ಮತ್ತೆ ಒಂದಾದ ಕಾರ್ತಿಕ್-ಸಂಗೀತಾ; ಇವರ ನಾಟಕದಿಂದ ನಾವು ಬಕ್ರಾ ಆಗ್ತಿದೀವಿ ಎಂದ ತುಕಾಲಿ

ಸಂಗೀತಾ ಅವರು ಕಳೆದ ವಾರ ವಿನಯ್ ಗ್ಯಾಂಗ್​ನಲ್ಲಿ ಕಾಣಿಸಿದ್ದರು. ಈ ವಾರ ಅವರು ಮತ್ತೆ ಪಾರ್ಟಿ ಬದಲಿಸಿದ್ದಾರೆ. ಕಾರ್ತಿಕ್ ಜೊತೆ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ತುಕಾಲಿ ಅಪಸ್ವರ ಎತ್ತಿದ್ದಾರೆ.

ಮತ್ತೆ ಒಂದಾದ ಕಾರ್ತಿಕ್-ಸಂಗೀತಾ; ಇವರ ನಾಟಕದಿಂದ ನಾವು ಬಕ್ರಾ ಆಗ್ತಿದೀವಿ ಎಂದ ತುಕಾಲಿ
ಸಂತೋಷ್-ಸಂಗೀತಾ, ಕಾರ್ತಿಕ್

Updated on: Nov 28, 2023 | 7:59 AM

ಕಾರ್ತಿಕ್ ಮಹೇಶ್ (Karthik Mahesh) ಹಾಗೂ ಸಂಗೀತಾ ಶೃಂಗೇರಿ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಇಬ್ಬರೂ ಬೇರೆ ಆದರು. ಆ ಬಳಿಕ ಇಬ್ಬರೂ ಬೇರೆ ಆದರು. ಈಗ ಇಬ್ಬರು ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ತಿಕ್ ಮಹೇಶ್ ಅವರು ಒಂದು ವಾರಗಳ ಕಾಲ ಯಾವುದೇ ಕಟ್ಟುಪಾಡಿಗೆ ಸಿಲುಕದೇ ಆಟ ಆಡುತ್ತಿದ್ದವರು ಈಗ ಮತ್ತೆ ಸಂಗೀತಾ ಕೈಗೊಂಬೆ ಆಗಬಹುದು ಎಂದು ವೀಕ್ಷಕರು ಊಹಿಸುತ್ತಿದ್ದಾರೆ. ಈ ಮಧ್ಯೆ ತುಕಾಲಿ ಸಂತೋಷ್ ಅವರು ಅಸಮಾಧಾನ ಹೊರಹಾಕಿದ್ದಾರೆ.

ಕಳೆದ ವಾರ ಸಂಗೀತಾ ಅವರು ವಿನಯ್ ಗುಂಪಿನ ಜೊತೆ ಹೆಚ್ಚು ಸಮಯ ಕಳೆದಿದ್ದಾರೆ. ಅವರಿಗೆ ಆ ಗುಂಪು ಹೆಚ್ಚು ಇಷ್ಟ ಆಗಿದೆಯಂತೆ. ಈ ಕಾರಣದಿಂದಲೇ ಅವರು ಅಲ್ಲಿಯೇ ಇದ್ದರು. ಈ ವಾರ ಈಗ ಮತ್ತೆ ಕಾರ್ತಿಕ್ ಜೊತೆ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ತಿಕ್ ಬಗ್ಗೆ ಕೆಲವರು ಅಪಸ್ವರ ತೆಗೆದಿದ್ದಾರೆ. ಈ ರೀತಿ ಆಗುತ್ತದೆ ಎಂದು ವಿನಯ್ ಕಳೆದವಾರವೇ ಭವಿಷ್ಯ ನುಡಿದಿದ್ದರು.

‘ನಾನು ಕಳೆದವಾರವೇ ಹೇಳಿಲ್ಲವೇ? ಅವಳು ಕಾರ್ತಿಕ್​ನ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಳು. ಇದು ಬೇಗ ಕೊನೆ ಆಗುತ್ತದೆ ಎಂದು ಹೇಳಿದ್ದೆ’ ಎಂದರು ವಿನಯ್. ಅಲ್ಲಿಯೇ ಇದ್ದ ತುಕಾಲಿ ಸಂತೋಷ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಇಲ್ಲಿ ಆಡುವ ನಾಟಕಗಳಿಗೆ ಸಾಥ್ ಕೊಟ್ಟರೆ ಬಕ್ರಾ ಆಗೋದು ನಾವೇ. ಪ್ರತಿ ದಿನವೂ ಮನೆಯಲ್ಲಿ ಬಕ್ರಾ ಕಾರ್ಯಕ್ರಮ ನಡೆಯುತ್ತದೆ. ಗೊತ್ತಿದ್ದೋ, ಗೊತ್ತಿಲ್ಲವೋ ಆಗುತ್ತದೆ. ಮಧ್ಯದಲ್ಲಿ ಇದ್ದವರು ಬಕ್ರಾ ಆಗುತ್ತಾರೆ’ ಎಂದರು ಅವರು.

ಇದನ್ನೂ ಓದಿ: ‘ಬೇರೆಯವರನ್ನು ಕೀಳಾಗಿ ತೋರಿಸಿದ ಪ್ರತಾಪ್​ ಇಲ್ಲಿಯವರೆಗೂ ಬಂದಿದ್ದಾರೆ’: ವಿನಯ್​ ಗೌಡ

ವಿನಯ್ ಅವರ ತಂತ್ರಗಾರಿಕೆ ಇಲ್ಲಿ ಬೇರೆಯದೇ ಇದೆ. ಈ ರೀತಿಯ ನಾಟಕಗಳು ನಡೆಯುವಾಗ ಪಾಪ್​ಕಾರ್ನ್ ಹಿಡಿದು ಅದನ್ನು ಎಂಜಾಯ್ ಮಾಡಬೇಕು ಎಂಬುದು ವಿನಯ್ ಥಿಯರಿ. ಸಂಗೀತಾ ಈಗಾಗಲೇ 18 ಸಾವಿರ ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ. ಮರಳಿ ಅವರೆಲ್ಲ ಸೇರ್ಪಡೆ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:42 am, Tue, 28 November 23

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us