
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಕರ್ಣ’ ಈಗ ಅತ್ಯಂತ ರೋಚಕ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಸದ್ದಿಲ್ಲದೆ ಮೋಸದ ಜಾಲ ಹೆಣೆಯುತ್ತಿದ್ದ ಸಂಜು ಅಸಲಿ ಬಣ್ಣ ಈಗ ಎಲ್ಲರ ಮುಂದೆ ಬಯಲಾಗಿದೆ. ಈ ಕುರಿತಾದ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಆತನಿಗೂ ರಿಯಾಗೂ ಮದುವೆ ಮಾಡಿಸಲು ಕರ್ಣ ಮುಂದಾಗಿದ್ದಾನೆ.
ಸಂಜುಗೆ ಮದುವೆ ಮಾಡಿಸಲು ಇಡೀ ಕುಟುಂಬಸ್ಥರು ಒಂದೆಡೆ ನೆರೆದಿರುತ್ತಾರೆ. ಈ ವೇಳೆ ಮಧ್ಯಪ್ರವೇಶಿಸುವ ಕರ್ಣ, ‘ಈ ಸಂಬಂಧವನ್ನು ಇನ್ನು ಮುಂದುವರಿಸಲು ಸಾಧ್ಯವಿಲ್ಲ’ ಎಂದು ಮದುವೆ ನಿಲ್ಲಿಸುತ್ತಾನೆ. ಇದಕ್ಕೆ ಕಾರಣ ಕೇಳಿದಾಗ, ಸಂಜು ಮತ್ತು ರಿಯಾ ಪ್ರೀತಿಸುತ್ತಿದ್ದಾರೆ ಹಾಗೂ ರಿಯಾ ಈಗ ಗರ್ಭಿಣಿಯಾಗಿದ್ದಾಳೆ ಎಂಬ ಶಾಕಿಂಗ್ ಸತ್ಯವನ್ನು ಎಲ್ಲರ ಎದುರು ಬಿಚ್ಚಿಡಲಾಗುತ್ತದೆ.
ತನ್ನ ಮೇಲಿನ ಆರೋಪಕ್ಕೆ ಸಾಕ್ಷಿ ಎಲ್ಲಿದೆ ಎಂದು ಸಂಜು ಗದರಿದಾಗ, ದಿವಾಕರ್ ಎಂಬಾತನ ಕಡೆಯಿಂದ ಅಸಲಿ ಸತ್ಯ ಹೊರಬರುತ್ತದೆ. ‘ರಿಯಾ ಕುಡಿಯುವ ಜ್ಯೂಸ್ಗೆ ಟ್ಯಾಬ್ಲೆಟ್ ಮಿಕ್ಸ್ ಮಾಡಿ ಅವಳು ಪ್ರಜ್ಞೆ ತಪ್ಪುವಂತೆ ಮಾಡಲಾಗಿತ್ತು. ಆ ಬಳಿಕ ಸಂಜು ಅವಳನ್ನು ರೂಮ್ಗೆ ಕರೆದುಕೊಂಡು ಹೋಗಿದ್ದ’ ಎಂಬ ಆಘಾತಕಾರಿ ರಹಸ್ಯ ಬಯಲಾಗುತ್ತದೆ.
ಇದನ್ನೂ ಓದಿ: ನಿತ್ಯಾಗೆ ಗೊತ್ತಾಯ್ತ ಪ್ರೀತಿಯ ಸತ್ಯ; ಕರ್ಣ-ನಿಧಿ ವಿವಾಹ ಮಾಡಿಸಲು ಮುಂದಾದ ಸಹೋದರಿ
ಕೊನೆಗೆ, ‘ಈಗ ರಿಯಾಗೆ ತಾಳಿ ಕಟ್ಟಿ ಆಕೆಯನ್ನು ಹೆಂಡತಿ ಎಂದು ಒಪ್ಪಿಕೊಳ್ಳಬೇಕು’ ಎಂಬ ಖಡಕ್ ಆದೇಶ ಕರ್ಣನಿಂದ ಬರುತ್ತದೆ. ಈ ಮಾತು ಕೇಳಿ ಸಂಜು ಹಾಗೂ ಇಡೀ ಕುಟುಂಬಸ್ಥರು ದಿಗ್ಭ್ರಮೆಗೊಂಡಿದ್ದಾರೆ. ತಾನು ಹೆಣೆದ ಮೋಸದ ಜಾಲದಲ್ಲೇ ಸಂಜು ಈಗ ಸಿಕ್ಕಿಬಿದ್ದಿದ್ದು, ಮುಂದಿನ ಸಂಚಿಕೆಗಳಲ್ಲಿ ಕಥೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.