AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮುಚ್ಕೊಂಡು ಇರಿ’; ಹೈಲೈಟ್ ಆಗಲು ಕೂಗಾಡುತ್ತಿದ್ದಾರೆ ಕಾರ್ತಿಕ್?

ಈ ವಾರ ನೀತು ವನಜಾಕ್ಷಿ ಕ್ಯಾಪ್ಟನ್. ಅವರು ಅಡುಗೆ ಮನೆಯ ಜವಾಬ್ದಾರಿಯನ್ನು ಕೆಲವರಿಗೆ ವಹಿಸಿದ್ದರು. ಇದರಲ್ಲಿ ಕಾರ್ತಿಕ್ ಕೂಡ ಇದ್ದರು. ಕೆಲವು ವಿಚಾರದಲ್ಲಿ ಅವರಿಗೆ ಅಸಮಾಧಾನ ಎದ್ದಿತ್ತು. ಇದನ್ನು ಅವರು ನೀತು ಬಳಿ ಪ್ರಶ್ನೆ ಮಾಡಿದ್ದಾರೆ.

‘ಮುಚ್ಕೊಂಡು ಇರಿ’; ಹೈಲೈಟ್ ಆಗಲು ಕೂಗಾಡುತ್ತಿದ್ದಾರೆ ಕಾರ್ತಿಕ್?
ಕಾರ್ತಿಕ್
ರಾಜೇಶ್ ದುಗ್ಗುಮನೆ
|

Updated on: Oct 31, 2023 | 7:43 AM

Share

ಬಿಗ್ ಬಾಸ್ ಮನೆಯಲ್ಲಿ ಕಳೆದ ಮೂರು ವಾರಗಳಲ್ಲಿ ವಿನಯ್ ಗೌಡ (Vinay Gowda) ಏರು ಧ್ವನಿಯಲ್ಲಿ ಮಾತನಾಡಿದ್ದರು. ಈ ವಿಚಾರವನ್ನು ಸುದೀಪ್ ಮೆಚ್ಚಿಕೊಂಡಿದ್ದರು. ವಿನಯ್ ಅವರನ್ನು ಕಂಡರೆ ಮನೆಯವರಿಗೆ ಭಯ ಎಂಬುದನ್ನು ಸುದೀಪ್ ಸಾಕ್ಷಿ ಸಮೇತ ಸಾಬೀತು ಮಾಡಿದ್ದರು. ಇದರಿಂದ ಮನೆ ಮಂದಿ ಎಲ್ಲರೂ ಪ್ರಭಾವಿತರಾದಂತಿದೆ. ಅದರಲ್ಲೂ ಕಾರ್ತಿಕ್ ಮಹೇಶ್ ಅವರು ನಾಲ್ಕನೇ ವಾರದ ಮೊದಲ ದಿನವೇ ಅರಚಾಟ ಶುರು ಹಚ್ಚಿಕೊಂಡಿದ್ದಾರೆ. ಸುಖಾ ಸುಮ್ಮನೆ ಕಿರುಚಾಡಿದ್ದಾರೆ. ಈ ವಿಚಾರದಲ್ಲಿ ವಿನಯ್ ಅವರು ಕಾರ್ತಿಕ್​ಗೆ ಬುದ್ಧಿವಾದ ಹೇಳಿದ್ದಾರೆ.

ಈ ವಾರ ನೀತು ವನಜಾಕ್ಷಿ ಕ್ಯಾಪ್ಟನ್. ಅವರು ಅಡುಗೆ ಮನೆಯ ಜವಾಬ್ದಾರಿಯನ್ನು ಕೆಲವರಿಗೆ ವಹಿಸಿದ್ದರು. ಇದರಲ್ಲಿ ಕಾರ್ತಿಕ್ ಕೂಡ ಇದ್ದರು. ಕೆಲವು ವಿಚಾರದಲ್ಲಿ ಅವರಿಗೆ ಅಸಮಾಧಾನ ಎದ್ದಿತ್ತು. ಇದನ್ನು ಅವರು ನೀತು ಬಳಿ ಪ್ರಶ್ನೆ ಮಾಡಿದ್ದಾರೆ. ಕಾರ್ತಿಕ್ ಅವರು ಈ ರೀತಿ ಆಡಲು ಬೇರೆಯವರ ಪ್ರಭಾವ ಇದೆ ಎಂಬುದು ನೀತು ವಾದ. ಈ ಕಾರಣದಿಂದಲೇ ಕಾರ್ತಿಕ್ ಅವರನ್ನು ಹಿತ್ತಾಳೆ ಕಿವಿ ಎಂದು ಕರೆದರು ನೀತು. ಇದು ಕಾರ್ತಿಕ್ ಕೋಪಕ್ಕೆ ಕಾರಣವಾಯ್ತು. ಸೂಜಿಲಿ ಹೋಗುವುದಕ್ಕೆ ಕೊಡಲಿ ಎತ್ತಿಕೊಂಡರು ಕಾರ್ತಿಕ್.

ಕಾರ್ತಿಕ್ ಅವರು ಏಕಾಏಕಿ ನೀತು ವಿರುದ್ಧ ಗರಂ ಆದರು. ಜೋರು ಜೋರಾಗಿ ಕೂಗಾಟ ನಡೆಸಿದರು. ನೀತುಗೆ ಎಚ್ಚರಿಕೆಯನ್ನೂ ನೀಡಿದರು. ಇದೆಲ್ಲವನ್ನೂ ವಿನಯ್ ಹಾಗೂ ಸಂಗೀತಾ ಶೃಂಗೇರಿ ಗಮನಿಸುತ್ತಾ ಇದ್ದರು. ಅವರು ಕರೆದು ಕಾರ್ತಿಕ್​​ಗೆ ಬುದ್ಧಿವಾದ ಹೇಳಿದ್ದಾರೆ. ಈ ರೀತಿ ನಡೆದುಕೊಳ್ಳಬಾರದು ಎಂದು ತಿದ್ದಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್​ ಮನೆಗೆ ಬಂದು ಎರಡು ಲಕ್ಷ ರೂಪಾಯಿ ಕಳೆದುಕೊಂಡ ತುಕಾಲಿ ಸಂತೋಷ್

‘ಈ ರೀತಿ ಅರಚಾಡಿದರೆ ನೀನೆ ಕೆಟ್ಟವನಾಗೋದು. ಇದರ ಬದಲು ನಿಧಾನವಾಗಿ ಅವರ ಬಳಿ ಕೇಳು. ನನಗೆ ಏಕೆ ಹಿತ್ತಾಳೆ ಕಿವಿ ಎಂದೆ ಎಂದು ಪ್ರಶ್ನೆ ಮಾಡು. ಉತ್ತರ ಬರದೇ ಇದ್ದರೆ ಪದೇ ಪದೇ ಇದನ್ನೇ ಕೇಳು. ಈ ರೀತಿ ಅರಚಬೇಡ. ಕೆಟ್ಟವನಾಗೋಕೆ ಹೋಗಬೇಡ’ ಎಂದು ಕಾರ್ತಿಕ್​ಗೆ ವಿನಯ್ ಹೇಳಿದ್ದಾರೆ. ಕಾರ್ತಿಕ್ ಅವರು ಅಳೋಕೆ ಆರಂಭಿಸಿದರು. ಸಂಗೀತಾ ಅವರು ಸಮಾಧಾನ ಮಾಡಿದರು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ
ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ