AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಚಿ-ಭವಿಷ್​ ನಿಶ್ಚಿತಾರ್ಥ ನಿಲ್ಲಿಸಲು ಭುವಿಯ ಪ್ಲಾನ್​; ಸಾನಿಯಾಗೆ ತಲೆನೋವಾದ ರೇಚಲ್​

ರೇಚಲ್​ ಹಾಗೂ ಭವಿಷ್​ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ. ಇಬ್ಬರ ಮದುವೆಯೂ ನೆರವೇರಿದೆ. ರೇಚಲ್​ ಕತ್ತಿನಲ್ಲಿ ಇರುವ ತಾಳಿಯೊಂದೇ ಇದಕ್ಕೆ ಸಾಕ್ಷಿ. ಅದು ಬಿಟ್ಟರೆ ಅವಳ ಬಳಿ ಮತ್ತಾವುದೇ ಸಾಕ್ಷಿಯೂ ಉಳಿದಿಲ್ಲ.

ಸುಚಿ-ಭವಿಷ್​ ನಿಶ್ಚಿತಾರ್ಥ ನಿಲ್ಲಿಸಲು ಭುವಿಯ ಪ್ಲಾನ್​; ಸಾನಿಯಾಗೆ ತಲೆನೋವಾದ ರೇಚಲ್​
ಸುಚಿ-ಭುವಿ-ಭವಿಷ್
TV9 Web
| Edited By: |

Updated on:Feb 22, 2022 | 6:06 PM

Share

ಹರ್ಷ ಮತ್ತು ಭುವಿಯ ಲವ್​​ಸ್ಟೋರಿ ಟ್ರ್ಯಾಕ್​ನಲ್ಲಿ ಸಾಗುತ್ತಿದ್ದ ‘ಕನ್ನಡತಿ’ ಧಾರಾವಾಹಿ (Kannadathi Serial) ಈಗ ಹೊಸ ಟ್ರ್ಯಾಕ್​ಗೆ ಹೊರಳಿದೆ. ಹರ್ಷನ ತಂಗಿ ಸುಚಿ ಎಂಗೇಜ್​ಮೆಂಟ್​ ಹಾಗೂ ಮದುವೆ ವಿಚಾರ ಹೈಲೈಟ್​ ಆಗುತ್ತಿದೆ. ಸುಚಿಗೆ ಭವಿಷ್ ಜತೆ ಎಂಗೇಜ್​ಮೆಂಟ್​ ಮಾಡಲಾಗುತ್ತಿದೆ. ಇದು ಧಾರಾವಾಹಿಯನ್ನು ಹೊಸ ಮಗ್ಗುಲಿಗೆ ತೆಗೆದುಕೊಂಡುಹೋಗುತ್ತಿದೆ. ಭವಿಷ್​ ಕೆಟ್ಟವನು. ಆತನಿಗೆ ಈಗಾಗಲೇ ಒಂದು ಮದುವೆ ಕೂಡ ಆಗಿದೆ. ಆದಾಗ್ಯೂ ಈ ವಿಚಾರವನ್ನು ಗುಟ್ಟಾಗಿ ಇಡಲಾಗಿದೆ. ಭುವಿಗೆ (Kannadathi Bhuvi) ಅನುಮಾನ ಶುರುವಾಗಿದ್ದು, ಎಂಗೇಜ್​ಮೆಂಟ್​ ನಿಲ್ಲಿಸೋಕೆ ಪ್ಲಾನ್​ ರೂಪಿಸಿದ್ದಾಳೆ. ರೇಚಲ್​ ಹಾಗೂ ಭವಿಷ್​ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ. ಇಬ್ಬರ ಮದುವೆಯೂ ನೆರವೇರಿದೆ. ರೇಚಲ್​ ಕೊರಳಿನಲ್ಲಿ ಇರುವ ತಾಳಿಯೊಂದೇ ಇದಕ್ಕೆ ಸಾಕ್ಷಿ. ಅದು ಬಿಟ್ಟರೆ ಅವಳ ಬಳಿ ಮತ್ತಾವುದೇ ಸಾಕ್ಷಿಯೂ ಉಳಿದಿಲ್ಲ. ಸುಚಿಗೆ ನೀಡಿದ ಬರ್ತ್​ಡೇ ಪಾರ್ಟಿ ದಿನದಂದು ಭವಿಷ್​ ನಿಜವಾದ ಮುಖ ಭುವಿಗೆ ತಿಳಿದಿತ್ತು. ಈ ವಿಚಾರದಲ್ಲಿ ಆಕೆ ಬೆನ್ನು ಬಿಡದೆ ತನಿಖೆ ನಡೆಸಿದ್ದಾಳೆ. ಈ ಸಂದರ್ಭದಲ್ಲಿ ಆತನ ನಿಜವಾದ ಮುಖ ಬಯಲಾಗಿದೆ.

ಈ ನಿಶ್ಚಿತಾರ್ಥವನ್ನು ಹೇಗಾದರೂ ತಡೆಯಬೇಕು ಎಂದು ಭುವಿ ನಿರ್ಧರಿಸಿದ್ದಾಳೆ. ಈ ಕಾರಣಕ್ಕೆ ರೇಚಲ್​​ನನ್ನು ಕರೆದುಕೊಂಡು ಭವಿಷ್​ ಮನೆಗೆ ಬಂದಿದ್ದಾಳೆ. ಅದೂ ಸುಚಿ-ಭವಿಷ್​ ನಿಶ್ಚಿತಾರ್ಥದಂದು. ಇದನ್ನು ನೋಡಿದ ಭವಿಷ್​ ಶಾಕ್​ ಆಗಿದ್ದಾನೆ. ರೇಚಲ್​​ನನ್ನು ಸಮಾಧಾನಪಡಿಸಲು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾನೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಭುವಿಯ ಜತೆ ಸೇರಿ ರೇಚಲ್​ ನೇರವಾಗಿ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾಳೆ. ಅಲ್ಲಿಂದ ಚಿತ್ರಣ ಬದಲಾಗಿದೆ.

ಮನೆ ಒಳಗೆ ಭವಿಷ್​ ಹಾಗೂ ರೇಚಲ್​ ಮುಖಾಮುಖಿ ಆಗಿದ್ದಾರೆ. ರೇಚಲ್​ ಅಳೋಕೆ ಪ್ರಾರಂಭಿಸಿದ್ದಾಳೆ. ಭವಿಷ್​ ಆಕೆಯನ್ನು ಸಮಾಧಾನ ಮಾಡೋಕೆ ಹೋಗಿದ್ದಾನೆ. ಅದೇ ಸಂದರ್ಭದಲ್ಲಿ ಭವಿಷ್​ ತಂದೆಯ ಎಂಟ್ರಿ ಆಗಿದೆ. ‘ನಾನು ಅವಳನ್ನು ಪ್ರೀತಿಸುತ್ತಿಲ್ಲ. ಅವಳು ನನ್ನನ್ನು ಪ್ರೀತಿಸುತ್ತಿದ್ದಾಳೆ’ ಎಂಬ ಸುಳ್ಳು ಹೇಳಿದ್ದಾನೆ. ಈ ವಿಚಾರವನ್ನು ಭವಿಷ್​ ತಂದೆ ರತ್ನಮಾಲಾ ಬಳಿ ಹೇಳಿದ್ದಾನೆ.

ಭುವಿ ಕೂಡ ಸುಮ್ಮನೆ ಕೂತಿಲ್ಲ. ಭವಿಷ್ ಹಾಗೂ ರೇಚಲ್​ ಪ್ರೀತಿಸುತ್ತಿರುವ ಸಂಗತಿಯನ್ನು ಸುಚಿ ಮುಂದೆ ಇಟ್ಟಿದ್ದಾಳೆ. ಈ ವಿಚಾರ ಕೇಳಿ ಸುಚಿ ನಿಜಕ್ಕೂ ಶಾಕ್​ ಆಗಿದ್ದಾಳೆ. ಭವಿಷ್​ನನ್ನು ಮುಂದೆ ಬಿಟ್ಟಿದ್ದು ಸಾನಿಯಾ. ಇಬ್ಬರ ಮದುವೆ ನಡೆದರೆ ಸಾನಿಯಾಗೆ ಲಾಭ ಇದೆ. ಈಗ ರೇಚಲ್​ ಎಂಟ್ರಿ ಆಗಿರುವುದು ಆಕೆಗೆ ತಲೆನೋವಾಗಿದೆ. ಸುಚಿ ಮದುವೆಯ ಎಪಿಸೋಡ್​ಗಳು ಕೆಲವರಿಗೆ ಇಷ್ಟವಾಗುತ್ತಿಲ್ಲ. ‘ಈ ಕಥೆಯನ್ನು ಸುಮ್ಮನೆ ಎಳೆದಾಡಬೇಡಿ’ ಎನ್ನುವ ಕಮೆಂಟ್​ಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹರ್ಷನಿಗೆ ಭುವಿಯ ಅದ್ದೂರಿ ಪ್ರಪೋಸ್​; ಭಾನುವಾರ ‘ಕನ್ನಡತಿ’ ಧಾರಾವಾಹಿ 2 ಗಂಟೆಯ ವಿಶೇಷ ಸಂಚಿಕೆ  

ಮೇಕಪ್ ಇಲ್ಲದ ಫೋಟೋ ಹಂಚಿಕೊಂಡ ‘ಕನ್ನಡತಿ’ ನಟಿ ರಂಜನಿ ರಾಘವನ್; ಅಭಿಮಾನಿಗಳಿಂದ ಮೆಚ್ಚುಗೆ

Published On - 6:04 pm, Tue, 22 February 22

Follow Us
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?