಮೇಲೆ ಯಾವಾಗಲೂ ಸಿಟ್ಟಿದೆ. ಅವರು ಸದಾ ಒಂದಿಲ್ಲೊಂದು ಕಾರಣಕ್ಕೆ ತ್ರಿವಿಕ್ರಂ ವಿರುದ್ಧ ಸಿಡಿದೇಳುತ್ತಲೇ ಇರುತ್ತಾರೆ. ತ್ರಿವಿಕ್ರಂ ಅವರು ಮೋಕ್ಷಿತಾಗೆ ಎಷ್ಟೇ ಹತ್ತಿರ ಆಗಲು ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿಲ್ಲ. ಈ ಮೊದಲು ತ್ರಿವಿಕ್ರಂ ಅವರನ್ನು ಗೋಮುಖ ವ್ಯಾಘ್ರ ಎಂದು ಮೋಕ್ಷಿತಾ ಅವರು ಹೇಳಿದ್ದರು. ಈಗ ಇದನ್ನು ಪುನರುಚ್ಛರಿಸಿದ್ದಾರೆ. ಈ ಬಗ್ಗೆ ಅವರು ನೇರ ಮಾತುಗಳಿಂದ ಎಲ್ಲವನ್ನೂ ಹೇಳಿಕೊಂಡಿದ್ದಾರೆ.

ಮೋಕ್ಷಿತಾಗೆ ಹತ್ತಿರ ಆಗಬೇಕು ಎಂದು ತ್ರಿವಿಕ್ರಂ ಅವರು ಸಾಕಷ್ಟು ಬಾರಿ ಪ್ರಯತ್ನಪಟ್ಟಿದ್ದು ಇದೆ. ಆದರೆ, ಅದು ಸಾಧ್ಯವಾಗಲೇ ಇಲ್ಲ. ‘ನನಗೆ ಮೋಕ್ಷಿತಾ ಜೊತೆ ಆಟ ಆಡಬೇಕು ಎನ್ನುವ ಆಸೆ ಇದೆ’ ಎಂದು ತ್ರಿವಿಕ್ರಂ ಅವರು ಹಲವು ಬಾರಿ ಹೇಳಿಕೊಂಡಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಮೋಕ್ಷಿತಾ ಅವರು ನಾಮಿನೇಷನ್ ವೇಳೆ ತ್ರಿವಿಕ್ರಂ ಹೆಸರನ್ನು ತೆಗೆದುಕೊಂಡಿದ್ದಾರೆ.

‘ತ್ರಿವಿಕ್ರಂ ಎರಡು ಮುಖ ಇರುವ ವ್ಯಕ್ತಿ. ಅವರಿಗೆ ನನ್ನ ಜೊತೆ ಆಡಬೇಕು ಎನ್ನುತ್ತಾರೆ. ನಾನು ಅದಕ್ಕೆ ಓಕೆ ಎಂದಿದ್ದೆ. ನನ್ನ ಜೊತೆ ಇದ್ದಾಗ ಮಂಜು ಅವರ ಬಗ್ಗೆ ನನ್ನ ಬಳಿ ಕೆಟ್ಟದಾಗಿ ಮಾತನಾಡಿದ್ದರು. ಆ ಬಳಿಕ ಅವರ ಬಳಿಯೇ ಡೀಲ್ ಮಾಡಿಕೊಂಡಿದ್ದರು. ಅವರು ಗೋಮುಖ ವ್ಯಾಘ್ರ ಎಂದು ನಾನು ಈ ಮೊದಲು ಹೇಳಿದ್ದೆ. ಅದನ್ನು ಈಗಲೂ ಹೇಳುತ್ತೇನೆ’ ಎಂದರು ಮೋಕ್ಷಿತಾ.

‘ನನ್ನ 57 ದಿನಗಳ ಬಿಗ್ ಬಾಸ್ ಜರ್ನಿಯಲ್ಲಿ ಅತಿ ಕಡಿಮೆ ಮಾತನಾಡಿದ್ದು ಎಂದರೆ ಅದು ಮೋಕ್ಷಿತಾ ಜೊತೆ. ಮೋಕ್ಷಿತಾ ಚೆನ್ನಾಗಿದ್ದಾಗ ಚೆನ್ನಾಗಿರುತ್ತಾರೆ. ಬೇಡ ಎನಿಸಿದಾಗ ಎಲ್ಲವನ್ನೂ ಕೆಟ್ಟದ್ದಾಗಿ ಹೇಳುತ್ತಾರೆ’ ಎಂದು ತ್ರಿವಿಕ್ರಂ ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಗೌತಮಿ ಧರಿಸಿದ್ದ ಪಾಸಿಟಿವ್ ಮುಖವಾಡ ಬಯಲು; ಮೋಕ್ಷಿತಾ ಈಗ ದುಷ್ಮನ್

ಈ ಮೊದಲು ಮೋಕ್ಷಿತಾ ಅವರು ಮಂಜು ಜೊತೆ ಆಪ್ತವಾಗಿ ಇದ್ದರು. ಆಗ ಮಂಜು ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿತ್ತು. ಆ ಬಳಿಕ ಇಬ್ಬರ ಮಧ್ಯೆ ವೈಮನಸ್ಸು ಮೂಡಿತ್ತು. ಈಗ ಇಬ್ಬರೂ ಬೇರೆ ಆಗಿದ್ದಾರೆ. ಮೋಕ್ಷಿತಾ ಅವರು ಶಿಶಿರ್ ಗ್ಯಾಂಗ್​ನಲ್ಲಿ ಗುರುತಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್