AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೌತಮಿ ಧರಿಸಿದ್ದ ಪಾಸಿಟಿವ್ ಮುಖವಾಡ ಬಯಲು; ಮೋಕ್ಷಿತಾ ಈಗ ದುಷ್ಮನ್

ಕೆಲವೇ ದಿನಗಳ ಹಿಂದೆ ಗೌತಮಿ ಜಾದವ್ ಮತ್ತು ಮೋಕ್ಷಿತಾ ಪೈ ಅವರು ಸಿಕ್ಕಾಪಟ್ಟೆ ಆಪ್ತವಾಗಿದ್ದರು. ಯಾವುದೇ ವಿಚಾರ ಇದ್ದರೂ ಪರಸ್ಪರ ಚರ್ಚೆ ಮಾಡುತ್ತಿದ್ದರು. ಒಬ್ಬರಿಗೆ ಇನ್ನೊಬ್ಬರು ಬೆಂಬಲವಾಗಿ ನಿಂತಿದ್ದರು. ಆದರೆ ಈಗ ಮೋಕ್ಷಿತಾ ಅವರು ಸಂಪೂರ್ಣ ಬದಲಾಗಿದ್ದಾರೆ. ಗೌತಮಿ ವಿರುದ್ಧ ಅವರು ತಿರುಗಿ ನಿಂತಿದ್ದಾರೆ. ಗೌತಮಿಯ ಪಾಸಿಟಿವ್ ಮುಖವಾಡ ತೆಗೆಯಲು ಮೋಕ್ಷಿತಾ ನಿರ್ಧರಿಸಿದ್ದಾರೆ.

ಗೌತಮಿ ಧರಿಸಿದ್ದ ಪಾಸಿಟಿವ್ ಮುಖವಾಡ ಬಯಲು; ಮೋಕ್ಷಿತಾ ಈಗ ದುಷ್ಮನ್
ಮೋಕ್ಷಿತಾ ಪೈ, ಗೌತಮಿ ಜಾದವ್
ಮದನ್​ ಕುಮಾರ್​
|

Updated on: Nov 25, 2024 | 10:51 PM

Share

ಬಿಗ್ ಬಾಸ್ ಮನೆಯಲ್ಲಿ ತಂತ್ರ, ಕುತಂತ್ರ ಮಾಡುವುದು ಅನಿವಾರ್ಯ. ಅಂತಹ ಜಾಗದಲ್ಲಿ ಬರೀ ಪಾಸಿಟಿವ್ ಆಗಿ ಇರುತ್ತೇನೆ ಎಂದರೆ ಅದು ಬೂಟಾಟಿಕೆಯೇ ಸರಿ. ನಟಿ ಗೌತಮಿ ಜಾದವ್ ಅವರು ಮೊದಲ ದಿನದಿಂದಲೂ ಪಾಸಿಟಿವ್ ಮಂತ್ರ ಜಪಿಸುತ್ತಿದ್ದಾರೆ. ಆದರೆ ಅದು ಅವರಿಗೆ ಬ್ಯಾಕ್ ಫೈರ್​ ಆಗುತ್ತಿದೆ. ಈಗ ಬಿಗ್ ಬಾಸ್​ ಮನೆಯಲ್ಲಿ ಇರುವ ಬಹುತೇಕ ಸದಸ್ಯರು ಗೌತಮಿಯ ‘ಪಾಸಿಟಿವ್’ ಹೇಳಿಕೆಗಳನ್ನು ಖಂಡಿಸುತ್ತಿದ್ದಾರೆ. ಮುಖ್ಯವಾಗಿ ಮೋಕ್ಷಿತಾ ಪೈ ಅವರು ಕಟುವಾಗಿ ಟೀಕಿಸುತ್ತಿದ್ದಾರೆ. ಅಚ್ಚರಿ ಏನೆಂದರೆ, ಒಂದಷ್ಟು ದಿನಗಳ ಹಿಂದೆ ಗೌತಮಿ ಹಾಗೂ ಮೋಕ್ಷಿತಾ ಪ್ರಾಣ ಸ್ನೇಹಿತೆಯರಾಗಿದ್ದರು.

ಗೌತಮಿ ಅವರು ಅಂದುಕೊಂಡ ರೀತಿಯಲ್ಲಿ ನಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ವಿಚಾರವನ್ನು ಇಟ್ಟುಕೊಂಡು ಎಲ್ಲರೂ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಗೌತಮಿ ಅವರನ್ನು ಹತ್ತಿರದಿಂದ ಕಂಡವರು ಮೋಕ್ಷಿತಾ ಪೈ. ಹಾಗಾಗಿ ಗೌತಮಿ ಅವರ ಎಲ್ಲ ನಡೆಗಳ ಬಗ್ಗೆ ಮೋಕ್ಷಿತಾಗೆ ಮಾಹಿತಿ ಇದೆ. ಈ ಹಿಂದೆ ಗೌತಮಿ ಹೇಗೆ ನಡೆದುಕೊಂಡಿದ್ದರು? ಏನೆಲ್ಲ ಮಾತುಗಳನ್ನು ಆಡಿದ್ದರು ಎಂಬುದನ್ನು ಈಗ ಮೋಕ್ಷಿತಾ ಬಯಲು ಮಾಡುತ್ತಿದ್ದಾರೆ.

ಪಾಸಿಟಿವ್ ಎಂಬುದೇ ನಿಜವಲ್ಲ. ಇದು ಗೌತಮಿ ಅವರ ತಂತ್ರಗಾರಿಕೆ ಅಷ್ಟೇ ಎನಿಸುತ್ತಿದೆ. ಎಲ್ಲರ ರೀತಿ ಗೌತಮಿ ಕೂಡ ಗಾಸಿಪ್ ಮಾಡಿದ್ದಾರೆ. ಗುಂಪುಗಾರಿಕೆ ಮಾಡಿದ್ದಾರೆ. ಬೇರೆಯವರ ಕೆಡುಕುಗಳನ್ನೇ ಗುರುತಿಸಿದ್ದಾರೆ. ಪಕ್ಷಪಾತ ಆಗುವ ಹಾಗೆ ನಡೆದುಕೊಂಡಿದ್ದಾರೆ. ಇದನ್ನೆಲ್ಲ ನಗುಮುಖದಿಂದ ಮಾಡಿ, ಅದನ್ನೇ ಪಾಸಿಟಿವಿಟಿ ಎಂದುಕೊಂಡು ಓಡಾಡುತ್ತಿದ್ದಾರೆ. ಅವರ ಈ ಗುಣ ಅನೇಕರಿಗೆ ಇಷ್ಟ ಆಗುತ್ತಿಲ್ಲ.

ಇದನ್ನೂ ಓದಿ: ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು

ಉಗ್ರಂ ಮಂಜು, ಗೌತಮಿ ಜಾದವ್ ಹಾಗೂ ಮೋಕ್ಷಿತಾ ಪೈ ಅವರು ಒಂದು ಗುಂಪಾಗಿ ಇರುತ್ತಿದ್ದರು. ಆ ಗುಂಪಿನಲ್ಲಿ ನಿಧಾನಕ್ಕೆ ಮೋಕ್ಷಿತಾ ಪೈ ಅವರಿಗೆ ಆದ್ಯತೆ ಕಡಿಮೆ ಆಗಲು ಶುರುವಾಯಿತು. ಮೋಕ್ಷಿತಾ ಅವರನ್ನು ಬಿಟ್ಟು ಕೇವಲ ಉಗ್ರಂ ಮಂಜು ಮತ್ತು ಗೌತಮಿ ಅವರೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಶುರು ಮಾಡಿದರು. ಇದರಿಂದ ಮೋಕ್ಷಿತಾಗೆ ಬೇಸರ ಆಯಿತು. ಆದ್ದರಿಂದ ಅವರು ಗೌತಮಿ ವಿರುದ್ಧ ಸಿಡಿದೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ಗೌತಮಿ ಮತ್ತು ಮೋಕ್ಷಿತಾ ಅವರು ಜೋರಾಗಿ ಜಗಳ ಮಾಡಿಕೊಂಡರೂ ಅಚ್ಚರಿ ಏನಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ