AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಗೆದ್ದವರಿಗೆ ಏನೇನು ಸಿಗಲಿದೆ, ರನ್ನರ್ ಅಪ್​ಗೆ ಸಿಗುವುದೇನು? ಸುದೀಪ್ ನೀಡಿದರು ಮಾಹಿತಿ

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10 ಗೆದ್ದ ಸ್ಪರ್ಧಿಗೆ ಎಷ್ಟು ಮೊತ್ತ ಹಣ ಬಹುಮಾನವಾಗಿ ಸಿಗಲಿದೆ. ಅದರ ಜೊತೆಗೆ ಉಡುಗೊರೆಯಾಗಿ ಏನು ಸಿಗಲಿದೆ? ರನ್ನರ್ ಅಪ್​ಗೆ ಸಿಗುವುದೇನು? ಸುದೀಪ್ ನೀಡಿದರು ಮಾಹಿತಿ.

ಬಿಗ್​ಬಾಸ್ ಗೆದ್ದವರಿಗೆ ಏನೇನು ಸಿಗಲಿದೆ, ರನ್ನರ್ ಅಪ್​ಗೆ ಸಿಗುವುದೇನು? ಸುದೀಪ್ ನೀಡಿದರು ಮಾಹಿತಿ
ಮಂಜುನಾಥ ಸಿ.
|

Updated on: Dec 30, 2023 | 11:32 PM

Share

ಹೊರಗೆ ಸಾಮಾನ್ಯ ವ್ಯಕ್ತಿಯಾಗಿದ್ದರೂ ಸಹ ಬಿಗ್​ಬಾಸ್ (BiggBoss) ಮನೆಗೆ ಒಮ್ಮೆ ಹೋಗಿ ಬಂದವರು ಸೆಲೆಬ್ರಿಟಿಗಳಾಗಿಬಿಡುತ್ತಾರೆ. ಮನೊರಂಜನಾ ಕ್ಷೇತ್ರದಲ್ಲಿ ಹಲವು ಅವಕಾಶಗಳು ಅವರನ್ನು ಅರಸಿ ಬರುತ್ತವೆ. ಇದು ಬಿಗ್​ಬಾಸ್ ಮನೆಗೆ ಹೋದವರಿಗೆ ಹೋಗಿ ಗೆದ್ದವರಿಗೆ ಆಗುವ ಪ್ರಮುಖ ಲಾಭ. ಇದರ ಹೊರತಾಗಿ, ರಿಯಾಲಿಟಿ ಶೋ ಆಯೋಜಕರು ಸಹ ಬಿಗ್​ಬಾಸ್ ಗೆದ್ದವರಿಗೆ ದೊಡ್ಡ ಮೊತ್ತದ ಬಹುಮಾನವನ್ನೇ ಆರಂಭದಿಂದಲೂ ನೀಡುತ್ತಾ ಬಂದಿದ್ದಾರೆ. ಪ್ರತಿ ಬಾರಿಯೂ ಬಿಗ್​ಬಾಸ್ ಗೆದ್ದ ಬಳಿಕ ಆ ವಿಷಯ ಬಹಿರಂಗವಾಗುತ್ತದೆ. ಈ ಬಾರಿ ತುಸು ಮುಂಚೆಯೇ ಸುದೀಪ್ ಅವರು ಚಾಂಪಿಯನ್ ಆದವರಿಗೆ ಏನು ಸಿಗಲಿದೆ ಎಂದು ಹೇಳಿದ್ದಾರೆ.

ವೀಕೆಂಡ್ ಪಂಚಾಯ್ತಿಯ ಶನಿವಾರದ ಎಪಿಸೋಡ್​ನಲ್ಲಿ ಯಾರು ಈ ಬಾರಿ ಟಾಪ್ 3 ನಲ್ಲಿ ಇರಬಹುದು ಎಂದು ಸುದೀಪ್ ಪ್ರಶ್ನೆ ಕೇಳಿದರು. ಪ್ರತಿಯೊಬ್ಬರೂ ಸಹ ತಮಗೆ ತೋಚಿದ ಮೂರು ಹೆಸರುಗಳನ್ನು ಹೇಳಿ ಅದಕ್ಕೆ ಕಾರಣ ನೀಡಿದರು. ಆದರೆ ಸ್ಪರ್ಧಿಗಳ ಆಯ್ಕೆ ಸುದೀಪ್​ಗೆ ಅಷ್ಟು ಇಷ್ಟವಾಗಲಿಲ್ಲ. ಪ್ರತಿಯೊಬ್ಬ ಸ್ಪರ್ಧಿಯೂ ತಮಗೆ ಇಷ್ಟವಾದವರ ಹೆಸರುಗಳನ್ನು ಹೇಳಿದ್ದಾರೆಯೇ ಹೊರತು ಯಾರು ಗೆಲ್ಲುತ್ತಾರೆ ಎಂದು ಹೇಳಿಲ್ಲ ಎಂದರು. ಪ್ರತಿ ಸ್ಪರ್ಧಿ ಯಾರಿಬ್ಬರ ಹೆಸರು ತೆಗೆದುಕೊಳ್ಳಲಿದ್ದಾರೆ ಎಂಬುದು ಸುಲಭವಾಗಿ ಊಹೆ ಮಾಡಬಹುದಿತ್ತು ಎಂದ ಸುದೀಪ್, ಸ್ಪರ್ಧಿಗಳಲ್ಲಿ ಗೆಲ್ಲುವ ಹಂಬಲ ಮೂಡಿಸಲೆಂದು ಗುಟ್ಟೊಂದನ್ನು ರಟ್ಟು ಮಾಡಿದರು.

ಈ ಬಾರಿ ಬಿಗ್​ಬಾಸ್ ಟ್ರೋಫಿ ಗೆದ್ದವರಿಗೆ ಕಾನ್ಫಿಡೆಂಟ್ ಗ್ರೂಪ್​ನಿಂದ 50 ಲಕ್ಷ ರೂಪಾಯಿ ನಗದು ಬಹುಮಾನ ಸಿಗಲಿದೆ. ಮಾರುತಿ ಸಂಸ್ಥೆಯ ಬ್ರೆಜಾ ಕಾರು ಉಡುಗೊರೆಯಾಗಿ ಸಿಗಲಿದೆ. ಅದಾದ ಬಳಿಕ ಎಲೆಕ್ಟ್ರಿಕ್ ಸ್ಕೂಟರ್ ಸಹ ಸಿಗಲಿದೆ ಎಂದರು. ಆ ಬಳಿಕ ಈ ಬಹುಮಾನದ ಮೊತ್ತ ನಿಮಗೆಲ್ಲ ಯಾಕೆ ಇಷ್ಟು ಮುಖ್ಯ ಎಂದು ಕೇಳಿ ಉತ್ತರ ಪಡೆದುಕೊಂಡರು. ಡ್ರೋನ್ ಪ್ರತಾಪ್ ಗೆ ತನ್ನ ತಂದೆಯ ಸಾಲ ತೀರಿಸಬೇಕಿತ್ತು, ಕಾರ್ತಿಕ್​ಗೆ ಅಮ್ಮನಿಗಾಗಿ ಮನೆಯೊಂದನ್ನು ಕಟ್ಟಿಕೊಳ್ಳಬೇಕಿದೆ. ತುಕಾಲಿ ಸಂತುಗೆ ನೆಮ್ಮದಿಯ ಜೀವನಕ್ಕಾಗಿ, ಜೀವನದಲ್ಲಿ ಸ್ಟೆಬಿಲಿಟಿಗಾಗಿ ಹಣ ಬೇಕಿದೆ. ಹೀಗೆ ಹಲವರು ಹಲವು ರೀತಿಯ ಕಾರಣಗಳನ್ನು ಹೇಳಿದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಗೆ ಬಂದ ಕಾಂತಾರ ಬೆಡಗಿ ಸಪ್ತಮಿ ಗೌಡ, ಕಾರಣವೇನು?

ಬಳಿಕ ಮಾತನಾಡಿದ ಸುದೀಪ್, ಈಗ ನಾನು ಈಗ ಹೇಳಿರುವುದು 50 ಪ್ರತಿಷತಃ ಮಾತ್ರ. ಇನ್ನೂ 50 ಪ್ರತಿಷತಃ ಹೇಳಿಲ್ಲ. ಎಲ್ಲರೂ ನಿಮ್ಮ ಶಕ್ತಿ ಮೀರಿ ಗೆಲ್ಲಲು ಪ್ರಯತ್ನಿಸಿ, ನಾವು ಸುಮ್ಮನಿದ್ದರೂ ಜನ ನಮಗಾಗಿ ಮತ ಹಾಕುತ್ತಾರೆ ಎಂಬುದೆಲ್ಲ ಸುಳ್ಳು. ಜನ ಯಾರು ಚೆನ್ನಾಗಿ ಆಡುತ್ತಾರೆಯೇ ಆವರಿಗೆ ಮಾತ್ರವೇ ಮತ ಹಾಕುತ್ತಾರೆ. ಆಟದಲ್ಲಿ ಮಾತ್ರವೇ ನಿಮ್ಮ ಗಮನ ಇರಲಿ, ಆಟಗಳು, ನಿರ್ಧಾರಗಳು ಇನ್ನು ಮುಂದೆ ಇನ್ನಷ್ಟು ಟಫ್ ಆಗಲಿವೆ ಎಂದು ಸೂಚನೆಯನ್ನೂ ಸಹ ನೀಡಿದರು.

ಬಿಗ್​ಬಾಸ್ 85 ದಿನ ಮುಗಿದಿದ್ದು ಫಿನಾಲೆಗೆ ಹತ್ತಿರವಾಗುತ್ತಿದೆ. ಈ ಬಾರಿ ಟಿಆರ್​ಪಿ ಚೆನ್ನಾಗಿರುವ ಕಾರಣ ಬಿಗ್​ಬಾಸ್​ ಅನ್ನು ಇನ್ನೂ ಕೆಲವು ವಾರಗಳ ಕಾಲ ಮುಂದಕ್ಕೆ ಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮುಂದೂಡಿದರೂ ಸಹ ಒಂದು ಅಥವಾ ಎರಡು ವಾರಗಳ ಕಾಲ ಮಾತ್ರವೇ ಮುಂದೂಡುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ