AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವನು ನನ್ನ ಬಾಯ್​ಫ್ರೆಂಡ್​ ಅಲ್ಲ, ಇನ್ನು ಮಾತನಾಡಲ್ಲ’; ಶಪಥ ಮಾಡಿದ ಸಂಗೀತಾ  

ಊಟದ ವಿಚಾರದಲ್ಲಿ ಕಿರಿಕ್ ಆಗಿತ್ತು. ಕಾರ್ತಿಕ್ ಅವರು ಜೋರು ಧ್ವನಿಯಲ್ಲಿ ಮಾತನಾಡಿದ್ದು ಸಂಗೀತಾಗೆ ಬೇಸರ ಮೂಡಿಸಿದೆ. ಕಾರ್ತಿಕ್ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವ ಭಾವನೆ ಅವರನ್ನು ಕಾಡುತ್ತಿದೆ. ಹೀಗಾಗಿ, ಪದೇ ಪದೇ ಮನೆ ಬಿಟ್ಟು ಹೋಗುವ ಬಗ್ಗೆ ಮಾತನಾಡುತ್ತಿದ್ದಾರೆ.

‘ಅವನು ನನ್ನ ಬಾಯ್​ಫ್ರೆಂಡ್​ ಅಲ್ಲ, ಇನ್ನು ಮಾತನಾಡಲ್ಲ’; ಶಪಥ ಮಾಡಿದ ಸಂಗೀತಾ  
ಸಂಗೀತಾ-ಕಾರ್ತಿಕ್
Follow us
ರಾಜೇಶ್ ದುಗ್ಗುಮನೆ
|

Updated on:Nov 23, 2023 | 6:31 AM

ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಮಹೇಶ್ (Karthik Mahesh) ಮಧ್ಯೆ ಕಿತ್ತಾಟ ನಡೆಯುತ್ತಲೇ ಇದೆ. ಕಳೆದ ವಾರ ನಡೆದ ಟಾಸ್ಕ್​​ನಲ್ಲಿ ಸಂಗೀತಾ ಅವರು ಕಾರ್ತಿಕ್ ವಿರುದ್ಧ ಸಿಟ್ಟಾಗಿದ್ದರು. ಈ ವಾರ ಬೇರೆಯದೇ ಕಥೆ ಆಗಿದೆ. ತಲೆ ಬೋಳಿಸಿಕೊಳ್ಳುವ ಚಾಲೆಂಜ್​ನ ಕಾರ್ತಿಕ್​ಗೆ ನೀಡಲಾಯಿತು. ಇದನ್ನು ಅವರು ಸ್ವೀಕರಿಸಿದ್ದಾರೆ. ಅವರು ತಲೆ ಬೋಳಿಸಿಕೊಂಡಿದ್ದಾರೆ. ಇದು ಸಂಗೀತಾಗೆ ತುಂಬಾನೇ ಹರ್ಟ್ ಮಾಡಿದಂತಿದೆ. ಈ ಕಾರಣಕ್ಕೆ ಸಂಗೀತಾ ಮನೆ ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಕಾರ್ತಿಕ್ ಸೇಡುತೀರಿಸಿಕೊಳ್ಳಬಹುದು ಎನ್ನುವ ಭಯ ಅವರನ್ನು ಕಾಡಿದಂತಿದೆ.

ಊಟದ ವಿಚಾರದಲ್ಲಿ ಕಿರಿಕ್ ಆಗಿತ್ತು. ಕಾರ್ತಿಕ್ ಅವರು ಜೋರು ಧ್ವನಿಯಲ್ಲಿ ಮಾತನಾಡಿದ್ದು ಸಂಗೀತಾಗೆ ಬೇಸರ ಮೂಡಿಸಿದೆ. ಕಾರ್ತಿಕ್ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವ ಭಾವನೆ ಅವರನ್ನು ಕಾಡುತ್ತಿದೆ. ಹೀಗಾಗಿ, ಪದೇ ಪದೇ ಮನೆ ಬಿಟ್ಟು ಹೋಗುವ ಬಗ್ಗೆ ಮಾತನಾಡುತ್ತಿದ್ದಾರೆ. ಈ ವಿಚಾರದಲ್ಲಿ ಕಾರ್ತಿಕ್ ಅವರು ಸಂಗೀತಾನ ಸಮಾಧಾನ ಮಾಡಲು ಬಂದಿದ್ದಾರೆ. ಆದರೆ, ಸಂಗೀತಾ ಆಡಿದ ಮಾತು ಕಾರ್ತಿಕ್​ಗೆ ಬೇಸರ ತರಿಸಿದೆ.

‘ಅವನು ನನ್ನ ಬಾಯ್​ಫ್ರೆಂಡ್ ಅಲ್ಲ. ನನಗೆ ಸಖತ್ ಸ್ಟ್ರೆಸ್ ಆಗುತ್ತಿದೆ’ ಎಂದು ಸಂಗೀತಾ ಕೂಗಾಡಿದ್ದಾರೆ. ಆ ಬಳಿಕ ವಿನಯ್, ನಮ್ರತಾ ಸಮಾಧಾನ ಮಾಡಲು ಬಂದಿದ್ದಾರೆ. ಇದಕ್ಕೂ ಸಂಗೀತಾ ಜಗ್ಗಲಿಲ್ಲ. ಆ ಬಳಿಕ ಕಾರ್ತಿಕ್ ಎಂಟ್ರಿ ಕೊಟ್ಟಿದ್ದಾರೆ. ಕಾರ್ತಿಕ್ ಸಮಾಧಾನ ಮಾಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಹೆಣ್ಮಕ್ಕಳ ಬಗ್ಗೆ ಡ್ರೋನ್​ ಪ್ರತಾಪ್​ ಹೇಳಿದ ಗಾದೆ ಮಾತು ಕೇಳಿ ಕಾರ್ತಿಕ್​ ಮಹೇಶ್​ ಕಕ್ಕಾಬಿಕ್ಕಿ

‘ದಯವಿಟ್ಟು ಇಲ್ಲಿಂದ ಹೋಗಿ. ನಾನು ಎಂದಿಗೂ ನಿಮ್ಮ ಜೊತೆ ಮಾತನಾಡುವುದಿಲ್ಲ. ಇಲ್ಲಷ್ಟೇ ಅಲ್ಲ, ಬಿಗ್ ಬಾಸ್​ನಿಂದ ಹೋದ ಬಳಿಕವೂ ನಿಮ್ಮ ಜೊತೆ ನಾನು ಮಾತುಕತೆ ಮುಂದುವರಿಸಲ್ಲ’ ಎಂದಿದ್ದಾರೆ ಅವರು. ಇದು ಕಾರ್ತಿಕ್​ಗೆ ಬೇಸರ ಮೂಡಿಸಿದೆ. ಹೀಗಾಗಿ, ಆ ಜಾಗದಿಂದ ಅವರು ಹೊರ ಬಂದಿದ್ದಾರೆ. ವಿನಯ್ ಗೌಡ ಅವರು ರಾತ್ರಿ ಒತ್ತಾಯ ಮಾಡಿಸಿ ಸಂಗೀತಾಗೆ ಊಟ ಬಡಿಸಿದ್ದಾರೆ. ಆಗಲೂ, ‘ನಾನು ಕಾರ್ತಿಕ್ ಮಾಡಿದ ಅಡುಗೆ ಊಟ ಮಾಡಲ್ಲ’ ಎಂದು ಹೇಳಿದ್ದಾರೆ ಸಂಗೀತಾ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:36 pm, Wed, 22 November 23

ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ