‘ಕರ್ಣ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್; ಕರ್ಣ-ನಿಧಿ ಮದುವೆ ಮಾಡಿಸ್ತಾಳೆ ನಿತ್ಯಾ

ಕರ್ಣ ಧಾರಾವಾಹಿಯಲ್ಲಿ ದೊಡ್ಡ ತಿರುವು ಎದುರಾಗಿದೆ. ಕರ್ಣ ಮತ್ತು ನಿಧಿ ಪ್ರೇಮಿಗಳು ಎಂಬ ಸತ್ಯ ಈಗ ಬಯಲಾಗಿದೆ. ಕರ್ಣನ ತಂದೆ ರಮೇಶ್ ಮೋಸದಿಂದ ಕರ್ಣ-ನಿತ್ಯಾ ಮದುವೆ ಮಾಡಿಸಿದ್ದ. ಆದರೆ, ಈಗ ನಿತ್ಯಾ ಸ್ವತಃ ಕರ್ಣ ಮತ್ತು ನಿಧಿ ವಿವಾಹಕ್ಕೆ ಮುಂದಾಗಿದ್ದಾಳೆ. ಇದು ನಿಜವಾದ ತಿರುವೋ ಅಥವಾ ಕನಸೋ ಎಂಬ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ.

‘ಕರ್ಣ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್; ಕರ್ಣ-ನಿಧಿ ಮದುವೆ ಮಾಡಿಸ್ತಾಳೆ ನಿತ್ಯಾ
ಕರ್ಣ ಧಾರಾವಾಹಿ
Edited By:

Updated on: Apr 23, 2026 | 8:06 AM

‘ಕರ್ಣ’ ಧಾರಾವಾಹಿಯಲ್ಲಿ ಈಗ ಒಂದು ದೊಡ್ಡ ಟ್ವಿಸ್ಟ್ ಎದುರಾಗಿದೆ ಎಂದೇ ಹೇಳಬಹುದು. ಇಷ್ಟು ದಿನ ಈ ಧಾರಾವಾಹಿಯಲ್ಲಿ ಕರ್ಣ ಹಾಗೂ ನಿತ್ಯಾ ಸಂಸಾರ ನಡೆಸುತ್ತಿರುವುದನ್ನು ತೋರಿಸಲಾಗಿದೆ. ಆದರೆ, ಈಗ ಧಾರಾವಾಹಿಯಲ್ಲಿ ದೊಡ್ಡ ತಿರುವು ಬಂದಿದೆ. ಕರ್ಣ ಹಾಗೂ ನಿಧಿ ಮದುವೆ ನಡೆಯಲಿದೆ. ಇದನ್ನು ನಿತ್ಯಾ ಮಾಡಿಸುತ್ತಾ ಇದ್ದಾಳೆ. ಇದು ದೊಡ್ಡ ಟ್ವಿಸ್ಟ್ ಎಂದು ಪರಿಗಣಿಸಬಹುದು.

‘ಕರ್ಣ’ ಧಾರಾವಾಹಿಯಲ್ಲಿ ಕರ್ಣನ ತಂದೆ ರಮೇಶ್ ಮೋಸದಿಂದ ಕರ್ಣ ಹಾಗೂ ನಿತ್ಯಾಳ ಮದುವೆ ಮಾಡಿಸುತ್ತಾನೆ. ಈ ಮದುವೆಗೂ ಮೊದಲು ಕರ್ಣನು ನಿಧಿಯನ್ನು ಪ್ರೀತಿ ಮಾಡುತ್ತಾ ಇರುತ್ತಾನೆ. ಈ ವಿಷಯ ಗೊತ್ತಾಗಿಯೇ ನಿತ್ಯಾ ಹಾಗೂ ಕರ್ಣನ ಮದುವೆ ಮಾಡಿಸುತ್ತಾನೆ ರಮೇಶ್. ಈ ಮೂಲಕ ಮಗನ ಮೇಲೆ ದ್ವೇಷ ಸಾಧಿಸುತ್ತಾನೆ. ಆದರೆ, ಇಷ್ಟು ದಿನ ಈ ವಿಷಯ ಗುಟ್ಟಾಗಿ ಇಡಲಾಗಿತ್ತು.

ಈಗ ನಿತ್ಯಾಳಿಗೆ ನಿಧಿ ಹಾಗೂ ಕರ್ಣನ ಪ್ರೀತಿ ವಿಷಯ ಗೊತ್ತಾಗಿದೆ. ಎಲ್ಲರ ಸಮ್ಮುಖದಲ್ಲಿ ಆಕೆ ಕರ್ಣ ಹಾಗೂ ನಿಧಿ ಮದುವೆ ಮಾಡಿಸುತ್ತಾಳೆ. ಅಲ್ಲದೆ ತನ್ನ ಮಗುವಿಗೆ ತೇಜಸ್ ಕಾರಣ ಎಂಬುದನ್ನು ನಿಧಿ ಹೇಳುತ್ತಾಳೆ. ಈ ಸಂದರ್ಭದ ವಿಡಿಯೋ ಗಮನ ಸೆಳೆದಿದೆ. ಈ ಪ್ರೋಮೋಗೆ ನಾನಾ ರೀತಿಯ ಕಮೆಂಟ್ಗಳು ಬಂದಿವೆ. ಕೆಲವರು ಇದನ್ನು ಕನಸು ಇರಬಹುದು ಎಂದೇ ಹೇಳುತ್ತಿದ್ದಾರೆ.

ಏಕೆಂದರೆ ಕರ್ಣ ಹಾಗೂ ನಿಧಿ ಲವರ್ಸ್ ಎಂಬುದು ತುಂಬಾನೇ ದೊಡ್ಡ ತಿರುವು. ಈ ತಿರುವು ಬಂದರೆ ಧಾರಾವಾಹಿ ಮತ್ತೊಂದು ಹಂತಕ್ಕೆ ಹೋಗಲಿದೆ. ಹೀಗಿರುವಾಗ ಇಷ್ಟು ಬೇಗ ಧಾರಾವಾಹಿಯಲ್ಲಿ ಆ ಟ್ವಿಸ್ಟ್ ತಂದರೇ ಎನ್ನುವ ಪ್ರಶ್ನೆ ಮೂಡಿದೆ.

ಕರ್ಣ ಧಾರಾವಾಹಿಯು ಟಿಆರ್ಪಿಯಲ್ಲಿ ಒಳ್ಳೆಯ ಟಿವಿಆರ್ ಪಡೆದು ಮುನ್ನುಗ್ಗುತ್ತಿದೆ. ಈಗ ಎದುರಾಗಿರುವ ಒಂದು ದೊಡ್ಡ ಟ್ವಿಸ್ಟ್ನಿಂದ ಸಾಕಷ್ಟು ನಿರೀಕ್ಷೆ ಮಾಡಬಹುದು. ಇದು ಕನಸೇ ಆಗಿದ್ದಲ್ಲಿ ವೀಕ್ಷಕರಿಗೆ ಸಾಕಷ್ಟು ನಿರಾಸೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:56 am, Thu, 23 April 26

Loading...
Unable to load recommendations.
Follow Us