AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ಶಬ್ದ ಹೇಳಿದ್ರೆ ಚಪ್ಪಲಿಲಿ ಹೊಡೀರಿ’; ಶಿಶಿರ್​ಗೆ ಚೈತ್ರಾ ಚಾಲೆಂಜ್

ಚೈತ್ರಾ ಅವರು ಮಾತಿನ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆದರೆ, ಕೆಲವೊಮ್ಮೆ ಅವರು ಆಡುವ ಮಾತುಗಳು ಮಿತಿ ಮೀರುತ್ತವೆ. ಇದರಿಂದ ಅನೇಕರಿಗೆ ಬೇಸರ ಆಗಿದ್ದು ಇದೆ. ಈ ವಿಚಾರದಲ್ಲಿ ಚೈತ್ರಾ ಹಲವು ಬಾರಿ ಎಡವಿದ್ದಾರೆ.

‘ಆ ಶಬ್ದ ಹೇಳಿದ್ರೆ ಚಪ್ಪಲಿಲಿ ಹೊಡೀರಿ’; ಶಿಶಿರ್​ಗೆ ಚೈತ್ರಾ ಚಾಲೆಂಜ್
ಶಿಶಿರ್-ಚೈತ್ರಾ
ರಾಜೇಶ್ ದುಗ್ಗುಮನೆ
|

Updated on:Dec 06, 2024 | 7:31 AM

Share

ಬಿಗ್ ಬಾಸ್​ನಲ್ಲಿ ಚೈತ್ರಾ ಹಾಗೂ ಶಿಶಿರ್ ಮಧ್ಯೆ ದೊಡ್ಡ ವಾಕ್ ಸಮರ ನಡೆದಿದೆ. ಅದಕ್ಕೆ ಕಾರಣ ಆಗಿರೋದು ಚೈತ್ರಾ ಬಳಕೆ ಮಾಡಿದ ಪದ. ಶಿಶಿರ್ ಜೊಲ್ಲ, ಹೆಣ್ಣುಮಕ್ಕಳ ಹಿಂದೆ ತಿರುಗುತ್ತಾ ಇರುತ್ತಾನೆ ಎಂಬ ಪದವನ್ನು ಚೈತ್ರಾ ಬಳಕೆ ಮಾಡಿದ್ದಾಗಿ ತ್ರಿವಿಕ್ರಂ ಹೇಳಿದ್ದಾರೆ. ಈ ವಿಚಾರಕ್ಕೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ಆಗಿವೆ. ಚೈತ್ರಾ, ತ್ರಿವಿಕ್ರಂ ಹಾಗೂ ಶಿಶಿರ್ ಮಧ್ಯೆ ಈ ವಿಚಾರಕ್ಕೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.

ಚೈತ್ರಾ ಅವರು ಮಾತಿನ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆದರೆ, ಕೆಲವೊಮ್ಮೆ ಅವರು ಆಡುವ ಮಾತುಗಳು ಮಿತಿ ಮೀರುತ್ತವೆ. ಇದರಿಂದ ಅನೇಕರಿಗೆ ಬೇಸರ ಆಗಿದ್ದು ಇದೆ. ಈ ವಿಚಾರದಲ್ಲಿ ಚೈತ್ರಾ ಹಲವು ಬಾರಿ ಎಡವಿದ್ದಾರೆ. ಈಗ ಚೈತ್ರಾ ಅವರು ತಾವು ಆ ಪದ ಬಳಕೆ ಮಾಡಿಲ್ಲ ಎಂದು ಹೇಳಿದರೆ, ತ್ರಿವಿಕ್ರಂ ಅವರು ಚೈತ್ರಾ ಆ ಪದ ಬಳಕೆ ಮಾಡಿದ್ದಾರೆ ಎಂದು ವಾದಿಸುತ್ತಿದ್ದಾರೆ.

ಚೈತ್ರಾ ಹಾಗೂ ತ್ರಿವಿಕ್ರಂ ಮಧ್ಯೆ ಜಗಳ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ತ್ರಿವಿಕ್ರಂ ಅವರು ಬಾಯ್ತಪ್ಪಿ ಚೈತ್ರಾ ಅವರು ಶಿಶಿರ್ ವಿರುದ್ಧ ಈ ರೀತಿ ಹೇಳಿದ್ದರು ಎಂದು ಹೇಳಿಕೆ ಕೊಟ್ಟರು. ಅಲ್ಲಿಂದ ಚರ್ಚೆಗಳು ಆರಂಭ ಆದವು. ಶಿಶಿರ್ ಅವರಿಗೆ ಈ ವಿಚಾರ ಸಾಕಷ್ಟು ಬೇಸರ ಮೂಡಿಸಿತು. ‘ನಾನು ಆ ಪದ ಬಳಕೆ ಮಾಡಿಲ್ಲ’ ಎಂದು ಚೈತ್ರಾ ಹೇಳಿದರೆ, ತ್ರಿವಿಕ್ರಂ ಅವರು ‘ನೀವು ಈ ಪದ ಬಳಕೆ ಮಾಡಿದ್ದೀರಿ’ ಎಂದು ಒತ್ತಿ ಹೇಳಿದರು.

ಇದನ್ನೂ ಓದಿ: ‘ತಲೆ ಸುತ್ತಿ ಬಿದ್ದು ಆಗಾಗ ಹೊರಗೆ ಹೋಗ್ತೀರಿ’: ಚೈತ್ರಾಗೆ ತಿವಿದ ಭವ್ಯಾ

‘ನಾನು ಆ ಶಬ್ದ (ಜೊಲ್ಲು) ಬಳಕೆ ಮಾಡಿದ್ದರೆ ನನಗೆ ನೀವು ಕಾಲಿನಲ್ಲಿ ಹಾಕಿಕೊಂಡಿದ್ದರಿಂದ ಹೊಡೆಯಿರಿ’ ಎಂದು ಶಿಶಿರ್​ಗೆ ಚಾಲೆಂಜ್ ಮಾಡಿದರು ಚೈತ್ರಾ. ಆದರೆ, ಈ ಪದವನ್ನು ಅವರು ನಿಜಕ್ಕೂ ಹೇಳಿದ್ದಾರಾ ಅಥವಾ ಇಲ್ಲವಾ ಎಂಬ ಪ್ರಶ್ನೆಗೆ ಉತ್ತರ ಸಿಗೋದು ಕಷ್ಟ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:28 am, Fri, 6 December 24

ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?