AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪಾರು’ ಧಾರಾವಾಹಿಯಲ್ಲಿ ಸಖತ್​ ಆ್ಯಕ್ಷನ್​; ಆದಿ ಮದುವೆಗೆ ಅಡ್ಡಿ ಆದ ಅರುಂಧತಿ

ಆದಿತ್ಯನಿಗೆ ಕಥಾ ನಾಯಕಿ ಪಾರುನ ಮೇಲೆ ಪ್ರೀತಿ ಇದೆ. ಆಕೆಯನ್ನು ಮನಸಾರೆ ಪ್ರೀತಿಸುತ್ತಿದ್ದಾನೆ ಆದಿ. ಆದರೆ, ಆಕೆ ಮನೆಯ ಕೆಲಸದವಳು. ಆಕೆಯನ್ನು ಅಖಿಲಾಂಡೇಶ್ವರಿ ಒಪ್ಪುವುದಿಲ್ಲ ಎಂಬುದು ಎಲ್ಲರಿಗೂ ಮನದಟ್ಟಾಗಿದೆ.

‘ಪಾರು’ ಧಾರಾವಾಹಿಯಲ್ಲಿ ಸಖತ್​ ಆ್ಯಕ್ಷನ್​; ಆದಿ ಮದುವೆಗೆ ಅಡ್ಡಿ ಆದ ಅರುಂಧತಿ
ಪಾರು ಧಾರಾವಾಹಿ
TV9 Web
| Edited By: |

Updated on:Feb 21, 2022 | 9:13 PM

Share

‘ಪಾರು’ ಧಾರಾವಾಹಿ (Paaru Serial) ಹೊಸಹೊಸ ಟ್ವಿಸ್ಟ್​ಗಳನ್ನು ಪಡೆದುಕೊಂಡು ಸಾಗುತ್ತಿದೆ. ಇಡೀ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಕಥೆಯ ಹೀರೋ ಆದಿತ್ಯನ ಮದುವೆಗೆ ತಯಾರಿ ನಡೆದಿದೆ. ಅಖಿಲಾಂಡೇಶ್ವರಿ ತನ್ನ ಮಗ ಆದಿತ್ಯನ ಮದುವೆಯನ್ನು ಸಾಂಗತ್ಯವಾಗಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದಳು. ಯಾಮಿನಿ ಜತೆ ಆದಿತ್ಯನ ಮದುವೆ ನಡೆಯುತ್ತಿದೆ. ಆದರೆ, ಇದನ್ನು ತಡೆಯಲು ವೀರಯ್ಯ ದೇವನ ಎಂಟ್ರಿ ಆಗಿದೆ. ಧಾರಾವಾಹಿಯಲ್ಲಿ (Serial) ದೊಡ್ಡ ಫೈಟ್​ ಕೂಡ ನಡೆದಿದೆ. ಆದಿತ್ಯ-ಯಾಮಿನಿ ಮದುವೆ ಹೇಗೆ ನಿಲ್ಲಲಿದೆ ಎನ್ನುವ ಕುತೂಹಲ ವೀಕ್ಷಕರ ವಲಯದಲ್ಲಿದೆ.

ಆದಿತ್ಯನಿಗೆ ಕಥಾ ನಾಯಕಿ ಪಾರುನ ಮೇಲೆ ಪ್ರೀತಿ ಇದೆ. ಆಕೆಯನ್ನು ಮನಸಾರೆ ಪ್ರೀತಿಸುತ್ತಿದ್ದಾನೆ ಆದಿ. ಆದರೆ, ಆಕೆ ಮನೆಯ ಕೆಲಸದವಳು. ಆಕೆಯನ್ನು ಅಖಿಲಾಂಡೇಶ್ವರಿ ಒಪ್ಪುವುದಿಲ್ಲ ಎಂಬುದು ಎಲ್ಲರಿಗೂ ಮನದಟ್ಟಾಗಿದೆ. ಈ ಕಾರಣಕ್ಕೆ ಆದಿ ಹಾಗೂ ಪಾರು ಜತೆಗಿನ ಮದುವೆ ಅಸಾಧ್ಯ ಎಂದು ಎಲ್ಲರೂ ಭಾವಿಸಿದ್ದಾರೆ. ಅಖಿಲಾಂಡೇಶ್ವರಿ ತನ್ನ ಮಗ ಆದಿತ್ಯನ ಮದುವೆಯನ್ನು ಯಾಮಿನಿ ಜತೆ ಮಾಡುತ್ತಿದ್ದಾಳೆ. ಈ ಯಾಮಿನಿ ಅರುಂಧತಿ ಕಡೆಯವಳು. ಅರುಂಧತಿಗೂ ಯಾಮಿನಿಗೂ ಹಳೆಯ ದ್ವೇಷವಿದೆ. ಅಖಿಲಾಂಡೇಶ್ವರಿ ವಿರುದ್ಧ ಹಗೆ ತೀರಿಸಿಕೊಳ್ಳಲು ಅರುಂಧತಿ ಮದುವೆ ಪ್ಲ್ಯಾನ್​ ಮಾಡಿದ್ದಾಳೆ.

ಆದಿಯನ್ನು ಮದುವೆ ಆಗಲು ಹೊರಟಿರುವ ಯಾಮಿನಿ ಹಿಂದೆ ಕೆಟ್ಟ ಉದ್ದೇಶ ಇದೆ ಎಂಬುದು ಅಖಿಲಾಂಡೇಶ್ವರಿಗೆ ಈಗ ಗೊತ್ತಾಗಿದೆ. ಅರಸನಕೋಟೆ ವಂಶಕ್ಕೆ ಆಪತ್ತು ಇದೆ ಎಂಬುದರ ಸೂಚನೆ ಸಹ ಸಿಕ್ಕಿದೆ. ಹೀಗಿರುವಾಗಲೇ ಅಖಿಲಾಂಡೇಶ್ವರಿಯನ್ನು ಅರುಂಧತಿ ಕಿಡ್ನ್ಯಾಪ್​ ಮಾಡಿಸಿದ್ದಾಳೆ. ಇದನ್ನೇ ಇಟ್ಟುಕೊಂಡು ಆದಿತ್ಯನನ್ನು ಅರುಂಧತಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾಳೆ.

ಅಖಿಲಾಂಡೇಶ್ವರಿಯನ್ನು ಬಿಡುಗಡೆ ಮಾಡಬೇಕು ಎಂದರೆ ಯಾಮಿನಿ ಕತ್ತಿಗೆ ಆದಿತ್ಯ ತಾಳಿಕಟ್ಟಬೇಕು ಎನ್ನುವ ಕಂಡೀಷನ್​ ಹಾಕಿದ್ದಾಳೆ ಅರುಂಧತಿ. ಅತ್ತ ಅರುಂಧತಿಯನ್ನು ಕೂಡಿಟ್ಟ ಜಾಗಕ್ಕೆ ವೀರಯ್ಯ ದೇವನ ಎಂಟ್ರಿ ಆಗಿದೆ. ಅಲ್ಲಿರುವ ಬೌನ್ಸರ್​ಗಳ ಜತೆ ಫೈಟ್​ ಮಾಡಿದ್ದಾನೆ ವೀರಯ್ಯ ದೇವ. ಈ ಮೂಲಕ ಆದಿ-ಯಾಮಿನಿ ಮದುವೆ ತಪ್ಪಿಸೋಕೆ ಪ್ರಯತ್ನಿಸುತ್ತಿದ್ದಾನೆ. ಈ ಧಾರಾವಾಹಿ ಮುಂದೆ ಯಾವ ರೀತಿಯ ತಿರುವು ಪಡೆದುಕೊಂಡು ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ವೀಕ್ಷಕರ ವಲಯದಲ್ಲಿ ‘ಪಾರು’ ಧಾರಾವಾಹಿ ಹೆಚ್ಚು ಫೇಮಸ್​ ಆಗಿದೆ. ತನ್ನದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಈ ಸೀರಿಯಲ್​ ಈಗಾಗಲೇ 800 ಎಪಿಸೋಡ್​ಗಳನ್ನು ಪೂರೈಸಿದೆ. 800 ಕಂತುಗಳನ್ನು ಪೂರೈಸಿದ ಖುಷಿಗೆ ಇತ್ತೀಚೆಗೆ ಇಡೀ ತಂಡ ಸಂಭ್ರಮಿಸಿತ್ತು. ಶೂಟಿಂಗ್​ ಸೆಟ್​ನಲ್ಲಿ ಕೇಕ್​ ಕತ್ತರಿಸುವ ಮೂಲಕ ಖಷಿಯ ಕ್ಷಣವನ್ನು ಸೆಲೆಬ್ರೇಟ್​ ಮಾಡಿದ್ದರು ‘ಪಾರು’ ತಂಡದವರು. ಈಗ ಕಥೆಯಲ್ಲಿ ಹೊಸ ಹೊಸ ಟ್ವಿಸ್ಟ್​ಗಳನ್ನು ನೀಡುವ ಮೂಲಕ ಪ್ರೇಕ್ಷಕರಿಗೆ ಈ ಸೀರಿಯಲ್​ ಇನ್ನಷ್ಟು ಹತ್ತಿರವಾಗಿದೆ.

ಇದನ್ನೂ ಓದಿ: ಮೇಕಪ್ ಇಲ್ಲದ ಫೋಟೋ ಹಂಚಿಕೊಂಡ ‘ಕನ್ನಡತಿ’ ನಟಿ ರಂಜನಿ ರಾಘವನ್; ಅಭಿಮಾನಿಗಳಿಂದ ಮೆಚ್ಚುಗೆ

‘ಪಾರು’ ಕಥೆಗೆ ಟ್ವಿಸ್ಟ್​ ನೀಡಲು ಮತ್ತೆ ಬಂದ ಎಸ್​. ನಾರಾಯಣ್​; ರೋಚಕತೆ ಮೂಡಿಸಿದ ಎಪಿಸೋಡ್​

Published On - 9:11 pm, Mon, 21 February 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್