Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯ ಬೆಡ್​ನಲ್ಲಿ ಮಹಿಳಾ ಸ್ಪರ್ಧಿಗೆ ಕಿಸ್​ ಮಾಡಲು ಬಂದ ನಟ; ಈ ವೇಳೆ ಬಂತು ಖಡಕ್​ ಎಚ್ಚರಿಕೆ

ನಟ ಕರಣ್​ ಕುಂದ್ರಾ ಹಾಗೂ ತೇಜಸ್ವಿ ಪ್ರಕಾಶ್​ ಬಿಗ್​ ಬಾಸ್​ ಮನೆಯಲ್ಲಿದ್ದಾರೆ. ಇಬ್ಬರೂ ಸಾಕಷ್ಟು ವಿಚಾರಕ್ಕೆ ಕಿತ್ತಾಡಿಕೊಳ್ಳುತ್ತಿದ್ದಾರೆ. ಆದರೆ, ಇಬ್ಬರ ನಡುವಣ ಕೆಮೆಸ್ಟ್ರಿ ವೀಕ್ಷಕರಿಗೆ ಹೆಚ್ಚು ಇಷ್ಟವಾಗುತ್ತಿದೆ. ಅ

ಬಿಗ್​ ಬಾಸ್​ ಮನೆಯ ಬೆಡ್​ನಲ್ಲಿ ಮಹಿಳಾ ಸ್ಪರ್ಧಿಗೆ ಕಿಸ್​ ಮಾಡಲು ಬಂದ ನಟ; ಈ ವೇಳೆ ಬಂತು ಖಡಕ್​ ಎಚ್ಚರಿಕೆ
ಕರಣ್​-ತೇಜಸ್ವಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 25, 2021 | 4:48 PM

‘ಹಿಂದಿ ಬಿಗ್​ ಬಾಸ್ 15’ನೇ ಸೀಸನ್​ ಶುರುವಾಗಿ ಕೆಲವು ತಿಂಗಳು ಕಳೆದಿದೆ. ಕೊವಿಡ್​ ಹೆಚ್ಚುವ ಆತಂಕ ಎದುರಾಗಿದ್ದು, ಇನ್ನು ಕೆಲವೇ ವಾರಗಳಲ್ಲಿ ಈ ಶೋ ಪೂರ್ಣಗೊಳ್ಳಲಿದೆ ಎನ್ನಲಾಗುತ್ತಿದೆ. ಇನ್ನು, ಬಿಗ್​ ಬಾಸ್​ ಮನೆಯಲ್ಲಿ ನಿತ್ಯ ಹೊಸಹೊಸ ಬೆಳವಣಿಗೆ ನಡೆಯುತ್ತಿದೆ. ದೊಡ್ಮನೆಯಲ್ಲಿ ಪ್ರೇಮ್​ ಕಹಾನಿ, ಜಗಳಗಳು ಹೆಚ್ಚು ಸದ್ದು ಮಾಡುತ್ತಿವೆ. ಈಗ ಬಿಗ್​ ಬಾಸ್​ ಮನೆಯಲ್ಲಿ ನಡೆದ ಘಟನೆ ಹೈಲೈಟ್​ ಆಗುತ್ತಿದೆ.

ನಟ ಕರಣ್​ ಕುಂದ್ರಾ ಹಾಗೂ ತೇಜಸ್ವಿ ಪ್ರಕಾಶ್​ ಬಿಗ್​ ಬಾಸ್​ ಮನೆಯಲ್ಲಿದ್ದಾರೆ. ಇಬ್ಬರೂ ಸಾಕಷ್ಟು ವಿಚಾರಕ್ಕೆ ಕಿತ್ತಾಡಿಕೊಳ್ಳುತ್ತಿದ್ದಾರೆ. ಆದರೆ, ಇಬ್ಬರ ನಡುವಣ ಕೆಮೆಸ್ಟ್ರಿ ವೀಕ್ಷಕರಿಗೆ ಹೆಚ್ಚು ಇಷ್ಟವಾಗುತ್ತಿದೆ. ಅವರಿಬ್ಬರ ಕಿತ್ತಾಟವನ್ನೂ ವೀಕ್ಷಕರು ಇಷ್ಟಪಡುತ್ತಿದ್ದಾರೆ. ಈ ಮಧ್ಯೆ ಕರಣ್​ ಅವರು ತೇಜಸ್ವಿಗೆ ಕಿಸ್​ ಮಾಡೋಕೆ ಮುಂದಾಗಿದ್ದರು. ಆಗ ತೇಜಸ್ವಿ ಕಠಿಣ ಎಚ್ಚರಿಕೆ ಒಂದನ್ನು ನೀಡಿದ್ದಾರೆ.

ಕರಣ್​ ಹಾಗೂ ತೇಜಸ್ವಿ ಇಬ್ಬರೂ ಬೆಡ್​ ಮೇಲೆ ಮಲಗಿದ್ದರು. ಆಗ ತೇಜಸ್ವಿ ಬಳಿಗೆ ಕರಣ್​ ಬಂದಿದ್ದಾರೆ. ಈ ವೇಳೆ ಕ್ಯಾಮೆರಾವನ್ನು ಜೂಮ್​ ಮಾಡಲಾಯಿತು. ಕರಣ್​ ಕಿಸ್​ ಮಾಡೋಕೆ ಬಂದಿದ್ದಾನೆ ಎಂಬುದು ತೇಜಸ್ವಿಗೆ ಗೊತ್ತಾಗಿತ್ತು. ಆಗ ಅವರು ‘ಆ ಬಗ್ಗೆ ಯೋಚನೆಯನ್ನೂ ಮಾಡಬೇಡ’ ಎಂದು ಎಚ್ಚರಿಸಿದ್ದಾರೆ. ರಾಖಿ ಸಾವಂತ್​ ಬೆಡ್​ ಪಕ್ಕದಲ್ಲೇ ಇದ್ದರು. ಅವರು ಬೆಡ್​ನಲ್ಲಿ ಏನಾಗುತ್ತಿದೆ ಎಂಬುದನ್ನು ನೋಡೋಕೆ ಬಂದರು. ಆಗ ಕರಣ್​ ಹೆದರಿದಂತೆ ಕಂಡುಬಂತು.

ಬಿಗ್​ ಬಾಸ್ ಮನೆಯಲ್ಲಿ ಕ್ರಿಸಮಸ್​ ಆಚರಣೆ ಮಾಡಲಾಗುತ್ತಿತ್ತು. ಈ ವೇಳೆ ತೇಜಸ್ವಿ ಹಾಗೂ ಕರಣ್​ ಇಬ್ಬರೂ ಗ್ಲಾಸ್​ ತಡಗೋಡೆಯ ಎರಡು ಕಡೆಗಳಲ್ಲಿ ನಿಂತಿದ್ದರು. ಆಗ ಅವರು ಕಿಸ್​ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಇವರ ಮಧ್ಯದಲ್ಲಿ ಗ್ಲಾಸ್​ ಇತ್ತು. ಈ ವಿಡಿಯೋ ಕೂಡ ಸಾಕಷ್ಟು ವೈರಲ್​ ಆಗಿತ್ತು.

ಜನವರಿ ವೇಳೆಗೆ ‘ಬಿಗ್​ ಬಾಸ್​ 15’ ಪೂರ್ಣಗೊಳ್ಳಲಿದೆ ಎನ್ನಲಾಗುತ್ತಿದೆ. ಈ ಬಾರಿ ಕೊವಿಡ್​ ಭಯ ಕಾಡುತ್ತಿರುವುದರಿಂದ ವಾಹಿನಿಯವರು ಈ ಶೋ ಅನ್ನು ಬಹುಬೇಗ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ವಾಹಿನಿ ಕಡೆಯವರಿಂದ ಅಧಿಕೃತ ಮಾಹಿತಿ ಹೊರ ಬರಬೇಕಿದೆ.

ಇದನ್ನೂ ಓದಿ: ಈ ಏಳು ಸ್ಟಾರ್​ ನಟರ ಬಳಿ ಇದೆ ಪ್ರೈವೇಟ್​ ಜೆಟ್​; ಯಾರ್ಯಾರು? ಇಲ್ಲಿದೆ ಮಾಹಿತಿ

Bigg Boss 5 Winner: ‘ಬಿಗ್​ ಬಾಸ್​ ತೆಲುಗು 5’ ವಿನ್ನರ್​ ಯಾರು? ಇಲ್ಲಿದೆ ಮಾಹಿತಿ

ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ