AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ಶಬ್ದ ಹೇಳಿದ್ರೆ ಚಪ್ಪಲಿಲಿ ಹೊಡೀರಿ’; ಶಿಶಿರ್​ಗೆ ಚೈತ್ರಾ ಚಾಲೆಂಜ್

ಚೈತ್ರಾ ಅವರು ಮಾತಿನ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆದರೆ, ಕೆಲವೊಮ್ಮೆ ಅವರು ಆಡುವ ಮಾತುಗಳು ಮಿತಿ ಮೀರುತ್ತವೆ. ಇದರಿಂದ ಅನೇಕರಿಗೆ ಬೇಸರ ಆಗಿದ್ದು ಇದೆ. ಈ ವಿಚಾರದಲ್ಲಿ ಚೈತ್ರಾ ಹಲವು ಬಾರಿ ಎಡವಿದ್ದಾರೆ.

‘ಆ ಶಬ್ದ ಹೇಳಿದ್ರೆ ಚಪ್ಪಲಿಲಿ ಹೊಡೀರಿ’; ಶಿಶಿರ್​ಗೆ ಚೈತ್ರಾ ಚಾಲೆಂಜ್
ಶಿಶಿರ್-ಚೈತ್ರಾ
ರಾಜೇಶ್ ದುಗ್ಗುಮನೆ
|

Updated on:Dec 06, 2024 | 7:31 AM

Share

ಬಿಗ್ ಬಾಸ್​ನಲ್ಲಿ ಚೈತ್ರಾ ಹಾಗೂ ಶಿಶಿರ್ ಮಧ್ಯೆ ದೊಡ್ಡ ವಾಕ್ ಸಮರ ನಡೆದಿದೆ. ಅದಕ್ಕೆ ಕಾರಣ ಆಗಿರೋದು ಚೈತ್ರಾ ಬಳಕೆ ಮಾಡಿದ ಪದ. ಶಿಶಿರ್ ಜೊಲ್ಲ, ಹೆಣ್ಣುಮಕ್ಕಳ ಹಿಂದೆ ತಿರುಗುತ್ತಾ ಇರುತ್ತಾನೆ ಎಂಬ ಪದವನ್ನು ಚೈತ್ರಾ ಬಳಕೆ ಮಾಡಿದ್ದಾಗಿ ತ್ರಿವಿಕ್ರಂ ಹೇಳಿದ್ದಾರೆ. ಈ ವಿಚಾರಕ್ಕೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ಆಗಿವೆ. ಚೈತ್ರಾ, ತ್ರಿವಿಕ್ರಂ ಹಾಗೂ ಶಿಶಿರ್ ಮಧ್ಯೆ ಈ ವಿಚಾರಕ್ಕೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.

ಚೈತ್ರಾ ಅವರು ಮಾತಿನ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆದರೆ, ಕೆಲವೊಮ್ಮೆ ಅವರು ಆಡುವ ಮಾತುಗಳು ಮಿತಿ ಮೀರುತ್ತವೆ. ಇದರಿಂದ ಅನೇಕರಿಗೆ ಬೇಸರ ಆಗಿದ್ದು ಇದೆ. ಈ ವಿಚಾರದಲ್ಲಿ ಚೈತ್ರಾ ಹಲವು ಬಾರಿ ಎಡವಿದ್ದಾರೆ. ಈಗ ಚೈತ್ರಾ ಅವರು ತಾವು ಆ ಪದ ಬಳಕೆ ಮಾಡಿಲ್ಲ ಎಂದು ಹೇಳಿದರೆ, ತ್ರಿವಿಕ್ರಂ ಅವರು ಚೈತ್ರಾ ಆ ಪದ ಬಳಕೆ ಮಾಡಿದ್ದಾರೆ ಎಂದು ವಾದಿಸುತ್ತಿದ್ದಾರೆ.

ಚೈತ್ರಾ ಹಾಗೂ ತ್ರಿವಿಕ್ರಂ ಮಧ್ಯೆ ಜಗಳ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ತ್ರಿವಿಕ್ರಂ ಅವರು ಬಾಯ್ತಪ್ಪಿ ಚೈತ್ರಾ ಅವರು ಶಿಶಿರ್ ವಿರುದ್ಧ ಈ ರೀತಿ ಹೇಳಿದ್ದರು ಎಂದು ಹೇಳಿಕೆ ಕೊಟ್ಟರು. ಅಲ್ಲಿಂದ ಚರ್ಚೆಗಳು ಆರಂಭ ಆದವು. ಶಿಶಿರ್ ಅವರಿಗೆ ಈ ವಿಚಾರ ಸಾಕಷ್ಟು ಬೇಸರ ಮೂಡಿಸಿತು. ‘ನಾನು ಆ ಪದ ಬಳಕೆ ಮಾಡಿಲ್ಲ’ ಎಂದು ಚೈತ್ರಾ ಹೇಳಿದರೆ, ತ್ರಿವಿಕ್ರಂ ಅವರು ‘ನೀವು ಈ ಪದ ಬಳಕೆ ಮಾಡಿದ್ದೀರಿ’ ಎಂದು ಒತ್ತಿ ಹೇಳಿದರು.

ಇದನ್ನೂ ಓದಿ: ‘ತಲೆ ಸುತ್ತಿ ಬಿದ್ದು ಆಗಾಗ ಹೊರಗೆ ಹೋಗ್ತೀರಿ’: ಚೈತ್ರಾಗೆ ತಿವಿದ ಭವ್ಯಾ

‘ನಾನು ಆ ಶಬ್ದ (ಜೊಲ್ಲು) ಬಳಕೆ ಮಾಡಿದ್ದರೆ ನನಗೆ ನೀವು ಕಾಲಿನಲ್ಲಿ ಹಾಕಿಕೊಂಡಿದ್ದರಿಂದ ಹೊಡೆಯಿರಿ’ ಎಂದು ಶಿಶಿರ್​ಗೆ ಚಾಲೆಂಜ್ ಮಾಡಿದರು ಚೈತ್ರಾ. ಆದರೆ, ಈ ಪದವನ್ನು ಅವರು ನಿಜಕ್ಕೂ ಹೇಳಿದ್ದಾರಾ ಅಥವಾ ಇಲ್ಲವಾ ಎಂಬ ಪ್ರಶ್ನೆಗೆ ಉತ್ತರ ಸಿಗೋದು ಕಷ್ಟ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:28 am, Fri, 6 December 24

ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್