ಹಿರಿಯ ನಟ ದತ್ತಣ್ಣ ಮದುವೆ ಆಗದೇ ಇರಲು ಇತ್ತು ಪ್ರಮುಖ ಕಾರಣ; ಇಲ್ಲಿದೆ ವಿವರ

|

Updated on: Apr 10, 2023 | 1:43 PM

ಮದುವೆ, ಸಂಸಾರ ಅನ್ನೋದು ಒಂದು ಗೋಳು ಎಂಬುದು ಅನೇಕರ ಅಭಿಪ್ರಾಯ. ದತ್ತಣ್ಣ ಅವರ ಅಭಿಪ್ರಾಯವೂ ಇದೇ ಆಗಿತ್ತು.

ಹಿರಿಯ ನಟ ದತ್ತಣ್ಣ ಮದುವೆ ಆಗದೇ ಇರಲು ಇತ್ತು ಪ್ರಮುಖ ಕಾರಣ; ಇಲ್ಲಿದೆ ವಿವರ
ದತ್ತಣ್ಣ
Follow us on

ಹಿರಿಯ ನಟ ದತ್ತಣ್ಣ (Dattanna) ಅವರ ಬದುಕು ಅನೇಕರಿಗೆ ಮಾದರಿ. ಇಂಜಿನಿಯರಿಂಗ್ ಪದವಿ ಪಡೆದು, ಏರ್​ಫೋರ್ಸ್​​ನಲ್ಲಿ ವಿಂಗ್ ಕಮಾಂಡರ್​ ಆಗಿ ಸೇವೆ ಸಲ್ಲಿಸಿ ಬಳಿಕ ನಟನಾ ಕ್ಷೇತ್ರಕ್ಕೆ ಬಂದು ರಾಷ್ಟ್ರ ಪ್ರಶಸ್ತಿ ಪಡೆದಿದ್ದು ಅವರ ಹೆಚ್ಚುಗಾರಿಕೆ. ದತ್ತಣ್ಣ ಅವರು ‘ವೀಕೆಂಡ್ ವಿತ್ ರಮೇಶ್​’ (Weekend With Ramesh) ಐದನೇ ಸೀಸನ್​ನ ನಾಲ್ಕನೇ ಅತಿಥಿಯಾಗಿ ಆಗಮಿಸಿದ್ದಾರೆ. ಅವರ ಬದುಕನ್ನು, ಅವರ ಸಾಧನೆಯನ್ನು ಪ್ರೇಕ್ಷಕರ ಮುಂದೆ ತೆರೆದಿಡಲಾಗಿದೆ. ಈ ವೇಳೆ ಹಲವು ಘಟನೆಗಳ ಬಗ್ಗೆ ದತ್ತಣ್ಣ ಅವರು ಮಾತನಾಡಿದ್ದಾರೆ. ಅವರು ಮದುವೆ ಆಗದೇ ಇರಲು ಕಾರಣ ಏನು ಎಂಬುದು ಕೂಡ ರಿವೀಲ್ ಆಗಿದೆ.

ಎಚ್​.ಜಿ. ದತ್ತಾತ್ರೇಯ ಅನ್ನೋದು ದತ್ತಣ್ಣ ಅವರು ಹೆಸರು. ಅವರು ಚಿತ್ರರಂಗದಲ್ಲಿ ದತ್ತಣ್ಣ ಎಂದೇ ಫೇಮಸ್. ಅವರಿಗೆ ಚಿಕ್ಕ ವಯಸ್ಸಿಂದ ನಾಟಕದ ಹುಚ್ಚಿತ್ತು. ಅನೇಕ ನಾಟಕಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದರು. ದತ್ತಣ್ಣ ಅವರು ಚಿತ್ರರಂಗಕ್ಕೆ ಬರುವಾಗ ಅವರಿಗೆ ವಯಸ್ಸು 45 ವರ್ಷ ತುಂಬಿತ್ತು. ಅವರು ಸಿನಿಮಾ ರಂಗಕ್ಕೆ ಬರುವ ಮುಂಚೆ ಏರ್​​ಫೋರ್ಸ್‌ನಲ್ಲಿ ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಚಂಡೀಗಢ, ದೆಹಲಿ, ಅಂಡಮಾನ್‌ ಮುಂತಾದ ಕಡೆ ಅವರು ಸೇವೆ ಸಲ್ಲಿಸಿದ್ದರು. 1987ರಲ್ಲಿ ಅವರು ಬೆಂಗಳೂರಿನ ಎಚ್​ಎಎಲ್‌ಗೆ ವರ್ಗವಾಗಿ ಬಂದರು. ಹಿಂದಿ ಚಿತ್ರರಂಗದ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರು, ‘ಆಸ್ಫೋಟ’ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಇಷ್ಟೆಲ್ಲ ಆದರೂ ಅವರು ಮದುವೆ ಆಗಿಲ್ಲ. ಇದಕ್ಕೆ ಕಾರಣ ರಿವೀಲ್ ಆಗಿದೆ.

ಇದನ್ನೂ ಓದಿ: ಆ ಸಿನಿಮಾದಲ್ಲಿ ನಟಿಸಿ ನಿರ್ದೇಶಕನೊಟ್ಟಿಗೆ ಜಗಳವಾಡಿ ಮಾತು ಬಿಟ್ಟಿದ್ದ ದತ್ತಣ್ಣ: ಯಾವುದಾ ಸಿನಿಮಾ?

ಮದುವೆ, ಸಂಸಾರ ಅನ್ನೋದು ಒಂದು ಗೋಳು ಎಂಬುದು ಅನೇಕರ ಅಭಿಪ್ರಾಯ. ದತ್ತಣ್ಣ ಅವರ ಅಭಿಪ್ರಾಯವೂ ಇದೇ ಆಗಿತ್ತು. ವೀಕೆಂಡ್ ವಿತ್ ರಮೇಶ್​ ಶೋನಲ್ಲಿ ದತ್ತಣ್ಣ ಅವರ ಗೆಳೆಯರು ಈ ಬಗ್ಗೆ ಮಾತನಾಡಿದ್ದಾರೆ. ‘ದತ್ತಣ್ಣ ಓದಿನಲ್ಲಿ ಚುರುಕಿದ್ದರು. ಜೀವನದಲ್ಲಿ ಅನೇಕ ಸಾಧನೆ ಮಾಡಿದರು. ಆದರೆ, ಮದುವೆ ಆಗಲೇ ಇಲ್ಲ. ಯಾವಾಗಲೂ ಫ್ರೀ ಆಗಿರಬೇಕು. ಎಲ್ಲರೂ ಬಂದು ಸಂಸಾರದ ಗೋಳು ಹೇಳಿಕೊಳ್ತಾರೆ. ಅದಕ್ಕೆ ಮದುವೆ ಆಗಲ್ಲ ಎಂದು ದತ್ತಣ್ಣ ನಿರ್ಧರಿಸಿದ್ದರು’ ಎಂಬುದಾಗಿ ದತ್ತಣ್ಣ ಅವರ ಗೆಳೆಯ ವಿವರಿಸಿದ್ದಾರೆ.

ಇದನ್ನೂ ಓದಿ: Weekend With Ramesh: ದತ್ತಣ್ಣ, ವಾಯು ಸೇನೆಯಿಂದ ಚಿತ್ರರಂಗದತ್ತ ಹೊರಳಿಕೊಂಡಿದ್ದು ಹೇಗೆ?

ಕಳೆದ ವಾರ ಇಬ್ಬರು ಸಾಧಕರು ‘ವೀಕೆಂಡ್ ವಿತ್ ರಮೇಶ್’ ವೇದಿಕೆ ಏರಿದ್ದರು. ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಹಾಗೂ ದತ್ತಣ್ಣ ಅವರು ಪ್ರತ್ಯೇಕ ಎಪಿಸೋಡ್​ನಲ್ಲಿ ಆಗಮಿಸಿದ್ದರು. ಇವರು ನಿಜವಾದ ಸಾಧಕರು ಎನ್ನುವ ಅಭಿಪ್ರಾಯ ಅನೇಕರಿಂದ ವ್ಯಕ್ತವಾಗಿದೆ. ಈ ಎರಡೂ ಎಪಿಸೋಡ್​ನ ಜನರು ಮೆಚ್ಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 1:40 pm, Mon, 10 April 23