ರಘು ಅವಕಾಶವಾದಿನಾ? ಇನ್​​ಸ್ಟಾ ಅನ್​ಫಾಲೋ ಮಾಡಿದ ಹಿಂದಿನ ಕಾರಣ ಹೇಳಿದ ಗಿಲ್ಲಿ ನಟ

ಗಿಲ್ಲಿ ಅವರ ಮನಸ್ಸು ಹೇಗಿದೆ ಎಂಬುದನ್ನು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಬಿಗ್ ಬಾಸ್ ಮನೆಯ ಒಳಗೆ ಇರಲಿ ಅಥವಾ ಹೊರಗೆ ಇರಲಿ ಅವರು ಎಂದಿಗೂ ಗಿಲ್ಲಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು ಕಾಣಿಸಿಯೇ ಇಲ್ಲ. ಈಗಲೂ ಅವರು ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ ಎಂದೇ ಹೇಳಬಹುದು. ಈಗ ಅನ್​​ಫಾಲೋ ಬಗ್ಗೆಯೂ ಅವರು ಜಾಗರೂಕವಾಗಿಯೇ ಮಾತನ್ನು ಆಡಿದ್ದಾರೆ.

ರಘು ಅವಕಾಶವಾದಿನಾ? ಇನ್​​ಸ್ಟಾ ಅನ್​ಫಾಲೋ ಮಾಡಿದ ಹಿಂದಿನ ಕಾರಣ ಹೇಳಿದ ಗಿಲ್ಲಿ ನಟ
ಗಿಲ್ಲಿ
Edited By:

Updated on: Feb 26, 2026 | 8:43 AM

ನಟ ರಘು ಹಾಗೂ ಗಿಲ್ಲಿ ನಟ ಅವರು ಬಿಗ್ ಬಾಸ್ ಅಲ್ಲಿ ಸಾಕಷ್ಟು ಸುದ್ದಿ ಆದವರು. ಇಬ್ಬರೂ ಕೆಲವು ದಿನ ಒಟ್ಟಿಗೆ ಇದ್ದರು. ಇನ್ನೂ ಕೆಲವು ದಿನ ಕಿತ್ತಾಡಿಕೊಳ್ಳುತ್ತಿದ್ದನ್ನು ನೋಡಬಹುದು. ರಘು ಅವರು ಎಷ್ಟೇ ದ್ವೇಷ ತೋರಿಸಿದರೂ ಗಿಲ್ಲಿ ನಟ ಪ್ರೀತಿಯನ್ನೇ ಕೊಡುತ್ತಿದ್ದರು. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕವೂ ಗಿಲ್ಲಿ ಹಾಗೂ ರಘು ಒಟ್ಟಾಗಿಯೇ ಇದ್ದರು. ರಘು ಅವರು ಈಗ ಗಿಲ್ಲಿಯನ್ನು ಅನ್​ಫಾಲೋ ಮಾಡಿದ್ದಾರೆ. ಈ ಬಗ್ಗೆ ಚರ್ಚೆ ನಡೆದಿದ್ದು ಗೊತ್ತೇ ಇದೆ. ಈ ವಿಷಯದ ಕುರಿತಂತೆ ಗಿಲ್ಲಿ ನಟ ಅವರು ಮಾತನಾಡಿದ್ದಾರೆ.

ಗಿಲ್ಲಿ ಅವರ ಮನಸ್ಸು ಹೇಗಿದೆ ಎಂಬುದನ್ನು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಬಿಗ್ ಬಾಸ್ ಮನೆಯ ಒಳಗೆ ಇರಲಿ ಅಥವಾ ಹೊರಗೆ ಇರಲಿ ಅವರು ಎಂದಿಗೂ ಗಿಲ್ಲಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು ಕಾಣಿಸಿಯೇ ಇಲ್ಲ. ಈಗಲೂ ಅವರು ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ ಎಂದೇ ಹೇಳಬಹುದು. ಈಗ ಅನ್​​ಫಾಲೋ ಬಗ್ಗೆಯೂ ಅವರು ಜಾಗರೂಕವಾಗಿಯೇ ಮಾತನ್ನು ಆಡಿದ್ದಾರೆ.

‘ಅವರು ಏಕೆ ಅನ್​ಫಾಲೋ ಮಾಡಿದ್ರು ಅನ್ನೋದು ನಿಜಕ್ಕೂ ಗೊತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲೇ ಗೊತ್ತಾಗಿದ್ದು. ನಾನು ಸೋಶಿಯಲ್ ಮೀಡಿಯಾ ಬಳಸಲ್ಲ. ಪೋಸ್ಟ್​ ಮಾಡೋದಲ್ಲ ಮಾಡಲ್ಲ. ಅವರು ಫಾಲೋ ಮಾಡಿರ್ತಾರೆ, ನಾನು ಫಾಲೋ ಬ್ಯಾಕ್ ಮಾಡಿಲ್ಲ ಎಂದು ಅನ್​​ಫಾಲೋ ಮಾಡಿರಬಹುದು’ ಎಂದು ಗಿಲ್ಲಿ ನಟ ಹೇಳಿದ್ದಾರೆ.

ಇದನ್ನೂ ಓದಿ: ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಗಿಲ್ಲಿ ನಟ, ಅಶ್ವಿನಿ ಗೌಡ

ರಘು ಅವರು ಅವಕಾಶವಾದಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ. ‘ರಘು ಅವರು ಮಗುವಿನ ರೀತಿಯ ಮನಸ್ಸು ಹೊಂದಿರುವವರು. ಅವರು ಯಾವಾಗಲೂ ಆ ರೀತಿ ಮಾಡಿದವರಲ್ಲ. ಅವರ ದೇಹಕ್ಕೂ ವೈಕ್ತಿತ್ವಕ್ಕೂ ಸಂಬಂಧವೇ ಇಲ್ಲ’ ಎಂದು ಒಳ್ಳೆಯ ಮಾತನ್ನು ಆಡಿದರು.
ಬಿಗ್ ಬಾಸ್ ಮನೆಯಲ್ಲಿ ರಘು ಅವರು ಚಪಾತಿ ಕೊಡದೆ ಇರುವುದು ಸಾಕಷ್ಟು ಚರ್ಚೆ ಆಗಿತ್ತು. ಆ ಬಗ್ಗೆ ಹೊರಗೆ ಬಂದ ಬಳಿಕ ರಘು ಅಚ್ಚರಿ ಹೊರಹಾಕಿದ್ದನ್ನು ನೀವು ನೋಡಬಹುದು. ಅದಕ್ಕೂ ಮೊದಲು ಅವರಿಗೆ ನಾನು ಮೂರು ರೊಟ್ಟಿ ಚಪಾತಿ ಕೊಟ್ಟಿದ್ದೆ ಎಂದು ಹೇಳಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:42 am, Thu, 26 February 26

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us