AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss 5 Winner: ‘ಬಿಗ್​ ಬಾಸ್​ ತೆಲುಗು 5’ ವಿನ್ನರ್​ ಯಾರು? ಇಲ್ಲಿದೆ ಮಾಹಿತಿ

ಶ್ರೀರಾರಮಚಂದ್ರ, ಸನ್ನಿ, ಸಿರಿ ಶಣ್ಮುಖ್​ ಹಾಗೂ ಮಾನಸ್​ ಅವರು ಫಿನಾಲೆ ರೇಸ್​ನಲ್ಲಿದ್ದರು. ಭಾನುವಾರ ನಡೆದ ಗ್ರ್ಯಾಂಡ್​ ಫಿನಾಲೆಯನ್ನು ಅಕ್ಕಿನೇನಿ ನಾಗಾರ್ಜುನ ನಡೆಸಿಕೊಟ್ಟರು.

Bigg Boss 5 Winner: ‘ಬಿಗ್​ ಬಾಸ್​ ತೆಲುಗು 5’ ವಿನ್ನರ್​ ಯಾರು? ಇಲ್ಲಿದೆ ಮಾಹಿತಿ
ಬಿಗ್​ ಬಾಸ್​ ವಿನ್ನರ್​
TV9 Web
| Edited By: |

Updated on: Dec 20, 2021 | 3:00 AM

Share

ತೆಲುಗು ಬಿಗ್​ ಬಾಸ್​ ಸೀಸನ್​ 5 ಫಿನಾಲೆ (Bigg Boss Telugu 5 Finale) ಪೂರ್ಣಗೊಂಡಿದೆ. ಭಾನುವಾರ (ಡಿಸೆಂಬರ್​ 19) ಅದ್ದೂರಿಯಾಗಿ​ ಫಿನಾಲೆ ನಡೆದಿಯಿತು. ಯಾರು ವಿನ್​ ಆಗಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಒಟ್ಟೂ ಐದು ಮಂದಿ ಫಿನಾಲೆ ರೇಸ್​ನಲ್ಲಿದ್ದರು. ಈ ಪೈಕಿ ಕಿರುತೆರೆ ನಟ ವಿ.ಜೆ. ಸನ್ನಿ ‘ತೆಲುಗು ಬಿಗ್​ ಬಾಸ್​ 5’ ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಬಹುಮಾನದ ಹಣ ಹಾಗೂ ಟ್ರೋಫಿಯೊಂದಿಗೆ ಅವರು ಮನೆಗೆ ತೆರಳಿದ್ದಾರೆ. ಆರಂಭದಿಂದಲೂ ಹೆಚ್ಚು ಮನರಂಜನೆ ನೀಡುತ್ತಾ ಎಲ್ಲರ ಗಮನ ಸೆಳೆದಿದ್ದ ಅವರು ಕೊನೆಗೂ ಗೆಲುವು ಕಂಡಿದ್ದಾರೆ.

ಶ್ರೀರಾರಮಚಂದ್ರ, ಸನ್ನಿ, ಸಿರಿ ಶಣ್ಮುಖ್​ ಹಾಗೂ ಮಾನಸ್​ ಅವರು ಫಿನಾಲೆ ರೇಸ್​ನಲ್ಲಿದ್ದರು. ಭಾನುವಾರ ನಡೆದ ಗ್ರ್ಯಾಂಡ್​ ಫಿನಾಲೆಯನ್ನು ಅಕ್ಕಿನೇನಿ ನಾಗಾರ್ಜುನ ನಡೆಸಿಕೊಟ್ಟರು. ಫಿನಾಲೆ ವೀಕ್​ಗೆ 13 ಕೋಟಿ ಮತಗಳು ಬಿದ್ದಿದ್ದವು. ಈ ಪೈಕಿ ಅತಿ ಹೆಚ್ಚು ವೋಟ್ ಪಡೆದು ಸನ್ನಿ ಗೆಲುವು ಕಂಡಿದ್ದಾರೆ. ಶಣ್ಮುಖ್​ ಅವರು ಮೊದಲ ರನ್ನರ್​ ಅಪ್​ ಆದರೆ, ಶ್ರೀರಾಮಚಂದ್ರ ಅವರು ಎರಡನೇ ರನ್ನರ್​ ಅಪ್​ ಆಗಿ ಹೊರ ಹೊಮ್ಮಿದ್ದಾರೆ.

19 ಮಂದಿ ಬಿಗ್​ ಬಾಸ್ ಮನೆ ಸೇರಿದ್ದರು. ಈ ಪೈಕಿ ಸನ್ನಿ ಗೆದ್ದು ಬೀಗಿದ್ದಾರೆ. ಘಟಾಘಟಿಗಳು ಎನಿಸಿಕೊಂಡವರು ಅಷ್ಟಾಗಿ ಬಿಗ್​ ಬಾಸ್​ ಮನೆಯಲ್ಲಿ ಇರಲಿಲ್ಲ. ಈ ಕಾರಣಕ್ಕೆ ಸಾಕಷ್ಟು ಮಂದಿ ತಾವು ಈ ಬಾರಿಯ ಸೀಸನ್​ ನೋಡುವುದಿಲ್ಲ ಎನ್ನುವ ಮಾತನ್ನು ಹೇಳಿದ್ದರು. ಅಕ್ಕಿನೇನಿ ನಾಗಾರ್ಜುನ ಅವರ ಅದ್ಭುತವಾಗಿ ಈ ಬಾರಿಯ ಸೀಸನ್​ಅನ್ನು ನಡೆಸಿಕೊಟ್ಟಿದ್ದರು. ಪತ್ರಕರ್ತನಾಗಿದ್ದ ಸನ್ನಿ, ನಂತರ ಕಿರುತೆರೆಗೆ ಕಾಲಿಟ್ಟರು. ಧಾರಾವಾಹಿ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದರು.

ಬಿಗ್​ ಬಾಸ್​ ಫಿನಾಲೆ ಸ್ಟಾರ್​ ನಟರು ಹಾಗೂ ನಿರ್ದೇಶಕರ ಸಮಾಗಮಕ್ಕೆ ಸಾಕ್ಷಿ ಆಯಿತು. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ ಜನವರಿ 7ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಪ್ರಚಾರದಲ್ಲಿ ರಾಜಮೌಳಿ ಬ್ಯುಸಿ ಆಗಿದ್ದಾರೆ. ಅವರು ಕೂಡ ಬಿಗ್​ ಬಾಸ್​ ವೇದಿಕೆ ಏರಿದ್ದರು. ರಣಬೀರ್​ ಕಪೂರ್ ಹಾಗೂ ಆಲಿಯಾ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ತೆಲುಗು, ಕನ್ನಡ ಮೊದಲಾದ ಭಾಷೆಗಳಲ್ಲಿ ಬರುತ್ತಿದೆ. ಈ ಕಾರಣಕ್ಕೆ ಈ ಜೋಡಿ ಬಿಗ್​ ಬಾಸ್​ ಮನೆಯ ವೇದಿಕೆ ಹತ್ತಿತ್ತು.

ನಾನಿ ಹಾಗೂ ಸಾಯಿ ಪಲ್ಲವಿ ಅಭಿನಯದ ‘ಶ್ಯಾಮ್​ ಸಿಂಗ​ ರಾಯ್​’ ಕೂಡ ರಿಲೀಸ್​ ಆಗುತ್ತಿದೆ. ಈ ಚಿತ್ರದ ಬಗ್ಗೆ ಮಾಹಿತಿ ನೀಡಿದರು ಈ ಜೋಡಿ. ಇನ್ನು, ರಶ್ಮಿಕಾ ಮಂದಣ್ಣ ಅವರು ‘ಪುಷ್ಪ’ ಸಿನಿಮಾ ತಂಡದ ಪರವಾಗಿ ಆಗಮಿಸಿದ್ದರು. ಈ ಎಲ್ಲರನ್ನೂ ಸ್ವಾಗತ ಮಾಡಿದ್ದು ಅಕ್ಕಿನೇನಿ ನಾಗಾರ್ಜುನ. ‘ತೆಲುಗು ಬಿಗ್​ ಬಾಸ್​ 5’ ನಡೆಸಿಕೊಡುತ್ತಿರುವ ಅವರು, ಈ ಎಲ್ಲರನ್ನೂ ಸ್ವಾಗತಿಸಿ ಪ್ರೀತಿಯಿಂದ ನಾಲ್ಕು ಮಾತನಾಡಿದರು.

ಇದನ್ನೂ ಓದಿ: ತೆಲುಗು ಬಿಗ್​ ಬಾಸ್​ ಫಿನಾಲೆ; ವೇದಿಕೆ ಮೇಲೆ ರಶ್ಮಿಕಾ, ರಾಜಮೌಳಿ, ಆಲಿಯಾ ಭಟ್​, ರಣಬೀರ್​ ಕಪೂರ್

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ