AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮನ್ನು ಮನೆಗೆ ಕಳಿಸಿಯೇ ನಾನು ಹೋಗೋದು: ಚೈತ್ರಾಗೆ ರಜತ್ ಸವಾಲು

Bigg Boss Kannada: ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ರಜತ್ ಭರ್ಜರಿಯಾಗಿ ಆಟ ಆಡುತ್ತಿದ್ದಾರೆ. ಇದೀಗ ಚೈತ್ರಾ ಕುಂದಾಪುರಗೆ ರಜತ್ ಸವಾಲು ಹಾಕಿದ್ದಾರೆ. ಮೀಸೆ ಬೋಳಿಸಿಕೊಂಡು ಆಟವನ್ನೇ ಬಿಡುವುದಾಗಿ ಹೇಳಿದ್ದಾರೆ.

ನಿಮ್ಮನ್ನು ಮನೆಗೆ ಕಳಿಸಿಯೇ ನಾನು ಹೋಗೋದು: ಚೈತ್ರಾಗೆ ರಜತ್ ಸವಾಲು
ಮಂಜುನಾಥ ಸಿ.
|

Updated on: Nov 27, 2024 | 10:46 AM

Share

ವೈಲ್ಡ್ ಕಾರ್ಡ್ ಪಡೆದು ಎಂಟ್ರಿ ಕೊಟ್ಟಿರುವ ರಜತ್ ಈಗ ಮನೆಯ ಟಫ್​ ಸ್ಪರ್ಧಿ ಆಗಿದ್ದಾರೆ. ತಮ್ಮ ಅಗ್ರೆಸ್ಸಿವ್ ಆಟದ ಮೂಲಕ, ಆಕ್ರಮಣಕಾರಿ ಮಾತುಗಳ ಮೂಲಕ ಮನೆಯ ಇತರೆ ಸದಸ್ಯರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಒಬ್ಬೊಬ್ಬರ ಬಳಿ ಒಂದೊಂದು ರೀತಿಯ ಸ್ಟ್ರಾಟಜಿ ಬಳಸುತ್ತಿರುವ ರಜತ್ ಗೆಲ್ಲುವ ಉದ್ದೇಶವನ್ನಿಟ್ಟುಕೊಂಡೇ ಆಟ ಆಡುತ್ತಿದ್ದಾರೆ. ಮನೆಯವರ ಪ್ರತಿ ಮಾತಿಗೂ ಕೌಂಟರ್ ಕೊಡುತ್ತಿರುವ ರಜತ್​ಗೆ ಎದುರು ಮಾತನಾಡಲು ಸಹ ಕೆಲ ಸದಸ್ಯರು ಹಿಂದೇಟು ಹಾಕುತ್ತಿದ್ದಾರೆ.

ನಿನ್ನೆ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಮಹಾಪ್ರಭು ಉಗ್ರಂ ಮಂಜು ಮುಂದೆ ಮನೆಯ ಸದಸ್ಯರು ಇಬ್ಬರು ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ್ದಾರೆ. ನಾಮಿನೇಟ್ ಮಾಡುವಾಗ ಕಾರಣಗಳನ್ನು ನೀಡಿದ್ದು ಆ ಕಾರಣ ಉಗ್ರಂ ಮಂಜುಗೆ ಸೂಕ್ತ ಎನಿಸಿದಲ್ಲಿ ಮಾತ್ರವೇ ನಾಮಿನೇಷನ್ ಆಗಲಿದೆ, ಸೂಕ್ತ ಅಲ್ಲದಿದ್ದರೆ ಯಾರು ಕಾರಣ ನೀಡಿರುತ್ತಾರೆಯೋ ಅವರೇ ನಾಮಿನೇಟ್ ಆಗುತ್ತಾರೆ.

ನಿನ್ನೆ ಚೈತ್ರಾ, ಮೊದಲಿಗೆ ರಜತ್ ಅವರನ್ನು ನಾಮಿನೇಟ್ ಮಾಡಲು ಮುಂದಾದರು. ರಜತ್, ನನ್ನನ್ನು ಬಾಸ್ ಎಂದು ಕರೆಯುತ್ತಾ ಗೇಲಿ ಮಾಡುತ್ತಾರೆ, ವ್ಯಂಗ್ಯ ಯಾವುದು? ಅವಮಾನ ಯಾವುದು ಗೊತ್ತಿಲ್ಲದಷ್ಟು ಮುಗ್ಧಳು ನಾನಲ್ಲ, ಮನೆಗೆ ಬಂದಾಗ ನಿಮಗೆಲ್ಲ ದರ್ಗಾದ ತಾಯತ ಕಟ್ಟಿಸುತ್ತೇನೆ ಎಂದೆಲ್ಲ ಹೇಳಿದರು’ ಇತ್ಯಾದಿ ಕಾರಣಗಳನ್ನು ಚೈತ್ರಾ ಕುಂದಾಪುರ ನೀಡಿದರು.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಜತ್, ನಾನು ಬಾಸ್ ಎಂದು ಗೌರವದಿಂದಲೇ ಕರೆಯುತ್ತೀನಿ ಎಂದರು. ನೀವು ಇಂಥಹಾ ಕ್ಷುಲ್ಲಕ ಕಾರಣ ನೀಡಿ ನನ್ನನ್ನು ನಾಮಿನೇಟ್ ಮಾಡುತ್ತಿದ್ದೀರಿ ಅದಕ್ಕೇ ನೀವು ನನಗೆ ಬಾಸ್, ನಾನು ಹೇಳದೇ ಇರುವುದನ್ನು ಹೇಳಿದ್ದೀನಿ ಅನ್ನುತ್ತಿದ್ದೀರಿ ಅದಕ್ಕೇ ನೀವು ನನ್ನ ಬಾಸ್ ಎಂದು ಮತ್ತಷ್ಟು ಗೇಲಿ ಮಾಡಿದರು. ‘ನಿಮ್ಮನ್ನು ಹೊರಗೆ ಕಳಿಸಿಯೇ ನಾನು ಮನೆಗೆ ಹೋಗುವುದು ಬಾಸ್’ ಎಂದು ಸವಾಲು ಹಾಕಿದರು ರಜತ್.

ಇದನ್ನೂ ಓದಿ:Bigg Boss Kannada: ರಜತ್ ಮಾತಿಗೆ ನಾಚಿ ನೀರಾದ ಚೈತ್ರಾ ಕುಂದಾಪುರ

ಆ ನಂತರ ಸಹ ಚೈತ್ರಾ ಹಾಗೂ ರಜತ್ ಜಗಳ ಮಾಡಿಕೊಂಡರು. ಯಾವುದೋ ಮಾತಿಗೆ ರಜತ್, ‘ಬಾಯ್ಮುಚ್ಕೊಂಡು ಕೂತ್ಕೊ’ ಎಂದರು, ಅದಕ್ಕೆ ಚೈತ್ರಾ ‘ನಾನು ಕೂತೇ ಇದ್ದೀನಿ, ನೀವೇ ಓಡಾಡುತ್ತಿರೋದು’ ಎಂದರು. ಆಗ ರಜತ್, ‘ಕೂತ್ಕೊಂಡು ಹರ್ಕೊಂತಿದ್ದೀಯ’ ಎಂದು ತುಸು ಅವಾಚ್ಯವಾಗಿಯೇ ಹೇಳಿದರು. ಅದಕ್ಕೆ ಚೈತ್ರಾ ‘ಇಂಥಹಾ ಮಾತುಗಳನ್ನು ಆಡಿದ್ದಕ್ಕೆ ನಿಮ್ಮನ್ನು ನಾಮಿನೇಟ್ ಮಾಡಿರೋದು’ ಎಂದರು. ಅಲ್ಲಿಯೂ ಸಹ ಚೈತ್ರಾಗೆ ಸವಾಲು ಹಾಕಿದ ರಜತ್, ‘ನೀವು ನಾಮಿನೇಷನ್ ಮಾಡಿರಲು ಕೊಟ್ಟಿರುವ ಕಾರಣ ಸರಿಯಾಗಿದೆ ಎಂದು ಸುದೀಪ್ ಸರ್ ಹೇಳಿಬಿಟ್ಟರೆ ನಾನು ಅರ್ಧ ಮೀಸೆ ಬೋಳಿಸಿಕೊಂಡು ಮನೆ ಬಿಟ್ಟು ಹೊರಗೆ ಹೋಗಿ ಬಿಡುತ್ತೇನೆ’ ಎಂದು ಸವಾಲು ಹಾಕಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ